ಅರಸರ ಮೈಸೂರಿಗೆ ಯೋಜನೆಗಳದೇ ಅಡ್ಡಗಾಲು

ಚೀ. ಜ. ರಾಜೀವ  ಮೈಸೂರು
ನರ್ಮ್, ಆಧಾರ್ ಮತ್ತು ಇನ್‌ಸ್ಟಿಟ್ಯೂಷನ್ ಆಫ್ ಎಕ್ಸಲೆನ್ಸ್ !
ಇವು ಮೈಸೂರು ನಗರ ಮತ್ತು ಜಿಲ್ಲೆಯ ಜನತೆಯಷ್ಟೇ `ಕೇಳಿ ಬಲ್ಲ-ನೋಡಿ ಬಲ್ಲ' ಕೇಂದ್ರ ಸರಕಾರದ ವಿಶೇಷ  ಅಭಿವೃದ್ಧಿ ಯೋಜನೆಗಳು. ಎಲ್ಲ ಜಿಲ್ಲೆಗಳಲ್ಲೂ  ಜಾರಿ ಯಲ್ಲಿರುವ ಎನ್‌ಆರ್‌ಇಜಿ, ಎನ್‌ಆರ್‌ಎಚ್‌ಎಂನಂಥ ಹತ್ತು-ಹಲವು ಯೋಜನೆಗಳ ಜತೆ ಮೈಸೂರು ಜಿಲ್ಲೆ  ಹೆಚ್ಚುವರಿಯಾಗಿ ಈ ಯೋಜನೆಗಳನ್ನೂ ದಿಲ್ಲಿಯಿಂದ ಸಂಪಾದಿಸಿದೆ. ಇವು ಸರಿಯಾಗಿ ಸಾಕಾರಗೊಂಡರೆ  ನಾಲ್ವಡಿ ಕಾಲದ `ಮಾದರಿ ಮೈಸೂರು' ಎಂಬ ಅಭಿ ದಾನವನ್ನು ನಮ್ಮ ಕಾಲದ ಮೈಸೂರು ಮತ್ತೊಮ್ಮೆ  ಪಡೆಯಬಹುದೇನೋ.  ಆದರೆ, ಇಲ್ಲಿ  ಆಗುತ್ತಿರುವುದೇ ಬೇರೆ.
ನರ್ಮ್ ಯೋಜನೆಗೆ ತುಕ್ಕು : ಮುಂದಿನ ೨೦ ವರ್ಷಗಳ ನಗರದ ದೃಷ್ಟಿಯನ್ನು ಗಮನದಲ್ಲಿರಿಸಿ ಮೈಸೂರನ್ನು ನವೀಕರಿಸಿ ಎಂದು ಕೇಂದ್ರ ಸರಕಾರ  ಜವಹಾರ್‌ಲಾಲ್ ನೆಹರು ರಾಷ್ಟ್ರೀಯ ನಗರ ಪುನ ರುಜ್ಜೀವನ ಯೋಜನೆ (ಜೆಎನ್-ನರ್ಮ್) ಯಡಿ ೧೮೬೮ ಕೋಟಿ ರೂ. ಗಳನ್ನು ನಗರಕ್ಕೆ ಮಂಜೂರು ಮಾಡಿದೆ. ಈ ಬೃಹತ್ ಮೊತ್ತದ ಬಳಕೆಗೆ ಪಾಲಿಕೆ ನೋಡಲ್ ಏಜೆನ್ಸಿಯಾದರೆ, ನಗರಾಭಿವೃದ್ಧಿ ಪ್ರಾಧಿಕಾರ, ಪಾರಂಪರಿಕ ಇಲಾಖೆ, ಕೆಎಸ್‌ಆರ್‌ಟಿಸಿ, ಕೊಳಚೆ ನಿರ್ಮೂಲನೆ ಮಂಡಳಿ,  ಕರ್ನಾಟಕ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯಂಥ ಇಲಾಖೆ ಗಳು ಪಾಲುದಾರ ಸಂಸ್ಥೆಗಳು. ಈ ಮೊತ್ತದ ಪೈಕಿ ಮೈಸೂರು ಇದುವರೆಗೆ ಪಡೆಯಲು ಸಾಧ್ಯವಾದದ್ದು  ೧೩೦೦ ಕೋಟಿ ರೂ. ಹಾಗೂ ಇದರಲ್ಲೂ  ಬಳಕೆಯಾ ದದ್ದು  ಸುಮಾರು ೫೦೦ ಕೋಟಿ ರೂ. ಅಷ್ಟೇ. ಕೆಎಸ್‌ಆರ್‌ಟಿಸಿ ಒಂದಿಷ್ಟು  ಕಣ್ಣಿಗೆ ಕಾಣುವ ಕೆಲಸ ಮಾಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆ, ನರ್ಮ್ ಅನುದಾನ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗುತ್ತಿಲ್ಲ . ಸಂಸದ ಅಡಗೂರು ಎಚ್. ವಿಶ್ವನಾಥ್ ಕೂಡ ಇದೇ ಮಾತನ್ನು ಹೇಳುತ್ತಲೇ ಇದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ