ಅಂತೂ ಇಂತೂ ವಿವಿ ರಸ್ತೆಗೆ ಮುಕ್ತಿ

* ನವೀನ್ ಮಂಡ್ಯ
ಅಂತೂ ಇಂತೂ ಮಂಡ್ಯದ ವಿಶ್ವೇಶ್ವರಯ್ಯ ರಸ್ತೆಗೆ (ವಿವಿ ರೋಡ್)ಗೆ ಮುಕ್ತಿ ನೀಡಲು ನಗರಸಭೆ ನಿರ್ಧರಿಸಿದೆ. ಆರಂಭಿಕ ಹಂತವಾಗಿ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ.
ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ-ಮುಂಗಟ್ಟುಗಳು ಹಾಗೂ ಕಟ್ಟಡಗಳ ಮಾಲೀಕರು ಫುಟ್ಪಾತ್ ಅನ್ನು ಒತ್ತುವರಿ ಮಾಡಿ ಕೊಂಡಿದ್ದರು. ಕೆಲವರು ಫುಟ್ಪಾತ್ ಮೇಲೆಯೇ ಅಂಗಡಿಗಳಿಗೆ ಹೋಗಲು ಮೆಟ್ಟಿಲು ನಿರ್ಮಿಸಿಕೊಂಡಿದ್ದರೆ, ಹಲವರು ಮಾರಾಟದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟು ಪುಕ್ಕಟೆ ಜಾಹೀರಾತು ಪಡೆ ಯುತ್ತಿದ್ದರು. ಈ ಬಗ್ಗೆ ಸಾರ್ವಜನಿಕರ ದೂರುಗಳು ಮತ್ತು ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಕಡೆಗೂ ನಗರಸಭೆ ಫುಟ್ಬಾತ್ ಒತ್ತುವರಿ ತೆರವಿಗೆ ಮುಂದಾಗಿತ್ತು.
ಪ್ರಭಾವಿ ಅಧ್ಯಕ್ಷರಾಗಿದ್ದ ಉಪಾಧ್ಯಕ್ಷ ಎಂ.ಜೆ. ಚಿಕ್ಕಣ್ಣ ಅವರು ತಾವೇ ಖುದ್ದು ನಿಂತು ಎರಡು ದಿನಗಳ ಕಾರ್‍ಯಾಚರಣೆ ನಡೆಸಿ ದ್ದರು. ಕಾರ್‍ಯಾಚರಣೆ ಪೂರ್ಣಗೊಂಡ ನಂತರ ವಿದೇಶಿ ಮಾದರಿ ಯಲ್ಲಿ ಅತ್ಯಾಧುನಿಕ ಫುಟ್ಪಾತ್ ನಿರ್ಮಿಸುವುದಾಗಿ ಘೋಷಿಸಿ ದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ