ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ...!


ಖ್ಯಾತ ನಟ, ಅಭಿನವ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ನುಡಿನಮನ.

ರಸಋಷಿಗೆ 'ನುಡಿ' ನಮನ


ರಸ ಋಷಿ ಮಹಾಕವಿ ಕುವೆಂಪು ಅವರ 105ನೇ ಜನ್ಮ ದಿನಾಚರಣೆ ಮಂಗಳವಾರ ಅವರ ಕರ್ಮಭೂಮಿ , ಕಾರ್ಯಕ್ಷೇತ್ರ ಮೈಸೂರಿನಲ್ಲಿ ವೈವಿಧ್ಯಮಯವಾಗಿ ನಡೆಯಿತು.

ಕುಂಭಮೇಳದ ಸಂಭ್ರಮಕ್ಕೆ ಕಪ್ಪುಚುಕ್ಕೆ


ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರ ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿರುವ ಐತಿಹಾಸಿಕ ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಾಲಯ ಶಿಥಿಲಗೊಂಡು ಅಪಾಯದ ಹಂಚಿನಲ್ಲಿದೆ.

ಬಿಸಿಯೂಟದ ರುಚಿ ಬದಲಿಸಿದ ಬೆಲೆ ಏರಿಕೆ !


ಶಾಲಾ ಮಕ್ಕಳ ಬಿಸಿಯೂಟದಲ್ಲಿ ರುಚಿ ತಪ್ಪಿದೆ. ಜಿಲ್ಲೆಯ 2300 ಶಾಲೆಗಳ ಸುಮಾರು 2.80 ಲಕ್ಷ ಮಕ್ಕಳು ತಮ್ಮ ಮಧ್ಯಾಹ್ನದ ಬಿಸಿಯೂಟದಲ್ಲಿ ತೊಗರಿ ಬೇಳೆ ಸಾರಿನ ರುಚಿಯಿಂದ ವಂಚಿತರಾಗಿದ್ದಾರೆ ! ತೊಗರಿ ಬೇಳೆ ಕೆ.ಜಿ.80 ರೂ. ಆಗಿರುವುದೇ ಇದಕ್ಕೆ ಕಾರಣ.

ಮೈಸೂರಿನಲ್ಲಿ ರಣಜಿ ಕ್ರಿಕೆಟ್ ಪಂದ್ಯ

ಹಕ್ಕಿಗೆ ಇಲ್ಲ ಮಾನ್ಯತೆ


ಕೇಂದ್ರ ಸರಕಾರ ರೂಪಿಸಿರುವ ಅರಣ್ಯ ಹಕ್ಕುಗಳ ಮಾನ್ಯತೆ ಕಾಯಿದೆ ಜಾರಿಗೆ ಬಂದು ಮೂರು ವರ್ಷವಾದರೂ ರಾಜ್ಯದಲ್ಲಿ ಒಂದೇ ಒಂದು ಹಕ್ಕುಪತ್ರ ನೀಡಲಾಗಿಲ್ಲ.

ವಿವೇಕರ ಹೆಸರಲ್ಲಿ ಶಾಲೆಗೆ ಕುತ್ತು ?


ಏಳಿ ಎದ್ದೇಳಿ ಎಂದಿದ್ದರು ಸ್ವಾಮಿ ವಿವೇಕಾನಂದರು. ಅವರ ಹೆಸರಿಗೆ ಅಪಚಾರ ಮಾಡುವಂತೆ ನಗರದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಏಳಿ, ಎದ್ದು ಇಲ್ಲಿಂದ ಹೊರಡಿ ಎನ್ನುವ ಪ್ರಯತ್ನ ನಡೆಯುತ್ತಿದೆ.

ಮರಳು ಅವ್ಯಾಹತ ಲೂಟಿ


'ದಕ್ಷಿಣ ಪ್ರಯಾಗ' ಎಂದೇ ಖ್ಯಾತಿ ಪಡೆದಿರುವ ತಿರುಮಕೂಡಲು ನರಸೀಪುರದ ಕುಂಭಮೇಳಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದ ತ್ರಿವೇಣಿ ಸಂಗಮದ ಮರಳು ರಾಶಿಯನ್ನು ಬಗೆದಿರುವುದರಿಂದ ಪ್ರಕೃತಿ ಸಮತೋಲನದ ಮೇಲೆ ದುಷ್ಪರಿಣಾಮ ಬೀರಿದೆ.

ಗಾಂಜಾ ಗಮ್ಮತ್ತು


ಗಡಿ ಜಿಲ್ಲೆಯಲ್ಲಿ ಗಾಂಜಾ ಗಮ್ಮತ್ತು ಬಲು ಜೋರು. ಜೋಳ, ಅರಿಶಿಣ, ರಾಗಿ, ಫಸಲಿನ ಜತೆಯಲ್ಲಿ ಇದೀಗ ಗಾಂಜಾ ಕರಾಮತ್ತು ಹೆಚ್ಚಾಗ ತೊಡಗಿದೆ. ಒಂದು ಕೆ.ಜಿ.ಗಾಂಜಾಗೆ 10ರಿಂದ 20 ಸಾವಿರ ರೂ. ಇದಕ್ಕೆ ಆಕರ್ಷಿತರಾಗಿ ಕಳ್ಳ ದಂಧೆಗೆ ತೊಡಗಿಸಿಕೊಳ್ಳುವವರು ಹೆಚ್ಚಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದೊಂದಿಗೆ ಅಪರಾಧವೂ ಬೆಳೆಯುತ್ತಿದೆ !


ಸಾಂಸ್ಕ್ರತಿಕ ನಗರ ಮೈಸೂರು ಬೆಳೆಯುತ್ತಿದೆ. ಇದರೊಂದಿಗೆ ಅಪರಾಧವೂ ಏರಿಕೆಯಾಗುತ್ತಿದೆ. ಸರಗಳ್ಳತನದ ಕೇಂದ್ರವಾಗುತ್ತಿರುವ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಕರಣ ಹೆಚ್ಚುತ್ತಿದೆ. ಹೀಗಂತ ನಗರ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ಅವರೇ ಹೇಳಿದ ಮಾತಿದು.

ಮೈಸೂರು ವಿವಿ ಹಗರಣಗಳ ಹರೋಹರ


ಮೈಸೂರು ವಿವಿ ಕುಲಪತಿಗಳಾದ ಬಹುತೇಕರು ಸತ್ಯ-ಧರ್ಮವನ್ನು ಎತ್ತಿ ಹಿಡಿದಿಲ್ಲ. ಅದೊಂದನ್ನು ಬಿಟ್ಟು ಎಲ್ಲವನ್ನೂ ಎಸಗಿದ ಅವ್ಯವಹಾರ, ಅಕ್ರಮಗಳ ಬಗ್ಗೆ ವಿಚಾರಣೆಗಳು ನಡೆದಿವೆ. ವರದಿಗಳು ಬಂದಿವೆ. ಆದರೆ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಬಿಜೆಪಿ 'ಉಗ್ರಾಣ'ದಿಂದ ಬೆಂಕಿ ಔಟ್


ಮೈಸೂರು ಚಾಮರಾಜನಗರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮಹಾದೇವು ಅವರನ್ನು ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಯಡಿಯೂರಪ್ಪ ವಜಾಗೊಳಿಸಿದ್ದು, ಇದಕ್ಕೆ ಆಕ್ರೋಶಗೊಂಡ 'ಬೆಂಕಿ' ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಅಪೂರ್ವ ಕಲಾಕೃತಿಗಳ ಪ್ರದರ್ಶನ


ಕೀರ್ತಿ ಶೇಷ ಕಲಾ ದಿಗ್ಗಜರ ಕಲಾಕೃತಿಗಳ ವಿಶಿಷ್ಟ ಪ್ರದರ್ಶನ 'ಮೈಸೂರಿನ ಅಮರ ಕಲಾವಿದರು' ನಗರದ ಮೃಗಾಲಯ ಎದುರಿನ ಪ್ರತಿಮಾ ಗ್ಯಾಲರಿಯಲ್ಲಿ ಬುಧವಾರ ಸಂಜೆ ಆರಂಭವಾಯಿತು.

ಮೈಸೂರು ಬಿಟ್ಟು ಕದಲದ ವಸ್ತು ಪ್ರದರ್ಶನ ಪ್ರಾಧಿಕಾರ


ಇದು ಹೆಸರಿಗಷ್ಟೇ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ. ಮಾಡುವ ಕೆಲಸವೆಲ್ಲಾ ಮೈಸೂರು ದಸರಾಗೆ ಮಾತ್ರ ಸೀಮಿತ. ಹಾಗಾಗಿ ಬಹಳಷ್ಟು ಮಂದಿ ಇದನ್ನು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಎಂದೇ ಹೇಳುವುದು ಅದರ ಕಾರ್ಯ ವೈಖರಿಗೆ ಹಿಡಿದ ಕನ್ನಡಿ.

ಇಬ್ಬರು ನಿರ್ಮಾಪಕರಿಗೆ ಒಲಿದ ಮೇಲ್ಮನೆ


ಚಿತ್ರ ನಿರ್ಮಾಣದಲ್ಲಿ ಗೆಲ್ಲುತ್ತಲೇ ಇದ್ದ ಸಂದೇಶ್ ನಾಗರಾಜ್ ಗೆ ಚುನಾವಣೆ ಎಂಬ ಚಿತ್ರದಲ್ಲಿ ಇದು ಮೊದಲನೇ ಗೆಲುವು. ಮೊದಲ ಬಾರಿಗೆ ನಿರ್ಮಾಪಕ ಗೆಳೆಯ ಮುಂಗಾರು ಮಳೆಯ ಇ.ಕೃಷ್ಣಪ್ಪ (ಬೆಂಗಳೂರು ಗ್ರಾಮಾಂತರ) ಅವರೊಂದಿಗೆ ಸಂದೇಶ್ ಮೇಲ್ಮನೆ ಪ್ರವೇಶಿಸುತ್ತಿರುವುದು ವಿಶೇಷ.

ಚಿತ್ತ ಚಿತ್ತಾರದ ಚಿತ್ರಗಳು

ಕೊಳ್ಳೆ ಬಾಕರು


ಅಭಿವೃದ್ಧಿಯ ರಂಗೋಲಿ ಕೆಳಗೆ ನಡೆಯುತ್ತಿರುವ ಭ್ರಷ್ಟತೆ ಬ್ರಹ್ಮಾಂಡ ಸ್ವರೂಪದ್ದು. ಪಾರದರ್ಶಕತೆ ನಿಯಮ ಕಡ್ಡಾಯ. ಟೆಂಡರ್ ಮೂಲಕ ನಿಯಮ ಪಾಲನೆ ಶಾಸ್ತ್ರ ನಡೆಯುತ್ತದೆ. ಆದರೆ 1 ಕೋಟಿ ರೂ. ಕಾಮಗಾರಿಯಲ್ಲಿ 'ಕೊಳ್ಳೆ'ಬಾಕರ ತಿಜೋರಿ ಸೇರುವ ಪಾಲೇ ಹೆಚ್ಚು.

ಮರಿ ವೀರಪ್ಪನ್ ಗೆ ಇಲ್ಲಿಲ್ಲ ಕಡಿವಾಣ


ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗಿನಿಂದ ತೇಗದ ಮರ ಲೂಟಿ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ಮುಕ್ತ ವಿವಿ ಸಿಬ್ಬಂದಿ ನೇಮಕ ಎಂದು ?


ಲಕ್ಷಾಂತರ ಮಂದಿಗೆ ದೂರ ಶಿಕ್ಷಣ ನೀಡುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸಿಬ್ಬಂದಿ ನೇಮಕಕ್ಕೆ ಮುಕ್ತ ಮನಸೇ ಮಾಡುತ್ತಿಲ್ಲ. ಹಿಂದಿನ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಸ್ವಲ್ಪಮಟ್ಟಿಗೆ ಆಕಸ್ತಿ ತೋರಿದರೂ ನೇಮಕ ಪೂರ್ಣಗೊಳಿಸಲಿಲ್ಲ. ಈಗ ಉಳಿದಿರುವ ಪ್ರಕ್ರಿಯೆ ಸವಾಲು ನೂತನ ಕುಲಪತಿ ಡಾ.ಕೆ.ಎಸ್.ರಂಗಪ್ಪ ಅವರಿಗೆ ಎದುರಾಗಿದೆ.

ಪುಸ್ತಕ ಸರಸ್ವತಿಗಿಲ್ಲ ನೆಲೆ


ಹಳೇ ಶಾಸಕರು, ಜನಪ್ರತಿನಿಧಿಗಳ ಅಧಿಕಾರ ಮುಗಿದು ಹೊಸಬರು ಅಧಿಕಾರಕ್ಕೇರಿದರೂ ಕೃಷ್ಣರಾಜನಗರ ಪಟ್ಟಣದ ಸುಸಜ್ಜಿತ ಗ್ರಂಥಾಲಯ ಕಟ್ಟಡ ಇಂದಿಗೂ ಕನಸಾಗಿಯೇ ಉಳಿದಿದೆ.

ಸಿಎಂ ಬರುವಿನ ನಿರೀಕ್ಷೆಯಲ್ಲಿದ್ದಾನೆ 'ದತ್ತು' ಹುಲಿರಾಯ



ಮೈಸೂರಿನ ಮೃಗಾಲಯದಲ್ಲಿರುವ ಮಧುಕೇಶ್ವರನೆನ್ನುವ ಹೆಸರಿನ ಈತ ಮುಖ್ಯಮಂತ್ರಿಗಳ ಬರುವಿಕೆಯ ನಿರೀಕ್ಷೆಯಲ್ಲಿದ್ದಾನೆ.

ವಿದ್ಯಾರ್ಥಿ ಶಕ್ತಿ ಗುಡುಗಿದರೆ ವಿಧಾನಸೌಧ ನಡುಗಲೇ ಬೇಕು !


ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ತೆಲಂಗಾಣ ಹೋರಾಟದ ನೈಜ ಶಕ್ತಿ ಯಾವುದೇ ಗೊತ್ತೆ? ಉಸ್ಮಾನಿಯ ವಿಶ್ವವಿದ್ಯಾನಿಲಯ, ಆಂಧ್ರ ವಿವಿ, ಮತ್ತು ಜವಾಹರಲಾಲ್ ನೆಹರು ತಾಂತ್ರಿಕ ವಿವಿಯ ಯುವಕರು. ಯಾವುದೇ ಚಳವಳಿಗೆ ಯುವ ಪಡೆ ಅವಶ್ಯವೋ ಇಲ್ಲವೋ ಎಂಬುದರ ಬಗ್ಗೆ ಈ ಬಾರಿ ವಿದ್ಯಾರ್ಥಿ ವಿಶೇಷ.

ಎಲ್ಲರ ಮನದಲ್ಲೂ ನಾನಿದ್ದೇನೆ


ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ವಾಟಾಳ್ ನಾಗರಾಜ್ ವಿಕ ಮೈಸೂರು ಕಚೇರಿಗೆ ಭೇಟಿ ನೀಡಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನಿಂದ ಬಂಡೀಪುರದವರೆಗೆ ಸೈಕಲ್ ಯಾನ


ಯಾಂತ್ರಿಕ ಜೀವನದಿಂದ ತುಸು ರಿಲ್ಯಾಕ್ಸ್ ಪಡೆಯಲು ವಿಶಿಷ್ಟ ಸೈಕಲ್ ಯಾನ ಆರಂಭಗೊಂಡಿದೆ. ಆರು ದಿನ ಈ ಯಾನ ಬೆಂಗಳೂರಿನಿಂದ ಆರಂಭಗೊಂಡಿದ್ದು, ಮೊದಲ ದಿನ ಮೈಸೂರಿಗೆ ತಲುಪಿದೆ. ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಇದಕ್ಕೆ ಚಾಲನೆ ನೀಡಿದ್ದಾರೆ.

ಮೈಸೂರಿಗೆ ಬಂತು ಸೈನ್ಸ್ ಎಕ್ಸ್ ಪ್ರೆಸ್


ಹಳಿಗಳ ಮೇಲೆ ವಿಜ್ಞಾನ ವಸ್ತು ಸಂಗ್ರಹಾಲಯ ಅದುವೇ ಸೈನ್ಸ್ ಎಕ್ಸ್ ಪ್ರೆಸ್ ಸಾಂಸ್ಕ್ರತಿಕ ನಗರಿ ಮೈಸೂರಿಗೆ ಬಂದಿಳಿದಿದೆ. ಈ ವಿಶೇಷ ರೈಲಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಳ ಪ್ರತಿ ವಿವರವೂ ಲಭ್ಯ.

ಅರಮನೆ ಪಾರ್ಕಿಂಗ್ 'ವಸೂಲಿ'ಗೆ ಸೀಮಿತ


ಮೈಸೂರು ಅರಮನೆ ಪಾರ್ಕಿಂಗ್ ಸ್ಥಳದಲ್ಲಿ ದುಬಾರಿ ಶುಲ್ಕ ನೀಡಿದರೂ ವಾಹನಕ್ಕೆ ರಕ್ಷಣೆ ಇಲ್ಲ. ಇದರ ಗುತ್ತಿಗೆ ವಹಿಸಿಕೊಂಡವರು ವಾಹನ ಹೊರಡುವಾಗ ಹಣ ಕೇಳಲಷ್ಟೇ ಬರುತ್ತಾರೆ. ಜತೆಗೆ ಚೀಟಿ (ಟೊಕನ್) ಕೂಡ ನೀಡುವುದಿಲ್ಲ.

ಚಾಮರಾಜನಗರದಲ್ಲಿ ರೈತರ ಮೇಲೆ ಲಾಠಿ ಪ್ರಹಾರ

ಖ್ಯಾತ ಛಾಯಾಗ್ರಾಹಕ ಸತ್ಯನ್ ಇನ್ನಿಲ್ಲ


ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರ ಪತ್ರಕರ್ತ, ಪದ್ಮಶ್ರೀ ಡಾ.ಟಿ.ಎನ್. ಸತ್ಯನ್ (85) ಭಾನುವಾರ ಮೈಸೂರಿನಲ್ಲಿ ನಿಧನರಾದರು.

'ಕಾಲಕ್ಕೆ ಕನ್ನಡಿ' ಹಿಡಿದರು


ಸತ್ಯನ್ ಛಾಯಾಚಿತ್ರ ಪತ್ರಕರ್ತರಾಗಿ ಉತ್ತುಂಗದಲ್ಲಿದ್ದ ದಿನಗಳು. ಹೊಸದಿಲ್ಲಿಯಲ್ಲಿ ವಾಸ, ಪ್ರಭಾವಿ ವ್ಯಕ್ತಿಗಳ ಸಹವಾಸ. ದಿಲ್ಲಿ ಪತ್ರಕರ್ತರ ಸಂಘದ ಗೃಹ ನಿರ್ಮಾಣ ಸಹಕಾರ ಸಂಘದ ನೇತೃತ್ವವನ್ನೂ ವಹಿಸಿದ್ದರು.

ಹಾವಿಗೇ ಹಾಲಾಹಲ


ಹಾವಿನ ಹೆಸರಿನಲ್ಲಿ ವ್ಯಾಪಾರ ಕುದುರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾವಿನ ದ್ವೇಷ 12 ವರುಷ ಎನ್ನುವ ಮಾತನ್ನು ಈಗ, ಹಾವಿನ ಸಂಗ ಲಕ್ಷ ಲಕ್ಷ ಆದಾಯಕ್ಕಿಲ್ಲ ಭಂಗ ಎನ್ನುವಂತಾಗಿದೆ.

ಆನ್ ಡಿಮ್ಯಾಂಡ್ ಎಕ್ಸಾಮ್


ಇನ್ಮುಂದೆ ಪರೀಕ್ಷಾ ಮಂಡಳಿ ಪ್ರಕಟಿಸುವ ವೇಳಾಪಟ್ಟಿಗೆ ಕಾಯಬೇಕಿಲ್ಲ. ವಿದ್ಯಾರ್ಥಿಗಳು ಸಿದ್ಧರಾಗಿದ್ದರೆ ಸಾಕು ಯಾವಾಗ ಬೇಕಾದರೂ ಆನ್ ಲೈನ್ ಮೂಲಕ ಪರೀಕ್ಷೆ ಎದುರಿಸಬಹುದು. ಇದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಇಗ್ನೋ) ವಿಶೇಷ.

'ಪ್ರಕಾಶಕ ಶ್ರೇಷ್ಠ' ಡಿವಿಕೆ ಮೂರ್ತಿ ಇನ್ನಿಲ್ಲ


ಪ್ರಕಾಶಕ ಶ್ರೇಷ್ಠ ಡಿವಿಕೆ ಮೂರ್ತಿ (83) ನಗರದಲ್ಲಿ ಬುಧವಾರ ನಿಧನರಾದರು. ನಾಡು ಕಂಡ ಅತ್ಯುತ್ತಮ ಪ್ರಕಾಶಕರಾಗಿದ್ದ ಅವರು, ಹೆಸರಾಂತ ಸಾಹಿತಿಗಳ ಪುಸ್ತಕ ಪ್ರಕಟಿಸಿ ಕೊನೆಕಾಲದವರೆಗೂ ಪುಸ್ತಕ ಪ್ರೀತಿ ಮೆರೆದಿದ್ದರು.

ಜಿಲ್ಲಾಧಿಕಾರಿ ತೀರ್ಪು ಎತ್ತಿ ಹಿಡಿದ ಹೈಕೋರ್ಟ್


ಹಣದಾಸೆಗೆ ಬಿದ್ದು ಪಕ್ಷಾಂತರ ಮಾಡಿದ್ದ ಮಂಡ್ಯ ನಗರಸಭೆಯ 13 ಪುರಪಿತೃಗಳ ಸದಸ್ಯತ್ವ ಅನೂರ್ಜಿತಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸದಸ್ಯತ್ವ ಕಳೆದುಕೊಂಡ ಪುರಪಿತೃಗಳು ಅತಂತ್ರರಾಗಿದ್ದಾರೆ.

ಚಿಹ್ನೆ ಇಲ್ಲ, ಶಾಯಿ ಇಲ್ಲ, ಗುರುತಿನ ಚೀಟಿ ಬೇಕಿಲ್ಲ


ಬ್ಯಾಲೆಟ್ ಪೇಪರಿನಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಇರುವುದಿಲ್ಲ; ಮತದಾನ ಪ್ರಕ್ರಿಯೆಗೆ ಅಳಿಸಲಾಗದ ಶಾಯಿ ಬೇಕಿಲ್ಲ. ಅನಕ್ಷರಸ್ಥ ಎಂದು ಘೋಷಿಸಿಕೊಂಡರೆ ಮತದಾನ ಮಾಡಲು ಸಹಾಯಕನನ್ನೂ ಕರೆದೊಯ್ಯಬಹುದು. - ಇದು ಮೇಲ್ಮನೆ ಚುನಾವಣೆಯ ವಿಶೇಷ.

ಮೈತ್ರಿ ಆದರೂ ಮುಗಿಯದ ಮುನಿಸು


ಜಾ.ದಳದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೂ ದೇವೇಗೌಡ ಬಗೆಗಿನ ತಮ್ಮ ಅಭಿಪ್ರಾಯ ಬದಲೇಕೆ ಮಾಡಿಕೊಳ್ಳಬೇಕು? ಹೀಗೆಂದು ಕೊಂಚ ಅಸಹನೆಯಿಂದಲೇ ಪ್ರಶ್ನಿಸಿದವರು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಅವರು ವಿಕ ದೊಂದಿಗೆ ಮಾತನಾಡುತ್ತಾ ಈ ವಿಷಯ ಬಹಿರಂಗಪಡಿಸಿದರು.

ಯಾರು ಗೆದ್ದರೂ ದಾಖಲೆ


ಕೊಡಗು ಕ್ಷೇತ್ರದಿಂದ 1998ರಿಂದ ಇದುವರೆಗೂ ಯಾವೊಬ್ಬ ಅಭ್ಯರ್ಥಿಯೂ ಎರಡನೇ ಬಾರಿಗೆ ಚುನಾಯಿತರಾಗಿಲ್ಲ. ಈ ಬಾರಿ ಹಾಗೇನಾದರೂ ಆದರೆ ಅದು ದಾಖಲೆಯೇ ಸರಿ.

ಚಿತ್ರ ಗುಚ್ಚ

ಬೆಂಗಳೂರು ಸ್ಫೋಟಕ್ಕೆ ಗರಗಂದೂರಿನಲ್ಲಿ ಸಂಚು ?


ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ಬಾಂಗ್ಲಾಗಡಿಯಲ್ಲಿ ಬಂಧಿತನಾಗಿರುವ ಉಗ್ರಗಾಮಿ ನಜೀರ್ ಕೊಡಗು ಜಿಲ್ಲೆಯ ಗರಗಂದೂರಿನಲ್ಲಿ ಹೈಟೆಕ್ ಶೆಡ್ ನಿರ್ಮಾಣ ಮಾಡಿಕೊಂಡು ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ತಿ.ನರಸೀಪುರ ಜೋಡಿ ರಸ್ತೆಗೆ ಚತುಷ್ಪಥ ಭಾಗ್ಯ


ಬಹು ದಿನಗಳಿಂದ ಭರವಸೆಯಾಗಿ ಉಳಿದಿದ್ದ ತಿ.ನರಸೀಪುರ ಜೋಡಿ ರಸ್ತೆ ಇದೀಗ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಯಾಗಲು ಸಿದ್ಧಗೊಳ್ಳುತ್ತಿದೆ.

ಜಿಲ್ಲಾಸ್ಪತ್ರೆಗಳಲ್ಲಿ ಸೌಲಭ್ಯಗಳೇ ಇಲ್ಲ


ಎಲ್ಲರಿಗೂ ಆರೋಗ್ಯ ಭಾಗ್ಯ ಲಭಿಸಬೇಕೆನ್ನುತ್ತದೆ ಸರಕಾರ. ಪೂರಕವಾಗಿ ಸಾವಿರಾರು ಕೋಟಿ ರೂ. ಗಳ ಕಾರ್ಯಕ್ರಮಗಳು. ಆದರೆ ಆರೋಗ್ಯ ಸೇವೆಯ ಮೂಲಗಳಾದ ಆಸ್ಪತ್ರೆಗಳು ಅನಾರೋಗ್ಯ ಪೀಡಿತ.

ಗೆಲುವಿಲ್ಲದ ಸರದಾರ ಸಂದೇಶ್ ನಾಗರಾಜ್


ರಾಜಕೀಯ ಅಖಾಡದಲ್ಲಿ ಸೋಲಿಲ್ಲದ ಸರದಾರರಿದ್ದಾರೆ. ಅದೇ ಮೈಸೂರು ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಮಾತ್ರ ಗೆಲುವೇ ಕಾಣದವರು. ಇವರು ಎರಡು ದಶಕದಿಂದ ರಾಜಕೀಯದಲ್ಲಿದ್ದರೂ ಗೆಲುವೇ ಕಂಡಿಲ್ಲ.

ಪೊಲೀಸರಿಗೆ ತಲೆನೋವಾದ ಸರಗಳ್ಳತನ


ನಗರದಲ್ಲಿ ಸತತ ಏಳನೇ ದಿನವೂ ಸರಗಳ್ಳತನ ನಡೆದಿದೆ. ಈ ವರ್ಷ (11 ತಿಂಗಳು)ದಲ್ಲಿ ಒಟ್ಟು 60 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸರಗಳ್ಳರು ದೋಚಿಸಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ಬೇಧಿಸಲು ವಿಫಲರಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.