`ರಾಜ್ಯಪಾಲ'ನೆಯತ್ತ ಶ್ರೀನಿವಾಸಪ್ರಸಾದ್?

ಕುಂದೂರು ಉಮೇಶಭಟ್ಟ, ಮೈಸೂರು
ಶಾಸಕತ್ವದಿಂದ ರಾಜ್ಯಪಾಲನೆಯತ್ತ ತೆರಳಿದ್ದಾರೆಯೇ ನಂಜನಗೂಡು ಶಾಸಕ ವಿ.ಶ್ರೀನಿವಾಸ ಪ್ರಸಾದ್?.
ಇಂಥ ಚರ್ಚೆ ಪ್ರಸಾದ್ ಅವರ ಆಪ್ತ ವಲಯದಲ್ಲಿ ಕೆಲವು ದಿನಗಳಿಂದ ಸದ್ದಿಲ್ಲದೇ ಹರಿದಾಡುತ್ತಿದೆ. ಸದ್ಯದ ರಾಜಕೀಯ ಸನ್ನಿವೇಶ, ಕಾಂಗ್ರೆಸ್‌ನ ಭವಿಷ್ಯದ ಲೆಕ್ಕಾಚಾರದೊಂದಿಗೆ ಅವರು ರಾಜ್ಯಪಾಲ ಹುದ್ದೆ ಆಯ್ಕೆ ಮಾಡಿ ಕೊಳ್ಳಲು ಪ್ರಮುಖ ಕಾರಣ ಎಂಬುದು ಆಪ್ತ ವಲಯದ ಮಾತು. ಈಗ ಕೇಂದ್ರ ದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಬಹಳಷ್ಟು ಮಂದಿ ಆಪ್ತರಿದ್ದು, ಇದನ್ನು ಬಳಸಿಕೊಳ್ಳುವುದು ಅವರ ಯೋಚನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ