ಸಂಚಾರ ನಿಯಮಗಳ ನಿರ್ಲಕ್ಷ್ಯ

ಆರ್. ಕೃಷ್ಣ ಮೈಸೂರು
ಮೋಜಿನ  ಸವಾರಿ, ಅಜಾಗರೂಕ ಚಾಲನೆಗೆ ಕಳೆದ ವರ್ಷ ಬಲಿಯಾದವರು ೧೩೬ ಮಂದಿ.
ಯುವ ಜನಾಂಗದಲ್ಲಿ ಹೆಚ್ಚುತ್ತಿರುವ ಮೋಜಿನ ಸವಾರಿಯಿಂದ ಅಪಘಾತಗಳ ಏರಿಕೆ ಒಂದೆಡೆಯಾದರೆ, ಕುಡಿತದ ಅಮಲಿನಲ್ಲಿ ಹೆಚ್ಚುತ್ತಿರುವ ಅನಾಹುತಗಳು ದಿಗಿಲು ಹುಟ್ಟಿಸುವಂತಿವೆ. ಅಜಾಗರೂಕ ಚಾಲನೆ ಪ್ರಮಾಣವೂ ಗಣನೀಯವಾಗಿ ಹೆಚ್ಚುತ್ತಲೇ ಇದ್ದು, ಸಂಚಾರ ನಿಯಮ ಜಾಗೃತಿ ಕೊರತೆಯಿಂದಾಗಿ ಬರೋಬರಿ ೧.೬೧ ಲಕ್ಷ ಪ್ರಕರಣ ದಾಖಲಾಗಿದೆ.
ಜಾರಿದ ೨೦೧೦ನೇ ಇಸವಿಯಲ್ಲಿ ೯೨೭ ರಸ್ತೆ ಅಪಘಾತ ಪ್ರಕರಣ ವರದಿಯಾಗಿದ್ದು, ೧೦೨೮ ಮಂದಿ ಗಾಯಗೊಂಡಿ ದ್ದಾರೆ.
ಹಿಂದಿನ ವರ್ಷಕ್ಕೆ (೨೦೦೯) ಹೋಲಿಕೆ ಮಾಡಿದಲ್ಲಿ ಶೇ. ೩.೪೩ರಷ್ಟು ಅಪಘಾತ ಕಡಿಮೆಯಾಗಿದೆ. ಮೃತರ ಪ್ರಮಾಣ ದಲ್ಲಿ ಶೇ.೧.೪೩ರಷ್ಟು ಕಡಿಮೆಯಾಗಿದ್ದರೂ ಗಾಯ ಗೊಂಡ ವರ ಪ್ರಮಾಣ ಶೇ.೧೫.೩೭ರಷ್ಟು ಏರಿಕೆಯಾಗಿರುವುದು ಆತಂಕ ಮೂಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ