ಮಕ್ಕಳಿಗೆ ಪೋಷಕರ ಅಕ್ಕರೆಯೇ ಮೊದಲ ಔಷಧ

ವಿಕ ಸುದ್ದಿಲೋಕ ಮೈಸೂರು
‘ಮನೆಯಲ್ಲಿ ಸ್ವಚ್ಛತೆಗೆ ಒತ್ತು; ಕುರುಕಲು ತಿಂಡಿಗೆ ಗುಡ್ ಬೈ ಮತ್ತು  ಮಕ್ಕಳಿಗೆ ತಗಲುವ ಸಾಮಾನ್ಯ ಕಾಯಿಲೆ ಕಸಾಲೆ ಬಗ್ಗೆ  ಪ್ರಾಥಮಿಕ ಜ್ಞಾನ...!‘ 
ಯಾವ ಪಾಲಕರು  ಈ ಮೂರು  ಅಂಶಗಳ ಬಗ್ಗೆ ಗಮನಹರಿಸುವರೋ, ಅಂಥವರ ಮನೆ  ವೈದ್ಯರನ್ನು, ಕಾಯಿಲೆ -ಕಸಾಲೆಗಳನ್ನೂ  ದೂರವಿಡಬಲ್ಲ ಶಕ್ತಿ -ಸಾಮಾರ್ಥ್ಯ  ಹೊಂದಿರುತ್ತದೆ.
‘ಮಕ್ಕಳ ಆರೋಗ್ಯ ಸಮಸ್ಯೆಗಳು’ ಕುರಿತು  ಶನಿವಾರ  ವಿಕ ಕಚೇರಿಯಲ್ಲಿ ನಡೆದ  ಯೋಗ ಕ್ಷೇಮ  ‘ಫೋನ್ -ಇನ್ ‘  ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ  ಡಾ. ಕೆ. ಬಿ. ಮಹೇಂದ್ರಪ್ಪ   ಅವರು  ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ನೀಡುತ್ತಿದ್ದ ಉತ್ತರದ  ಅಂತಿಮ ಸಾರ ಇದೇ  ಆಗಿತ್ತು !
‘ಮಗುವಿಗೆ ಯಾವುದೇ ರೀತಿಯ ಸಮಸ್ಯೆ ಬಂದ್ರೂ, ಯಾರೂ ಗಾಬರಿಯಾಗಬಾರದು. ಮನೆಯಲ್ಲಿಯೇ ಒಂದಿಷ್ಟು ಮದ್ದು ನೀಡಿ, ವೈದ್ಯರಿಗೆ ತೋರಿಸಬೇಕು. ಹೀಗೆ ಬರುವ ಸಮಸ್ಯೆಗಳು ನಿಧಾನವಾಗಿ ವಾಸಿಯಾಗುತ್ತವೆ. ಹಾಗಾಗಿ, ತಡ ಎಂದು  ಆತಂಕಕ್ಕೆ ಬೀಳಬಾರದು. ಪ್ರತಿಯೊಂದಕ್ಕೂ  ಮದ್ದು, ಔಷಧಿ  ಇದ್ದೇ ಇದೆ.  ಗಾಬರಿ ಏಕೆ ?’  ಎಂದು  ಪ್ರಶ್ನಿಸುತ್ತಲೇ  ಬಹುಪಾಲು ಪಾಲಕರಿಗೆ  ಸಾಂತ್ವನ -ಸಮಾಧಾನ ಹೇಳಿದರು.
ವರ್ಷ ೧೦ ತುಂಬಿದರೂ ಮಗು ಹಾಸಿಗೆಯಲ್ಲಿಯೇ ಉಚ್ಚೆ ಮಾಡುತ್ತದೆ; ಕುರಕಲು ತಿಂಡಿಗೆ ಜೋತು ಬಿದ್ದಿರುವುದರಿಂದ, ಅನ್ನ ತಿನ್ನುವುದಿಲ್ಲ; ಬಸ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಮಾಡಿಕೊಳ್ಳುತ್ತೆ; ಕಕ್ಕಸ್ ಮಾಡಲು ತಿಣುಕಾಡುತ್ತೆ; ಸಕಾಲದಲ್ಲಿ ಹಲ್ಲು ಹುಟ್ಟಿಲ್ಲ; ಕಾಲಲ್ಲಿ-ಮುಖದಲ್ಲಿ ಗುಳ್ಳೆ ಆಗಿವೆ; ಮಗು ತೂಕನೇ ಕಡಿಮೆಯಾಗಿದೆ; ರಾತ್ರಿ ಉಸಿರಾಡಲು ಕಷ್ಟ ಪಡುತ್ತೆ... ಹೀಗೆ ಹತ್ತಾರು ರೀತಿಯ ಪ್ರಶ್ನೆಗಳನ್ನು  ಓದುಗರು  ವೈದ್ಯರ ಮುಂದಿಟ್ಟರು.
‘ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ಅದನ್ನು ಬರದಂತೆ ತಡೆಯುವುದೇ ಮೇಲು’ ಎಂಬ ವೈದ್ಯ ಧರ್ಮದಂತೆ-  ಎಲ್ಲ ಸಮಸ್ಯೆಗಳಿಗೂ  ಪರಿಹಾರ ವಿಧಾನ, ಚಿಕಿತ್ಸೆ ಯನ್ನು ವಿವರಿಸುತ್ತಲೇ, ಸಮಸ್ಯೆಯ ಮೂಲ ಬೇರು ಎಲ್ಲಿದೆ ಎಂಬುದರ ಬಗ್ಗೆ   ಬೆಳಕು ಚೆಲ್ಲಿದರು. ವೈದ್ಯರು ನೀಡಿದ ಸಲಹೆ-ಮಾರ್ಗದರ್ಶನಗಳು ಇಂತಿವೆ.
ಮನೆಯೇ ಹೋಟೆಲ್ ಆಗಲಿ
-  ಸಾಮಾನ್ಯವಾಗಿ ಮಕ್ಕಳು ಹೋಟೆಲ್ ಹಾಗೂ ಬೇಕರಿ ತಿಂಡಿಗೆ ಜೋತು ಬೀಳುವುದು ಸಾಮಾನ್ಯ. ಆದರೆ, ಚಾಕುಲೇಟ್, ಲೇಸ್, ಕುರ್ಕುರಿಯಂಥ  ತಿಂಡಿ-ತಿನಿಸುಗಳು ಹೊಟ್ಟೆ ಹಸಿವನ್ನೇ ನುಂಗಿ ಹಾಕಿಬಿಡುತ್ತವೆ. ಹಾಗಾಗಿ, ಮಕ್ಕಳು ಮನೆಯ ಊಟ ಮಾಡಲು ನಿರಾಕರಿಸುತ್ತವೆ. ಇದೇ ವೇಳೆ ಆಧುನಿಕ ತಿನಿಸುಗಳ ರುಚಿಗೆ ನಾಲಗೆಯನ್ನು ಒಪ್ಪಿಸಿಬಿಟ್ಟಿರುತ್ತವೆ. ಇದನ್ನು ತಪ್ಪಿಸಬೇಕು ಅಂದ್ರೆ,ಪಾಲಕರು ಮನೆಯಲ್ಲಿಯೇ ವೈವಿಧ್ಯಮಯ ಆಹಾರವನ್ನು ನೀಡಬೇಕು. ಊಟ ಅಂದ್ರೆ ಕೆಲವು ತಾಯಂದಿರ ದೃಷ್ಟಿಯಲ್ಲಿ ಅನ್ನ, ಹಾಲು. ಇದು ತಪ್ಪಬೇಕು.
- ಕುರುಕಲು ತಿಂಡಿ ಬೇಕು ಎಂದು ಮಗು ಹಠ ಮಾಡಿದರೆ, ಹೊಟ್ಟೆ ತುಂಬಾ ಊಟ ಮಾಡಿಸಿ. ಬಳಿಕ ಕುರುಕಲು ತಿಂಡಿ ನೀಡಿ.
- ೧ ರಿಂದ ೧೪ ಮಕ್ಕಳು ಬೆಳೆಯುವ ಕಾಲ. ಈ ಅವಧಿಯಲ್ಲಿ ಮಕ್ಕಳಿಗೆ ಸಮತೋಲನದಿಂದ ಕೂಡಿದ ಆಹಾರ ನೀಡಬೇಕು. ಶರ್ಕರ ಪಿಷ್ಟ, ಜಿಡ್ಡು, ನ್ಯೂಟ್ರಿನ್, ತರಕಾರಿ, ಹಣ್ಣು-ಹಂಪಲು ಸೇರಿದಂತೆ ಮಕ್ಕಳಿಗೆ ಎಲ್ಲವನ್ನೂ ನೀಡಬೇಕು.
- ಊಟದ ಸಮಯದಲ್ಲಿ  ಮಕ್ಕಳಿಗೆ ನೀತಿ ಕಥೆ, ಹಾಡು ಹೇಳುತ್ತಾ, ಹೊರಗಡೆ ಚಂದಮಾಮನನ್ನು ತೋರಿಸುತ್ತಾ  ಊಟ ಮಾಡಿಸಿದರೆ, ಅವು ಹೆಚ್ಚು ಊಟ ಮಾಡುತ್ತವೆ. ಊಟದ ಜತೆಗೆ ಪ್ರೀತಿಯ ಕೈ ತುತ್ತನ್ನು ನೀಡಬೇಕು.
- ಮಕ್ಕಳಿಗೆ  ದಿನಕ್ಕೆ ಮೂರು ಬಾರಿ ಊಟ ಮಾಡಿಸುವ ಬದಲು,ಐದು ಬಾರಿ ಊಟ ಮಾಡಿಸಿ. ಆಗ ಸ್ವಲ್ಪ -ಸ್ವಲ್ಪ ಊಟವನ್ನು  ಹೆಚ್ಚು ಬಾರಿ ತಿಂದರೆ ಒಳ್ಳೆಯದು.
- ಅನ್ನ ಬಸಿದ ಗಂಜಿ, ರಾಗಿ ಅಂಬಲಿ, ವಡ್ಡರಾಗಿ ಅಂಬಲಿ, ರವೆ ಗಂಜಿಯ ಬಗ್ಗೆ ಮಕ್ಕಳಲ್ಲಿ ಮೋಹ ಬೆಳಸಿ. ಇಂಥ ಆಹಾರಗಳನ್ನು ಆಕರ್ಷಕಗೊಳಿಸಿ.  ಸಂರಕ್ಷಣೆ ಮಾಡಿದ ಯಾವುದೇ ಆಹಾರ ಪದಾರ್ಥದಲ್ಲಿ ಒಂದಿಷ್ಟು ರಾಸಾಯನಿಕ ಅಂಶ ಇರುತ್ತದೆ ಎಂಬುದನ್ನು ಮರೆಯದಿರಿ.
- ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ- ಅವರ ನಡುವೆ ತಾರತಮ್ಯ ಮಾಡುವುದು ಬೇಡ. ಇದು ಕೂಡ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ.
ಸ್ವಚ್ಛತೆಗೆ ಆದ್ಯತೆ
- ಇತ್ತೀಚಿನ ಸಮೀಕ್ಷೆಯೊಂದರ  ಅಸ್ತಮಾ ರೋಗ  ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ತಗಲುತ್ತಿದೆ. ಇದಕ್ಕೆ ವಿವಿಧ ರೀತಿಯ ಅಲರ್ಜಿಯೇ ಕಾರಣ. ತಿನ್ನುವ ಅನ್ನ, ಹಾಸಿಗೆಯ  ಧೂಳು, ಸಾಕು ಪ್ರಾಣಿಗಳ ಮೇಲಿನ ಚರ್ಮ, ಎಲ್ಲೆಂದರಲ್ಲಿ ಓಡಾಡುವ ಜಿರಳೆಗಳು... ಹೀಗೆ ನಾನಾ ಮಾರ್ಗದಲ್ಲಿ  ಅಸ್ತಮಾ ಮಕ್ಕಳ ಮೇಲೆ ದಾಳಿ ಇಡುತ್ತದೆ. ಹಾಗಾಗಿ, ಮಕ್ಕಳಿರುವ ಮನೆಗಳಲ್ಲಿ ಸ್ವಚ್ಛತೆಗೆ ಎಲ್ಲಿಲ್ಲದ ಆದ್ಯತೆ ನೀಡಬೇಕು.
- ಮಗು ದಿನಕ್ಕೆ ೯ ಗಂಟೆ ನಿದ್ರೆ ಮಾಡಲೇ ಬೇಕು. ಮನೆಯಲ್ಲಿ ಅಂಥಾ ವಾತಾವರಣ ನಿರ್ಮಿಸಿ.
- ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ಅನೇಕ ಸೋಂಕುಗಳು ಬರುವ ಸಾಧ್ಯತೆ ಇದೆ. ಹಾಗಾಗಿ, ಕುದಿಸಿದ ಹಾಗೂ ಬೇಯಿಸಿದ ಆಹಾರವನ್ನು ಕೊಡುವುದು ಒಳ್ಳೆಯದು. ನೀರು ಮತ್ತು ಮಜ್ಜಿಗೆ ಯಂಥ ದ್ರವಾಹಾರವನ್ನು ಕಡಿಮೆ ಮಾಡಿ. ಕುದಿಸದ ಇಂಥ ದ್ರವಾಹಾರ ಕಲುಷಿತವಾಗುವ ಸಾಧ್ಯತೆ ಇರುತ್ತದೆ
 ರೋಗದ ಬಗ್ಗೆ  ಮಾಹಿತಿ ಇರಲಿ
- ವರ್ಷ ೧೦ ತುಂಬಿದರೂ ಮಕ್ಕಳು ಹಾಸಿಗೆಯಲ್ಲಿ ಸೂಸು ಮಾಡಿಕೊಳ್ಳುತ್ತವೆ. ಇಂಥ ಮಕ್ಕಳು  ‘ಪ್ರೈಮರಿ ಎನರಿಸಿಸ್’ನಿಂದ ಬಳಲುತ್ತಿರುತ್ತವೆ. ಈ ಮಕ್ಕಳಲ್ಲಿ ಪಿತ್ತಕೋಶ  ದ್ವಾರದಲ್ಲಿರುವ ಸ್ಪಿಂಟರ್ ಕಂಟ್ರೋಲರ್(ಮೂತ್ರವನ್ನು ತಡೆ ಹಿಡಿಯುವ ವ್ಯವಸ್ಥೆ)  ದುರ್ಬಲವಾಗಿರುತ್ತದೆ. ಹಾಗಾಗಿ, ಪಿತ್ತ ಕೋಶ  ತುಂಬಿದ ತಕ್ಷಣ ಮೂತ್ರ ಒಂದು ಕ್ಷಣವೂ ನಿಲ್ಲದಂತೆ ಹೊರಬಂದುಬಿಡುತ್ತದೆ.  ಇಂಥ ಮಕ್ಕಳಿಗೆ ಸಂಜೆ ೭ರ ಬಳಿಕ ನೀರು ನೀಡಬಾರದು. ಮಧ್ಯಾಹ್ನ ಚೆನ್ನಾಗಿ ನೀರು ಕುಡಿಸಿ, ಮೂತ್ರ ವಿಸರ್ಜನೆಯನ್ನು ತಡೆದು ನಿಲ್ಲಿಸುವ ಅಭ್ಯಾಸ ಮಾಡಿಸಬೇಕು. ರಾತ್ರಿ ವೇಳೆ ಮಕ್ಕಳನ್ನು ಏಳಿಸಿ, ಟಾಯ್ಲೆಟ್‌ಗೆ ಕಳುಹಿಸುವುದು ಒಳ್ಳೆಯದು. ಈ  ಎಲ್ಲ ಅಭ್ಯಾಸಗಳ ನಂತರವೂ ಮಗುವಿನ ಸೂಸು ದೌರ್ಬಲ್ಯ ಮುಂದುವರಿದರೆ, ವೈದ್ಯರ ಸಲಹೆ ಪಡೆದು ಔಷಧಿ ಪಡೆಯುವುದು ಒಳ್ಳೆಯವದು. 
 - ಸಾಮಾನ್ಯವಾಗಿ ನಾನಾ ಕಾರಣಗಳಿಂದ ಮಕ್ಕಳಿಗೆ ಜ್ವರ ಬರುತ್ತಿರುತ್ತದೆ. ಇದಕ್ಕಾಗಿ ಎಲ್ಲರ ಮನೆಯಲ್ಲೂ ಪ್ಯಾರಸೈಟಮಲ್ ಎಂಬ ಸಿರಪ್ ಇರಲಿ. ಜ್ವರ ಪೀಡಿತ ಮಗುವಿಗೆ ಉಗುರು ಬೆಚ್ಚಿನ ನೀರಿನಲ್ಲಿ ಮೈ ಒರೆಸಲಿ.
- ಕೆಲವು ಮಕ್ಕಳಿಗೆ ೬ ವರ್ಷವಾದರೂ ಮಾತು ಬರುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಈ ಎಲ್ಲ ಮಕ್ಕಳು ದೈಹಿಕವಾಗಿ ದುರ್ಬಲವಾಗಿರುತ್ತವೆ. ಹುಟ್ಟಿದ ಮೊದಲ ಎರಡು ವರ್ಷದ ಅವಧಿಯಲ್ಲಿ ಮೆದುಳು ವೇಗವಾಗಿ ಬೆಳೆಯುತ್ತದೆ. ಈ ಹಂತದಲ್ಲಿ  ಸ್ವಲ್ಪ ತೊಂದರೆಯಾದರೂ, ಮಗು ದೈಹಿಕವಾಗಿ ದುರ್ಬಲವಾಗುವುದು, ಬುದ್ಧಿ ಮಾಂದ್ಯತೆ,ಕಿವುಡುತನ  ಸೇರಿದಂತೆ ನಾನಾ ರೀತಿಯ ತೊಂದರೆಗೆ ಸಿಲುಕುತ್ತದೆ. ಇಂಥ ಸಮಸ್ಯೆಗಳಿಗೆ ಈಗ ಪರಿಹಾರ ಇದ್ದೇ ಇದೆ. ಕಿವಿ ಕೇಳಿಸದಿದ್ದರೆ, ಮಾತನಾಡದಿದ್ದರೆ, ಮೈಸೂರಿನಲ್ಲಿರುವ ವಾಕ್ ಶ್ರವಣ ಸಂಸ್ಥೆಗೆ ತೋರಿಸಬಹುದು.
- ಕಾಲಲ್ಲಿ, ಮುಖದಲ್ಲಿ ಸಣ್ಣ -ಸಣ್ಣ ಗುಳ್ಳೆಗಳು ಆಗುತ್ತವೆ. ಚರ್ಮದ ಸೋಂಕು ಇದಕ್ಕೆ ಕಾರಣ. ವೈದ್ಯರ ಸಲಹೆ ಪಡೆದು  ಔಷಧಿ ಪಡೆಯಬೇಕು.
- ೪ ರಿಂದ ೮ ವರ್ಷದ ಮಕ್ಕಳಿಗೆ ಟ್ರಾನ್ಸಿಲ್(ಗಂಟಲಿನಲ್ಲಿ)  ಇರುವುದು ಸಾಮಾನ್ಯ, ವರ್ಷದಲ್ಲಿ ಐದಾರು ಬಾರಿ ದಪ್ಪ ಆಗುತ್ತೆ. ಆದರೆ, ಇದಕ್ಕೆ ಸೋಂಕು ತಗಲಿದರೆ ತೊಂದರೆ. ಶೀತ ಸಂಬಂಧಿ ಚಟುವಟಿಕೆಗಳಿಂದ ದೂರವಿಡಿ. ವೈದ್ಯರ ಸಲಹೆ ಪಡೆಯಿರಿ.
- ೬ ಇಲ್ಲವೇ ೭ ತಿಂಗಳ ಸುಮಾರಿಗೆ ಮಗುವಿಗೆ ಹಲ್ಲು ಹುಟ್ಟಲು ಆರಂಭವಾಗಿ, ಎರಡೂವರೆ ವರ್ಷದೊಳಗೆ ಎಲ್ಲ ೨೦ ಹಾಲು ಹಲ್ಲುಗಳು ಮೂಡುತ್ತವೆ.
ಅನುವಂಶೀಯ ಕಾರಣದಿಂದ ಇಲ್ಲವೇ ಕ್ಯಾಲ್ಸಿಯಂ, ವಿಟಮಿನ್ ಡಿ ಕೊರತೆಯಿಂದಲೂ ಕೆಲ ಮಕ್ಕಳಿಗೆ ಹಲ್ಲು ಬರುವುದು ತಡ ಆಗುತ್ತದೆ. ಮಕ್ಕಳಿಗೆ ರಾಗಿ  ಉತ್ಪನ್ನಗಳನ್ನು ನೀಡುವುದು, ಸೂರ್ಯನ ಬೆಳಕಿಗೆ ಅನಾವರಣಗೊಳಿಸಿದರೆ- ಈ ಕೊರತೆ ನೀಗಬಹುದು.
 - ಶೀತವಾದರೆ ಮಗು ಗೊರ್ ಗೊರ್ ಎಂದು ಮೂಗಿನ ಮೂಲಕ ಸದ್ದು ಮಾಡುತ್ತದೆ. ಶೀತಕ್ಕೆ ಮಗು ಮುಕ್ತವಾಗುವುದು ಬೇಡ. ರಾತ್ರಿ ವೇಳೆ ಮೂಗು ಕಟ್ಟಿದರೆ, ನೇಸಲ್ ಸಲೈ(ಉಪ್ಪು ನೀರು) ಡ್ರಾಪ್ ಹಾಕಿ. 
- ವಿಟಮಿನ್ ಡಿ ಕೊರತೆ ಇರುವ ಮಗುವಿಗೆ ಹಣೆಯಲ್ಲಿ ಬೆವರಿನ ಹನಿಗಳಿರುತ್ತವೆ. ಈ ಬಗ್ಗೆ ಭಯ ಬೇಡ.
- ಕೆಲವು ಮಕ್ಕಳು ಪ್ರಯಾಣಿಸುವಾಗ ವಾಂತಿ ಮಾಡಿಕೊಳ್ಳುತ್ತವೆ. ಚಲನೆ ದೌರ್ಬಲ್ಯವೇ ಇದಕ್ಕೆ ಕಾರಣ. ಇದಕ್ಕೆ ಮದ್ದು ಇದೆ.
ವೈದ್ಯರ ಪರಿಚಯ
ದಶಕದಿಂದ ಮೈಸೂರಿನಲ್ಲಿ ಶಿಶುರೋಗ ತಜ್ಞರಾಗಿ, ಜೆಎಸ್‌ಎಸ್ ವೈದ್ಯ ಕಾಲೇಜಿನ  ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಕೆ. ಬಿ. ಮಹೇಂದ್ರಪ್ಪ ಅವರು ಮೂಲತಃ ದಾವಣಗೆರೆ ಯ ಹೊನ್ನಾಳಿಯವರು. ಬೆಳಗಾವಿಯ ಜವಹರ್‌ಲಾಲ್ ನೆಹರು ವೈದ್ಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ ಬಳಿಕ, ಚೆನ್ನೈ, ಮುಂಬಯಿ ಮತ್ತು ಮೈಸೂರಿನಲ್ಲಿ  ಎಂಡಿ, ಡಿಸಿಎಚ್ ಮತ್ತು ಡಿಎನ್‌ಬಿ ವ್ಯಾಸಂಗ ಪೂರ್ಣಗೊಳಿಸಿದರು.
ರೋಗಕ್ಕೆ ಚಿಕಿತ್ಸೆ ನೀಡುವುದರ ಜತೆಗೆ, ರೋಗ ಬರುವುದನ್ನೇ ನಿಯಂತ್ರಿಸುವುದು ಹೇಗೆ ಎಂಬುದನ್ನು ವಿವರಿಸುವ ವಿರಳ ವೈದ್ಯರ ಸಾಲಿಗೆ ಸೇರುತ್ತಾರೆ. ದೂರವಾಣಿ ಸಂಖ್ಯೆ : ೦೮೨೧-೨೪೮೩೫೭೬

ಬಜೆಟ್ ವೀಕ್ಷಣೆಗೆ ವಿವಿಗಳಲ್ಲಿ ಕವಿದ ಕತ್ತಲು

ಚೀ.ಜ. ರಾಜೀವ ಮೈಸೂರು
ಹಣಕಾಸು ಸಚಿವ  ಪ್ರಣವ್ ಮುಖರ್ಜಿ  ಅವರು ೨೦೧೦-೧೧ನೇ ಸಾಲಿನ ಬಜೆಟ್ ಮಂಡಿಸುವಾಗ  ನಮ್ಮ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು ಏನು ಮಾಡುತ್ತಿದ್ದರು ?
ಬಹುತೇಕರು ತರಗತಿಗಳಲ್ಲೇ ಇದ್ದರು. ವಿದ್ಯುತ್ ಕೈ ಕೊಟ್ಟ  ಪರಿಣಾಮ, ಬಹಳಷ್ಟು  ಮಂದಿ ಬಜೆಟ್ ನೋಡಲೇ ಇಲ್ಲ. ದೇಶದ ೧೦೦ ಕೋಟಿ ಜನರ ಆರ್ಥಿಕ ವ್ಯವಹಾರದ ಆಗು-ಹೋಗುಗಳನ್ನು ನಿರ್ಧರಿಸುವ, ಉದ್ಯಮದ ಬದುಕಿನ ಮೇಲೆ  ಒಂದಿಷ್ಟು ಪರಿಣಾಮ ಬೀರುವ,  ಲಾಭ-ನಷ್ಟವನ್ನು ತಂದೊಡ್ಡುವ ಬಜೆಟ್ ಕುರಿತು  ಇತ್ತೀಚಿನ ವರ್ಷಗಳಲ್ಲಿ ಶ್ರೀ ಸಾಮಾನ್ಯನಿಗೂ ಕುತೂಹಲ ಇದ್ದೇ ಇರುತ್ತದೆ.  ಐದಂಕಿ, ಆರಂಕಿ  ವೇತನ ಪಡೆಯುವ ಇಲ್ಲವೇ  ಆ ಪ್ರಮಾಣದಲ್ಲಿ ದುಡಿಮೆ ಮಾಡುವ ಜನರಂತೂ- ಬಜೆಟ್‌ನಿಂದ ತಮಗಾಗುವ  ಅನನುಕೂಲ - ಅನುಕೂಲದ  ಗುಣಾಕಾರ- ಭಾಗಾಕಾರ  ಮಾಡುತ್ತಿರುತ್ತಾರೆ. ಎಲ್ಲ ಸಮೂಹ ಮಾಧ್ಯಮಗಳು ಕೂಡ ಬಜೆಟ್ ಕುರಿತು ಸಂಪೂರ್ಣ ಲಕ್ಷ್ಯವಹಿಸಿರುತ್ತವೆ.
ಇಷ್ಟೆಲ್ಲಾ ಮಹತ್ವ ಪಡೆದಿರುವ ಪ್ರಕ್ರಿಯೆ ಎನ್ನಬಹುದಾದ ಬಜೆಟ್ ಮಂಡನೆ ಸಂದರ್ಭದಲ್ಲಿ, ವಿವಿಯ ಅರ್ಥಶಾಸ್ತ್ರ ವಿಭಾಗ ಮಾತ್ರ, ಬಜೆಟ್ ಕುರಿತ ತಾಜಾ  ಕುತೂಹಲವನ್ನೇ ಕಳೆದುಕೊಂಡು ದಿನ ದೂಡಿದೆ. ಶುಕ್ರವಾರ ಮಂಡನೆಯಾದ  ಬಜೆಟ್  ಅಧ್ಯಯನ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು  ಪ್ರತಿಕ್ರಿಯೆಗೆ ಲಭ್ಯವಾಗಲೇ ಇಲ್ಲ. ‘ನಮ್ಮಲ್ಲಿ ವಿದ್ಯುತ್ ಇರಲಿಲ್ಲ. ಹಾಗಾಗಿ, ಯಾರಿಗೂ  ಬಜೆಟ್‌ನೋಡಲು ಸಾಧ್ಯವಾಗಲಿಲ್ಲ. ಹಾಗಾಗಿ ಪ್ರತಿಕ್ರಿಯೆ ನೀಡು ವುದೆಂತು?’  ಎಂಬುದು ಅಧ್ಯಯನ ವಿಭಾಗದ ಪ್ರಭಾರ ಮುಖ್ಯಸ್ಥರೊಬ್ಬರು ನೀಡಿದ ಕಾರಣ.
ತಮಾಷೆಯೆಂದರೆ ನಮ್ಮ ವಿವಿಯ ಅರ್ಥಶಾಸ್ತ್ರ ವಿಭಾಗಗಳು ಇಂಥ ಪ್ರಾಯೋಗಿಕ ನೆಲೆಗೆ ಇನ್ನೂ ಒಗ್ಗಿಕೊಂಡೇ ಇಲ್ಲ. ವಾಸ್ತವವಾಗಿ ವಿಭಾಗದ ವಿದ್ಯಾರ್ಥಿಗಳಿಗೆ ಕೇಂದ್ರ ಹಣಕಾಸು ಸಚಿವರು ಮಂಡಿಸುವ ಬಜೆಟ್‌ನ ನೇರ ಪ್ರಸಾರವನ್ನು ವೀಕ್ಷಿಸಲು ಆ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಅವಕಾಶ ಕಲ್ಪಿಸಬೇಕು. ಜತೆಗೆ ನಂತರ ಅವರವರ ಅಭಿಪ್ರಾಯ ಗಳನ್ನು ಪಡೆದು ಒಂದು ಚರ್ಚೆ ಯನ್ನು ನಡೆಸಬೇಕು. ಅದು ಪ್ರಾಯೋಗಿಕ ನೆಲೆಯ ಶಿಕ್ಷಣ. ನಮಗೆ ಲಭ್ಯ ಮಾಹಿತಿ ಪ್ರಕಾರ ಅಂಥ ದೊಂದು ಕಸರತ್ತು ನಡೆದೇ ಇಲ್ಲ.
ಇದರರ್ಥ ಅಧ್ಯಯನ ವಿಭಾಗ ಗಳು  ಬಜೆಟ್ ಕುರಿತು ಚಿಂತಿಸು ವುದೇ ಇಲ್ಲ ಎಂದಲ್ಲ. ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳು ತಮ್ಮ ನಾಲ್ಕನೇ ಚತುರ್ಮಾಸ ಅವಧಿಯಲ್ಲಿ  ‘ಸಾರ್ವಜನಿಕ ಅರ್ಥಶಾಸ್ತ್ರ’  ಎಂಬ ವಿಷಯವನ್ನು ಕಲಿಯಲೇಬೇಕು; ಆ ಸಂದರ್ಭದಲ್ಲಿ  ಬಜೆಟ್ ಬಗ್ಗೆ ಆಳವಾಗಿ ಅಧ್ಯಯನ  ನಡೆಸಲೇ ಬೇಕು.  ಇದೊಂದು ಅನಿವಾರ್ಯ ಕರ್ಮ.
ಪ್ರಶ್ನೆ ಇರುವುದು-ಬಜೆಟ್ ಕುರಿತು  ಶ್ರೀ ಸಾಮಾನ್ಯನಿಗೆ  ಇರುವ ಕುತೂಹಲ ಅರ್ಥಶಾಸ್ತ್ರವನ್ನು ಶಾಸ್ತ್ರೀಯವಾಗಿ ವ್ಯಾಸಂಗ ಮಾಡುವ ಅಧ್ಯಾಪಕರಿಗೆ ಏಕಿಲ್ಲ  ಮತ್ತು ಅಧ್ಯಾಪಕರು ಅಂಥದ್ದೊಂದು ಕುತೂಹಲ ವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಿಲ್ಲ ಏಕೆ ? ಇಂಥ ಅಭಿಪ್ರಾಯವನ್ನು ವಿವಿಯ ಕೆಲವು ಪ್ರಾಧ್ಯಾಪಕರು ಒಪ್ಪುವುದಿಲ್ಲ. ‘ನಮ್ಮ ವಿದ್ಯಾರ್ಥಿಗಳು ಬಜೆಟ್ ಅನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅದರ ಬಗ್ಗೆ ತರಗತಿಗಳಲ್ಲಿ  ಪ್ರಬಂಧ ಮಂಡಿಸುತ್ತಾರೆ. ಇದಲ್ಲದೆ, ಅಧ್ಯಯನ ವಿಭಾಗ ಕೂಡ, ವಿವಿಧ ಕ್ಷೇತ್ರದ ಪರಿಣತರನ್ನು ಕರೆಸಿ, ವಿಚಾರ ಸಂಕಿರಣ  ನಡೆಸುತ್ತೇವೆ. ಪ್ರತಿ ವರ್ಷ ಬಜೆಟ್ ಬಗ್ಗೆ  ಒಳ್ಳೆಯ ಚರ್ಚೆ ನಡೆಯುತ್ತದೆ’ ಎಂಬುದು  ಅವರ ವಾದ.
ಬಜೆಟ್ ಸಿದ್ಧತೆಯಲ್ಲಿ  ಪಾತ್ರವೇ ಇಲ್ಲ: ‘ಹಾಗೆ ನೋಡಿದರೆ ಬಜೆಟ್ ಸಿದ್ಧತಾ ಪ್ರಕ್ರಿಯೆಯಲ್ಲಿ  ವಿಶ್ವವಿದ್ಯಾನಿಲಯಗಳ ಪಾತ್ರ ಇರಬೇಕು. ಅಮೆರಿಕದಂಥ ರಾಷ್ಟ್ರಗಳಲ್ಲಿ  ನೀತಿ ರೂಪಕರು ವಿವಿಯ ಅಭಿಪ್ರಾಯ ವನ್ನು ಆಲಿಸಿಯೇ, ಬಜೆಟ್‌ನಂಥ ನೀತಿಯನ್ನು, ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.  ಆದರೆ, ನಮ್ಮಲ್ಲಿ  ವಿವಿಗಳನ್ನು ಆ ಮಟ್ಟಕ್ಕೆ ಯಾರೂ ಕಟ್ಟಿಲ್ಲ ಮತ್ತು ಆ ಎತ್ತರದ ಸ್ತರದಲ್ಲಿ ನೋಡುವುದೂ ಇಲ್ಲ. ಆದರೆ, ವಾಸ್ತವವಾಗಿ ನಮ್ಮ ವಿವಿಗಳಲ್ಲಿ ಘನ ವಿದ್ವಾಂಸರು, ಪರಿಣತರು  ಇರುತ್ತಾರೆ. ಅವರನ್ನು ಬಳಸಿಕೊಳ್ಳುವ ಇರಾದೆ ಸರಕಾರಕ್ಕೆ ಇರುವುದಿಲ್ಲ’ ಎಂಬುದು ಅಧ್ಯಯನ ವಿಭಾಗದ ಕೆ. ಸಿ. ಬಸವರಾಜು ಅವರ ಅಭಿಪ್ರಾಯ.  ನಮ್ಮಲ್ಲಿ ನಡೆಯುವ ಚರ್ಚೆಗಳು, ವಿಚಾರ ಗೋಷ್ಠಿಯ ಪ್ರಬಂಧಗಳು ನೀತಿ ರೂಪಕರ ಮೇಲೆ ಪ್ರಭಾವ ಬೀರುವಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಇದರರ್ಥ ಅಂಥ ಪ್ರಬಂಧಗಳನ್ನು ಮಂಡಿಸಲು ಸಾಧ್ಯವಿಲ್ಲ ಎಂದಲ್ಲ.  ನಮ್ಮ ಬೌದ್ಧಿಕ ಚಟುವಟಿಕೆಯನ್ನು ನೀತಿ ರೂಪಕರು ಗಂಭೀರವಾಗಿ ಪರಿಗಣಿಸುತ್ತಾರೆ ಎಂದಾದರೆ, ಮೌಲಿಕವಾದ ಪ್ರಬಂಧಗಳು ಬಂದೇ ಬರುತ್ತವೆ. ಬಜೆಟ್ ಬಗೆಗಿನ ನಿರಾಸಕ್ತಿಯನ್ನು ಈ ಎಲ್ಲ ನೆಲೆಯಲ್ಲಿ ನೋಡಬೇಕು ಎಂಬುದು ಅವರ ಮಾತಿನ ಸಾರ. 
ಅರ್ಥಶಾಸ್ತ್ರ  ಅಧ್ಯಯನ ವಿಭಾಗ ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿಭಾಗಗಳಲ್ಲಿ ಒಂದು. ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರು ಪಡೆದಿರುವ ವಿಭಾಗ, ಸಮಾಜಕ್ಕೆ  ಒಳ್ಳೆಯ ಪದವೀಧರರನ್ನೇ ನೀಡಿದೆ. ಇಲ್ಲಿ  ಕಲಿತಿರುವ ವಿದ್ಯಾರ್ಥಿಗಳು  ಶಿಕ್ಷಣ, ಆಡಳಿತ, ಸಂಶೋಧನಾಲಯ ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೆ. ಟಿ. ಷಾ, ಎನ್. ಎಸ್. ಸುಬ್ಬರಾವ್, ವಿ. ಎಲ್. ಡಿಸೋಜಾ, ಎಂ. ಎಚ್. ಗೋಪಾಲ್, ಆರ್. ಬಾಲಕೃಷ್ಣ, ಡಿ. ಎಂ. ನಂಜುಂಡಪ್ಪ, ಪಿ. ಆರ್. ಬ್ರಹ್ಮಾನಂದ, ರಂಗನಾಥ್ ಭಾರದ್ವಾಜ್, ಎಂ. ಮಾದಯ್ಯ ಅವರಂಥ ಶ್ರೇಷ್ಠ ಆರ್ಥಿಕ ತಜ್ಞರು  ಇಲ್ಲಿ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದ್ದಾರೆ.
(ಅರ್ಥಶಾಸ್ತ್ರ ವಿಭಾಗದ ಕುರಿತು ಮೈಸೂರು ವಿವಿ ವೆಬ್‌ಸೈಟ್ ನೀಡುವ ಪರಿಚಯದಂತೆ)

ರಮ್ಮನಹಳ್ಳಿಯಲ್ಲಿ ದೇವರ ಮೆಚ್ಚಿಸಲು ವಿಶಿಷ್ಟ ಆಚರಣೆ


ಇಲ್ಲಿ ಯುವಕರು ಯುವತಿಯರಾಗ್ತಾರೆ !
ಕುಂದೂರು ಉಮೇಶಭಟ್ಟ ಮೈಸೂರು
ಕತ್ತಲಾಗುತ್ತಿದ್ದಂತೆ  ಇಲ್ಲಿ ಯುವಕರೆಲ್ಲಾ ಯುವತಿಯ ರಾಗುತ್ತಾರೆ. ದೇವರನ್ನು ಮೆಚ್ಚಿಸಲು ಮನಸಾರೆ ಕುಣಿ ಯುತ್ತಾರೆ, ಊರವರನ್ನು ಖುಷಿಯಲ್ಲಿ ತೇಲಿಸುತ್ತಾರೆ...
ಇಂಥ ಆಚರಣೆ ವರ್ಷಗಳಿಂದ ನಡೆದಿರುವುದು ಮೈಸೂರಿನಿಂದ ಕೇವಲ ೧೦ ಕಿ.ಮಿ. ದೂರದ ರಮ್ಮನಹಳ್ಳಿ ಎಂಬ ಗ್ರಾಮದಲ್ಲಿ. ಇಡೀ ಊರಿಗೆ ಊರೇ ಸೇರಿ ೧೫ ದಿನ ರಾತ್ರಿ ನೃತ್ಯ ಮಾಡುತ್ತದೆ. ಯುವಕರು ಯುವತಿಯರ ವೇಷ ಹಾಕಿ ಕುಣಿದರೆ, ಮಹಿಳೆ ಯರೆಲ್ಲಾ ಕುಳಿತು ನೃತ್ಯದ ಸವಿ ಸವಿಯುತ್ತಾರೆ.
ದುಮ್ಮಾನದ ಬದುಕು: ಮೈಸೂರಿನಿಂದ ಪೂರ್ವ ಭಾಗಕ್ಕೆ ಮಹಾದೇವಪುರ ರಸ್ತೆಯಲ್ಲಿ ಹೋದರೆ ಸಿಗು ವುದು ರಮ್ಮನಹಳ್ಳಿ ಗ್ರಾಮ. ನಾಯಕ ಸಮು ದಾಯ ದವರೇ ಹೆಚ್ಚಾಗಿರುವ ಗ್ರಾಮದಲ್ಲಿ ಕೆಲವರು ಕೃಷಿ ಮಾಡಿದರೆ ಇನ್ನಷ್ಟು ಮಂದಿಗೆ ಕೂಲಿಯೇ ಬದುಕು. ಗ್ರಾಮದ ಬಹುತೇಕ ಮಹಿಳೆಯರು ಬೆಳಗ್ಗೆ ಮೈಸೂರಿಗೆ ಬಂದು ಹಣ್ಣು ವ್ಯಾಪಾರ ಮಾಡಿ ಸಂಜೆಗೆ ಊರು ಸೇರು ತ್ತಾರೆ. ರಮ್ಮನಹಳ್ಳಿಯವರ ದುಮ್ಮಾನದ ಬದುಕಿನ ಕಥೆಯಿದು. ಇಂಥ ಗ್ರಾಮದಲ್ಲಿ ಧಾರ್ಮಿಕ ಆಚರಣೆಗೆ ಕೊರತೆ ಯಿಲ್ಲ. ಕೊಂಚ ವಿಭಿನ್ನ ಎನ್ನುವ ಆಚರಣೆ ಗ್ರಾಮದಲ್ಲಿ ವರ್ಷಗಳಿಂದ ನಡೆದುಕೊಂಡು ಬಂದಿದೆ.
ಶಿವರಾತ್ರಿ ಮುಗಿದು ಬೇಸಿಗೆ ಆರಂಭವಾಗುವ ಹೊತ್ತಿಗೆ ಊರವರೆಲ್ಲಾ ಸೇರಿ ಮಾರಿ ಹಬ್ಬ ನಡೆಸುವ ದಿನಾಂಕ ನಿಗದಿ ಮಾಡುತ್ತಾರೆ. ಆ ದಿನಾಂಕಕ್ಕಿಂತ ೧೫ ದಿನ ಮೊದಲು ಊರಲ್ಲಿ ನೃತ್ಯದ ಸಂಭ್ರಮ. ೧೪ ದಿನವೂ ರಾತ್ರಿ ೨ ರಿಂದ ೩ ಗಂಟೆ ಕಾಲ ನೃತ್ಯ. ಕಡೆಯ ದಿನ ಹಗಲಿನಲ್ಲಿ ಹಬ್ಬದ ಸಂಭ್ರಮಾಚರಣೆಗೆ ನೃತ್ಯದ ಕಳೆ.
ವಿವಿಧ ವೇಷದೊಂದಿಗೆ: ಇದಕ್ಕಾಗಿ ಊರಿನ ಯುವಕರೆಲ್ಲಾ ಯುವತಿಯರ ವೇಷ ಧರಿಸುತ್ತಾರೆ. ಒಬ್ಬರು ಚೂಡಿದಾರ್ ಧರಿಸಿದರೆ, ಇನ್ನು ಕೆಲವರು ಸೀರೆ ಉಡುತ್ತಾರೆ. ಈಗಿನ ಟ್ರೆಂಡ್ ಜೀನ್ಸ್‌ಪ್ಯಾಂಟ್, ಮಿಡ್ಡಿ, ಚೆಡ್ಡಿಗಳನ್ನೂ ಧರಿಸುತ್ತಾರೆ.  ಕೆಲವರು ಸೊಪ್ಪುಗಳನ್ನು ಕಟ್ಟಿಕೊಂಡು ಧಾರ್ಮಿಕತೆಯ ಸ್ಪರ್ಶ ನೀಡಿದರೆ, ಬಾಲಕಿಯರು ಹಾಗೂ ವೃದ್ಧೆಯರೂ ಹೆಜ್ಜೆ ಹಾಕುತ್ತಾರೆ. ಆದರೆ ಯುವತಿ-ಮಹಿಳೆಯರಿಗೆ ಅವಕಾಶವಿಲ್ಲ. ಅವರ ರೂಪದಲ್ಲೇ ಯುವಕರು !
ಹೀಗೆ ಅಣಿಯಾಗುವ ಯುವಕರು ಉದ್ದನೆಯ ಕೋಲುಗಳನ್ನು ಹಿಡಿದು ಊರಿನ ಮುಖ್ಯ ದೇವತೆ ಮಾರಿಗುಡಿಯ ಮುಂದೆ ಸೇರುತ್ತಾರೆ. ಸಂಜೆಯಾಗುತ್ತಿ ದ್ದಂತೆ ಯುವತಿಯಾದವರು, ಯುವಕರಾಗೇ ಉಳಿದವರು ಸೇರಿ ಹೆಜ್ಜೆ ಹಾಕುತ್ತಾ ದೇವಸ್ಥಾನ ಸುತ್ತುತ್ತಾರೆ. ಹಲಗೆ ಹೊಡೆತಕ್ಕೆ ಹೆಜ್ಜೆ ಹಾಕಿ ದೇವರನ್ನು ಮೆಚ್ಚಿಸಲು ಯತ್ನಿಸುತ್ತಾರೆ.  ಈ ವೇಷ ನೋಡಬೇಡ ಅಮ್ಮಯ್ಯ.. ಎಂದು ಯುವಕರು ಹಾಡದಿದ್ದರೂ ಇವರ ನೃತ್ಯ ಸಂಭ್ರಮವನ್ನು ಆಸ್ವಾದಿಸುವವರು ಗ್ರಾಮದ ಮಹಿಳೆಯರು. ಅಬಾಲವೃದ್ಧೆಯರಾದಿ ಯಾಗಿ ಎಲ್ಲರೂ ಸೇರಿ ಚಪ್ಪಾಳೆ ತಟ್ಟುತ್ತಾ ಕುಣಿಯುವವರಿಗೆ ಉತ್ಸಾಹ ತುಂಬುತ್ತಾರೆ.
ಮಾಂಸದೂಟವಿಲ್ಲ: ಗ್ರಾಮದಲ್ಲಿ ಮಾಂಸದೂಟ ಮಾಮೂಲಿಯಾದರೂ ಈ ಹದಿನೈದು ದಿನ ನಿಷೇಧ. ದೇವಸ್ಥಾನದ ಮುಂದೆ ನೃತ್ಯ ಶುರುವಾದ ದಿನದಂದೇ ಕೋಳಿ-ಕುರಿ ಸೇವನೆ ಬಂದ್. ಯಾವ ಮನೆಯಲ್ಲೂ ಮಾಂಸ ಮಾಡುವಂತಿಲ್ಲ. ಹೊರಗಡೆ ಸೇವಿಸಿ ಬರುವ ಹಾಗಿಲ್ಲ. ವರ್ಷದಿಂದ ಈ ನಿಷೇಧ ಜಾರಿಯಲ್ಲಿದೆ.
ಚಪ್ಪಲಿ ಧರಿಸಿದರೆ ದಂಡ: ಗ್ರಾಮ ಜನ ದೇವಸ್ಥಾನದ ಮುಂದೆ ನೃತ್ಯಕ್ಕೆ ಸೇರಿದರೆಂದರೆ ಅಲ್ಲಿಗೆ ಯಾರೂ ಚಪ್ಪಲಿ ಧರಿಸಿ ಬರುವಂತಿಲ್ಲ. ಆದರೂ ಧರಿಸಿ ಬಂದ ವರಿಗೆ ದಂಡ. ಇದಕ್ಕಾಗಿಯೇ ಯುವಕರ ತಂಡ ಮೇಲೇ ನಿಗಾ ಇಟ್ಟಿರುತ್ತದೆ. ಸಾಕಷ್ಟು ಮಂದಿ ಚಪ್ಪಲಿ ಹಾಕಿಕೊಂಡು ಬಂದು ದಂಡವನ್ನೂ ಕಟ್ಟಿದ್ದಾರೆ.
ಚಪ್ಪಲಿ ಹಾಕಿಕೊಂಡು ಬರಬಾರದು ಅನ್ನುವುದನ್ನು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಅದನ್ನು ನಾವು ಪಾಲಿಸುತ್ತಿದ್ದೇವೆ. ಚಪ್ಪಲಿ ಹಾಕಿದರೆ ದಂಡ ತೆರಬೇಕಾಗುತ್ತದೆ ಎನ್ನುವುದು ಗ್ರಾಮದ ಮುಖಂಡ ನಾಗರಾಜು ಅಭಿಮತ.

‘ಹಳಿ’ಗೆ ಬಂದ ಕೊಡಗಿನ ಕನಸು


ಪಿ.ಓಂಕಾರ್ ಮೈಸೂರು
ರಾಜ್ಯಕ್ಕೆ ‘ಬಂಪರ್ ಉಡುಗೊರೆ’ ನೀಡಿರುವ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿಮೈಸೂರು ಭಾಗಕ್ಕೆ ಮೋಸವನ್ನೇನೂ ಮಾಡಿಲ್ಲ. ಹಾಗಂತ, ರೈಲಿ ನಷ್ಟೇ ಉದ್ದದ ನಿರೀಕ್ಷೆಗಳ ಪಟ್ಟಿಯನ್ನು ಪೂರ್ತಿಯಾಗಿ ‘ಹಳಿ’ಗೂ ತಂದಿಲ್ಲ.
ಮೈಸೂರು-ಮಡಿಕೇರಿ-ಮಂಗಳೂರು ಮತ್ತು ಚಾಮರಾಜನಗರ-ಕೃಷ್ಣಗಿರಿ ಮಾರ್ಗಗಳ ಸರ್ವೆ, ಮೈಸೂರು-ಶಿವಮೊಗ್ಗ ಇಂಟರ್ಸಿಟಿ ರೈಲು ಆರಂಭಕ್ಕೆ ಹಸಿರು ನಿಶಾನೆ ತೋರುವ ಮೂಲಕ ಮಮತಾ ಸಮಾಧಾನಕರ ‘ಕೃಪೆ ’ತೋರಿದ್ದಾರೆ. ದೂರದ ಕೆಲ ರೈಲುಗಳು ಮೈಸೂರು ಮೂಲಕ ಸಂಚರಿಸಲಿರು ವುದು ‘ಬೋನಸ್’.
ಮತ್ತದೇ ನಿರಾಸೆ: ನಿರೀಕ್ಷೆಯಂತೆ, ಚಾಮರಾಜ ನಗರ-ಮೆಟ್ಟುಪಾಳ್ಯಂ ರೈಲ್ವೆ ಯೋಜನೆ ವಿಷಯದಲ್ಲಿ ಈ ಬಾರಿಯೂ ನಿರಾಸೆ. ಪ್ರಧಾನಿ ಮೂಲಕ ಅರಣ್ಯ ಸಚಿವಾಲಯದ ಮನ ವೊಲಿಸು ವುದಾಗಿ ಇತ್ತೀಚೆಗೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ನೀಡಿದ್ದ ಭರವಸೆ ಅಷ್ಟಕ್ಕೇ ಸೀಮಿತವಾಗಿದೆ.ಈ ಮಾರ್ಗದ ಸಾಧಕ-ಬಾಧಕಗಳ ಕುರಿತು ದಿಲ್ಲಿ ಮೆಟ್ರೋ ಮತ್ತು ಕೊಂಕಣ ರೈಲು ಮಾರ್ಗದ ರೂವಾರಿ ಶ್ರೀಧರನ್ ಅವರಿಂದ ಮಮತಾ ವರದಿ ಕೇಳಿದ್ದಾರೆ ಎನ್ನಲಾಗಿದೆ.
ಕೇಳಿದ್ದೊಂದು,ಈಡೇರಿದ್ದು ಇನ್ನೊಂದು: ಅದಾಗದಿದ್ದರೆ ಹೋಗಲಿ, ಚಾಮರಾಜನಗರ-ಕೊಳ್ಳೇಗಾಲ-ಕನಕಪುರ-ಬೆಂಗಳೂರು ಮಾರ್ಗದ ಸರ್ವೇಗಾದರೂ ಈ ಬಾರಿ ಹಸಿರು ನಿಶಾನೆ ದೊರಕಿಸಿ ಎಂದು ಈ ಭಾಗದ ಜನ, ಜನಪ್ರತಿನಿಧಿಗಳು ಸಚಿವ ಮುನಿಯಪ್ಪ ಮುಂದೆ ಬೇಡಿಕೆ ಸಲ್ಲಿಸಿದ್ದರು.
ಅದಕ್ಕೆ ಇಲಾಖೆ ಸ್ಪಂದಿಸಿದೆಯೋ, ಇಲ್ಲವೋ ಎನ್ನುವುದು ಬಜೆಟ್ ನಂತರವೂ ಸ್ಪಷ್ಟವಿಲ್ಲ. ಯಾಕೆಂದರೆ, ಸರ್ವೆಗೆ ಒಪ್ಪಿತ ‘ಚಾಮರಾಜನಗರ -ಕೃಷ್ಣಗಿರಿ’ ಮಾರ್ಗ ಯಾವ ಊರು, ಕೇರಿಗಳ ಮೂಲಕ ಹಾಯ್ದು ಹೋಗುತ್ತದೆ ಎನ್ನುವುದು ಖಚಿತವಿಲ್ಲ. ‘ಯಾವ ಮಾರ್ಗ ಸೂಕ್ತ ಎನ್ನು ವುದನ್ನು ಸರ್ವೆ ಸಂದರ್ಭವೇ ಗೊತ್ತುಪಡಿಸಲಾಗುತ್ತದೆ ’ಎನ್ನುವುದು ಇಲಾಖೆ ಮೂಲಗಳ ಸ್ಪಷ್ಟನೆ. ಅದು ಏನೇ ಇದ್ದರೂ, ಸರ್ವೇಗೆ ಅನುಮತಿ ಸಿಕ್ಕಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ.
ಕೊಡಗಿಗೆ ಸಂಪರ್ಕ: ‘ಕಾಫಿ ನಾಡು ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಿ’ ಎಂಬ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಗೆ ಮಮತಾ ಸ್ಪಂದಿಸಿದ್ದಾರೆ. ಎರಡು-ಮೂರು ಮಾರ್ಗಗಳ ಬೇಡಿಕೆ ಇತ್ತಾದರೂ ಮೈಸೂರು- ಮಡಿಕೇರಿ-ಮಂಗಳೂರು ಮಾರ್ಗ ಸರ್ವೇಗೆ ಅಸ್ತು ಎಂದಿರುವುದು ಸಂಭ್ರಮದ ಹೊಂಗಿರಣ ಮೂಡಿಸಿದೆ. ಸರ್ವೆ ನಡೆದು, ಅನುಷ್ಠಾನಕ್ಕೆ ಬಂದರೆ ಸಾಂಸ್ಕೃತಿಕ ನಗರಿಯಿಂದ ಕಡಲ ತಡಿಗೆ ನೇರ ರೈಲು ಸಂಪರ್ಕ ದೊರಕಲಿದೆ. ವಾಣಿಜ್ಯ, ಪ್ರವಾಸೋದ್ಯಮದ ದೃಷ್ಟಿಯಿಂದ ಭವಿಷ್ಯದಲ್ಲಿ ಲಾಭದಾಯಕ ಮಾರ್ಗವೂ ಆಗಲಿದೆ.
ಶಿವಮೊಗ್ಗಕ್ಕೆ ಇಂಟರ್ಸಿಟಿ: ಮೈಸೂರು-ಶಿವಮೊಗ್ಗ ಇಂಟರ್ಸಿಟಿ ರೈಲು ಒಂದರ್ಥದಲ್ಲಿ ಅನಿರೀಕ್ಷಿತ ಕೊಡುಗೆ. ಈಗಿರುವ ‘ಫಾಸ್ಟ್ ಪ್ಯಾಸೆಂಜರ್ ರೈಲಿನಲ್ಲಿ ದಿನವಿಡೀ ಪ್ರಯಾಣಿಸಬೇಕು’ ಎಂದು ತಪಿಸು ವವರಿಗೆ ಹೊಸ ರೈಲು ಅನುಕೂಲವಾಗಲಿದೆ. ಶಿವಮೊಗ್ಗ-ತಾಳಗುಪ್ಪ ಮಾರ್ಗ ಫೂರ್ಣವಾದ ನಂತರ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಈ ರೈಲು ಹೆಚ್ಚಿನ ಪ್ರಯೋಜನಕಾರಿಯಾಗಬಹುದು.
ಬೇಡಿಕೆಯಾಗೇ ಉಳಿದವು: ಉಳಿದಂತೆ, ಮೈಸೂರು ಇಲ್ಲವೇ ನಂಜನಗೂಡಿನಲ್ಲಿ ಕಂಟೈನರ್ ಯಾರ್ಡ್ ಸ್ಥಾಪಿಸಬೇಕು, ಮೈಸೂರಿಗೆ ಇನ್ನೊಂದು ರೈಲ್ವೆ ನಿಲ್ದಾಣ ಬೇಕು, ಮಂಡ್ಯದ ಮದ್ದೂರಿನಲ್ಲಿ ರೈಲು ನಿಲ್ದಾಣ ಆರಂಭಿಸಬೇಕು,ಆದಿಚುಂಚನಗಿರಿ-ನಾಗಮಂಗಲ ಮಾರ್ಗ ವಾಗಿ ತುಮಕೂರು-ಮೈಸೂರು ರೈಲ್ವೆಯೋಜನೆ ಸರ್ವೆಗೆ ಅಸ್ತು ನೀಡಬೇಕು, ನಂಜನಗೂಡು-ನೀಲಂಬೂರ್ ನಡುವೆ ರೈಲು ಸಂಚಾರ ಆರಂಭಿಸಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳ ಬಗ್ಗೆ ಮಮತಾ ಕಣ್ಣೆತ್ತಿಯೂ ನೋಡಿಲ್ಲ.

ವಲಸೆ ‘ಅತಿಥಿ’ಗಳ ಆವಾಸಕ್ಕೆ ಆಪತ್ತು!

ಪಿ. ಓಂಕಾರ್ ಮೈಸೂರು
ದಲೆಲ್ಲ ಚಳಿಗಾಲ ಬಂತೆಂದರೆ ಮೈಸೂರು ಪ್ರಾಂತ್ಯದ ಕೆರೆ ಕುಂಟೆಗಳಲ್ಲಿ ಜೀವ ಕಳೆ  ಇಮ್ಮಡಿಸುತ್ತಿತ್ತು.ದೇಶ-ವಿದೇಶದಿಂದ ವಲಸೆ ಬರುತ್ತಿದ್ದ ‘ಬಾನಾಡಿ ಅತಿಥಿ’ಗಳು ಸ್ವಚ್ಛಂದವಾಗಿ ವಿಹರಿಸಿ ಪರಿಸರಕ್ಕೆ ರಂಗು ತುಂಬುತ್ತಿದ್ದವು.ಆ ಮೂಲಕವೇ ಚಳಿಗಾಲ ಆಪ್ಯಾಯಮಾನವಾಗುತ್ತಿದ್ದುದು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಹಕ್ಕಿಗಳ ಬೆಡಗು-ಬಿನ್ನಾಣ ಕ್ಷೀಣಿಸಿದೆ. ವರ್ಷದಿಂದ ವರ್ಷಕ್ಕೆ ವಲಸೆ  ನೀರುಹಕ್ಕಿಗಳ ಸಂಖ್ಯೆ ಕ್ಷೀಣಿಸುತ್ತಿದೆ.ಒಂದು ದಶಕದ ಅವಧಿಯಲ್ಲಂತೂ ‘ಇಳಿಕೆ ’ಪ್ರಮಾಣ ತೀರಾ ಆತಂಕಕಾರಿ.
ಬಾನಾಡಿಗಳ ತಾತ್ಕಾಲಿಕ ‘ನೆಲೆ’ಗಳಾದ  ನೀರಿನ  ತಾಣಗಳು, ಮುಖ್ಯವಾಗಿ ಕೆರೆಗಳು ಗಂಡಾಂತರ ಎದುರಿಸುತ್ತಿರುವುದು; ನಾನಾ ಕಾರಣಕ್ಕೆ ಬದಲಾ ಗಿರುವುದು, ಹಲವು ಕೆರೆಗಳೇ ‘ನಾಪತ್ತೆ’ಯಾಗಿರು ವುದು ಸಂಖ್ಯಾ ಕುಸಿತಕ್ಕೆ ಮುಖ್ಯ ಕಾರಣ. ನಗರದ ‘ಮ್ಯಾನ್’ (ಮೈಸೂರು ಅಮೆಚೂರ್ ನ್ಯಾಚ್ಯುರಲಿಸ್ಟ್ ) ಸಂಘಟನೆಯ ಹವ್ಯಾಸಿ ಪಕ್ಷಿ ವೀಕ್ಷಕರು ನಡೆಸಿದ  ಮಧಂತರ ಚಳಿಗಾಲದ ನೀರು ಹಕ್ಕಿಗಳ ಗಣತಿಯಲ್ಲಿ ಈ ಸಂಗತಿ ಗೋಚರಿಸಿದೆ.
ಕುಸಿತ ಹೀಗೆ: ಮೈಸೂರು,ಮಂಡ್ಯ,ಚಾಮರಾಜನಗರ  ಜಿಲ್ಲೆಗಳ ಸುಮಾರು ೧೬೦ ಕೆರೆ ಗಳಲ್ಲಿ ೧೦ವರ್ಷದ ಹಿಂದೆ (೧೯೯೯- ೨೦೦೦) ‘ಮ್ಯಾನ್’ ಗಣತಿ ನಡೆಸಿ ದಾಗ ೭೦ ವಿವಿಧ ಪ್ರಭೇದದ ೧.೫ರಿಂದ ೧.೬ ಲಕ್ಷ ಹಕ್ಕಿಗಳನ್ನು ಲೆಕ್ಕ ಹಾಕಲಾಗಿತ್ತು. ಕಳೆದ ವರ್ಷದ ಗಣತಿಯಲ್ಲಿ ೬೦ ರಿಂದ ೭೨ ಸಾವಿರ ಹಕ್ಕಿಗಳು ಎಣಿಕೆಗೆ ಸಿಕ್ಕಿದ್ದವು.
ಈ ವರ್ಷ ಇನ್ನೂ ಮಾರಕ ಕುಸಿತ ದಾಖಲಾ ಗಿದೆ. ೧೧ಮಂದಿ ಪಕ್ಷಿ ವೀಕ್ಷಕರು ಜನವರಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ನಡೆಸಿದ ಗಣತಿಯಲ್ಲಿ ೩೮ರಿಂದ ೪೦ ಸಾವಿರ ವಲಸೆ ಹಕ್ಕಿಗಳು ಮಾತ್ರ ಕಂಡಿವೆ. ಹಿಂದಿನ ವರ್ಷಗಳಲ್ಲಿ ಕೆಲವು ಕೆರೆಗಳಲ್ಲಿ ೨೦ ಸಾವಿರ ಹಕ್ಕಿಗಳನ್ನು ಎಣಿಸಿದ್ದೂ ಇದೆ.ಕಳೆದ ವರ್ಷ  ೭ರಿಂದ ೮ ಸಾವಿರ ಹಕ್ಕಿಗಳು ಕಾಣಿಸಿದ್ದವು. ಈ ಬಾರಿ ಒಂದೆರಡು ಕೆರೆಗಳ ಹೊರತು ಉಳಿದ ನೆಲೆಗಳಲ್ಲಿ ೨ ಸಾವಿರಕ್ಕಿಂತ ಹೆಚ್ಚು ಎಲ್ಲೂ ಕಂಡಿಲ್ಲ.
ಯಾಕೆ ಹೀಗೆ? ಏನು ಕಾರಣ?: ಕೆರೆ ಒತ್ತುವರಿ,ದೊಡ್ಡ ಪ್ರಮಾಣದಲ್ಲಿ ಮೀನು ಸಾಕಣೆ, ತೂಬಿಗೆ ಬಲೆ ಹಾಕಿ ನೀರು ಬಿಟ್ಟು ಮೀನು ಹಿಡಿಯುವುದು, ಹಕ್ಕಿ ಬೇಟೆ ಹೆಚ್ಚಳ, ಪ್ರವಾಸೋದ್ಯಮ ನೆಪದಲ್ಲಿ ಕೆರೆಗಳ ಪಕ್ಕ ರೆಸಾರ್ಟ್ ನಿರ್ಮಾಣ,ವಿಹಾರಕ್ಕೆ ಮೋಟಾರ್ ಬೋಟ್ ಬಳಕೆ  ಮತ್ತಿತರ ಕಾರಣಗಳಿಂದ ಹಕ್ಕಿ ಸಂಕುಲ ದಿಕ್ಕು ತಪ್ಪಿದೆ.
ಸಾಮಾನ್ಯವಾಗಿ ೧ರಿಂದ ೪ ಅಡಿ ನೀರಿರುವ ಜಾಗದಲ್ಲಿ ಮುಳುಗು ಮತ್ತು ತೇಲುವ ಹಕ್ಕಿಗಳು ‘ಠಿಕಾಣಿ’ ಹೂಡುತ್ತವೆ. ಜಲ, ಜೌಗು ಭೂಮಿಯ ಇಳಿಯುತ್ತಿ ರುವ ನೀರಿನಲ್ಲಿ ಜಲಚರಗಳು ಸಮೃದ್ಧವಾಗಿದ್ದು,ಹಕ್ಕಿಗಳಿಗೆ ಆಹಾರವಾಗುತ್ತವೆ. ಆದರೆ, ಈಗ ಬಹುತೇಕ ಕೆರೆಗಳಲ್ಲಿ ಅಂಥ ಸ್ಥಿತಿ ಇಲ್ಲ. ಮಳೆಗಾಲಕ್ಕೆ ಮುನ್ನ  ತಳ ಕಾಣಬೇಕಾದ ಕೆರೆಗಳು ನಾಲೆಗಳ ಮೂಲಕ ಸದಾ ಹೊಸ ನೀರು ತುಂಬಿ ಕೊಂಡು ಸರ್ವ ಋತುಗಳಲ್ಲೂ ತುಳುಕುತ್ತಿವೆ. ಇಂಥ ಕಡೆ ಹಕ್ಕಿಗಳ ಹೊಟ್ಟೆಗೆ ಏನೂ ದಕ್ಕದು.ಪರಿಣಾಮ ಅರಕೆರೆ, ನಗುವಿನಹಳ್ಳಿ,ಮಂಡಕಳ್ಳಿ, ದಡದಹಳ್ಳಿ,ಅರಸನಕೆರೆ, ಅಹಲ್ಯ ಮತ್ತಿತರ ಕೆರೆಗಳತ್ತ ನೀರು ಹಕ್ಕಿಗಳು ಹೆಚ್ಚು ಸುಳಿಯುತ್ತಿಲ್ಲ.
ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯ ಕೆರೆಗಳ ಸ್ಥಿತಿ ವ್ಯತಿರಿಕ್ತ. ಈ ಭಾಗದ ಹಲವು ಕೆರೆಗಳು ಒಣಗಿ ನಿಂತಿವೆ. ಕೆಲವು ಕೆರೆಗಳದ್ದು ಅತಿ ಹೂಳಿನ ಸಮಸ್ಯೆ. ಇನ್ನು ಕೆಲವು ಕೆರೆಗಳಿಗೆ ಜಲ ಸಸ್ಯಗಳೇ ಮುಳುವು. ಜಮೀನುಗಳಿಗೆ ಅತಿಯಾದ ರಸಗೊಬ್ಬರ ಬಳಸುತ್ತಿರುವುದರಿಂದ  ಕೆರೆಗಳ ತುಂಬ ಜೊಂಡು ಬೆಳೆದು ನೀರು ಹಕ್ಕಿ ನೆಲೆಗಳು ಅವಸಾನದಂಚಿಗೆ ತಲುಪಿರುವುದು ಮತ್ತೊಂದು ದುರಂತ.
ಮೈಸೂರಿನ ದಡದಹಳ್ಳಿ ಕೆರೆ, ಚಾಮರಾಜನಗರದ ಹಿರೀ ಕೆರೆ, ಮಂಡ್ಯದ ಸೂಳೆಕೆರೆ  ಮತ್ತು ಕೊಪ್ಪ ಕೆರೆಗಳಲ್ಲಿ ವಿಪರೀತ  ಮೀನುಗಾರಿಕೆ ಪಕ್ಷಿ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ಹಿರಿಕೆರೆ ಬಳಿ ಅಕ್ರಮ ಗಣಿಗಾರಿಕೆ- ಸ್ಫೋಟಕ್ಕೆ ಬೆದರಿ ಪರ್ವತ ಹಕ್ಕಿಗಳು ದಿಕ್ಕಾಪಾಲಾಗಿವೆ. ಚಿಕ್ಕ ಅಂಕನಹಳ್ಳಿ, ಕಗ್ಗಲೀಪುರ ಮತ್ತು ಹದಿನಾರು ಕೆರೆಗಳಲ್ಲಿ ಬೇಟೆಗಾರರ ಕಾಟ. ಹುಣಸೂರಿನ ಹೈರಿಗೆ ಕೆರೆಯಲ್ಲಿ ವಿಹಾರಿ ದೋಣಿಗಳು ಹಕ್ಕಿಗಳ ನೆಲೆ ತಪ್ಪಿಸಿವೆ.
ಕೆರೆಗಳೇ ಕಣ್ಮರೆ: ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ,ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ ಮತ್ತು ಮ್ಯಾನ್ ಸಂಸ್ಥೆಗಳು ಐದು ವರ್ಷಗಳ ಹಿಂದೆ ನೀಡಿದ ವರದಿ ಆಧರಿಸಿ ಅತಿ ಮುಖ್ಯ ಪಕ್ಷಿ ಕೇಂದ್ರಗಳೆಂದು ಗುರುತಿಸಿದ ಕೆರೆಗಳು ವಾರಸುದಾರ ರಿಲ್ಲದೆ, ಇದ್ದರೂ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿ ಅವಸಾನದಂಚಿನಲ್ಲಿವೆ. ಮೈಸೂರು ವಿವಿ ಉಸ್ತುವಾರಿಯಲ್ಲಿರುವ ಕುಕ್ಕರಹಳ್ಳಿ ಕೆರೆ, ಅರಣ್ಯ ಇಲಾಖೆ  ಸುಪರ್ದಿನಲ್ಲಿ ರುವ ಲಿಂಗಾಂಬುದಿ ಕೆರೆ, ಮೃಗಾಲಯಕ್ಕೆ ಸೇರಿದ ಕಾರಂಜಿ ಕೆರೆಗಳು ವಲಸೆ ನೀರು ಹಕ್ಕಿಗಳಿಗೆ ಆಶ್ರಯ ನೀಡುವಲ್ಲಿ ವಿಫಲವಾಗಿವೆ ಎಂಬುವುದು ಮ್ಯಾನ್ ಸದಸ್ಯರ ಆಕ್ಷೇಪ.
ರಕ್ಷಣಾ ಬೇಲಿ ನಿರ್ಮಿಸಲಾಗಿದೆಯೇ ಹೊರತು ಸೂಕ್ತ ವಾತಾವರಣವನ್ನು ಕಾಯ್ದಿಟ್ಟುಕೊಂಡಿಲ್ಲ. ಚಾಮರಾಜ ನಗರದ ನರಸಾಂಬುದಿ ಕೆರೆ ಸ್ಥಿತಿಯೂ ಶೋಚನೀಯ. ಚಳಿಗಾಲ ಶುರುವಿನಲ್ಲೇ ಕೆರೆಯ ನೀರನ್ನು ಬಸಿದು ಬೇಸಾಯ ಮಾಡುವ ಪ್ರವೃತ್ತಿ ಹೆಚ್ಚಿದೆ. ಸಂಬಂಧ ಪಟ್ಟವರು ನಿಗಾ ವಹಿಸದಿದ್ದರೆ ಪೂರ್ತಿ ಕೆರೆಯೇ ಒತ್ತುವರಿಯಾಗುವ ಆಪಾಯವಿದೆ ಎನ್ನುವುದು ಅವರ  ಆತಂಕ. ಇಂಥದೇ ಸಮಸ್ಯೆಗಳಿಂದ ಈ ಭಾಗದ ೧೬೩ ಕೆರೆಗಳ ಪೈಕಿ ಸುಮಾರು ೪೦ ಕೆರೆಗಳು ‘ಕಣ್ಮರೆ’ಯಾಗುವ ಭೀತಿ ಯಲ್ಲಿವೆ.
ಪರಿಹಾರವೇನು?: ಹಕ್ಕಿನೆಲೆಗಳಾದ ಕೆರೆ, ಕುಂಟೆಗಳು ಸುರಕ್ಷಿತವಾಗಿರಬೇಕು. ಆದರೆ, ಎಲ್ಲಾ ಅಭಿವೃದ್ಧಿಗಳು ಮನುಷ್ಯ ಕೇಂದ್ರಿತ. ಮೀನುಗಾರಿಕೆ, ಬೇಸಾಯ ಭೂಮಿ ಮಗ್ಗುಲಿನ ಕೆರೆಗಳ ಹೊರತು, ಉಳಿದವು ಮನುಷ್ಯ ವಿಹಾರಕ್ಕೆ ಸೀಮಿತವಾಗುತ್ತಿವೆ. ಪರಿಣಾಮ, ಪರಿಹಾರ ಏನು ಎಂಬ ಪ್ರಶ್ನೆಗೆ,ಪಕ್ಷಿ ಸಂಕುಲದ ಉಳಿವಿನ ಬಗ್ಗೆ ತಲೆ ಕೆಡಿಸಿಕೊಳ್ಳು ವವರು ಯಾರು ಎಂಬುದೇ ಮರು ಪ್ರಶ್ನೆಯಾಗಿ ಎದುರುಗೊಳ್ಳುತ್ತದೆ.
ಹಕ್ಕಿ -ಮೂಲ: ಅತಿ ಚಳಿ ಪ್ರದೇಶದ ಹಕ್ಕಿಗಳು ಹವಾಮಾನ ವೈಪರಿತ್ಯ, ಆಹಾರದ ಕೊರತೆಯ ಕಾರಣಕ್ಕೆ ಸುಮಾರು ೩,೫೦೦ಕಿ.ಮೀ.ಕ್ರಮಿಸಿ ಭೂಮಧ್ಯ ರೇಖೆ ಕಡೆ ವಲಸೆ ಬರುವ  ಪ್ರಕ್ರಿಯೆ ನಿರಂತರ ಮತ್ತು ಅತ್ಯಂತ ಕುತೂಹಲಕಾರಿ. ಜರ್ಮನಿ, ಸೈಬೀರಿಯಾ, ಬಲೂಚಿಸ್ತಾನ್ ಮತ್ತು ಮಧ್ಯ ಯೂರೋಪ್ ದೇಶಗಳಿಂದ ಹಕ್ಕಿಗಳು ವಲಸೆ ಬರುತ್ತವೆ. ಬರುವ  ಬಾತುಕೋಳಿಗಳು : ಗಾರ್ಗೆನಿ, ಪಿಂಟೀಲ್, ಶವಲರ್, ಟೀಲ್. ನೀರ್ನಡಿಗೆ ಹಕ್ಕಿಗಳು : ಪ್ಲೋವರ್, ಸ್ಯಾಂಡ್ ಪೈಪರ್, ಸ್ಟಿಲ್ಟ್  ಮುಖ್ಯವಾದವು.

ಇದು ಪರಂಪರೆ ಇಲಾಖೆಯ ಪುರಾಣ

ಶ್... ಸದ್ದು ಮಾಡಬೇಡಿ ನಿದ್ದೆಯಲ್ಲಿದ್ದಾರೆ !
ಜೆ.ಶಿವಣ್ಣ ಮೈಸೂರು

ಪಾರಂಪರಿಕ ನಗರಿ ಅನ್ನೋ ಹೆಸರಿಗೆ ಮಸಿ ಬಳಿಯೋ ಕೆಲಸ ಇನ್ಯಾರಿಂದಲೂ ಆಗುತ್ತಿಲ್ಲ, ಸ್ವತಃ ಪಾರಂಪರಿಕ ಇಲಾಖೆಯೇ ಆ ಕೆಲಸ ಮಾಡುತ್ತಿದೆ ಅನ್ನದೇ ವಿಧಿಯಿಲ್ಲ.
ಕೇಂದ್ರ ಸರಕಾರದ ನರ್ಮ್ ಯೋಜನೆಯಡಿ ಮೈಸೂರಿನ ಪಾರಂಪರಿಕ ಸ್ಮಾರಕಗಳನ್ನು ಮತ್ತಷ್ಟು ಚೆಂದಗೊಳಿಸಲು, ಅಚ್ಚುಕಟ್ಟುಗೊಳಿಸಲು ಕೋಟಿಗಟ್ಟಲೆ ಹಣ ಸಿಕ್ಕಿದೆ. ಆದರೆ ಅದನ್ನು ಬಳಸೋ ಹೊಣೆ ನಿಭಾಯಿಸಲಿಕ್ಕೆ ಇಲಾಖೆಯವರು ತಯಾರೇ ಇಲ್ಲ. ತಮಾಷೆಯೆಂದರೆ ‘ನಿದ್ದೆ’ಯಲ್ಲಿ ರುವ  ಇಲಾಖೆ ಅಧಿಕಾರಿಗಳಂತೂ ‘ಕಣ್ಣು’ ಬಿಟ್ಟು ನೋಡೇ ಇಲ್ಲ !
ನರ್ಮ್ ಯೋಜನೆ ಬಂದು ನಾಲ್ಕು ವರ್ಷ ವಾಯಿತು. ಇದುವ ರೆಗೂ ಪಾರಂಪರಿಕ ಇಲಾಖೆ ಒಂದೇ ಒಂದು ಯೋಜನೆ ರೂಪಿ ಸಿಲ್ಲ. ಅರ್ಜೆಂಟಿಗೊಂದು ಅಂಗಿ ಹೊಲೆದ ರಾಯ್ತು ಅಂತ ಹೊಲೆದ ಯೋಜನೆಯೂ (ಡಿಪಿಆರ್)ಗಳು ಹೋದಷ್ಟೇ ವೇಗವಾಗಿ ವಾಪಸ್ ಬಂದಿವೆ, ಅಂದರೆ ತಿರಸ್ಕೃತಗೊಂಡಿವೆ. ಹೊಸದೊಂದು ಉತ್ತಮ ವಾದುದನ್ನು ಕಳಿಸಬೇಕು ಅನ್ನೋ ಕಾಳಜಿ ಈ ಅಧಿಕಾರಿಗಳ ರಕ್ತದಲ್ಲೇ ಬಂದಿಲ್ಲ ಬಿಡಿ.
ಪರಂಪರೆ ಇಲಾಖೆ ಇದೆ ಎನ್ನೋದು ತಿಳಿದಿ ರೋದೇ ಕೆಲವರಿಗೆ. ದಸರೆ ಹೊತ್ತಿನಲ್ಲಿ ಮೆಲ್ಲಗೆ ಎದ್ದು ಕುಳಿತು ತೂಕಡಿಸುತ್ತಾ ಕಟ್ಟಡ ಗಳ ಮೇಲಿನ ಧೂಳನ್ನು ಒರೆಸುವಷ್ಟರಲ್ಲಿ ದಸರೆಯೇ ಮುಗಿದಿರುತ್ತೆ, ಮತ್ತೆ ನಿದ್ದೆ. ಇಲಾಖೆ ಯಿಂದ ನೇರವಾಗಿ ಜನರಿಗೆ ಏನೂ ಆಗ ಬೇಕಿಲ್ಲ. ಹಾಗಾಗಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಇರೋ ಅಧಿಕಾರಿ ಗಳು ಕೆಲಸ ಮಾಡದ್ದಕ್ಕೆ ಶಿಕ್ಷೆ ಯಾರಿಗೆ ಗೊತ್ತೇ? ನರ್ಮ್ ಅಧಿಕಾರಿಗಳಿಗೆ.
ಪಾರಂಪರಿಕ ಇಲಾಖೆ ಸಿದ್ಧಪಡಿಸಬೇಕಾಗಿದ್ದ ಯೋಜನೆಯ ಹೊಣೆಯನ್ನು ಈಗ ನರ್ಮ್ ಆಧಿಕಾರಿಗಳಿಗೆ ವಹಿಸಲಾಗಿದೆ. ಇಷ್ಟಾಗಿದ್ದೂ ಪಾರಂಪರಿಕ ಇಲಾಖೆ ಅಧಿಕಾರಿಗಳಿಗೆ ಭರ್ಜರಿ ಖುಷಿಯಂತೆ ! ಒಂಚೂರು ತಲೆ ಕೆಡಿಸಿಕೊಂಡಿಲ್ಲ.
ಪರಂಪರೆ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ಮಾಹಿತಿಗೆ ಸಂಪರ್ಕಿಸಿದರೆ ಸಿಗೋದೇ ಕಷ್ಟ. ಸಿಕ್ಕರೂ- ‘ಈಗ ನಮ್ಮದೇನೂ ಇಲ್ಲ. ಎಲ್ಲವನ್ನೂ ನರ್ಮ್ ವಿಶೇಷಾಧಿಕಾರಿ ಗಳನ್ನು ಕೇಳಿ, ಅಧೀಕ್ಷಕ ಎಂಜಿನಿಯರ್ ಅವರನ್ನು ಕೇಳಿ’ ಎನ್ನುತ್ತಾರೆ ನಾಚಿಕೆ ಇಲ್ಲದೇ.
ಮೈಸೂರಿನಲ್ಲಿ ನೂರಾರು ಪಾರಂಪರಿಕ ಕಟ್ಟಡಗಳಿವೆ. ಕೇವಲ ಕಟ್ಟಡಗಳಷ್ಟೇ ಅಲ್ಲ. ಪಾರಂಪರಿಕ ಸ್ಮಾರಕ, ವೃಕ್ಷ, ರಸ್ತೆ, ವೃತ್ತ, ಕೆರೆಗಳಿವೆ, ಜತೆಗೆ ವಸ್ತುಗಳು, ತಿನಿಸುಗಳೂ ಸಹ! ‘ಅರಮನೆಗಳ ನಗರಿ’ಯೂ ಆಗಿರುವ ಮೈಸೂರಿನಲ್ಲಿ ಎಲ್ಲವೂ ‘ಪಾರಂಪರಿಕತೆ’ಯೊಂದಿಗೆ ತಳುಕು ಹಾಕಿಕೊಂಡಿವೆ.
ಜಗದ್ವಿಖ್ಯಾತ ಅಂಬಾವಿಲಾಸ ಅರಮನೆ ಮೈಸೂರಿಗೆ ಕಿರೀಟ. ಇನ್ನು ನಗರಕ್ಕೆ ಕಳಸ ವಿಟ್ಟಂತಿರುವ ಚಾಮುಂಡಿ ಬೆಟ್ಟವೂ ಪಾರಂಪರಿಕ ಮಹತ್ವದ್ದೇ. ರಾಷ್ಟ್ರಕವಿ ಕುವೆಂಪು ಅವರಿಗೆ ಸ್ಫೂರ್ತಿಯಾಗಿದ್ದ ಕುಕ್ಕರಹಳ್ಳಿ ಕೆರೆಗೆ, ಜಂಬೂ ಸವಾರಿ ಸಾಗುವ  ಸಯ್ಯಾಜಿರಾವ್ ರಸ್ತೆಗೆ, ಸರಕಾರಿ ಅತಿಥಿ ಗೃಹಕ್ಕೆ, ಶಾ ಪಸಂದ್ ಟಾಂಗಾಕ್ಕೆ ಒಂದೊಂದು ಇತಿಹಾಸವಿದೆ.
ಇದನ್ನು ಪರಿಗಣಿಸಿಯೇ ಕೇಂದ್ರ ಸರಕಾರ ಮೈಸೂರನ್ನು ಪಾರಂಪರಿಕ ನಗರಗಳ ಸಾಲಿಗೆ ಸೇರಿಸಿ ಜೆಎನ್-ನರ್ಮ್‌ನಲ್ಲಿ ಎರಡು ಸಾವಿರ ಕೋಟಿ ರೂ. ಬೃಹತ್ ಮೊತ್ತವನ್ನೇ ‘ಪಾರಂಪರಿಕ ನಗರಿ’ಯ  ಪುನರುಜ್ಜೀವನಕ್ಕೆ ನೀಡಿದೆ. ವಿಪರ್ಯಾಸ ಎಂದರೆ - ಮೈಸೂರಿಗೆ ಅನ್ವರ್ಥವಾದ ‘ಪಾರಂಪರಿಕತೆ’ ಉಳಿವಿಗೆ ಇರುವ ಇಲಾಖೆಗೇ ಪುನರುಜ್ಜೀವನವಾಗಬೇಕಿದೆ. ನರ್ಮ್ ಅಡಿಯಲ್ಲಿ ಬಸ್ ನಿಲ್ದಾಣ, ಕುಡಿಯುವ ನೀರು ಇತ್ಯಾದಿ ಅನೇಕ ಕಾಮಗಾರಿಗಳು ಆರಂಭಗೊಂಡ ವೇನೋ ನಿಜ. ಅದರೆ  ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಯಿಂದಾಗಿ ಒಂದೂ ‘ಪರಂಪರೆ’ ಯೋಜನೆ ಆರಂಭವಾಗಿಲ್ಲ.
ನ್ಯೂಯಾರ್ಕ್ ಟೈಂಸ್ ಪತ್ರಿಕೆ ಗುರುತಿಸಿರುವ  ಜಗತ್ತಿನ ಅತ್ಯುತ್ತಮ ೩೧ ತಾಣ ಗಳ ಪೈಕಿ ಮೈಸೂರು ನಾಲ್ಕನೇ ಸ್ಥಾನ ಪಡೆದಿದೆ. ಅಷ್ಟು ಮಾತ್ರವಲ್ಲ, ಪ್ರೇಮಸೌಧ ತಾಜ್‌ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರಿಗಿಂತಲೂ ಹೆಚ್ಚು ಮಂದಿ ಇಲ್ಲಿಗೆ ಆಗಮಿಸುತ್ತಾರೆ ಎನ್ನುವ ಅಗ್ಗಳಿಕೆ. ಆದರೆ  ಪ್ರವಾಸಿಗರಿಗೆ ಇತಿಹಾಸದ ‘ಹೊಳವು- ಹೊಳಪು’ ನೀಡುವ ಕಾರ‍್ಯ ಮಾತ್ರ  ಶೂನ್ಯ.  ನರ್ಮ್ ಮಾರ್ಗಸೂಚಿ ಪ್ರಕಾರ ಯಾವುದಾದರೂ ಒಂದು ಪುರಾತನ ಬಡಾವಣೆಯನ್ನು ಪುನರುಜ್ಜೀವನಗೊಳಿ ಸುವ ಮತ್ತು  ‘ಹೆರಿಟೇಜ್ ವಾಕ್’ ರೂಪಿಸಿ ಪ್ರವಾಸಿಗರಿಗೆ ಸ್ಥಳ ಇತಿಹಾಸ ಕಟ್ಟಿ ಕೊಡುವಂಥದ್ದೇನೂ ಆಗಿಲ್ಲ.
ಸರಕಾರಿ ಇಲಾಖೆಗಳಿರುವ ಮತ್ತು ಖಾಸಗಿ ಒಡೆತನದ ಕೆಲ ಕಟ್ಟಡಗಳು ಸ್ವಲ್ಪ ಸುಸ್ಥಿತಿಯಲ್ಲಿ ದ್ದರೆ, ಹಲವು ‘ದುಸ್ಥಿತಿ’ಯತ್ತ ಸಾಗಿವೆ. ಇನ್ನುಳಿ ದವು ಬಹುತೇಕ ‘ಹಾಳು ಸುರಿಯುತ್ತಿವೆ’. ಅನೇಕ ಕಟ್ಟಡಗಳು ‘ನೆಲಸಮ’ವಾಗಿವೆ. ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ಸ್ ಕಟ್ಟಡ, ಕೆ.ಆರ್. ಆಸ್ಪತ್ರೆ, ಲಕ್ಷ್ಮೀಪುರಂ ಸರಕಾರಿ ಶಾಲೆ, ದೊಡ್ಡ ಗಡಿಯಾರ, ಫೌಂಟನ್ ವೃತ್ತ ಇತ್ಯಾದಿ ದುಸ್ಥಿತಿಯಲ್ಲಿ ದ್ದರೆ, ಹಳೇ ಜನತಾ ಬಜಾರ್ ಕಟ್ಟಡ, ಗನ್‌ಹೌಸ್ ಅವಜ್ಞೆಗೆ ಗುರಿಯಾಗಿ ಹಾಳುಬಿದ್ದಿವೆ. ನಜರ್‌ಬಾದ್ ನಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಯಿದ್ದ ಕಟ್ಟಡ ನೆಲಸಮವಾಗಿದೆ.
ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವಾದರೂ ಜೀರ್ಣೋದ್ಧಾರ ಬಲುದೂರ. ಕೆಡವಿ ಪುನರ್‌ರೂಪಿಸುವ, ಇರುವುದನ್ನೇ ದುರಸ್ತಿಗೊಳಿಸುವ ಇತ್ಯಾದಿ ಹತ್ತಾರು ಸಲಹೆ ಗಳು ಹರಿದಾಡಿದರೂ ಒಂದೂ  ಸಾಕಾರವಾಗಲಿಲ್ಲ. ಅರಮನೆ ಸಮೀಪದ  ಲ್ಯಾನ್ಸ್‌ಡೌನ್ಸ್ ಕಟ್ಟಡದ್ದೂ ಇದೇ ಪಾಡು. ಸಾರ್ವಜನಿಕ ಕಚೇರಿ ಗಳು (ಕಾಡಾ) ಕಟ್ಟಡದ ಪಾರಂಪರಿಕ ಸುಂದರ ವಿನ್ಯಾಸದ ಕಬ್ಬಿಣ ಗ್ರಿಲ್‌ಗಳು ಕಳ್ಳರ ಪಾಲಾಗಿದೆ. ಸಿಪಿಸಿ ಪಾಲಿಟೆಕ್ನಿಕ್ ಬಳಿ ಅಶೋಕ ರಸ್ತೆಯಲ್ಲಿರುವ  ಕೋಟೆ ಗೋಡೆ ಮತ್ತು ವೀಕ್ಷಣಾ ಗೋಪುರ ಅನಾಥವಾ ಗಿವೆ. ನೂರಾರು ವರ್ಷಗಳಾಗಿರುವ ವೃಕ್ಷಗಳ ಸಂರಕ್ಷಣೆಯೂ ಅಷ್ಟಕ್ಕಷ್ಟೆ.
ಯದುವಂಶದ ಅರಸರು ಕಟ್ಟಿದ ಪಾರಂಪರಿಕ ನಗರಿಯ ಅನೇಕ ‘ರಚನೆ’ಗಳು ‘ಸಂರಕ್ಷಣೆ’ ಇಲ್ಲದೇ ಇತಿಹಾಸದ ಪುಟಗಳನ್ನು ಸೇರುವ ಹಂತದಲ್ಲಿವೆ. ಒಟ್ಟಾರೆ ನರ್ಮ್ ಎಂಬೋ ಹಣದ ಥೈಲಿಯೇ ಅಂಗೈಯಲ್ಲಿದ್ದರೂ ಪಾರಂಪರಿಕ ನಗರಿಯ ‘ಹೆರಿಟೇಜ್’ ರಕ್ಷಿಸಿ ಚೆಂದಗೊಳಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ.
 ಸರಕಾರಿ, ಖಾಸಗಿ ಸೇರಿದಂತೆ ೨೦೦ಕ್ಕೂ ಹೆಚ್ಚು ಕಟ್ಟಡಗಳನ್ನು ಗುರುತಿಸಿದ್ದು, ಸುಮಾರು ೨೦೦ ವರ್ಷಗಳಷ್ಟೂ ಪುರಾತನ ಕಟ್ಟಡಗಳು ಇಲ್ಲಿವೆ. ನರ್ಮ್ ಯೋಜನೆಗಿಂತ ಹಿಂದೆಯೇ ೧೯೯೭ರಲ್ಲಿ ಪ್ರಾಚ್ಯವಸ್ತು ಸ್ಮಾರಕ ಅಧಿನಿಯಮದಡಿ ೧೦ ಕಟ್ಟಡಗಳನ್ನು ಪಾರಂಪರಿಕ ಸ್ಮಾರಕ ಗಳೆಂದು ಗುರುತಿಸಿ ‘ವಿಶೇಷ ನಿಯಂತ್ರಿತ ಪ್ರದೇಶ’ ಎಂದು ಘೋಷಿಸಲಾಗಿತ್ತು. ಪಾಲನೆ ಮಾತ್ರ ಸೊನ್ನೆ. ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಲಲತಮಹಲ್ ಪ್ಯಾಲೇಸ್, ಸೇಂಟ್ ಫಿಲೋಮಿನಾ ಚರ್ಚ್, ನಗರಪಾಲಿಕೆ, ಸರಕಾರಿ ಅತಿಥಿಗೃಹ, ಓರಿಯಂಟಲ್ ಲೈಬ್ರರಿ, ಕೆ.ಆರ್.ಆಸ್ಪತ್ರೆ, ಜಿಲ್ಲಾಧಿಕಾರಿಗಳ ಕಚೇರಿ ಇತ್ಯಾದಿ ಸೇರಿವೆ. ನಿಯಮದಂತೆ ಸ್ಮಾರಕ ಗಳ ಆವರಣದಿಂದ ೧೦೦ಮೀ. ದೂರದಲ್ಲಿ ಯಾವುದೇ ಕಟ್ಟಡ ೭ ಮೀ. ಎತ್ತರ ಮೀರಬಾರದು. ೧೦೦ ಮೀ. ದೂರಕ್ಕಿಂತ ೨೦೦ ಮೀಟರ್ ಒಳಗೆ ೧೦.೫ ಮೀ., ೪೦೦ ಮೀ. ದೂರದಲ್ಲಿ ೧೪ ಮೀ. ಎತ್ತರದ ಕಟ್ಟಡ ನಿರ್ಮಿಸಬಹುದು. ಅದ್ಯಾವುದೂ ಪಾಲನೆಯಾಗಿಲ್ಲ. ಪುರಭವನದ ಸಮೀಪ ನಿರ್ಮಾಣಗೊಳ್ಳುತ್ತಿರುವ ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣ ಅದಕ್ಕೆ ತಾಜಾ ಉದಾಹರಣೆ. ಇಲಾಖೆಯ ಅಧಿಕಾರಿಗಳ್ಯಾರೂ ಅದನ್ನು ಕೇಳುವುದಿಲ್ಲ.
ಇಲಾಖೆ ಗುರುತಿಸಿದ್ದ ಕಟ್ಟಡಗಳ ಪೈಕಿ ೧೬ ಪ್ರಥಮ ಹಂತದಲ್ಲಿ ಪುನರುಜ್ಜೀವನಗೊಳ್ಳಬೇಕಿತ್ತು. ಮಾದರಿಯಾಗಿ ಲಕ್ಷ್ಮೀಪುರಂನಲ್ಲಿ ೧೯೧೪ರಲ್ಲಿ ಸ್ಥಾಪನೆಯಾದ ಸರಕಾರಿ ಬಾಲಕರ ಶಾಲೆ, ೧೮೭೨ ರಲ್ಲಿ ಅಸ್ತಿತ್ವಕ್ಕೆ ಬಂದ ಮಹಾರಾಜ ಸಂಸ್ಕೃತ ಪಾಠಶಾಲೆ ಜೀರ್ಣೋದ್ಧಾರಕ್ಕೆ ೨.೯ ಕೋಟಿ ರೂ.ಗಳ ಸಮಗ್ರ ಯೋಜನಾ ವರದಿ ಸಲ್ಲಿಕೆಯಾಗಿತ್ತು. ಆದರೆ ಡಿಪಿಆರ್ ತಿರಸ್ಕೃತ ಗೊಂಡು ಹಿಂದಕ್ಕೆ ಬಂದದ್ಧೇ ಹೆಚ್ಚು. ಈಗಷ್ಟೇ ‘ಪಾರಂಪರಿಕ ಕಟ್ಟಡಗಳು ಮತ್ತು ವೃತ್ತಗಳಿಗೆ ಮೂಲಸೌಕರ‍್ಯ ಒದಗಿಸುವ ಯೋಜನೆ’ಗೆ ಅನುಮೋದನೆಯಾಗಿದ್ದು, ಹಣ ಬಿಡುಗಡೆ ಯಾಗಿಲ್ಲ. ಪಾರಂಪರಿಕ ಕಟ್ಟಡಗಳೆಂದರೆ- ದೇವರಾಜ ಮಾರುಕಟ್ಟೆ, ಸೀತಾವಿಲಾಸ ಧರ್ಮಶಾಲಾ, ಲ್ಯಾನ್ಸ್‌ಡೌನ್ ಬಿಲ್ಡಿಂಗ್ಸ್, ವಾಣಿವಿಲಾಸ ಮಾರುಕಟ್ಟೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಮಹಾರಾಣಿ ಸರಕಾರಿ ವಿಜ್ಞಾನ ಕಾಲೇಜು, ಮಹಾರಾಣಿ ಕಿರಿಯ ಕಾಲೇಜು, ಕೃಷ್ಣರಾಜೇಂದ್ರ ಕಣ್ಣಿನ ಆಸ್ಪತ್ರೆ, ಲಕ್ಷ್ಮೀಪುರಂ ಬಾಲಕರ ಸರಕಾರಿ ಶಾಲೆ, ಸರಕಾರಿ ಆಯುರ್ವೇದ ಮಹಾ ವಿದ್ಯಾಲಯ, ಕೆ.ಆರ್.ಆಸ್ಪತ್ರೆ ಮುಖ್ಯ ಕಟ್ಟಡ, ಮಹಾರಾಜ ಸಂಸ್ಕೃತ ಪಾಠಶಾಲೆ, ಬನುಮಯ್ಯ ಪ್ರೌಢಶಾಲೆ, ಕುಪ್ಪಣ್ಣ ಪಾರ್ಕ್ ಮತ್ತು ಹಾರ್ಡಿಂಜ್ ವೃತ್ತ, ಚಿಕ್ಕ ಗಡಿಯಾರ.
‘ಸಂರಕ್ಷಣೆ’ ಉದ್ದೇಶದೊಂದಿಗೆ  ೧೯೯೯ ರಲ್ಲಿ ‘ಭೌಗೋಳಿಕ ಸೂಚ್ಯಂಕಗಳು‘ (ಜಿಯೋ ಗ್ರಾಫಿಕಲ್ ಇಂಡಿಕೇಷನ್ಸ್) ಅಡಿ ಯಲ್ಲಿ ೧೪೩ ಸಾಂಪ್ರದಾಯಿಕ ವಸ್ತುಗಳನ್ನು ಗುರುತಿಸ ಲಾಗಿತ್ತು. ಆ ಪೈಕಿ ಕರ್ನಾಟಕದ ಪಾಲು ೨೫. ಅದರಲ್ಲಿ ಮೈಸೂರಿನ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಪೇಟ, ಮೈಸೂರಿನ ಚಿಗುರೆಲೆ (ವೀಳ್ಯದೆಲೆ), ಮೈಸೂರು ರೇಷ್ಮೆ, ಶ್ರೀಗಂಧ, ಅಗರಬತ್ತಿ, ಇನ್‌ಲೇ ವರ್ಕ್ ಸೇರಿವೆ. ಇವುಗಳಿಗೂ ಒಂದು  ಪರಂಪರೆ ಇದೆ. ಪ್ರವಾಸೋದ್ಯಮ ಇಲಾಖೆ ಇವುಗಳನ್ನು ಸಂರಕ್ಷಿಸಿ ‘ಮೈಸೂರು ಬ್ರಾಂಡ್’ ಆಗಿ ಉತ್ತೇಜನ (ಪ್ರಮೋಟ್) ನೀಡಬೇಕಿತ್ತು. ಆ ಕೆಲಸ ಎಳ್ಳಷ್ಟೂ ಆಗಿಲ್ಲ.

ಹುಲಿ ಸಾವು: ಉಗುರು ಮಾಯ


ವಿಕ ಸುದ್ದಿಲೋಕ ಗುಂಡ್ಲುಪೇಟೆ
ಎಂಟು ವರ್ಷದ ಗಂಡು ಹುಲಿಯೊಂದು ಅನುಮಾನಾಸ್ಪದ ವಾಗಿ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತಿ ರುವ ಗುಂಡ್ಲುಪೇಟೆ ವಲಯದ ಬರಗಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಹುಲಿ ಶವ ಪತ್ತೆಯಾಗಿದೆ.
ಹುಲಿಯ ಬಲಗಾಲನ್ನು ಕತ್ತರಿಸಲಾ ಗಿದ್ದು, ೧೫ ಉಗುರು ಗಳು ಕಾಣೆಯಾಗಿ ಕೇವಲ ೩ ಉಗುರು ಉಳಿದುಕೊಂಡಿವೆ. ಆದರೆ ಹುಲಿಯ ಹಲ್ಲು ಸೇರಿದಂತೆ ಇತರೆ ಭಾಗಗಳು ಹಾಗೆಯೇ ಉಳಿದಿವೆ. ಹುಲಿ ಕಾಲಿನ ಬೆರಳಿನ ನಾಪತ್ತೆಗೆ ಸಂಬಂಧಿಸಿ ಐವರನ್ನು ವಶಕ್ಕೆ ತೆಗೆದುಕೊಂಡು ಅರಣ್ಯ ಇಲಾಖೆವರು ವಿಚಾರಣೆ ಆರಂಭಿಸಿದ್ದಾರೆ. ೪ ದಿನದ ಹಿಂದೆ ಹುಲಿ ಸತ್ತಿದ್ದರೂ ಶನಿವಾರ ಗಮನಿಸಿದ ದಾರಿ ಹೋಕರು ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಹುಲಿ ಯೋಜನೆ ನಿರ್ದೇಶಕ ಬಿ.ಜೆ. ಹೊಸಮಠ, ಬಂಡೀಪುರ ಡಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.  ಬಂಡೀಪುರ ವ್ಯಾಪ್ತಿಯಿಂದ ೨ ಕಿ.ಮಿ ದೂರಕ್ಕೆ ಹೋಗಿ ಹುಲಿ ಮೃತಪಟ್ಟಿದೆ. ಇದರಿಂದ ಕೊಳ್ಳೇಗಾಲ ವಿಭಾಗದ ಡಿಸಿಎಫ್ ನಾರಾಯಣಸ್ವಾಮಿ ಅವರು ಸ್ಥಳಕ್ಕೆ ಬಂದರು.
೮ರಿಂದ ೧೦ ವರ್ಷ ಪ್ರಾಯದ ಗಂಡು ಹುಲಿ ಮೃತಪಟ್ಟಿದ್ದು ಬೇಟೆಗಾರರ ಉರುಳು ಬಿದ್ದಿರಬಹುದೇ ಎನ್ನುವ ಶಂಕೆಯೊಂದಿಗೆ ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಮರಣೋತ್ತರ ಪರೀಕ್ಷೆ ನಡೆಸಿದ್ದು. ವಿಷಾಹಾರದಿಂದ ಹುಲಿ ಸತ್ತಿಲ್ಲ ಎನ್ನುವುದು ದೃಢಪಟ್ಟಿದೆ. ಆದರೆ ಉಪವಾಸದಿಂದ ಹುಲಿ ಸತ್ತಿರುವ ಶಂಕೆಯಿದ್ದರೂ ಹುಲಿಯ ಕಾಲು ಕತ್ತರಿಸಿ ಉಗುರು ಕಳ್ಳತನ ಮಾಡಿ ರುವುದರಿಂದ ಯಾರು ಈ ಕೃತ್ಯ ನಡೆಸಿರಬಹುದು ಎನ್ನುವುದು ಇನ್ನೂ ತಿಳಿದಿಲ್ಲ.
ಹುಲಿಯ ಸಾವಿನ ಬಗ್ಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ವರದಿ ನಂತರ ತಿಳಿಯಲಿದೆ. ಉಗುರು ಕಾಣೆಯಾದ ಸಂಬಂಧ ಐವರು ದನಗಾಹಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಡಾ.ಹನುಮಂತಪ್ಪ ಪತ್ರಿಕೆಗೆ ತಿಳಿಸಿದರು. ಕಳೆದ ವರ್ಷ ಬಂಡೀಪುರ-ನಾಗರಹೊಳೆಯಲ್ಲಿ ಏಳು ಹುಲಿಗಳು ಮೃತಪಟ್ಟಿದ್ದವು. ಕಳೆದ ತಿಂಗಳು ಹುಲಿ ಗಣತಿ ಆರು ದಿನ ನಡೆದಿತ್ತು. ಅದಾದ ನಂತರ ಮೃತಪಟ್ಟಿರುವ ಮೊದಲ ಹುಲಿ ಇದು.

ಜನಸೆಟ್,ಕೇರ್‌ಆಫ್ ಫುಟ್‌ಪಾತ್



ಮಾಲಿನ್ಯ ‘ಉಚಿತ’: ರೋಗ ಖಚಿತ !
 ವಿಕ ಸುದ್ದಿಲೋಕ ಮೈಸೂರು

ವಿದ್ಯುತ್ ಕಣ್ಣಾಮುಚ್ಚಾಲೆ  ಸೃಷ್ಟಿತ ಅವಾಂತರಗಳು ಒಂದೆರಡಲ್ಲ. ಹೇಳುತ್ತಾ ಹೋದರೆ ಮುಗಿಯು ವುದೂ ಇಲ್ಲ. ಪಾದಚಾರಿಗಳ ಆರೋಗ್ಯದ ಮೇಲೆ  ಗಂಭೀರ ‘ಅಡ್ಡ ಪರಿಣಾಮ’ ಬೀರುತ್ತಿದೆ ಎನ್ನವುದು ಇತ್ತೀಚಿನ ಸಮಸ್ಯೆ !
-ನಗರದ ದೇವರಾಜ ಅರಸು, ಸಯ್ಯಾಜಿರಾವ್,ಅಶೋಕ ರಸ್ತೆ ಮತ್ತಿತರ ವಾಣಿಜ್ಯ ಮಾರ್ಗಗಳಲ್ಲಿ ಕರೆಂಟ್ ಕೈಕೊಟ್ಟ ಸಂದರ್ಭ ಸಂಚರಿಸಿದ ಎಲ್ಲರಿಗೂ ಖಂಡಿತಾ ಇದರ ಅರಿವಾಗಿರುತ್ತದೆ. ಒಮ್ಮೆ ನಡೆದರೆ ಉಸಿರಿನ ಜತೆಗೆ ಬೇಕಾದಷ್ಟು ‘ಮಾಲಿನ್ಯ’ ಉಚಿತ. ಕೆಲಸದ ನಿಮಿತ್ತ ನಾಲ್ಕಾರು ಬಾರಿ ಸಂಚರಿಸಿದರಂತೂ  ‘ದಮ್ಮು ಕಾಯಿಲೆ ’ಖಚಿತ.
ಒಟ್ಟಿನಲ್ಲಿ, ಜನರದ್ದು ರಾಜ ಮಾರ್ಗದಲ್ಲಿಯೂ ಮುಖಮುಚ್ಚಿಕೊಂಡು ಓಡಾಡುವ ಅನಿವಾರ‍್ಯ ಸ್ಥಿತಿ. ಕಾರಣ,ವಿದ್ಯುತ್‌ಗೆ ಪರ‍್ಯಾಯವಾಗಿ ಅಂಗಡಿ,ಮಳಿಗೆ ಮಾಲೀಕರು ಬಳಸುವ  ಜನರೇಟರ್‌ಗಳು.
ಬೆಳಗ್ಗೆ,ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಹೊತ್ತು ಯಾವುದೇ ಇರಲಿ ಕರೆಂಟ್ ಹೋಯಿತೆಂದರೆ  ಇಡೀ ರಸ್ತೆಗಳು ಭೋರ್ಗರೆಯುತ್ತವೆ.ಗಾತ್ರ,ಪ್ರಮಾಣದಲ್ಲಿ ಎಲ್ಲವೂ ಚಿಕ್ಕವಾದರೂ ಮಾರಿಗೊಂದರಂತೆ  ಇರುವ ಸೆಟ್‌ಗಳು ಹೊಮ್ಮಿಸುವ ಶಬ್ದ, ಮಾಲಿನ್ಯದ  ಒಟ್ಟು ಪರಿಣಾಮ ಘನ ಗಂಭೀರ.
ನಿಯಮ ಏನಿದೆ: ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆ ಪ್ರಕಾರ  ಸೊನ್ನೆಯಿಂದ ೧೦೦ ಕಿಲೋವ್ಯಾಟ್ಸ್‌ವರೆಗಿನ ಯಾವುದೇ ಜನ ರೇಟರ್ ಬಳಕೆಗೆ ಮುನ್ನ  ಪರಿಸರ ಮಾಲಿನ್ಯ ಮಂಡಳಿ ಯಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ನಿರ್ದಿಷ್ಟ , ಸುರಕ್ಷಿತ ಕೊಠಡಿಯಲ್ಲೇ  ಜನರೇಟರ್ ಇಡಬೇಕು. ಹೊಗೆ ಕೊಳವೆ (ಚಿಮಣಿ)ಯನ್ನು ಹೊಂದಿರಬೇಕು. ಆ ಕೊಳವೆ ಕಟ್ಟಡದ ಚಾವಣಿ ಯಿಂದ ಕನಿಷ್ಠ ೩ಮೀಟರ್ ಎತ್ತರದಲ್ಲಿರಬೇಕು. ಯಾವುದೇ ಜನರೇಟರ್ ಶಬ್ದ ಮಾಲಿನ್ಯಕ್ಕೆ ಕಾರಣವಾಗ ಬಾರದು. ಜನ ಸಂಚಾರ ಸ್ಥಳದಲ್ಲಿ ಇಡುವುದು ಸುತರಾಂ ಸಲ್ಲ.
ಪಾಲನೆ ಆಗ್ತಿದೆಯಾ?: ಪಾಲನೆಯ ಮಾತಿರಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳಿಗೇ  ನಿಯಮ ಗಳ ಪೂರ್ಣ ಅರಿವು ಇದ್ದಂತಿಲ್ಲ.‘ದೊಡ್ಡ  ಜನ ರೇಟರ್ ಬಳಸುವ ಮಳಿಗೆ,ಉದ್ದಿಮೆ,ವಸತಿ ಸಮು ಚ್ಚಯ ಮಾಲೀಕರಿಗೆ ನಿರ್ದಿಷ್ಟ  ನಿಯಮ ಪಾಲಿಸು ವಂತೆ  ಸೂಚಿಸುತ್ತಿದ್ದೇವೆ. ಸಣ್ಣ ಪುಟ್ಟ ಜನರೇಟರ್ ಬಳಕೆದಾರರಿಗೆ ಯಾವುದೇ ಸೂಚನೆ ನೀಡಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.
ಅಧಿಕಾರಿಗಳೇ ಹೀಗೆಂದ ಮೇಲೆ ಕೇಳಬೇಕೆ,‘ಹೇಳು ವವರು, ಕೇಳೋರು ಯಾರು ಇಲ್ಲ’ದ ಸ್ವಾತಂತ್ರ್ಯ ಅನುಭವಿಸುತ್ತಿರುವ  ಮಳಿಗೆ ಮಾಲೀಕರು ಫುಟ್‌ಪಾತ್‌ಗಳಲ್ಲೇ ಜನ್‌ಸೆಟ್ ಇಟ್ಟಿದ್ದಾರೆ. ಪರಿಸರ  ಇಲಾಖೆ ನಿರ್ದೇಶಿತ ನಿಯಮಗಳನ್ನು ಗಾಳಿಗೆ ತೂರಿ ರುವ ಪರಿಣಾಮ, ಸೀಮೆ ಎಣ್ಣೆ, ಪೆಟ್ರೋಲ್‌ನಿಂದ ಚಾಲಿತ  ಸೆಟ್‌ಗಳು ಚಾಲೂ ಆಗಿದ್ದ ಅಷ್ಟೂ ಹೊತ್ತು ದಾರಿಹೋಕರ ಮುಖಕ್ಕೆ ಮಾಲಿನ್ಯವನ್ನು ಉಗುಳುತ್ತವೆ.
ಹೇಳೋರ್ ಕೇಳೋರ್ ಇಲ್ವಾ: ಪ್ರಶ್ನೆ  ಸಹಜವೇ. ಉತ್ತರ ನಿರಾಶಾದಾಯಕ. ‘ನಿಯಮದ ಪ್ರಕಾರ ಎಲ್ಲಾ ರೀತಿಯ  ಜನರೇಟರ್ ಬಳಕೆಗೆ ಮಂಡಳಿಯಿಂದ ಅನುಮತಿ ಪಡೆದಿರಬೇಕು. ಆದರೆ, ಬಹುತೇಕ ಅಂಗಡಿ ಮಾಲೀಕರು ಅದರ ಗೋಜಿಗೆ ಹೋಗಿಲ್ಲ. ಇದು ತಪ್ಪಾದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ  ಅಸಹಾಯಕತೆ.
ಹಾಗಿದ್ದರೆ ಪರಿಹಾರ ಏನು? ‘ಇದು ಮಹಾ ನಗರದ ಜನರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆ. ನಗರ ಪಾಲಿಕೆ ಆಯುಕ್ತರು,ಆರೋಗ್ಯಾಧಿಕಾರಿಗಳು ಸಿಆರ್‌ಪಿಸಿ ಕಾಯಿದೆ ಪ್ರಕಾರ ಕ್ರಮ ಜರುಗಿಸಬೇಕು. ಸಾರ್ವ ಜನಿಕರು ನಮಗೆ ದೂರು ನೀಡಿದರೆ, ಪಾಲಿಕೆಗೆ ಪತ್ರ ಬರೆಯುವುದಷ್ಟೆ ನಮ್ಮಿಂದ ದೊರೆಯಬಹುದಾದ ಪರಿಹಾರ’ಎನ್ನುತ್ತಾರೆ ಮಂಡಳಿ ಅಧಿಕಾರಿಗಳು.
ಪಾಲಿಕೆ ‘ಪಾಲಿಸಿ’ಏನು?: ಈ ವರೆಗೆ ಸಣ್ಣಪುಟ್ಟ ಜನ ರೇಟರ್ ಬಳಕೆ ಬಗ್ಗೆ ಗಮನಹರಿಸಿರಲಿಲ್ಲ. ಒಟ್ಟು ಸ್ವರೂಪದಲ್ಲಿ ಆಗುತ್ತಿರುವ ಮಾಲಿನ್ಯದ ಗಂಭೀರತೆಯ ಅರಿವಾಗಿದೆ.  ಏಕಾ ಏಕಿ ಎಲ್ಲವನ್ನೂ ಎತ್ತಂಗಡಿ ಮಾಡಿಸಲಾಗದು. ನಿಯಮ ಪಾಲಿಸುವಂತೆ ಎಲ್ಲಾ ಅಂಗಡಿ ಮಾಲೀಕರಿಗೆ ತಕ್ಷಣ ನೋಟಿಸ್ ನೀಡುತ್ತೇವೆ. ತಪ್ಪಿದರೆ , ‘ದಂಡ’ ಪ್ರಯೋಗಿಸಲಾಗುವುದು.ಗಂಭೀರ ಕ್ರಮವಂತೂ ಖಂಡಿತಾ ಎಂದರು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್.
ಇನ್ನಾದರೂ ಸಮಸ್ಯೆಗೆ ಪರಿಹಾರ ಸಿಗುತ್ತದಾ? ಜನ್‌ಸೆಟ್ ಬಳಸುವವರು ನಿಯಮವನ್ನು ಪಾಲಿಸುತ್ತಾರಾ? ರಾಜ ಮಾರ್ಗಗಳಲ್ಲಿ ಉತ್ತಮ ಗಾಳಿ ಬೀಸುತ್ತದಾ?- ಇವು ಸದ್ಯದ ಪ್ರಶ್ನೆಗಳು. ಅಧಿಕಾರಿಗಳು ಮಾತಿನಂತೆ ನಡೆದುಕೊಂಡರೆ ಉತ್ತರ ಸಿಗಬಹುದು.
----------------------------------------------------------------------------------------------------------
ಏಡ್ಸ್ ಪತ್ತೆಗೆ ನೂತನ ಪರೀಕ್ಷಾ  ಕ್ರಮ
ವಿಕ ಸುದ್ದಿಲೋಕ ಮೈಸೂರು
ಮಹಾಮಾರಿ ಎಚ್‌ಐವಿ/ಏಡ್ಸ್ ಪತ್ತೆಗೆ ಹೊಸ ಪರೀಕ್ಷಾ ವಿಧಾನವನ್ನು ತರಲಾಗುತ್ತಿದೆ. ಅಮ್ಮ ನಿಂದ ಸಾಗಿ ಬರುವ ಎಚ್‌ಐವಿ ವೈರಾಣುವಿನಿಂದ ಒಡಲಕುಡಿಯನ್ನು ರಕ್ಷಿಸುವ ಆಶಯದೊಂದಿಗೆ ಈ  ಹೊಸ ವಿಧಾನವನ್ನು  ಆಸ್ಪತ್ರೆಗಳಲ್ಲಿ ಅಳ ವಡಿಸಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತ ವಾಗಿದ್ದ ಈ ವಿಧಾನ ಸರಕಾರಿ ಆಸ್ಪತ್ರೆ ಗಳಲ್ಲೂ ಸದ್ಯವೇ ಆರಂಭವಾಗಲಿದೆ.
ಅದುವೇ  ಡಿಎನ್‌ಎ- ಪಿಸಿಆರ್ (ಡಿಎನ್‌ಎ- ಪಾಲಿಮರೇಸ್ ಚೈನ್ ರಿಯಾಕ್ಷನ್) ವಿಧಾನ. ಅತ್ಯಂತ ತ್ವರಿತವಾಗಿ ಎಚ್‌ಐವಿ ರೋಗಾಣುವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಹಕಾರಿ ಯಾಗಲಿದೆ. ಎಚ್‌ಐವಿಯೊಂದಿಗೆ ಜೀವಿಸುತ್ತಿರುವ ತಾಯಿಯಿಂದ ಶೇ. ೩೦-೪೦ರಷ್ಟು ಮಗುವಿಗೆ ವರ್ಗಾ ವಣೆಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಆರಂಭದಲ್ಲೇ ಗುರುತಿಸಿ ಔಷಧ ನೀಡಿದರೆ ಮಗು ಇನ್ನಷ್ಟು ಸುರಕ್ಷಿತ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಈ ಮೊದಲು ೧೮ ತಿಂಗಳ ನಂತರ ಮಗುವಿನ ರಕ್ತ ಪರೀಕ್ಷೆ ನಡೆಸಿ ಎಚ್‌ಐವಿ ಗುರುತಿಸಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಪಿಸಿಆರ್ ವಿಧಾನದಲ್ಲಿ ೬ ವಾರಗಳಲ್ಲೇ ಪರೀಕ್ಷಿ ಸಲು ಸಾಧ್ಯವಿದೆ. ಇದು ಕೇವಲ ಎಚ್‌ಐವಿ ಪೀಡಿತ ತಾಯಿ-ಮಗುವಿಗೆ ಮಾತ್ರವಲ್ಲ, ಇತರರಿಗೂ ಅನು ಕೂಲವಾಗಲಿದೆ. ಅಷ್ಟು ಮಾತ್ರವಲ್ಲ, ವೈದ್ಯರ ಪ್ರಕಾರ ಕ್ಷಯ, ಟೈಫಾಯ್ಡ್ ಇತ್ಯಾದಿ ಸೋಂಕು ಕಾಯಿಲೆಗಳ ವೈರಾಣು ಗುರುತಿಸಿ ಅದಕ್ಕೆ ತಕ್ಕಂತೆ ಔಷಧ ನೀಡಲು ಸುಲಭವಾಗಲಿದೆ.
ಕೇಂದ್ರದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಕೆಎಸ್‌ಎಪಿಎಸ್)ಯು ಜಂಟಿಯಾಗಿ ಡ್ಯಾಪ್ಕು ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ತರುತ್ತಿವೆ.
ಬೆರಳೆಣಿಕೆಯಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪಿಸಿಆರ್ ಪರೀಕ್ಷೆಗೆ ಅನುಕೂಲವಿದ್ದು, ಜನಸಾಮಾನ್ಯರಿಗೆ ದುಬಾರಿ.  ಮೈಸೂರು ಜಿಲ್ಲೆಯಲ್ಲಿರುವ  ೨೬ ಸಮಗ್ರ ಆಪ್ತಸಮಾಲೋಚನೆ ಮತ್ತು ರಕ್ತ ಪರೀಕ್ಷೆ ಕೇಂದ್ರ (ಐಸಿಟಿಸಿ)ಗಳು ಸೇರಿದಂತೆ ರಾಜ್ಯದಲ್ಲಿ ೫೬೫ ಕೇಂದ್ರ ಗಳಿದ್ದು, ಇಲ್ಲಿ ಉಚಿತವಾಗಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತಿದೆ. ಪ್ರಸ್ತುತ ಎಚ್‌ಐವಿ ಪತ್ತೆಗೆ ಕ್ರಮವಾಗಿ ಕಾಂಬೋ ಏಡ್, ಟ್ರೈಡಾಟ್, ಟ್ರೈಲೈನ್ ಈ ಮೂರು ತ್ವರಿತ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಎಲಿಷಾ ಟೆಸ್ಟ್ ಕೂಡ ಮಾಡಲಾಗುತ್ತಿದೆ. ಅದರೊಡನೆ ಈಗ ಡಿಎನ್‌ಎ-ಪಿಸಿಆರ್ ಸೇರ್ಪಡೆ.
ಎಚ್‌ಐವಿ/ಏಡ್ಸ್ ಇಳಿಮುಖ: ಜಿಲ್ಲೆಯಲ್ಲಿ ಈವರೆಗೆ ಶೇ.೧ರಷ್ಟಿದ್ದ ಎಚ್‌ಐವಿ/ಏಡ್ಸ್ ಸ್ಥಾನಿಕತೆ (ಪ್ರಿವಲೆನ್ಸ್ ದರ) ಪ್ರಸ್ತುತ ಸಾವಿರಕ್ಕೆ ಶೇ.೦.೮ಕ್ಕೆ ಇಳಿಕೆಯಾಗಿದೆ. ಗರ್ಭಿಣಿಯರಲ್ಲಿ ಈ ಮೊದಲು ಶೇ.೧ರಷ್ಟಿದ್ದದ್ದು ಈಗ ಶೇ.೦.೩ಗೆ ಇಳಿದಿದೆ. ಜಿಲ್ಲೆಯಲ್ಲಿ ೨೦೦೮ರಲ್ಲಿ ೨೫,೨೩೩ ಜನರಿಗೆ ಆಪ್ತಸಮಾಲೋಚನೆ ನಡೆಸಿ ಪರೀಕ್ಷಿಸಿದಾಗ ೨೮೧೧ ಮಂದಿಯಲ್ಲಿ ಎಚ್‌ಐವಿ ಸೋಂಕು ಕಂಡು ಬಂದಿತು. ೩೩,೮೪೬ ಗರ್ಭಿಣಿಯರ ಪೈಕಿ ೧೭೩ ಮಂದಿಗೆ ಸೋಂಕಿದೆ. ೨೦೦೯ ರಲ್ಲಿ ೩೩,೪೦೫ ಜನರಲ್ಲಿ ೨೬೨೧ ಎಚ್‌ಐವಿ ಸೋಂಕು ಕಂಡು ಬಂದಿದ್ದು, ೩೪೯೮೩ ಗರ್ಭೀಣಿಯರಲ್ಲಿ ೧೧೧ ಮಂದಿಗೆ ಸೋಂಕು ಪತ್ತೆ ಯಾಗಿದೆ.  ಗರ್ಭಿಣಿಯರಿಗೆ ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆ ನಡೆಯಲಿದ್ದು,  ಖಾಸಗಿ ಆಸ್ಪತ್ರೆಗಳಲ್ಲಿ ಸಹ  ಕೌನ್ಸೆಲಿಂಗ್ ಮತ್ತು ಎಚ್‌ಐವಿ ಪರೀಕ್ಷೆಗೆ ಒಳಪಡಿಸ ಲಾಗುತ್ತಿದೆ ಎಂದು ಡಾ.ರಘು ಕುಮಾರ್ ತಿಳಿಸಿದ್ದಾರೆ.

ರಂಗನತಿಟ್ಟಲ್ಲಿ ಶುರುವಾಯ್ತು ಹಕ್ಕಿಗಳ ಸಂತಾನಸುಖ

ಹನಿಮೂನ್ ಮುಗಿಸಿ ಸಂತಾನಾಭಿವೃದ್ಧಿ ಮೂಡ್‌ನಲ್ಲಿರುವ ಪಕ್ಷಿ ಸಂಕುಲಕ್ಕೆ ರಂಗನತಿಟ್ಟೇ ತವರು ಮನೆ. ವರ್ಷಗಳಿಂದ ರಂಗನತಿಟ್ಟಿಗೆ ಆಗಮಿಸಿ ಇಲ್ಲಿ ೮ ತಿಂಗಳು ಕಾಲ ಇದ್ದು ಹೋಗುತ್ತವೆ. ೨೫ಕ್ಕೂ ವಿವಿಧ ಜಾತಿಯ ೨೫ ಸಾವಿರಕ್ಕೂ ಹೆಚ್ಚು  ಹಕ್ಕಿಗಳಿಗೆ ಈ ವರ್ಷದ ಸಂತಾನಾಭಿವೃದ್ಧಿ ದಿನಗಳು ಶುರುವಾಗಿವೆ.
ಕುಂದೂರು ಉಮೇಶಭಟ್ಟ ಮೈಸೂರು
ರಂಗನತಿಟ್ಟಿಗೆ ಲಗ್ಗೆ ಇಟ್ಟಿವೆ ಹಕ್ಕಿಗಳು. ಸತತ ಪ್ರವಾಹದಿಂದ ಆತಂಕಕ್ಕೀಡಾದರೂ ವರ್ಷದ ಸಂತಾನ ಸಂಭ್ರಮಕ್ಕೆ ಹಕ್ಕಿಗಳು ಹಿಂಡುಗಟ್ಟಲೇ ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿ ಬೀಡುಬಿಟ್ಟಿವೆ.
ವರ್ಷದಿಂದ ವರ್ಷಕ್ಕೆ ರಂಗನತಿಟ್ಟಿನ ತೀರ ವನ್ನು ಹುಡುಕಿ ಬರುವ ಹಕ್ಕಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ೨೦ ಸಾವಿರ ದಾಟಬಹುದು. ಕುಟುಂಬ ವಿಸ್ತರಣೆಗೆಂದೇ ಬಂದವರು ಗಳ ಸಂಖ್ಯೆ ೧೫ ಸಾವಿರ ದಾಟಿದೆ. ಇದರಿಂದ ಮುಂದಿನ ಆರು ತಿಂಗಳ ಕಾಲ ಇಲ್ಲಿ ಹಕ್ಕಿಳಗದ್ದೇ ಲೋಕ.
ಹನಿಮೂನ್ ನಂತರ...: ಇದು ಹಕ್ಕಿಗಳ ಹನಿಮೂನ್ ಮುಗಿದ ಸಮಯ. ತಮ್ಮ ಮೂಲ ನೆಲೆಗಳಿಗೆ ಹಿಂದಿರುಗಿ ನಾಲ್ಕೈದು ತಿಂಗಳು ಕಳೆದು ಮತ್ತೆ ಸಂತಾನಾಭಿವೃದ್ಧಿಗೆ ಬರುವ ಸಂತಸದ ಕಾಲಘಟ್ಟ. ಡಿಸೆಂಬರ್ ಮುಗಿಯುತ್ತಿರುವಾಗಲೇ ಇತ್ತ ಹಕ್ಕಿಗಳ ಹಿಂಡು ಬರಲಾರಂಭಿಸು ತ್ತವೆ. ಅದು ದೇಶದ ವಿವಿಧ ಭಾಗಗಳಿರಬಹುದು. ಹೊರದೇಶದಿಂದಲೂ ಬರಬಹುದು.
ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಒಂದೆರಡು ತಿಂಗಳೊಳಗೆ ಸಂತಾನಾಭಿವೃದ್ಧಿ ಚಟುವಟಿಕೆ ಶುರು. ಅದಕ್ಕಾಗಿ ಗೂಡು ನೇಯುವ, ಆಹಾರ ಅರಸಿ ಹಗಲಿನಲ್ಲಿ ಸುತ್ತುವ ಕಾಯಕ. ಮಾರ್ಚ್ ನಂತರ ಹೊಸ ಜೀವ ಸೃಷ್ಟಿಯ ಸಮಯ. ನಂತರ ನಾಲ್ಕು ತಿಂಗಳು ಮರಿಯ ಪಾಲನೆ ಪೋಷಣೆ. ಜೂನ್-ಜುಲೈನಲ್ಲಿ ಯಥಾ ರೀತಿ ವಾಪಸು. ಇದು ರಂಗನತಿಟ್ಟಿಗೆ ಬರುವ ಹಕ್ಕಿಗಳ ಜೀವನ ಚಕ್ರ. ಈಗ ಸಂತಾನಾಭಿವೃದ್ಧಿ ಮೊದಲ ಹಂತ. ಹಕ್ಕಿ ಗಳಿಗೆ ಗೂಡು ನೇಯೋದೇ ಕಾಯಕ.
ಹೊಸ ದ್ವೀಪ ನಿರ್ಮಾಣ: ಸತತ ಮೂರು ವರ್ಷ ಪ್ರವಾಹದ ಪರಿಣಾಮವಾಗಿ ರಂಗನ ತಿಟ್ಟು  ಮುಳುಗಡೆ ಭೀತಿ ಎದುರಿಸುತ್ತಿತ್ತು. ಹಕ್ಕಿಗಳು ಪ್ರತಿ ವರ್ಷ ಸಂಕಷ್ಟಕ್ಕೆ ಒಳಗಾದರೆ ಪ್ರವಾಸಿಗ ರಿಗೂ ತೊಂದರೆ. ಹಾಗಾಗಿ ೫ಕ್ಕೂ ಹೆಚ್ಚು ದ್ವೀಪಗಳ ಅಭಿವೃದ್ಧಿ ನಡೆದಿದೆ. ಎಲ್ಲಾ ದ್ವೀಪದ ಮೂಲವನ್ನು ಬಲಪಡಿಸಲಾಗಿದೆ. ಒಂದೆರಡು ವರ್ಷದಲ್ಲಿ ಇನ್ನಷ್ಟು ಗಟ್ಟಿಗೊಳ್ಳು ವುದಲ್ಲದೇ ಮುಂದಿನ ಒಂದೆರಡು ದಶಕಕ್ಕೆ ಯಾವುದೇ ಆತಂಕ ಇರದು.
ಈಗಿರುವ ದ್ವೀಪಗಳ ಜತೆ ಇನ್ನೊಂದು ದ್ವೀಪವನ್ನು ಸೃಷ್ಟಿಸಲಾಗುತ್ತಿದೆ. ನೀರು ಮೇಲೆ ಬರುವುದನ್ನು ತಪ್ಪಿಸಲು ಪರೀಕ್ಷಾರ್ಥ ಪ್ರಯೋಗ ನಡೆದಿದೆ. ಕೆಲವೇ ದಿನಗಳಲ್ಲಿ ಈ ಕೆಲಸ ಪೂರ್ಣ.
ಹೆಚ್ಚಿದ ಆದಾಯ: ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗು ತ್ತಿದ್ದು, ಆದಾಯ ಪ್ರಮಾಣದಲ್ಲೂ ಹೆಚ್ಚಳ ವಾಗಿದೆ. ಒಂದೇ ವರ್ಷ ದಲ್ಲಿ ಏರಿಕೆ ಯಾದ ಆದಾಯ ಶೇ.೪೦ರಷ್ಟು.
೨೦೦೯ರ ಏಪ್ರಿಲ್ ನಿಂದ ೨೦೧೦ರ ಜನವರಿವರೆಗೆ ೧೦ ತಿಂಗಳ ಅವಧಿಯಲ್ಲೇ ರಂಗನತಿಟ್ಟಿಗೆ ಬಂದ ಆದಾಯ ೯೯.೮೦ ಲಕ್ಷ ರೂ. ಪ್ರವಾಸಿಗರ ಸಂಖ್ಯೆ ೨,೧೩,೩೬೪. ಇದರಲ್ಲಿ ವಿದೇಶಿಗರ ಸಂಖ್ಯೆ ೪೪೭೩. ಇದೇ ರೀತಿ ೨೦೦೮-೦೯ರಲ್ಲಿ  ಸಂಗ್ರಹವಾಗಿದ್ದ ಆದಾಯ ಪ್ರಮಾಣ ೮೬.೬೯ ಲಕ್ಷ ರೂ. ೧.೮೨, ೩೬೭ ಪ್ರವಾಸಿಗರು ರಂಗನತಿಟ್ಟಿಗೆ ಬಂದು ಹೋಗಿದ್ದಾರೆ. ವಿದೇಶಿಗರು ೫೦೧೪.
ಪಕ್ಷಿಧಾಮ ವಿಸ್ತರಣೆ: ಕಾವೇರಿ ನದಿ ಹಾಗೂ ನದಿ ಪಾತ್ರ ಸೇರಿದಂತೆ ಸುಮಾರು ೨೦೦ ಎಕರೆ ಪ್ರದೇಶದಲ್ಲಿ(೦.೬೭ ಚದರ ಕಿ. ಮಿ) ಹರಡಿ ಕೊಂಡ ರಂಗನತಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಪ್ರವಾಸಿ ಗರ ಸಂಖ್ಯೆಯನ್ನು ಆಧರಿಸಿ ವಿಸ್ತರಿಸಲಾಗುತ್ತಿದೆ. ಈಗಾಗಲೇ ೭ ಎಕರೆ ಜಮೀನನ್ನು ಪಕ್ಷಿಧಾಮ ವ್ಯಾಪ್ತಿಗೆ ಸೇರಿಸಿ ಪಾರ್ಕಿಂಗ್ ಸೇರಿದಂತೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸ ಲಾಗಿದೆ. ಜಮೀನು ಸ್ವಾಧೀನಕ್ಕೆ ೮೫ ಲಕ್ಷ ರೂ.ಗಳನ್ನು ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಲಾಗಿದೆ. ಕಡೆಯ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ಬೇಗನೇ ಪಕ್ಷಿಧಾಮದ ವಿಸ್ತರಣೆಯೂ ಆರಂಭವಾಗಲಿದೆ.

ಪಡಿತರ ಕಾರ್ಡ್ ನೋಡಿ ‘ಕೋಮಾ’ಗೆ ಹೋದೀರಿ ಜೋಕೆ...


ನಿಮಗೆ ಕೊಟ್ಟ ಪಡಿತರ ಚೀಟಿಯಲ್ಲಿ ನಿಮ್ಮದೇ ಭಾವಚಿತ್ರವಿದೆಯಾ ಎಂದು ಖಚಿತಪಡಿಸಿಕೊಳ್ಳಿ,. ನಿಮ್ಮ ಹಾಗೂ ಮನೆಯವರ ಹೆಸರುಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ. ಕೊನೆಗೆ ನಿಮ್ಮ ಮನೆ ವಿಳಾಸವನ್ನು ಪಕ್ಕದ ಮನೆಯವರನ್ನಾಗಿ ಮಾಡಿದ್ದಾರಾ ಎಂದೂ ಖಾತ್ರಿ ಮಾಡಿಕೊಳ್ಳಿ....
ಜಿಲ್ಲೆಯಲ್ಲಿ ವಿತರಿಸುತ್ತಿರುವ ಪಡಿತರ ಚೀಟಿಗಳ ಅವಾಂತರ ಮುಂದುವರಿದಿದೆ. ಕೆಲವರ ಭಾವಚಿತ್ರವೇ ನಾಪತ್ತೆಯಾಗಿದ್ದರೆ, ಮತ್ತೆ ಕೆಲವರದ್ದು ಬದಲಾಗಿದೆ. ಜಿಲ್ಲೆಯಲ್ಲಿ ಕಾರ್ಡ್ ಕೊಡುವ ಹೊಣೆ ಹೊತ್ತ ಆಹಾರ ಮತ್ತು ನಾಗರಿಕ ಇಲಾಖೆ ಮತ್ತೊಮ್ಮೆ ವಿಫಲವಾಗಿ ದ್ದರೆ, ಗುತ್ತಿಗೆ ಪಡೆದ ಕೊಮ್ಯಾಟ್ ಸಂಸ್ಥೆ ಜನರನ್ನೇ ಕೋಮಾಕ್ಕೆ ತಳ್ಳುತ್ತಿದೆ. ಬೇಕಂತಲೇ ತಪ್ಪು ಮಾಡಿ ಮತ್ತೆ ಸರಿಪಡಿಸಿಕೊಳ್ಳಿ ಎನ್ನುವ ದಂಧೆ  ಸದ್ದಿಲ್ಲದೇ ನಡೆಯುತ್ತಿದೆ.
ಹೇಗಿದೆ ನೋಡಿ: ನಟ ಮಂಡ್ಯ ರಮೇಶ್ ಅವರ ಭಾವಚಿತ್ರವೇ ಕಾರ್ಡಿನಲ್ಲಿ ಮಾಯ. ತಾವೇ ಖುದ್ದಾಗಿ ಹೋಗಿ ತೆಗೆಸಿದರೂ ಭಾವಚಿತ್ರವೇ ನಾಪತ್ತೆ. ಜತೆಗೆ ವಿಳಾಸವೂ ನಾಪತ್ತೆ. ಕುಟುಂಬದವರ ಸಂಬಂಧಗಳಲ್ಲೂ ಹೆಚ್ಚೂ ಕಡಿಮೆ. ಪತ್ನಿ ಸರೋಜ ಹಾಗೂ ರಮೇಶ್ ಅವರ ವಯಸ್ಸಿನ ಅಂತರ ಏಳು ವರ್ಷ. ಪಡಿತರ ಕಾರ್ಡಿನಲ್ಲಿ ರಮೇಶ್ ತಮ್ಮ ಪತ್ನಿಗಿಂತ ಏಳು ವರ್ಷ ಚಿಕ್ಕವರು. ರಮೇಶ್ ಅವರ ಪುತ್ರಿ ಹೆಸರು ದಿಶಾ, ಚೀಟಿಯಲ್ಲಿ ಆಕೆ ದೀಪಾ.
ಅದೇ ರೀತಿ ಕುವೆಂಪುನಗರ ನಿವಾಸಿ ರಮಾಮಣಿ ಕಮಲೇಶ್ ಅವರಿಗೆ ನೀಡಿರುವ ಕಾರ್ಡಿನಲ್ಲೂ ಮತ್ತೊಂದು ಅವಾಂತರ, ರಮಾಮಣಿ ಅವರ ಪುತ್ರ ಕೆ.ಗುರುಪ್ರಸಾದ್ ಅವರ ಭಾವಚಿತ್ರಕ್ಕೆ ಇನ್ನಾರದೋ ಚಿತ್ರ. ತಮ್ಮ ಅತ್ತಿಗೆ ವಾಣಿಶ್ರೀಯಾಗಿ ಗುರುಪ್ರಸಾದ್ ಫೋಟೋ. ...ಇಂಥ ಸಾವಿರಾರು ತಪ್ಪುಗಳು ನುಸುಳಿವೆ. ವಿತರಣೆ ಯಾದ ಲಕ್ಷಕ್ಕೂ ಹೆಚ್ಚು ಕಾರ್ಡಿನಲ್ಲಿ ಶೇ.೭೦ಕ್ಕೂ ಹೆಚ್ಚು ಇಂಥಹುದ್ದೇ ತಪ್ಪು.
ಇದರೊಟ್ಟಿಗೆ ಹೊಸ ಪಡಿತರ ಕಾರ್ಡ್ ಅನ್ನು ತಮ್ಮ ವಿಳಾಸ ದಾಖಲೆ ಯಾಗಿ ಬಳಸಲು ಹೋದರೆ ಅಲ್ಲಿಯೂ ತಪ್ಪುಗಳಾಗಿ ಇದನ್ನು ಯಾಕಾದರೂ ಪಡೆದೆ ವಪ್ಪಾ ಎಂದು ಶಪಿಸುತ್ತಿದ್ದಾರೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನೇ ಕೇಳಿದರೆ, ಉತ್ತರ ಪಕ್ಕಾ ಸರಕಾರಿ ಶೈಲಿಯಲ್ಲಿ. ‘ಅಯ್ಯೋ ತಪ್ಪುಗಳು ಆಗಿರುವುದು ನನ್ನ ಗಮನಕ್ಕೂ ಬಂದಿದೆ. ಅದನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಅವಕಾಶ ನೀಡುತ್ತೇವೆ. ನೀವು ತಲೆಕೆಡಿಸಿಕೊಳ್ಳಬೇಡಿ‘..
ಕೊಮ್ಯಾಟ್ ನ ಅವಾಂತರ : ಇಷ್ಟೆಲ್ಲಾ ಅವಾಂತರಗಳಿಗೆ ಮೂಲ ಕಾರಣ ಕೊಮ್ಯಾಟ್. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಯೋಜನೆಗಳ ಗುತ್ತಿಗೆ ಪಡೆದಿದೆ ಈ ಸಂಸ್ಥೆ. ಚುನಾವಣೆ ಆಯೋಗ ನೀಡುವ ಗುರುತಿನ ಚೀಟಿ ಇರಬಹುದು, ಪಡಿತರ ಚೀಟಿ ವಿತರಣೆಯೇ ಇರಬಹು ದು, ಇವುಗಳ ತಾಂತ್ರಿಕ ಹೊಣೆಗಾರಿಕೆ ಈ ಸಂಸ್ಥೆಯದ್ದೇ. ೨೦೦೮ರ ವಿಧಾನಸಭೆ ಚುನಾವಣೆ ವೇಳೆ ಸರಿಯಾಗಿ ಗುರುತಿನ ಕಾರ್ಡ್ ವಿತರಿಸಲಿಲ್ಲ ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿ ಮಣಿವಣ್ಣನ್ ಈ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದರು. ಅದಾದ ನಂತರವೂ ಸಂಸ್ಥೆಯ ಲೋಪಗಳ ಸರಮಾಲೆ ಮುಗಿದಿಲ್ಲ.
ಕೊಮ್ಯಾಟ್ ಸಂಸ್ಥೆಯಲ್ಲಿ ವೃತ್ತಿಪರ ಸಿಬ್ಬಂದಿಯ ಕೊರತೆಯಿಂದ ಪ್ರತಿ ಬಾರಿ ತಪ್ಪುಗಳು ನುಸುಳುತ್ತಿವೆ. ಯಾವುದೋ ಭಾವಚಿತ್ರಕ್ಕೆ ಇನ್ನಾವುದೇ ಹೆಸರು, ವಿಳಾಸದಲ್ಲಿ ಭಾರಿ ಏರುಪೇರು. ಹೀಗೆ ತಪ್ಪು ಮಾಡುತ್ತಿದ್ದರೂ ಸರಕಾರದ ಗುತ್ತಿಗೆ ತಪ್ಪುತ್ತಿಲ್ಲ.
ನಿಮ್ಮದೇ ಹಣ ಯಾರದೋ ಕೆಲಸ: ಇದು ಯಾರದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡೋದಲ್ಲ. ಬದಲಿಗೆ ನಮ್ಮಿಂದಲೇ ಹಣ ಪಡೆದು ತಪ್ಪುಗಳಿಂದಲೇ ತುಂಬಿದ ಪಡಿತರ ಚೀಟಿ ನೀಡುವ ಕಾಯಕ.
ತಾತ್ಕಾಲಿಕ ಪಡಿತರ ಚೀಟಿ ಪಡೆಯಲು ಮೊದಲು ನೀಡಿದ ಮೊತ್ತ ೫೦ ರೂ. ಅದಾದ ನಂತರ ಈಗ ಕಾಯಂ ಕಾರ್ಡ್ ವಿತರಣೆಗೆ ಪಡೆಯುತ್ತಿರುವ ಹಣ ೧೫ ರೂ. ಮೊದಲ ಕಾರ್ಡ್‌ನಲ್ಲೂ ಸಾಕಷ್ಟು ತಪ್ಪುಗಳಿದ್ದವು. ಅದು ಹೊಸ ಕಾರ್ಡ್‌ನಲ್ಲಿ ಸರಿಯಾಗಬಹುದು ಎಂದುಕೊಂಡರೆ ಮತ್ತದೇ ತಪ್ಪುಗಳ ಕಂತೆ
ಈಗಾಗಲೇ ೪೫ ರೂ. ಫೋಟೋಗೆ, ಕಾರ್ಡ್ ಪಡೆಯಲು ೧೫ ರೂ. ನೀಡಲಾಗಿದೆ. ಅವರು ಮಾಡಿದ ತಪ್ಪು ಮತ್ತೆ ಸರಿಪಡಿಸಲು ನಾವೇ ಮತ್ತೆ ಹಣ ತೆರಬೇಕು. ಕಾರ್ಡ್ ಕೊಟ್ಟವನನ್ನು ನಿಲ್ಲಿಸಿ ಕೇಳದೇ ಇದ್ದರೆ ಮುಂದೆಯೂ ಕಾಣಲಿದೆ ಇದೇ ತಪ್ಪು.
ವಿತರಣೆಯಾದ ಕಾರ್ಡ್‌ಗಳು
 ಜಿಲ್ಲೆಯಲ್ಲಿ ಮುದ್ರಣವಾಗಿದ್ದು ೫,೯೯,೯೭೫
 ವಿತರಣೆಯಾಗಿದ್ದು-೫,೧೭,೪೫೬.
ಕೊಮ್ಯಾಟ್‌ಗೆ ಸರಕಾರ ನೀಡಿದ ಗುತ್ತಿಗೆ
 ೧ ಕಾರ್ಡ್‌ಗೆ ೨೮ ರೂ.
 ಒಟ್ಟು- ೧.೨೩ ಕೋಟಿ ರೂ.
 (ಫೋಟೋ ತೆಗೆಯಲು ೨೩ ರೂ, ಮುದ್ರಣಕ್ಕೆ ೫ ರೂ)

ಹೃದಯದ ಆರೋಗ್ಯ ಕಾಪಾಡಿಕೊಂಡವರೇ ಗಟ್ಟಿ-ಗುಂಡಿಗೆಯವರು

ವಿಕ ಸುದ್ದಿಲೋಕ ಮೈಸೂರು
‘ಎದೆನೋವು’ ಎಂದಾಕ್ಷಣ ಎಲ್ಲವೂ ಹೃದಯ ಸಂಬಂಧಿ ಕಾಯಿಲೆ ಅಲ್ಲ. ತಕ್ಷಣವೇ ಇದು ‘ಹೃದಯಾಘಾತ’ ಇರಬಹುದೇ ಎಂದುಕೊಳ್ಳುವುದು ಸರಿಯಲ್ಲ.
ಇದು ಕೆ.ಆರ್.ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ.ಕೆ.ಎಸ್. ಸದಾನಂದ ಅವರ ಸಲಹೆ.
ವಿಜಯ ಕರ್ನಾಟಕ ಪತ್ರಿಕೆ ಕಚೇರಿಯಲ್ಲಿ ಶನಿವಾರ ನಡೆದ ‘ಯೋಗಕ್ಷೇಮ-ವಿಕ ಫೋನ್‌ಇನ್’ ಕಾರ್ಯಕ್ರಮದಲ್ಲಿ ದೂರವಾಣಿ ಕರೆ ಹೊತ್ತು ತಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಉತ್ತರಿಸಿದ ಅವರು, ಅದು ಮಾಂಸಖಂಡದ ನೋವಿರಬಹುದು, ಮೂಳೆ ನೋವು, ನಡೆದಾಗ, ಹತ್ತುವಾಗ, ಬಗ್ಗಿದಾಗ, ಆಮ್ಲತೆ (ಅಸಿಡಿಟಿ) ಯಿಂದಲೂ ನೋವು ಕಾಣಿಸಿಕೊಳ್ಳಬಹುದು. ಶ್ವಾಸಕೋಶ ಸಮಸ್ಯೆಗಳೂ ಎದೆನೋವಿಗೆ ಕಾರಣವಾಗಬಹುದು. ವೈದ್ಯಕೀಯ ಪರೀಕ್ಷೆಯಿಂದ ಮಾತ್ರ ನೋವಿನ ಮೂಲ ಪತ್ತೆ ಸಾಧ್ಯ ಎಂದರು.
ಹೃದಯಾಘಾತ ಕಾಣಿಸಿಕೊಳ್ಳುವ ಮುನ್ನ ಎದೆಯ ಮಧ್ಯೆ ಭಾಗದಲ್ಲಿ ಹಿಂಡಿದಂತೆ ನೋವು ಕಾಣಿಸಿಕೊಳ್ಳುತ್ತದೆ. ಆನೆ ಕಾಲಿಟ್ಟಂತೆ ಯಾತನೆಯಾಗುತ್ತದೆ. ದಮ್ಮು, ತಲೆಸುತ್ತ ಇತ್ಯಾದಿ ಮುನ್ಸೂಚನೆ ಕಾಣಿಸಿಕೊಳ್ಳುತ್ತದೆ. ನಡೆದಾಗ, ಮಲಗಿದಾಗ ದಮ್ಮು ಬರುವುದು, ತಲೆಸುತ್ತು, ಕಾಲು ಊದಿಕೊಳ್ಳುವುದು ಆಗುತ್ತದೆ. ಹಾಗಾಗಿ ‘ಎದೆನೋವು’ ಯಾವ ಕಾರಣಕ್ಕೆ ಬಂದಿರಬಹುದೆನ್ನುವು ದನ್ನು ದೃಢಪಡಿಸಿಕೊಂಡು, ವೈದ್ಯರ ಸಲಹೆ ಅನುಸಾರ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದರು.
ಎದೆನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಬೇಕು. ಹೃದಯ ಕಾಯಿಲೆಗಳ ಪತ್ತೆಗೆ ಇಸಿಜಿ,ಟ್ರೆಡ್‌ಮಿಲ್, ಎಕೋಕಾರ್ಡಿಯೋಗ್ರಫಿ, ಸ್ಕ್ಯಾನಿಂಗ್, ಎಕ್ಸರೇ ಮೊದಲಾದ ಪರೀಕ್ಷೆಗಳ ಮೂಲಕ ದೃಢಪಡಿಸಿಕೊಳ್ಳಬಹುದು. ಮಾಂಸಖಂಡ, ಮೂಳೆ ನೋವು ಇತ್ಯಾದಿಗಳು ಎದೆನೋವಿಗೆ ಕಾರಣವಾದರೆ ಭೀತಿ ಅನಗತ್ಯ ಎಂದು ತಿಳಿಸಿದರು.
ಬಹುತೇಕ ಕರೆಗಳಲ್ಲಿ ಎದೆನೋವಿನ ಬಗ್ಗೆ ಅತಂಕವ್ಯಕ್ತವಾಯಿತು. ಕುವೆಂಪುನಗರದ ವೇಣುಗೋಪಾಲ್, ಕುಶಾಲನಗರದ ವಿನೋದ್, ಚಳ್ಳಕೆರೆ ನಿರಂಜನಗೌq, ಚಾಮರಾಜನಗರದ ಮಹದೇವಸ್ವಾಮಿ,ಗುಂಡೂರಾವ್‌ನಗರ ಸನತ್‌ಕುಮಾರ್ ಮೊದಲಾದವರು ಇದೇ ಪ್ರಶ್ನೆ ಎತ್ತಿದರು. ರಕ್ತದೊತ್ತಡ, ತೀವ್ರವಾಗಿ ಎದೆಬಡಿತ, ಯುವಕರಲ್ಲೂ ಹೆಚ್ಚು ಹೃದಯಾಘಾತಕ್ಕೆ ಕಾರಣ ಇತ್ಯಾದಿ ಪ್ರಶ್ನೆಗಳು ಕೇಳಿಬಂದವು.
ತಿಮ್ಮೇಗೌಡ ಎಂಬುವವರ ಕರೆಗೆ ಉತ್ತರಿಸಿದ ಡಾ.ಸದಾನಂದ ಅವರು, ಮಧುಮೇಹ ಇರುವವರಿಗೆ ತೀವ್ರ ಸ್ವರೂಪದ ಹೃದಯಾಘಾತ ಹೆಚ್ಚು. ೩೦-೪೦ ವಯಸ್ಸಿನವರಲ್ಲೂ ಹೃದಯಾಘಾತ ಹೆಚ್ಚು, ಮಧುಮೇಹಿಗಳು ಮುಂಚಿತವಾಗಿ ಇಸಿಜಿ, ಟ್ರೆಡ್‌ಮಿಲ್ ಪರೀಕ್ಷೆ ಮಾಡಿಸಬೇಕು. ಬಿ.ಪಿ., ಸಕ್ಕರೆ ಅಂಶ ಪರೀಕ್ಷಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಬೈಪಾಸ್ ಸರ್ಜರಿ ಆದ ಬಳಿಕವೂ ನೋವು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆತಂಕ ತೋಡಿಕೊಂಡ ಮಂಡ್ಯದ ನಾಗರತ್ನ ಅವರಿಗೆ, ಟ್ರೆಡ್‌ಮಿಲ್ ಪರೀಕ್ಷೆ ಜತೆಗೆ ವೈದ್ಯರ ಸಲಹೆ ಪಡೆದು ನೋವು ನಿವಾರಕ ಔಷಧ ತೆಗೆದುಕೊಳ್ಳುವುದು ಸೂಕ್ತ ಎಂದರು.
ಕೆ.ಆರ್.ನಗರ ಶಾರದಾ ಅವರು ವೇಗವಾಗಿ ಹೃದಯ ಬಡಿದುಕೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ, ಹೃದಯ ವೇಗವಾಗಿ ಬಡಿದುಕೊಳ್ಳಲು ಉದ್ವೇಗ ಕಾರಣವಿರಬಹುದು. ಬಡಿತ ಹೆಚ್ಚಿದ ತಕ್ಷಣವೇ ಇಸಿಜಿ ಪರೀಕ್ಷೆ ಮಾಡಿಸಬೇಕು. ಇದು ಅಸಾಧ್ಯವಾದ್ದರಿಂದ ಹೋಲ್ಟರ್ ಅಳವಡಿಸಿ ೨೪ ಗಂಟೆಗಳು ನಿಗಾ ವಹಿಸಲಾಗುವುದು. ಸಾಮಾನ್ಯವಾಗಿ ಹೃದಯ ಬಡಿತ ನಿಮಿಷಕ್ಕೆ ೬೦-೧೦೦ ಬಾರಿ ಇರುತ್ತೆ. ೪೦-೫೦ ವರ್ಷದವರೆಗೆ ಮಹಿಳೆಯರಲ್ಲಿ ಹೃದಯಾಘಾತ ಪುರುಷರಿಗಿಂತ ಕಡಿಮೆ. ಅದಕ್ಕೆ ಈಸ್ಟ್ರೋಜನ್ ಕಾರಣ. ಆದರೆ ೫೦ ಬಳಿಕ ಮಹಿಳೆಯರಲ್ಲಿ ತೀವ್ರ ಸ್ವರೂಪದಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತದೆ ಎಂದರು.
ಲಿಂಗರಾಜು ಅವರ ದಿಢೀರ್ ಸಾವಿಗೆ ಕಾರಣವೇನು ಎನ್ನುವ ಆತಂಕಕ್ಕೆ ಪ್ರತಿಕ್ರಿಯಿಸಿ, ರಕ್ತನಾಳಗಳು ಕಟ್ಟಿಕೊಂಡು ಬಡಿತದಲ್ಲಿ ಏರುಪೇರಾಗಿ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಉಂಟಾಗುತ್ತದೆ. ಇದರಿಂದ ಶೇ.೨೦ ರಷ್ಟು ಮಂದಿ ನಿಂತಲ್ಲೆ, ಕುಳಿತಲ್ಲೆ, ಮಲಗಿದಲ್ಲೇ ಸಾವನ್ನಪ್ಪುತ್ತಾರೆ. ವೈದ್ಯರಿಂದ ಪರೀಕ್ಷಿಸಿ ನಾಳದ ಕವಾಟು ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಬೇಕು. ಹೃದ್ರೋಗ ಕಾಯಿಲೆಗಳಿಗೆ ಅಂಜಿಯೋಪ್ಲಾಸ್ಟಿ ಇತ್ಯಾದಿ ಹೊಸ ಶಸ್ತ್ರಚಿಕಿತ್ಸಾ ವಿಧಾನಗಳು ಬಂದಿವೆ ಎಂದು ತಿಳಿಸಿದರು.
ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ಜಾಸ್ತಿಯಾದಾಗ ನಾಳಗಳಲ್ಲಿ ಶೇಖರಗೊಂಡು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಬೆಣ್ಣೆ, ತುಪ್ಪ ಬಳಕೆಯಲ್ಲಿ ಮಿತಿ ಇರಬೇಕು, ಮನುಷ್ಯನ ತೂಕ, ಎತ್ತರಕ್ಕೆ ಅನುಗುಣವಾಗಿ ಶೇ.೩೦ ರಷ್ಟು ಕೊಬ್ಬು, ಶೇ.೨೦ ಪ್ರೋಟೀನ್, ಶೇ.೫೦ ರಷ್ಟು ಕಾರ್ಬೋಹೈಡ್ರೇಟ್ಸ್ ಅವಶ್ಯ ಎಂದು ಮಾಹಿತಿ ನೀಡಿದರು.
ಹೃದಯಾಘಾತ ಕಾರಣಗಳೇನು ? :
ಬದಲಾದ ಜೀವನ ಶೈಲಿ, ಧೂಮಪಾನ, ಬೊಜ್ಜು, ದೇಹ ದಂಡಿಸದಿರುವುದು (ವ್ಯಾಯಾಮ ಮಾಡದಿರುವುದು), ಸಕ್ಕರೆ ಕಾಯಿಲೆ, ಕೊಲೆಸ್ಟರಾಲ್, ರಕ್ತದೊತ್ತಡ (ಬಿಪಿ) ಇತ್ಯಾದಿ ಹೃದಯಾಘಾತಕ್ಕೆ ಪ್ರಮುಖ ಕಾರಣಗಳು. ಜತೆಗೆ ಅನುವಂಶಿಕವಾಗಿಯೂ ಬರುವ ಸಾಧ್ಯತೆಯಿದೆ. ಯುವಕರಲ್ಲಿ ಕೇವಲ ೩೦-೩೫ ವರ್ಷದವರಲ್ಲಿ ಹೃದಯಾಘಾತ ಹೆಚ್ಚಾಗಿರಲು ಮುಖ್ಯ ಕಾರಣ ಧೂಮಪಾನ.
ಹೃದಯಾಘಾತ ತಡೆ ನಿಮ್ಮ ಕೈಲಿದೆ
ಕನಿಷ್ಠ ವರ್ಷಕ್ಕೊಮ್ಮೆಯಾದರೂ ವೈದ್ಯರಲ್ಲಿ ನಿಯಮಿತವಾಗಿ ತಪಾಸಿಸಿಕೊಳ್ಳಿ. ಬಿಪಿ, ಮಧುಮೇಹ, ಕೊಲೆಸ್ಟರಾಲ್ ನಿಯಂತ್ರಣದಲ್ಲಿಟ್ಟುಕೊಂಡು ಆಗಾಗ್ಗೆ ಪರೀಕ್ಷಿಸಿಕೊಳ್ಳಬೇಕು. ನಿಯಮಿತವಾಗಿ ವಾಕಿಂಗ್, ಕನಿಷ್ಠ ೩೦ ನಿಮಿಷಗಳ ವ್ಯಾಯಾಮ, ಸದಾ ಚಟುವಟಿಕೆಯಿಂದಿರುವುದು, ವಾಹನ ಬಳಕೆಗಿಂತ ನಡೆಯುವುದು, ಲಿಫ್ಟ್‌ಗಿಂತ ಮೆಟ್ಟಿಲು ಹತ್ತುವುದು, ಅಹಾರದಲ್ಲಿ ಪಥ್ಯ, ಎಣ್ಣೆಜಿಡ್ಡು ಮತ್ತು ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳು, ಮಾಂಸಾಹಾರಕ್ಕಿಂತ ಸಸ್ಯಾಹಾರ ಒಳ್ಳೆಯದು. ಹಣ್ಣು, ತರಕಾರಿ, ಕಾಳುಗಳು, ಒಣಹಣ್ಣುಗಳ ಸೇವನೆ ಉತ್ತಮ.
ನೀವು ಮಾಡಬೇಕಾದ್ದೇನು ?
ನಿಮಗೋ ಅಥವಾ ನಿಮ್ಮ ಮನೆಯವರಿಗೋ ಹೃದಯಾಘಾತವಾದ ಕೂಡಲೇ ಕ್ಷಣವನ್ನು ವ್ಯರ್ಥಗೊಳಿಸದೆ ಹತ್ತಿರದ ಆಸ್ಪತ್ರೆಗೆ ದೌಡಾ ಯಿಸಿ. ಎಷ್ಟು ಬೇಗನೆ ಚಿಕಿತ್ಸೆ ದೊರೆಯುವುದೋ ಅಷ್ಟೂ ಅಪಾಯ ಕಡಿಮೆ. ಹೃದಯಕ್ಕಾಗುವ ಹಾನಿಯನ್ನು ಆದಷ್ಟು ತಡೆಗಟ್ಟ ಬಹುದು. ಈ ಸಮಯವನ್ನು ‘ಗೋಲ್ಡನ್ ಹವರ್‘ ಎನ್ನುತ್ತಾರೆ.
‘ಕಾರ್ಡಿಯಾಕ್ ಆಂಬ್ಯುಲೆನ್ಸ್’ಗೆ ಕರೆ ಮಾಡಿ. ಆಸ್ಪತ್ರೆ ಮುಟ್ಟುವ ಮುನ್ನ ಅಂಬ್ಯುಲೆನ್ಸ್‌ನಲ್ಲೇ ಒಂದಷ್ಟು ಚಿಕಿತ್ಸೆ ಸಾಧ್ಯವಾಗುವುದರಿಂದ ರೋಗಿ ಸುರಕ್ಷತೆ ದುಪ್ಪಟ್ಟು ಸಾಧ್ಯವಿದೆ. ಮಿಷನ್ ಆಸ್ಪತ್ರೆ, ವಿಕ್ರಂ ಆಸ್ಪತ್ರೆ, ಗೋಪಾಲಗೌಡ ಶಾಂತವೇರಿ ಆಸ್ಪತ್ರೆ ಸೇರಿದಂತೆ ಕೆಲವೆಡೆ ‘ಕಾರ್ಡಿಯಾಕ್ ಆಂಬ್ಯುಲೆನ್ಸ್’ ಹೊಂದಿವೆ. ಒಂದೂವರೆ ಗಂಟೆಯಲ್ಲಿ ಆಂಜಿಯೋಪ್ಲಾಸ್ಟಿ, ಇಸಿಜಿ ಮಾಡಿದರೆ ಹೃದಯಾಘಾತದಿಂದ ಬಚಾವ್ ಮಾಡಬಹುದು.
ಎಲ್ಲರೂ ಮದುವೆ, ಮುಂಜಿ, ಶಿಕ್ಷಣ ಇತ್ಯಾದಿಗಳಿಗೆ ಮುಂದಾಲೋಚನೆಯೊಂದಿಗೆ ಪಕ್ಕಾ ಪ್ಲಾನ್ ಮಾಡಿರುತ್ತಾರೆ. ಆದರೆ ಕಾಯವನ್ನು ಕಾಡುವ ಕಾಯಿಲೆಗಳಿಗೆ ಯಾರಲ್ಲೂ ಪ್ಲಾನ್ ಎಂಬುದಿಲ್ಲ. ಅಪಾಯ ಎದುರಾದಾಗಲೇ ಎಚ್ಚೆತ್ತುಕೊಳ್ಳುವುದು. ಅದರಲ್ಲೂ ಹೃದಯಾಘಾತ ನಿರ್ಲಕ್ಷಿಸಬಾರದು. ಅದಕ್ಕಾಗಿ ನೀವು ಮಾಡಬೇಕಾದಿಷ್ಟೇ - ವೈದ್ಯರು, ಆಸ್ಪತ್ರೆ, ಆಂಬ್ಯುಲೆನ್ಸ್ ದೂರವಾಣಿ ಸಂಖ್ಯೆ ಹೊಂದಿರುವುದು, ಆರೋಗ್ಯ ವಿಮೆ ಮಾಡಿಸುವುದು, ಎಲ್ಲಕ್ಕಿಂತ ಹೆಚ್ಚಾಗಿ ಹಣ ಹೊಂದಿಸಿಟ್ಟುಕೊಳ್ಳುವುದು ಅಗತ್ಯ. ಪ್ರಸ್ತುತ ಹೃದಯ ಚಿಕಿತ್ಸೆ ಅತ್ಯಂತ ದುಬಾರಿ. ಹೃದಯ ಶಸ್ತ್ರಚಿಕಿತ್ಸೆಗೆ ಕನಿಷ್ಠ ೧-೧.೫ ಲಕ್ಷ ರೂ. ವೆಚ್ಚ ತಗಲುತ್ತದೆ. ಹಾಗಾಗಿ ದುಡ್ಡು ಹೊಂದಿಸಿಟ್ಟುಕೊಳ್ಳುವುದು ಒಳಿತು.
ಇವರು ನಿಮ್ಮ ವೈದ್ಯರು
ಸಣ್ಣ ವಯಸ್ಸಿನಲ್ಲೇ ದೊಡ್ಡ ಹುದ್ದೆಗೆ ಏರಿದ್ದಾರೆ ಡಾ.ಕೆ.ಎಸ್. ಸದಾನಂದ್. ಮೈಸೂರು ಮೂಲದ ಸದಾನಂದ್ ಎಂಬಿಬಿಎಸ್ ಬಳಿಕ ಎಂಡಿಯನ್ನು ಮೈಸೂರು ವೈದ್ಯಕೀಯ ಕಾಲೇಜಿನಲ್ಲೇ ಪೂರೈಸಿದರು. ಬಳಿಕ ಜಯದೇವ ಹೃದ್ಯೋಗ ಸಂಸ್ಥೆಯಿಂದ ಡಿಎಂ ಪದವಿಯನ್ನು ಪಡೆದು ಈಗ ಕೆ.ಆರ್. ಆಸ್ಪತ್ರೆಯ ಹೃದ್ರೋಗ (ಕಾರ್ಡಿಯಾಲಜಿ) ವಿಭಾಗದ ಮುಖ್ಯಸ್ಥರು. ಹೃದಯಕ್ಕೆ ಸಂಬಂಧಿಸಿ ವೈದ್ಯಕೀಯ ಪರಿಭಾಷೆ ಯಲ್ಲಿ ಖಚಿತವಾಗಿ ಮಾತನಾಡುವ ಸಾಮರ್ಥ್ಯ ಸದಾನಂದ್ ಅವರಿಗಿದೆ. ಅವರ ಮೊಬೈಲ್ ನಂಬರ್- ೯೪೪೮೭ ೪೧೧೧೭.
ಇದು ಸಲಹೆ ಮಾತ್ರ. ಅನುಷ್ಠಾನಕ್ಕೆ ಮುನ್ನ ವೈದ್ಯರನ್ನು ಸಂಪರ್ಕಿಸಿ
ನಿರ್ವಹಣೆ: ಜೆ. ಶಿವಣ್ಣ,

ಕಾಲೇಜು ಅಂಗಳದಲ್ಲಿ ಚುನಾವಣೆಯ ಸದ್ದು !


ವಿಕ ಸುದ್ದಿಲೋಕ ಮೈಸೂರು
ಡಾ. ಎನ್. ಆರ್. ಶೆಟ್ಟಿ ಅವರ ಸಮಿತಿಯ ಶಿಫಾರಸುಗಳನ್ನು ಸರಕಾರ ಒಪ್ಪಿದ್ದೇ ಆದರೆ, ಮುಂಬರುವ ದಿನಗಳಲ್ಲಿ ಎಲ್ಲ ಕಾಲೇಜು ವಿದ್ಯಾರ್ಥಿಗಳು ಮತದಾನಕ್ಕೆ ಸಿದ್ಧವಾಗಬೇಕಾಗುತ್ತದೆ.
ಏಕೆಂದರೆ- ಶೆಟ್ಟಿ ಸಮಿತಿ ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ಸೆನೆಟ್ ಮರುಸ್ಥಾಪಿಸಬೇಕು ಎಂದಿದೆಯಲ್ಲದೆ, ಅಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಇರಬೇಕು ಎಂದು ಹೇಳಿದೆ. ವಿದ್ಯಾರ್ಥಿ ಸಂಘಗಳ ಚುನಾವಣೆ ಮೂಲಕ ಕಾಲೇಜು ಕ್ಯಾಂಪಸ್‌ನೊಳಗೆ ರಾಜಕೀಯ ಶಕ್ತಿಗಳು ನುಗ್ಗಲು ಸೆನೆಟ್ ಒಂದು ಹೆಬ್ಬಾಗಿಲು. ವಿದ್ಯಾರ್ಥಿಗಳ ಮಧ್ಯೆ ಕೆಟ್ಟ ರಾಜಕೀಯ ಹರಡಲು ಸೆನೆಟ್ ಮೂಲ ಎಂಬ ಕಾರಣದಿಂದ ಎಸ್. ಎಂ. ಕೃಷ್ಣ ಸರಕಾರದ ಅವಧಿಯಲ್ಲಿ ಸೆನೆಟ್‌ನಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ರದ್ದಾಯಿತು. ಇದಾದ ಬಳಿಕ ಹಲವು ವಿದ್ಯಾರ್ಥಿ ಸಂಘಟನೆಗಳು ಸೆನೆಟ್‌ನಲ್ಲಿ ಪ್ರಾತಿನಿಧ್ಯ, ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಬೇಕೆಂದು ಆಗ್ರಹಿಸುತ್ತಲೇ ಇವೆ. ಈ ಎಲ್ಲದರ ಮಧ್ಯೆಯೇ ಸರಕಾರ - ಕರ್ನಾಟಕ ವಿಶ್ವವಿದ್ಯಾನಿಲಯಗಳ ಕಾಯ್ದೆ ೨೦೦೦ಕ್ಕೆ ಕೆಲವು ತಿದ್ದುಪಡಿ ತರಲು ಚಿಂತನೆ ನಡೆದಿದೆ. ಇದಕ್ಕಾಗಿ ಎನ್. ಆರ್. ಶೆಟ್ಟಿ ನೇತೃತ್ವದಲ್ಲಿ ಪರಿಣತರ ಸಮಿತಿಯನ್ನು ರಚಿಸಿತ್ತು. ಸಮಿತಿ ಎರಡು ದಿನಗಳ ಹಿಂದೆಯಷ್ಟೆ ಕಾಯ್ದೆಯಲ್ಲಿ ಬದಲಾಗಬೇಕಿರುವ ಕೆಲವು ಸಂಗತಿಗಳ ಕುರಿತು ಸರಕಾರಕ್ಕೆ ಶಿಫಾರಸು ಮಾಡಿದೆ.
ವಿಶ್ವವಿದ್ಯಾನಿಲಯಗಳ ನೀತಿ ರೂಪಕ ಸಂಸ್ಥೆಗಳಲ್ಲಿ ಕುಲಪತಿ, ಕುಲಸಚಿವರು, ಡೀನ್‌ಗಳು, ಪೋಷಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಶೈಕ್ಷಣಿಕ ಪರಿವಾರದ ಎಲ್ಲ ಸದಸ್ಯರು ಇರಬೇಕು ಎಂಬುದು ಕೆಲವರ ಆಶಯ. ಪಠ್ಯ, ಪಠ್ಯೇತರ, ಸಾಂಸ್ಕೃತಿಕ, ಕ್ರೀಡೆ, ಹಾಸ್ಟೆಲ್ ಸೇರಿದಂತೆ ವಿದ್ಯಾರ್ಥಿ ತನಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಆಡಳಿತದ ಗಮನಸೆಳೆಯಲು ವಿದ್ಯಾರ್ಥಿಗಳು ಇರಬೇಕು ಎಂಬ ಕಾರಣ ನೀಡುತ್ತಾರೆ.
ಆದರೆ, ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ಮಂಡಿಸುವವರು ಇದ್ದಾರೆ. ವಿವಿ ಆವರಣದೊಳಗೆ, ಕಾಲೇಜು ಕ್ಯಾಂಪಸ್‌ನೊಳಗೆ ರಾಜಕೀಯ ಪ್ರವೇಶಿಸಿದರೆ, ಅಲ್ಲಿನ ಶೈಕ್ಷಣಿಕ ವಾತಾವರಣವೇ ಕಲುಷಿತವಾಗುತ್ತದೆ. ರಾಜಕೀಯದ ಹೆಸರಿನಲ್ಲಿ ದುಷ್ಟಶಕ್ತಿಗಳು ಆವರಣದೊಳಗೆ ಪ್ರವೇಶಿಸಿ, ಹಿಂಸಾತ್ಮಕ ಪ್ರತಿಭಟನೆಗೆ ನಾಂದಿಯಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂಬುದು ಸೆನೆಟ್‌ನಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯ ವಿರೋಧಿಸುವವರ ವಾದ. ಈಗ ಶೆಟ್ಟಿ ಸಮಿತಿ ಮತ್ತೊಮ್ಮೆ ವಿದ್ಯಾರ್ಥಿಗಳ ಪ್ರಾತಿನಿಧ್ಯದ ಅಗತ್ಯದ ಬಗ್ಗೆ ಹೇಳಿದೆ. ಹಾಗಾಗಿ ಈ ವಿಷಯ ಕುರಿತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ವಿಜಯ ಕರ್ನಾಟಕಕ್ಕೆ ನೀಡಿರುವ ಪ್ರತಿಕ್ರಿಯೆ.
ರಾಜಕೀಯದ ಬಗ್ಗೆ ತಾತ್ಸಾರ; ಮತದಾನ ವ್ಯವಸ್ಥೆಯಲ್ಲಿನ ಲೋಪ-ದೋಷಗಳು ಸೇರಿದಂತೆ ಬಹಳಷ್ಟು ಸಂಗತಿಗಳ ಕಾರಣದಿಂದ, ನಮ್ಮದು ಇನ್ನೂ ಪರಿಪಕ್ವ ಆಗುತ್ತಿರುವ ಪ್ರಜಾಪ್ರಭುತ್ವ ದೇಶ ಎಂಬುದು ಕೆಲವರ ಗೊಣಗಾಟ. ಇದರಲ್ಲಿ ಸತ್ಯವಿರಬಹುದು. ಆದರೆ, ಈ ಸವಾಲನ್ನು ಎದುರಿಸಲು, ಗೊಣಗಾಡುವವರು ಎತ್ತಿದ ಅಭಿಪ್ರಾಯದಲ್ಲಿಯೇ ಉತ್ತರವಿದೆ. ರಾಜಕೀಯ ಒಳ್ಳೆಯವರಿಗಲ್ಲ , ವಿದ್ಯಾರ್ಥಿಗಳಿಗಲ್ಲ, ಅವರಿಗಲ್ಲ-ಇವರಿಗಲ್ಲ, ಅದು ಕಳ್ಳ-ಕಾಕರಿಗೆ ಎಂದು ಹೇಳುತ್ತಾ, ಎಷ್ಟು ವರ್ಷ ಕಾಲ ಕಳೆಯುವುದು. ರಾಜಕೀಯ ಕ್ಷೇತ್ರವನ್ನು ಸುಧಾರಣೆ ಮಾಡಬೇಕೆಂದರೆ, ಎಲ್ಲರೂ ಇಲ್ಲಿಗೆ ಬರಬೇಕು. ಅಂತೆಯೇ, ಕಾಲೇಜು ವಿದ್ಯಾರ್ಥಿಗಳು ಕೂಡ. ಅದಕ್ಕಾಗಿ ಅವರಿಗೆ ಒಂದು ತರಬೇತಿ ಸಿಗಬೇಕು. ಇದು ಸಾಧ್ಯವಾಗುವುದು ಸೆನೆಟ್ ಮತ್ತು ಸಿಂಡಿಕೇಟ್‌ನಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯ ಇದ್ದಾಗ ಮಾತ್ರ. ಹಾಗಾಗಿ- ಸಮಿತಿಯ ಶಿಫಾರಸು ಸ್ವಾಗತಾರ್ಹ. ಹಾಗೆ ನೋಡಿದರೆ, ಕೇಂದ್ರ ಸರಕಾರ ನೇಮಿಸಿದ ಲಿಂಗ್ಡೋ ಸಮಿತಿ ಕೂಡ ಇದೇ ರೀತಿ ಶಿಫಾರಸ್ ಮಾಡಿದೆ. ಕಾಲೇಜಿನಲ್ಲಿ ನಡೆಯುವ ಚುನಾವಣೆಗಳಿಂದ ಗಲಾಟೆ ನಡೆಯುತ್ತಿದೆ ಎಂದರೆ, ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆ ಹೊರತು, ಚುನಾವಣೆಯನ್ನು ರದ್ದು ಪಡಿಸುವುದು ಸರಿಯಲ್ಲ. ನೆಗಡಿ ಎಂದು ಯಾರೂ ಮೂಗನ್ನು ಕೊಯ್ದುಕೊಳ್ಳುವುದಿಲ್ಲ. ರಾಜಕೀಯ ಪಕ್ಷಗಳು ಕ್ಯಾಂಪಸ್‌ಗೆ ನುಸುಳದಂತೆ ಕ್ರಮ ಕೈಗೊಳ್ಳಲಿ. ರಾಜಕೀಯ ತರಬೇತಿಗಾಗಿ ಇದು ಅತ್ಯಗತ್ಯ.
- ನವೀನ್, ಮೈಸೂರು ವಿಭಾಗ ಸಂಘಟನೆ ಕಾರ್ಯದರ್ಶಿ, ಎಬಿವಿಪಿ


ವಿದ್ಯಾರ್ಥಿ ಪ್ರಾತಿನಿಧ್ಯವುಳ್ಳ ಸೆನೆಟ್-ಸಿಂಡಿಕೇಟ್ ರದ್ದು ಪಡಿಸಿದ ದಿನದಿಂದಲೇ ನಮ್ಮ ಸಂಘಟನೆ, ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಿ ಎಂದು ಆಗ್ರಹಿಸುತ್ತಲೇ ಬಂದಿದೆ. ಹಾಗಾಗಿ- ನಾವು ಶೆಟ್ಟಿ ಸಮಿತಿಯ ಬಹಳಷ್ಟು ಶಿಫಾರಸುಗಳ ಬಗ್ಗೆ ತಕರಾರು ಇಟ್ಟುಕೊಂಡೇ, ವಿದ್ಯಾರ್ಥಿ ಪ್ರಾತಿನಿಧ್ಯ ಕುರಿತು ಸಲಹೆಯನ್ನು ಬೆಂಬಲಿಸುತ್ತೇವೆ.
ನಮ್ಮ ವಿವಿಗಳ ಈಗಿನ ಆಡಳಿತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ದನಿಗಳೇ ಇಲ್ಲವಾಗಿದೆ. ನೀತಿ-ನಿರೂಪಣೆ ಮಾಡುವಂಥ ವಿವಿಯ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೇ ಇದ್ದರೆ, ಅವರ ಸಮಸ್ಯೆ ಸುಲಭವಾಗಿ ಅಧಿಕಾರಿಗಳ ಕಿವಿಗೆ ತಲುಪುತ್ತದೆ. ವಿದ್ಯಾರ್ಥಿ ಸಂಘಟನೆಗಳು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಬಹುದಷ್ಟೆ. ಆದರೆ, ಆಡಳಿತ ಅಧಿಕೃತ ಪಾಲ್ಗೊಳ್ಳುವಿಕೆಗೆ ಸೆನೆಟ್ ಬೇಕೆ-ಬೇಕು.
ಚುನಾವಣೆ ವ್ಯವಸ್ಥೆಯಿಂದ ಸೆನೆಟ್‌ನಲ್ಲಿ ರಾಜಕೀಯ ನುಸುಳಿ ಬಿಡುತ್ತದೆ ಎಂಬುದೇನೋ ಸರಿ. ಆದರೆ ಚುನಾವಣೆ ಇರದಿದ್ದರೂ, ವಿದ್ಯಾರ್ಥಿ ಪ್ರತಿನಿಧಿಗಳ ನೇಮಕದ ಮೂಲಕ ರಾಜಕೀಯ ನುಸುಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರದಲ್ಲಿದ್ದ ಪಕ್ಷ, ತನ್ನ ರಾಜಕೀಯ ಕಾರ್ಯಕರ್ತರನ್ನೇ ನೇಮಿಸುತ್ತದೆ. ಇಂಥ ಪ್ರತಿನಿಧಿಗಳು ವಿದ್ಯಾರ್ಥಿ ಸಮಸ್ಯೆ ಎತ್ತಿಹಿಡಿಯುವ ಬದಲು, ಅವರ ರಾಜಕೀಯ ಅಜೆಂಡಾಗಳ ಜಾರಿಗೆ ಸಹಕರಿಸುತ್ತಾರೆ. ಇದಕ್ಕಿಂತ ಸೆನೆಟ್‌ಗೆ ಚುನಾವಣೆಯೇ ವಾಸಿ. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಬುದ್ಧತೆ ಅರಳಲು ಕೂಡ ಇದು ಸಹಕಾರಿ.
- ರವಿ, ರಾಜ್ಯ ಉಪಾಧ್ಯಕ್ಷರು, ಎಐಡಿಎಸ್‌ಒ


ಸಾರ್ವಜನಿಕ ಹಾಗೂ ಶೈಕ್ಷಣಿಕ ಬದುಕಿನ ಎಲ್ಲ ವಲಯದಲ್ಲೂ ವಿದ್ಯಾರ್ಥಿಗಳ ಪ್ರಾತಿನಿಧ್ಯ ಇರಬೇಕು ಹಾಗೂ ಅವರ ಪ್ರಜಾತಾಂತ್ರಿಕ ಹಕ್ಕನ್ನು ಕಾಪಾಡಬೇಕು ಎಂಬುದು ನಮ್ಮ ಸಿದ್ಧಾಂತ. ಹಾಗಾಗಿ- ಸಹಜವಾಗಿಯೇ ಶೆಟ್ಟಿ ಸಮಿತಿ ಶಿಫಾರಸ್ ನಮ್ಮ ಅಭಿಪ್ರಾಯವೇ ಆಗಿದೆ. ಕೇರಳ ಹೈ ಕೋರ್ಟ್ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನೇ ರದ್ದು ಪಡಿಸಿದ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ ಇದರ ಸಾಧಕ-ಬಾಧಕ ಅಧ್ಯಯನ ನಡೆಸಲು ಲಿಂಗ್ಡೋ ಸಮಿತಿ ರಚಿಸಿತ್ತು. ಆ ಸಮಿತಿ ಕೂಡ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗೆ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಅಗತ್ಯ ಎಂದು ಹೇಳಿದೆ. ಇದನ್ನು ಗಮನಿಸಬೇಕು. ಕೆಲವರು ವಿದ್ಯಾರ್ಥಿಗಳಿಗೇಕೆ ರಾಜಕೀಯ ಎನ್ನುತ್ತಾರೆ. ಆದರೆ, ರಾಜಕೀಯ ಇಲ್ಲದ ಕ್ಷೇತ್ರ ಯಾವುದಿದೆ ಹೇಳಿ ?, ಬದುಕಿನ ಎಲ್ಲವನ್ನೂ ನಿರ್ಧರಿಸುವುದು ರಾಜಕೀಯ. ಇಂಥ ಮಹತ್ವ ಪಡೆದಿರುವ ವಲಯ ವಿದ್ಯಾರ್ಥಿಗಳಿಗೆ ಏಕೆ ಬೇಡ. ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗಲಾಟೆ ಆಗುತ್ತೆ, ಜಾತಿ ನಡೆಯುತ್ತೇ ಅನ್ನೋ ಕಾರಣಕ್ಕೆ, ಇಡೀ ಪದ್ಧತಿಯನ್ನು ರದ್ದು ಪಡಿಸುವುದು ಸರಿಯಲ್ಲ. ಸಾರ್ವತ್ರಿಕ ಚುನಾವಣೆಯಲ್ಲೂ ಗಲಾಟೆ ಆಗುತ್ತದೆ ಎಂದು, ಅದನ್ನೇ ರದ್ದು ಪಡಿಸಲು ಆಗದು.
- ನವೀನ್‌ಕುಮಾರ್, ಅಧ್ಯಕ್ಷರು, ಎಸ್‌ಎಫ್‌ಐ

ನಗರ ಬಸ್ ನಿಲ್ದಾಣವೇ ಎತ್ತಂಗಡಿ !


ವಿಕ ಸುದ್ದಿಲೋಕ ಮೈಸೂರು
‘ಕೋಟ್ಯಂತರ ರೂ. ವೆಚ್ಚದಲ್ಲಿ ಇದೀಗ ತಾನೇ ನಿರ್ಮಾಣಗೊಂಡಿರುವ ನಗರ ಬಸ್ ನಿಲ್ದಾಣ ಸದ್ಯವೇ ಜಟಕಾ, ಸೈಕಲ್ ಸ್ಟ್ಯಾಂಡ್ ಅಗಲಿದೆ!’.
ಆಶ್ಚರ್ಯವಾದರೂ ಇದು ಸತ್ಯ. ನರ್ಮ್ ಯೋಜನೆಯಡಿ ಒಟ್ಟು ೧೪.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು, ಉದ್ಘಾಟನೆಗಾಗಿ ಮೇಯರ್ ಹಾಗೂ ಸರಕಾರದ ಮಧ್ಯೆ ಬಹಿರಂಗ ಕದನಕ್ಕೆ ಕಾರಣವಾಗಿದ್ದ ನಗರ ಬಸ್ ನಿಲ್ದಾಣ ಸದ್ಯವೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.
ನಗರದ ಹೃದಯ ಭಾಗಕ್ಕೆ ಹೊಂದಿಕೊಂಡ ಕೆ.ಆರ್.ವೃತ್ತದಲ್ಲಿರುವ, ನಗರ ಬಸ್ ನಿಲ್ದಾಣದಿಂದ ಅರಮನೆ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಅಗುತ್ತಿರುವುದರಿಂದ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಮುಡಾದಲ್ಲಿ ಬುಧವಾರ ನಡೆದ ಸಂಚಾರಿ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಇನ್ನೊಂದು ವರ್ಷದಲ್ಲಿ ನೂತನ ನಗರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರಿಗೆ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್, ಕಟ್ಟು ನಿಟ್ಟಿನ ಆದೇಶ ನೀಡಿದರು.
ನರ್ಮ್‌ನಡಿ ೧೦.೪ ಕೋಟಿ ರೂ. ವೆಚ್ಚದಲ್ಲಿ ಈಗ ತಾನೇ ಬಸ್ ನಿಲ್ದಾಣ ನಿರ್ಮಿಸಿ, ಹೆಚ್ಚುವರಿಯಾಗಿ ೪ ಕೋಟಿ ರೂ. ಖರ್ಚು ಮಾಡಲಾಗಿದೆ. ಈಗ ಏಕಾಏಕಿ ಸ್ಥಳಾಂತರ ಮಾಡುವುದರಿಂದ ತೊಂದರೆ ಅಗಲಿದೆ ಎಂದು ಶ್ರೀನಿವಾಸ್ ಸಮಂಜಾಯಿಷಿ ನೀಡಿದರು.
ಆದರೆ ಇದಕ್ಕೆ ಒಪ್ಪದ ಮಣಿವಣ್ಣನ್, ಅರಮನೆ ಸುತ್ತ ಪಾರಂಪರಿಕತೆ ಉಳಿಸಲು ನಗರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಬೇಕು. ಅರಮನೆ ಸುತ್ತ ಸೈಕಲ್ ಹಾಗೂ ಜಟಕಾ ಬಂಡಿಗಳಿಗೆ ಅವಕಾಶ ಕಲ್ಪಿಸಲಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗುವುದು. ಅದಕ್ಕಾಗಿ ಕೆ.ಆರ್.ವೃತ್ತದ ಬಳಿಯ ನಗರ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಬೇಕು. ಗ್ರಾಮಾಂತರ ಬಸ್ ನಿಲ್ದಾಣವನ್ನು ನಗರದ ನಾಲ್ಕು ಕಡೆ ಉಪ ಬಸ್ ನಿಲ್ದಾಣಕ್ಕೆ ವರ್ಗಾಯಿಸಬೇಕೆಂದರು.
ಇನ್ನೊಂದು ವರ್ಷದಲ್ಲಿ ಪೂರ್ಣವಾಗಿ ಬಸ್ ನಿಲ್ದಾಣ ಸ್ಥಳಾಂತರಿಸಬೇಕು. ಈ ಕುರಿತು ನಗರ ಸಾರಿಗೆಯವರಿಗೆ ನೋಟಿಸ್ ಜಾರಿ ಮಾಡಬೇಕು. ಒಂದೊಮ್ಮೆ ಅವಧಿಯೊಳಗೆ ಬಸ್ ನಿಲ್ದಾಣ ಸ್ಥಳಾಂತರಿಸದಿದ್ದರೆ ಬಸ್‌ಗಳನ್ನು ವಶಪಡಿಸಿಕೊಳ್ಳಲು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಅವರಿಗೆ ಮಣಿವಣ್ಣನ್ ತಿಳಿಸಿದರು.
ಬಹುಮಹಡಿ ಪಾರ್ಕಿಂಗ್
ಪಾರಂಪರಿಕತೆಗೆ ಧಕ್ಕೆ ಅಗುತ್ತದೆ ಎಂದು ನೂತನ ಬಸ್ ನಿಲ್ದಾಣ ಸ್ಥಳಾಂತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಮಣಿವಣ್ಣನ್, ಅರಮನೆಯ ದಕ್ಷಿಣ ದ್ವಾರದಲ್ಲಿ ಬಳಿ ಎರಡು-ಮೂರು ಅಂತಸ್ತಿನ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಸಮ್ಮತಿಸಿದರು.
ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ಆದ್ದರಿಂದ ಅರಮನೆ ದಕ್ಷಿಣ ದ್ವಾರ ಸೇರಿದಂತೆ ನಂಜರಾಜಬಹದ್ದೂರ್ ಛತ್ರ, ದೇವರಾಜ ಸಂಚಾರಿ ಪೊಲೀಸ್ ಠಾಣೆ, ಗ್ರಾಮಾಂತರ ಬಸ್ ನಿಲ್ದಾಣದ ಎದುರು ಸೇರಿದಂತೆ ವಿವಿಧೆಡೆ ಬಹುಮಹಡಿ ಪಾರ್ಕಿಂಗ್ ಅವಶ್ಯವಿದೆ ಎಂದು ಸಂಚಾರಿ ವಿಭಾಗದ ಎಸಿಪಿ ಶಂಕರೇಗೌಡ ಸಭೆಯಲ್ಲಿ ಪ್ರಸ್ತಾವನೆ ಇಟ್ಟರು.
ಇದಕ್ಕೆ ಸಮ್ಮತಿಸಿದ ಮಣಿವಣ್ಣನ್, ನಂಜರಾಜ ಬಹದ್ದೂರ್ ಛತ್ರದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಬೇಕು. ಅರಮನೆ ಬಳಿ ತಕ್ಷಣ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ರೂಪುರೇಷೆ ತಯಾರಿಸಬೇಕು. ನಿರ್ಮಾಣದ ಹೊಣೆಯನ್ನು ಪಾಲಿಕೆ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.
ರಾರಾಜಿಸಲಿವೆ ಗೋಡೆ ಚಿತ್ರಕಲೆ
ಪಾರಂಪರಿಕ ಕಟ್ಟಡಗಳ ಬಳಿ ಇರುವ ಕಟ್ಟಡಗಳ ಗೋಡೆಗಳ ಮೇಲೆ ಚಿತ್ರಕಲೆ ರಾರಾಜಿಸಲಿವೆ. ಪಾರಂಪರಿಕ ಕಟ್ಟಡಗಳ ಬಳಿ ಇರುವ ಕಟ್ಟಡಗಳಲ್ಲಿ ಖಾಲಿ ಗೋಡೆ ಇದ್ದು, ಸೌಂದರ್ಯಕ್ಕೆ ಧಕ್ಕೆ ಅಗಲಿದೆ. ಆದ್ದರಿಂದ ಇಂಥ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಚಿಂತನೆ ಇದೆ. ಈ ಕುರಿತು ಕಾವಾ ಡೀನ್ ದೇಶಪಾಂಡೆ ಅವರೊಂದಿಗೆ ಚರ್ಚಿಸಿದ್ದು, ಫೆ.೧೬ರಂದು ಸಭೆ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ತಿಳಿಸಿದರು.
ಗೋಡೆ ಬರಹ, ಪೋಸ್ಟರ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೩೫ ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಅಂದಗೆಡಿಸುವವರ ವಿರುದ್ಧ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ನಗರದ ಎಲ್ಲೆಡೆ ಅನಧಿಕೃತ ಜಾಹೀರಾತು ಫಲಕವನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.

ದಟ್ಟಗಳ್ಳಿಯಲ್ಲಿ ಒಂಟಿ ಮನೆ ದರೋಡೆ


ಪ್ರತ್ಯೇಕ ಪ್ರಕರಣ: ಎರಡು ಮನೆ ಕಳವು
ವಿಕ ಸುದ್ದಿಲೋಕ ಮೈಸೂರು ನಗರದ ಹೊರವಲಯದಲ್ಲಿರುವ ಬಡಾವಣೆಯ ಒಂಟಿ ಮನೆಯೊಂದಕ್ಕೆ ನುಗ್ಗಿರುವ ಮೂವರು ದರೋಡೆಕೋರರು, ಮನೆಯವರಿಗೆ ಮಾರಕಾಸ್ತ್ರ ಗಳನ್ನು ತೋರಿಸಿ ೩ ಲಕ್ಷ ರೂ. ಮೌಲ್ಯದ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಿವೇಕಾನಂದ ನಗರಕ್ಕೆ ಸನಿಹದಲ್ಲಿರುವ ದಟ್ಟಗಳ್ಳಿ ಬಡಾವಣೆಯಲ್ಲಿರುವ ಹಿರಿಯ ಭೂ ವಿಜ್ಞಾನಿಯ ಮನೆಯಲ್ಲಿ ದರೋಡೆ ಮಾಡಲು ದುಷ್ಕರ್ಮಿಗಳು ಆಯ್ದುಕೊಂಡಿರುವ ಸಮಯ ಬೆಳಗ್ಗೆ ೭. ಬಡಾ ವಣೆಯ ಸ್ಥಳೀಯರು ಬೆಳಗಿನ ವಿಹಾರ ಮುಗಿಸಿ ಕೊಂಡು ಮನೆ ಸೇರುವ ಹೊತ್ತಿನಲ್ಲಿ ಈ ಕೃತ್ಯ ನಡೆ ದಿರುವುದು ಸ್ಥಳೀಯರಲ್ಲಿ ಆತಂಕದ ಜತೆಗೆ ಎಚ್ಚ ರಿಕೆಯ ಗಂಟೆಯನ್ನೂ ಬಾರಿಸಿದೆ. ಹಾಸನದಲ್ಲಿ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ತಮ್ಮೇಗೌಡ ಎಂಬುವವರ ಮನೆಗೆ ದರೋಡೆಕೋರರು ಪರಿಚಯದವ ರಂತೆ ನುಗ್ಗಿ, ಈ ಕೃತ್ಯ ಎಸಗಿದ್ದಾರೆ.
ತಮ್ಮೇಗೌಡರ ಪತ್ನಿ ಶಶಿಕಲಾ, ತಾಯಿ ಜಯಮ್ಮ, ಮೊಮ್ಮಗಳು ಒಂದೂವರೆ ವರ್ಷದ ಶಾನ್ ಹಾಗೂ ತಮ್ಮೇಗೌಡರ ಅಣ್ಣನ ಮಗಳು ದೀಪಿಕಾ ಅವರು ಮನೆಯಲ್ಲಿ ವಾಸವಿದ್ದು, ಭೂ ವಿಜ್ಞಾನಿ ವಾರಕ್ಕೊಮ್ಮೆ ಹಾಸನದಿಂದ ಬಂದು ಹೋಗುತ್ತಿದ್ದರು.
ಮಂಗಳವಾರ ಮುಂಜಾನೆ ದೀಪಿಕಾ ಹಾಲು ತೆಗೆದುಕೊಂಡು ಮನೆಗೆ ವಾಪಸ್ ಮರಳಿದಾಗ, ದರೋಡೆಕೋರರು ಆಕೆಯನ್ನು ಹಿಂಬಾಲಿಸಿ ‘ತಮ್ಮೇಗೌಡರು ಇದ್ದಾರೆಯೇ...’ ಎಂದು ಪರಿಚಯ ದವಂತೆ ಕೇಳುತ್ತಾ ಒಳನುಗ್ಗಿರುವ ದುಷ್ಕರ್ಮಿಗಳು, ಮನೆಯೊಡತಿ ಶಶಿಕಲಾ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಶಶಿಕಲಾಗೆ ಮಾರಕಾಸ್ತ್ರ ತೋರಿಸಿ, ಮನೆಯಲ್ಲಿದ್ದ ೨೫೦ ಗ್ರಾಂ ಚಿನ್ನಾಭರಣ, ೨೦ ಸಾವಿರ ರೂ. ನಗದು, ಎರಡು ಮೊಬೈಲ್ ಹ್ಯಾಂಡ್ ಸೆಟ್, ಡಿಜಿಟಲ್ ಕ್ಯಾಮೆರಾವನ್ನು ದೋಚಿದ್ದಾರೆ. ಮನೆಯೊಳ ಗಿದ್ದ ದೇಸಿ ನಾಯಿ ಬೊಗಳದೇ ಮೌನವಹಿಸಿದೆ.
ದುಷ್ಕರ್ಮಿಗಳು ಮಂಕಿ ಕ್ಯಾಪ್ ಧರಿಸಿದ್ದರಿಂದ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಎಲ್ಲರೂ ಕನ್ನಡ ಮಾತನಾಡುತ್ತಿದ್ದರಿಂದ, ಈ ಪ್ರದೇಶದ ಜನರ ಚಲನ-ವಲನವನ್ನು ಅಧ್ಯಯನ ಮಾಡಿದವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್. ವಿಷ್ಣುವರ್ಧನ್, ಕುವೆಂಪುನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಜನರಿಗೆ ಎಚ್ಚರಿಕೆಯ ಗಂಟೆ
ಈಗಷ್ಟೇ ಅಲ್ಲೊಂದು -ಇಲ್ಲೊಂದು ಮನೆಗಳು ಏಳುತ್ತಿರುವ ದಟ್ಟಗಳ್ಳಿಯಂಥ ಬಡಾವಣೆಯ ಮನೆ ಗಳಿಗೆ ಇದು ಎಚ್ಚರಿಕೆಯ ಗಂಟೆ. ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ನಿರಂತರ ಸಂಪರ್ಕ ಹೊಂದುವುದು; ಪೊಲೀಸರು ಜಾರಿಗೆ ತಂದಿರುವ ಸಮುದಾಯ ಪೊಲೀಸ್ ಪದ್ಧತಿಯೊಂದಿಗೆ ಕೈ ಜೋಡಿಸುವುದು; ನೆರೆ- ಹೊರೆಯ ಮನೆ ಗಳೊಂದಿಗೆ ಸೌಹಾರ್ದಯುತ ಸಂಪರ್ಕ, ಸಂಬಂಧವನ್ನು ಇಟ್ಟುಕೊಳ್ಳುವುದು; ಯುವಕರ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವಂಥ ಕೆಲಸವನ್ನು ಮಾಡಬೇಕಿದೆ ಎನ್ನುವುದು ಸಮಾಜ ಶಾಸ್ತ್ರಜ್ಞರ ಸಲಹೆ. ಪೊಲೀಸರು ಕೂಡ ನಗರದ ಹೊರವಲಯಗಳ ಕುರಿತು ಹೆಚ್ಚು ಗಮನ ಹರಿಸುವ ಅಗತ್ಯ ಇದೆ ಎಂಬುದು ಸ್ಥಳೀಯರ ಆಗ್ರಹಕ್ಕೆ ಸ್ಪಂದಿಸಬೇಕಿದೆ.
ಮಂಡಿ ಠಾಣೆ ವ್ಯಾಪ್ತಿಯಲ್ಲೂ
ಮಂಡಿ ಠಾಣೆ ವ್ಯಾಪ್ತಿಯ ಎರಡು ಪ್ರತ್ಯೇಕ ಬಡಾ ವಣೆಗಳಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದೆ.
ತಿಲಕ್‌ನಗರದ ೧೮ನೇ ಕ್ರಾಸ್‌ನಲ್ಲಿ ರುವ ಮಹಾ ದೇವಪ್ಪ ಎಂಬುವವರ ಮನೆಯ ಮುಂಬಾಗಿಲು ಮುರಿದು, ಒಳ ನುಗ್ಗಿರುವ ಕಳ್ಳರು ೪೫ ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಹೊತ್ತೊಯ್ದಿದ್ದಾರೆ. ಮನೆಯವರು ಬೆಂಗಳೂರಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಮಂಡಿ ಠಾಣೆ ವ್ಯಾಪ್ತಿಯ ಸುನ್ನಿ ಚೌಕದ ಸಮೀಪ ಇರುವ ಮೂರು ಮಹಡಿ ಮನೆಯಲ್ಲೂ ರಾತ್ರಿ ಕಳ್ಳತನ ನಡೆದಿದೆ. ಮನೆ ಮಾಲೀಕ ಫಯಾಜ್ ಖಾನ್, ಕೆಳಗಡೆ ಮನೆಯಲ್ಲಿ ಮಲಗಿದ್ದಾನೆ. ರಾತ್ರಿ ೧೧.೩೦ರ ಸುಮಾರಿಗೆ ಮೇಲಿನ ಮನೆಯ ಬಾಗಿಲು ಮುರಿದು ಒಳ್ಳನುಗ್ಗಿರುವ ಕಳ್ಳರು, ೧೫ ಸಾವಿರ ರೂ. ನಗದು ಸೇರಿದಂತೆ ೮೫ ಸಾವಿರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿಕೊಂಡು ಹೋಗಿದ್ದಾರೆ.
ಫಯಾಜ್‌ಖಾನ್ ಚಿಕನ್ ಸೆಂಟರ್ ಮಾಲೀಕ ನಾಗಿದ್ದು, ಕಳ್ಳತನ ನಡೆದಿರುವ ವಸ್ತುವಿನ ಮೌಲ್ಯದ ಬಗ್ಗೆ ಹಾಗೂ ಕಾರ್ಯವಿಧಾನದ ಬಗ್ಗೆ ನೀಡಿರುವ ಹೇಳಿಕೆ ತುಸು ಗೊಂದಲದಿಂದ ಕೂಡಿವೆ ಎಂದು ಪೊಲೀಸರು ಸಂಶಯಿಸಿದ್ದಾರೆ. ಮಂಡಿ ಠಾಣೆ ಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಆತ್ಮಹತ್ಯೆಗೆ ಯತ್ನ: ನಲ್ಲಪಟ್ಟಣಂ ಠಾಣೆ ಸಮೀಪ ವೇ ಇರುವ ಹೋಟೆಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು, ಕೆಲಸ ಮಾಡುವ ಸ್ಥಳದಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಮೂಲತಃ ಕೆಆರ್‌ಎಸ್ ನವ ರಾದ ಹೇಮಾ(೩೦) ಈ ಕೃತ್ಯಕ್ಕೆ ಕೈಹಾಕಿದವರು. ಹೋಟೆಲ್ ಮಾಲೀಕರು ತನ್ನನ್ನು ಕೆಲಸದಿಂದ ತೆಗೆದು ಹಾಕಿದರು ಎಂಬ ಕಾರಣಕ್ಕಾಗಿ, ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಸೀಮೆ ಎಣ್ಣೆ ಸುರಿದು ಕೊಂಡಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಪತ್ತೆ ಆಗುತ್ತಿಲ್ಲ ನಾಪತ್ತೆಯಾದ ಮಕ್ಕಳು !


ಎಲ್ಲಿ ಹೋದಿರಿ ಬಾಲಕರೇ
ವಿಕ ಸುದ್ದಿಲೋಕ ಮೈಸೂರು
ಎಲ್ಲಿ ಹೋದಿರಿ ಬಾಲಕರೇ, ಪೋಷಕರನ್ನು ಬಿಟ್ಟು, ಕಾಣೆಯಾದ ಒಂದೂವರೆ ವರ್ಷದ ನಂತರ ೯ ವರ್ಷದ ಬಾಲಕ ಸಿಗದಿದ್ದರೂ ಆತನನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಯನ್ನು ನಂಜನಗೂಡು ಪೊಲೀಸರು ಸೆರೆ ಹಿಡಿದ ಪ್ರಕರಣದ ನಂತರ ಮೈಸೂರು ಭಾಗದಲ್ಲಿ ನಾಪತ್ತೆಯಾದ ಬಾಲಕ-ಬಾಲಕಿಯರ ಪ್ರಕರಣಗಳಿಗೆ ಜೀವ ಬರತೊಡಗಿದೆ.
ಅದರಲ್ಲೂ ಮೋಹನ ಲೀಲೆಗೆ ಮಹಿಳೆಯರು ಜೀವ ತೆತ್ತು ನಾಪತ್ತೆಯಾದ ಪ್ರಕರಣಗಳು ಇನ್ನೂ ಹಸುರಿರುವಾಗಲೇ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣ ಬಯಲಾಗಿದ್ದರಿಂದ ಆತಂಕ ಹೆಚ್ಚಿಸಿದೆ. ಅವರೊಟ್ಟಿಗೆ ಬಾಲಕಿಯ ನಾಪತ್ತೆ ಸಂಖ್ಯೆಯಲ್ಲೂ ಕಡಿಮೆಯೇನೂ ಇಲ್ಲ.
ಪೊಲೀಸ್ ಇಲಾಖೆಯ ಮಾಹಿತಿ ಗಮನಿಸಿದರೆ ಸಾಕಷ್ಟು ‘ಶರಣ್‘ನಂಥವರು ಇದ್ದಂತೆ ಕಾಣುತ್ತದೆ. ಮೈಸೂರು ನಗರವೂ ಸೇರಿ ಐದು ಜಿಲ್ಲೆಗಳಲ್ಲಿ ೨೦೦೯ರಲ್ಲಿ ನಾಪತ್ತೆ ಯಾದ ಬಾಲಕ ಹಾಗೂ ಬಾಲಕಿಯರ ಸಂಖ್ಯೆ ೫೫೭. ಇವರಲ್ಲಿ ೪೩೭ ಮಂದಿ ಪೋಷಕರ ಮಡಿಲಿಗೆ ಸುರಕ್ಷಿತವಾಗಿ ಬಂದಿದ್ದರೆ ಇನ್ನೂ ೧೨೦ ಬಾಲಕ, ಬಾಲಕಿಯರು ಈವರೆಗೂ ಪತ್ತೆಯಾಗಿಲ್ಲ. ಅವರನ್ನು ಈಗಲಾದರೂ ಹುಡುಕಿ ಕೊಡಿ ಎಂದು ಪೊಲೀಸರನ್ನು ಕೋರಬೇಕಾದ ಸ್ಥಿತಿ.
೨೦೦೯ರಲ್ಲಿ ಮೈಸೂರು ನಗರ, ಜಿಲ್ಲೆ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ೨೪೨ ಬಾಲಕರು ಕಾಣೆಯಾಗಿದ್ದಾರೆ. ಇದರಲ್ಲಿ ಇನ್ನೂ ೫೮ ಬಾಲಕರು ನಾಪತ್ತೆ. ಬಾಲಕಿಯರ ಸಂಖ್ಯೆ ಇದಕ್ಕಿಂತ ಅಧಿಕ. ವರ್ಷದಲ್ಲಿ ೩೧೫ ಬಾಲಕಿಯರು ನಾಪತ್ತೆಯಾಗಿದ್ದರೆ ೬೨ ಬಾಲಕಿಯರು ಸಿಕ್ಕೇ ಇಲ್ಲ.
ನಗರದಲ್ಲಿ ಬಾಲಕಿಯರೇ ಅಧಿಕ
ಮೈಸೂರು ನಗರದಲ್ಲಿ ನಾಪತ್ತೆಯಾದವರ ಸಂಖ್ಯೆ ವರ್ಷ ದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ವರ್ಷ ಏರಿಕೆಯಾದರೂ ಪತ್ತೆ ಪ್ರಮಾಣದಲ್ಲಿ ಇಳಿಮುಖವಾಗಿದೆ.
೨೦೦೯ರಲ್ಲಿ ನಗರದಲ್ಲಿ ನಾಪತ್ತೆಯಾದ ಬಾಲಕರ ಸಂಖ್ಯೆ ೯೭. ಪತ್ತೆಯಾದವರು ೭೧. ಇನ್ನೂ ೨೬ ಪ್ರಕರಣಕ್ಕೆ ಮುಕ್ತಿ ಸಿಕ್ಕಿಲ್ಲ. ಅದೇ ರೀತಿ ಬಾಲಕಿಯರ ನಾಪತ್ತೆಯೂ ಹೆಚ್ಚಾಗಿದೆ. ೨೦೦೯ರಲ್ಲಿ ೧೧೮ ಬಾಲಕಿಯರು ಕಾಣೆಯಾದರೂ ೧೦೩ ಬಾಲಕಿಯರ ಪತ್ತೆಯಾಗಿದೆ. ಉಳಿದ ೧೫ ಬಾಲಕಿಯರು ಈಗಲೂ ನಾಪತ್ತೆ. ಇದರಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರಮಾಣವೇ ಹೆಚ್ಚು. ಬಹುತೇಕರು ಪ್ರೇಮ ಪಾಶಕ್ಕೆ ಸಿಲುಕಿ ಪೋಷಕರಿಂದ ದೂರ ಓಡಿದರೆ, ತಲೆ ಮರೆಸಿಕೊಂಡವರೂ ಇದ್ದಾರೆ.
ನಗರದಲ್ಲಿ ವರ್ಷವಿಡೀ ಪುರುಷರು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರು ನಾಪತ್ತೆಯಾದ ಸಂಖ್ಯೆ ೪೪೫. ಪತ್ತೆಯಾಗಿದ್ದು ೨೯೪. ಇದರಲ್ಲಿ ೧೫೧ ಪ್ರಕರಣ ಪೊಲೀಸ್ ಕಡತದಲ್ಲೇ ಉಳಿದಿವೆ.
ಗ್ರಾಮೀಣ ಭಾಗದಲ್ಲಿ ಬಾಲಕರೇ ಹೆಚ್ಚು
ಮೈಸೂರು ಜಿಲ್ಲೆಯನ್ನೂ ಒಳಗೊಂಡ ದಕ್ಷಿಣ ವಲಯದ ನಾಲ್ಕು ಜಿಲ್ಲೆಗಳಲ್ಲೂ ಇದೇ ಸ್ಥಿತಿ. ನಾಲ್ಕು ಜಿಲ್ಲೆಯಲ್ಲಿ ೧೪೫ ಬಾಲಕರು, ೧೯೭ ಬಾಲಕಿಯರು ಒಂದು ವರ್ಷದಲ್ಲಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ೩೨ ಬಾಲಕರು ಹಾಗೂ ೪೭ ಬಾಲಕಿಯರು ಸಿಕ್ಕಿಲ್ಲ.
ಮೈಸೂರು ಜಿಲ್ಲೆಯಲ್ಲಿ ೪೦ ಬಾಲಕರು ಕಾಣೆಯಾಗಿ ೩೨ ಬಾಲಕರು ವಾಪಸಾಗಿದ್ದರೆ, ಮಂಡ್ಯ ಜಿಲ್ಲೆಯಲ್ಲಿ ಈ ಪ್ರಮಾಣ ೭೫ ಹಾಗೂ ೪೯. ಕೊಡಗು ಜಿಲ್ಲೆಯಲ್ಲಿ ೨೧ ಬಾಲಕರು ನಾಪತ್ತೆಯಾಗಿ ೧೬ ಪ್ರಕರಣ ಬಗೆಹರಿದಿವೆ. ಚಾಮರಾಜನಗರದಲ್ಲಿ ಇದು ೯ ಹಾಗೂ ೫.
ಇದೇ ರೀತಿ ಬಾಲಕಿಯರು ಕಾಣೆಯಾದ ಅಂಕಿ ಸಂಖ್ಯೆಯನ್ನು ನೋಡಿ. ಮೈಸೂರು ಜಿಲ್ಲೆಯಲ್ಲಿ ೫೬ ಬಾಲಕಿಯರು ಮನೆ ಬಿಟ್ಟಿದ್ದರೆ ೩೮ ಬಾಲಕಿಯರು ವಾಪಸಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ೮೨ ಬಾಲಕಿಯರು ಓಡಿ ಹೋಗಿದ್ದರೆ, ೬೫ ಬಾಲಕಿಯರು ಹಿಂದಿರುಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈ ಪ್ರಮಾಣ ೪೨-೩೨, ಚಾಮರಾಜನಗರ ಜಿಲ್ಲೆಯಲ್ಲಿ ೧೭-೧೨ರಷ್ಟಿದೆ.
ಪೊಲೀಸರ ತನಿಖೆಯ ಈ ಪರಿ
ಶಾಲೆಗೆ ಹೋದ ಮಗ ಇನ್ನೂ ಬಂದೇ ಇಲ್ಲ, ಸ್ನೇಹಿತೆಯ ಮನೆಗೆ ಹೋದ ಮಗಳು ಇದುವರೆಗೂ ವಾಪಸಾಗಿಲ್ಲ. ದಯಮಾಡಿ ಕಾಣೆಯಾಗಿರುವ ನನ್ನ ಮಗ/ಮಗಳನ್ನು ಹುಡುಕಿಕೊಡಿ ಎಂದು ಒಂದು ಸಾಲಿನ ಒಕ್ಕಣೆಯ ಪತ್ರ ಪೊಲೀಸ್ ಠಾಣೆಗೆ ಬರುತ್ತದೆ. ಇದನ್ನೇ ಆಧರಿಸಿ ಪೊಲೀಸರು ಮೊಕದ್ದಮೆ ದಾಖಲಿಸುತ್ತಾರೆ..ಆನಂತರ ಮೇಲ್ಕಂಡ ಚಹರೆವುಳ್ಳ ಬಾಲಕ/ಬಾಲಕಿ ಮಾಹಿತಿ ದೊರೆತಲ್ಲಿ ಸಂಬಂಧಪಟ್ಟ ಠಾಣೆಗೆ ತಿಳಿಸಿ ಎಂದು ಮಾಧ್ಯಮಗಳಿಗೆ ಒಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಕೈ ತೊಳೆದುಕೊಳ್ತಾರೆ. ಪೋಷಕರೇನಾದರೂ ಪೊಲೀಸರ ಮೇಲೆ ನಿರಂತರವಾಗಿ ಒತ್ತಡ ಹೇರಿ, ಮೇಲಧಿಕಾರಿಗಳು ವಿಶೇಷ ಆಸಕ್ತಿ ವಹಿಸಿದಾಗ ಮಾತ್ರವೇ ಪ್ರಕರಣ ಭೇದಿಸಬಹುದು.
ಕೆಲವರಲ್ಲಿ ತಾವೇ ವಾಪಸಾಗಿ ಪ್ರಕರಣ ಸುಖಾಂತ್ಯ ಕಂಡರೆ ಶೇ.೨೦ರಷ್ಟು ಪ್ರಕರಣಗಳಿಗೆ ಮುಕ್ತಿಯೇ ಸಿಗುವುದಿಲ್ಲ. ಇಂಥ ಮಿಸ್ಸಿಂಗ್ ಪ್ರಕರಣದ ಬಗ್ಗೆ ಪೊಲೀಸರು ತಲೆಕೆಡಿಸಿ ಕೊಳ್ಳುವುದೂ ಇಲ್ಲ. ಸಿ ರಿಪೋರ್ಟ್ ದಾಖಲಿಸಿದರೆ ಅಲ್ಲಿಗೆ ಪ್ರಕರಣ ಮುಕ್ತಾಯವಾದಂತೆಯೇ.
ನಂಜನಗೂಡಿನ ಬಾಲಕ ಕೊಲೆ ಪ್ರಕರಣ ದಾಖಲಾಗಿದ್ದು ಅಪಹರಣವಾಗಿ. ಇಷ್ಟಾದರೂ ಆರೋಪಿಯ ಸುಳಿವು ಇದ್ದರೂ ಪ್ರಕರಣ ಭೇದಿಸಲು ಪೊಲೀಸರು ತೆಗೆದುಕೊಂಡ ಸಮಯ ಒಂದೂವರೆ ವರ್ಷ. ಇನ್ನು ಅಪಹರಣ ಪ್ರಕರಣವಾಗದಿದ್ದರಂತೂ ಅದು ಪೊಲೀಸ್ ಕಡತದಲ್ಲಿಯೇ ಉಳಿದು ಹೋಗುತ್ತದೆ.
ಅಂಕಿ ಸಂಖ್ಯೆ
ಕಾಣೆಯಾದ ಬಾಲಕರು ೨೪೨
ಪತ್ತೆಯಾದವರು ೧೮೪
ಕಾಣೆಯಾದ ಬಾಲಕಿಯರು ೩೧೫
ಪತ್ತೆಯಾದವರು ೨೫೩

ಚಿತ್ರಗಳ ರಂಗಿನಾಟ

‘ಗಮನ ಸೆಳೆದ’ಧ್ವನಿಮುದ್ರಿತ ಮಂಜುಳಗಾನ !



ಬಯಲುರಂಗದಲ್ಲಿ ಬೆತ್ತಲಾದ ದೂರದರ್ಶನ...
ವಿಕ ಸುದ್ದಿಲೋಕ ಮೈಸೂರು
ಮೈಸೂರು ಮಾನಸ ಗಂಗೋತ್ರಿಯ ಬಯಲುರಂಗ ತುಂಬಿತ್ತು. ಸೇರಿದ್ದ ಎಲ್ಲರ ಮನಸ್ಸನ್ನು ಡಾ.ವಿಷ್ಣುವರ್ಧನ್ ತುಂಬಿದ್ದರು.ಸಾಹಸ ಸಿಂಹನ ಸ್ಮರಣೆಯಲ್ಲಿ, ಅವರ ನಟನೆಯ ಚಿತ್ರಗಳ ಮಧುರ ಗೀತೆಗಳು ‘ಮಂಜುಳ ಗಾನ’ವಾಗಿ ಹೊಮ್ಮಿದವು. ಮನ ಕುಣಿಸುವ ಹಾಡುಗಳಿಗೆ ಆಕರ್ಷಕ ಕುಣಿತವೂ ಇತ್ತು.
ಬೆಂಗಳೂರು ದೂರದರ್ಶನ ಕೇಂದ್ರ,ಮೈಸೂರು ಆಕಾಶವಾಣಿ ಮತ್ತು ಪ್ರಮತಿ ಹಿಲ್‌ವ್ಯೂ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಡಾ.ವಿಷ್ಣು ಸ್ಮರಣಾರ್ಥ ಭಾನುವಾರ ಸಂಜೆ ನಡೆದ ‘ಮಧುರ ಮಧುರವೀ ಮಂಜುಳಗಾನ ’ದ ‘ವಿಶೇಷ’ವಿದು.
ಕಾರ‍್ಯಕ್ರಮದಲ್ಲಿ ಹಾಡಿದವರು,ಕುಣಿದವರು,ಮಾತನಾಡಿದವರ ಪೈಕಿ ಬಹುತೇಕರು ಮೈಸೂರಿಗರು ಎನ್ನುವುದು ಇನ್ನೊಂದು ವಿಶೇಷ. ಮಧುರ ಗೀತೆಗಳು ಬಹುತೇಕ ‘ಪೂರ್ವ ಧ್ವನಿಮುದ್ರಿತ’ವಾದಂತವು,ಗಾಯಕರು ವೇದಿಕೆಯಲ್ಲಿ ತುಟಿಕುಣಿಸಿದರು, ಸಂಗೀತ ಸಾಥ್ ನೀಡಿದ ಕಲಾವಿದರೂ ‘ನಟನೆ ’ಯನ್ನೇ ಮಾಡಿದರು ಎಂಬುದು ಇಡೀ ಕಾರ‍್ಯಕ್ರಮದ ‘ವಿಪರ್ಯಾಸ’.
ಇದೆಲ್ಲಾ ಹೌದಾ?: ಸೇರಿದ್ದ ಸಾವಿರಾರು ಜನ ಇಷ್ಟುಪಟ್ಟು ಕೇಳಿದ್ದು,ಖುಷಿಪಟ್ಟದ್ದು ,ಚಪ್ಪಾಳೆ ತಟ್ಟಿ ಕಲಾವಿದರನ್ನು ಹುರಿದುಂಬಿಸಿದ್ದು ,ಓನ್ಸ್‌ಮೋರ್ ಎಂದದ್ದು ಎಲ್ಲದಕ್ಕೂ ಕಾರಣ ಇದು ‘ನೇರ ಕಾರ‍್ಯಕ್ರಮ’ ಎಂಬುದು.ಆದರೆ,‘ಹಿನ್ನೆಲೆ’ಯಲ್ಲಿ ನಡೆದದ್ದು ಪ್ರೇಕ್ಷಕರ ಕಿವಿಗೆ ‘ದಾಸವಾಳ ಹೂವು’ ಮುಡಿಸುವ ಕೆಲಸ. ಕಾರ‍್ಯಕ್ರಮದಲ್ಲಿ ಹಾಡಲು ‘ಆಡಿಷನ್’ ಮೂಲಕ ಆಯ್ಕೆಯಾದ ಸ್ಥಳೀಯ,ಯುವ ಕಲಾವಿದರನ್ನು ಈ ಮುನ್ನವೇ ಬೆಂಗಳೂರಿಗೆ ಕರೆಸಿ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಲಾಗಿತ್ತು. ಇಂದು ‘ಸರದಿ’ಯ ಪ್ರಕಾರ ವೇದಿಕೆಗೆ ಬಂದ ಕಲಾವಿದರು ಮೈಕ್ ಹಿಡಿದು,ಆಂಗಿಕ ಅಭಿನಯ ಮಾಡಿದರು.ವಾದ್ಯ ತಂಡದವರೂ ಅದಕ್ಕೆ ‘ಸಾಥ್’ನೀಡಿದರು.
ಹತ್ತಿರದಲ್ಲಿ ಕುಳಿತಿದ್ದ ,ಸೂಕ್ಷ್ಮವಾಗಿ ಗಮನಿಸಿದ ಪ್ರೇಕ್ಷಕರಿಗೆ ಇದರ ವಾಸನೆ ಬಡಿಯಿತು.ಆದರೆ,ಹೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ.ಸ್ವತಃ ದೂರದರ್ಶನದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಷಿ ‘ಬಾರೇ ಬಾರೇ ಚಂದದ ಚಲುವಿನ ತಾರೆ ’ಹಾಡುವಾಗ ‘ಇದು ಲೈವ್ ಅಲ್ಲ,ರೆಕಾರ್ಡೆಡ್’ಎನ್ನುವ ಅನುಮಾನ ದೃಢವಾಯಿತು.
ಯಾಕೆ ಹೀಗೆ?: ಎಷ್ಟೇ ಪ್ರತಿಭಾವಂತ,ಅನುಭವಿ ಕಲಾವಿದರಾದರೂ ನೇರ ಕಾರ‍್ಯಕ್ರಮದ ಸಂದರ್ಭ ಒಮ್ಮೊಮ್ಮೆ ‘ಶ್ರುತಿ’ತಪ್ಪುತ್ತಾರೆ. ಏನೇ ಆದರೂ ಒಟ್ಟು ಕಾರ‍್ಯಕ್ರಮದ ಮೂಲಕ ಹಿತಾನುಭವ ನೀಡುತ್ತಾರೆ. ಆದರೆ, ದೂರದರ್ಶನದ ‘ಮಂಜುಳ ಗಾನ’ಕ್ಕೆ ಆಯ್ಕೆಯಾದವರ ಪೈಕಿ ಹಲವರು ಇಂಥ ವೇದಿಕೆಗೆ ಹೊಸಬರು.ಆದರೆ,ಸ್ವಲ್ಪವೂ ಅಪಸ್ವರ ಇಲ್ಲದಂತೆ,ಯುವ ಕಲಾವಿದರು ಎನ್ನುವುದರ ಸುಳಿಯೂ ನೀಡದಷ್ಟು ಸ್ಪಷ್ಟವಾಗಿ ಮಧುರ ಹಾಡುಗಳನ್ನು ಮೊಳಗಿಸಿದರು.
‘ಎಡವಟ್ಟು ಆಗಬಾರದು,ಕೇಳುಗರಿಗೆ ಮಧುರ ಅನುಭವ ದೊರೆಯಲಿ’ಎನ್ನುವ ಕಾರಣಕ್ಕೆ ಅಧಿಕಾರಿಗಳು ‘ಪೂರ್ವ ಮುದ್ರಿತ’ಕೃತ್ಯ ಎಸಗಿರಬಹುದು.ಮೊದಲೇ ಹೇಳಿಕೊಂಡಿದ್ದರೆ,ಅದೇನೂ ಅಂಥ ಅಪರಾಧವಲ್ಲ.ಹೇಳದೆ,ನಂಬಿಸಿದ್ದು ‘ಸಾಂಸ್ಕೃತಿಕ ಮೋಸ’ವಲ್ಲದೆ ಮತ್ತೇನೂ ಅಲ್ಲ.
ಪಾಪ ಪ್ರಜ್ಞೆ: ತಮ್ಮದೇ ಹಾಡಿಗೆ ವೇದಿಕೆಯಲ್ಲಿ ‘ನಟನೆ ’ ಮಾಡಿ ಹಿನ್ನೆಲೆಗೆ ಬಂದ ಕಲಾವಿದರೊಬ್ಬರನ್ನು ‘ವಿಜಯಕರ್ನಾಟಕ’ ಮಾತಿಗೆ ಎಳೆದಾಗ ‘ಹೌದು ಸಾರ್,ನಾವ್ಯಾರೂ ಇವತ್ತು ಇಲ್ಲಿ ಹಾಡಲಿಲ್ಲ. ಬೆಂಗಳೂರಲ್ಲೇ ರೆಕಾರ್ಡ್ ಮಾಡಿಸಿದ್ದರು. ಇದನ್ನೆಲ್ಲ ನೋಡಿದ್ರೆ ಬೇಜಾರಾಗುತ್ತೆ,ಆದ್ರೆ ಏನ್ ಮಾಡೋದು..‘!ಎಂದರು.
ಕಲಾವಿದರಿಗೆ ಕನಿಷ್ಠ ಇಂಥದೊಂದು ‘ಪಾಪ ಪ್ರಜ್ಞೆ’ಯಾದರೂ ಕಾಡಿತು. ಆದರೆ,ಅಧಿಕಾರಿಗಳು ಪ್ರಖರ ಬೆಳಕಿನಲ್ಲಿ ಮಿಂಚಿದರು. ಪ್ರೇಕ್ಷಕರು ಎಲ್ಲವನ್ನೂ ನಂಬಿ,ಸಮಯ ರಾತ್ರಿ ೧೦.೩೦ದಾಟಿದರೂ ಕೇಳುತ್ತಲೇ ಇದ್ದರು.
****
ಇದೆಲ್ಲದರ ಹೊರತಾಗಿಯೂ ಕಾರ‍್ಯಕ್ರಮದಲ್ಲಿ ಕೇಳಿಸಿದ ಹಾಡುಗಳು ಇಂಪಾಗಿದ್ದವು.ಪೂರ್ವ ಧ್ವನಿ ಮುದ್ರಿತವಾದರೂ ಹಾಡಿದ ಹುಡುಗರು,ಹಿರಿಯ-ಕಿರಿಯ ಕಲಾವಿದರು ಗಮನಸೆಳೆದರು. ಎಚ್.ಕೆ.ರಘು, ಆರ್.ಕೃಷ್ಣಮೂರ್ತಿ, ಶ್ರೀನಾಥ್ ಭಾರದ್ವಾಜ್, ಪ್ರಹ್ಲಾದ್,ಜಯಂತಿ ಭಟ್, ಡಾ.ಎಂ.ಎಸ್.ನಟಶೇಖರ್, ಅಶ್ವಿನ್ ಪ್ರಭು,ಅಭಿರಾಮ್, ಶ್ರೀನಿವಾಸ ಮೂರ್ತಿ -ಸುಬ್ಬಲಕ್ಷ್ಮಿ,ಮಾನಸ ವಿಜಯ್ ಮತ್ತಿತರರು ಬೆಳಗುವ ಭರವಸೆ ಮೂಡಿಸಿದರು. ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಷಿ ತಾವೇನೂ ಕಡಿಮೆ ಇಲ್ಲ ಎನ್ನುವಂತೆ ನಾಗರಹಾವು ಚಿತ್ರದ ‘ಬಾರೇ ಬಾರೆ ಚಂದದ ಚೆಲುವಿನ ತಾರೆ ’ಯನ್ನು ಹಾಡಿದರು.
ಮನಸೂರೆ :‘ನೃತ್ಯಗಿರಿ’ಮತ್ತು ಶ್ರೀಧರ್ ಜೈನ್ ತಂಡ ಕಲಾವಿದರು,ಪ್ರಮತಿ ಹಿಲ್‌ವ್ಯೂ ಅಕಾಡೆಮಿ ವಿದ್ಯಾರ್ಥಿಗಳು ಹಲವು ಹಾಡಿಗೆ ಮಾಡಿದ ನೃತ್ಯ ಮನಸೂರೆಗೊಂಡಿತು. ಸಿ.ಅಶ್ವತ್ಥ್,ವಿಷ್ಣು ,ಕೆ.ಎಸ್,ಅಶ್ವತ್ಥ್, ಚಿಂದೋಡಿ ಲೀಲಾ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಹಿರಿಯ ನಿರ್ದೇಶಕರಾದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು,ದ್ವಾರಕೀಶ್, ಜೋಸೈಮನ್, ಎಸ್.ನಾರಾಯಣ್, ಕಲಾವಿದರಾದ ಚೇತನ್ ರಾಮರಾವ್,ಶಂಕರ್ ಅಶ್ವತ್ಥ್,ಲಕ್ಷ್ಮೀ ಗೋಪಾಲಸ್ವಾಮಿ, ಡಾ.ವಿಷ್ಣು ಸಹೋದರ ರವಿಕುಮಾರ್,ಡಾ.ಎಸ್.ಭಾಸ್ಕರ್,ಡಾ.ಎಚ್.ವಿ.ಸತೀಶ್,ಕುಲಪತಿ ಪ್ರೊ.ವಿ.ಜಿ. ತಳವಾರ್, ಗೃಹಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮತ್ತಿತರರು ಭಾಗವಹಿಸಿದ್ದರು. ಪ್ರಮತಿಯ ಎಚ್.ವಿ.ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
*****
ದ್ವಾರಕೀಶ್ ಕಿಡಿ
ನಟ,ನಿರ್ಮಾಪಕ ದ್ವಾರಕೀಶ್ ಆಪ್ತಮಿತ್ರನ ಸಹವಾಸ,ಸರಸ,ವಿರಸ ಎಲ್ಲವನ್ನೂ ನೆನಪುಮಾಡಿಕೊಂಡರು. ಸರಕಾರಕ್ಕೆ,ರಾಜಕಾರಣಿಗಳಿಗೆ ವಿಷ್ಣು ,ಅಶ್ವತ್ಥ್ ಅವರಂತ ಕಲಾವಿದರಿಗೆ ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿ ಕೊಡಿಸಲು ಆಗಲಿಲ್ಲ ಎಂದು ಕಿಡಿಕಾರಿದರು. ತಮಿಳುನಾಡಿನಲ್ಲಿ ೧೦ ವರ್ಷದ ಹಿಂದಷ್ಟೆ ಬಣ್ಣ ಹಚ್ಚಿದ ಹಾಸ್ಯ ನಟ ವಿವೇಕ್ ‘ಪದ್ಮಭೂಷಣ’ ಪಡೆದಿದ್ದಾರೆ. ಇಲ್ಲಿ ನಾವು ೪೫ ವರ್ಷದಿಂದ ದುಡಿಯುತ್ತಿದ್ದೇವೆ,ಯಾವ ಪ್ರಶಸ್ತಿಯೂ ಇಲ್ಲ. ಇದ್ದಾಗ ಕೊಡದೆ,ಸತ್ತಮೇಲೆ ಕೊಡ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಮುದ್ದಿನ ಮಕ್ಕಳಿಗೆ ಮುತ್ತಿನಂಥ ಮಾತು


‘...ಏನಾದರೂ ಆಗಿ, ಕ್ರಿಯಾಶೀಲ ನಾಗರಿಕರಾಗಿ’
ವಿಕ ಸುದ್ದಿಲೋಕ ಮೈಸೂರು
‘ಮಕ್ಕಳೇ, ಭವಿಷ್ಯದಲ್ಲಿ ನೀವು ಏನಾದರೂ ಆಗಿ, ಡಾಕ್ಟರ್, ಆಕ್ಟರ್, ಎಂಜಿನಿಯರ್... ಏನು ಬೇಕಾ ದರೂ ಆಗಿ. ಆದರೆ ಕ್ರಿಯಾಶೀಲ ನಾಗರಿಕರಾಗಿ’
-ಹೀಗೆಂದು ನೀತಿ ಬೋಧಿಸಿ ಎಳೆಯ ಮನಸ್ಸುಗಳಲ್ಲಿ ಉತ್ಸಾಹ ಮೂಡಿಸಿದವರು ನಟ ರಮೇಶ್ ಅರವಿಂದ್.
ನಗರದ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಶನಿವಾರ ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ (ಸಿಎಂಸಿಎ) ಪೌರಕೂಟಗಳ ವಾರ್ಷಿಕ ಮಹೋತ್ಸವ ‘ಮೈಸೂರು ಹಬ್ಬ- ೨೦೧೦’ದ ಮುಕ್ತಾಯ ಸಮಾ ರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿನ್, ದ್ರಾವಿಡ್, ಐಶ್ವರ್ಯ ರೈ... ನೀವೇನೇ ಆಗಿ, ಮೊದಲು ಕ್ರಿಯಾಶೀಲ ನಾಗರಿಕರಾಗಿ ಎಂದರಲ್ಲದೇ, ಮಕ್ಕಳಿಂದಲೂ ಹೇಳಿಸಿದರು.
ಸಿಎಂಸಿಎ ಗುಡ್‌ವಿಲ್ ರಾಯಭಾರಿ ಕೂಡ ಆಗಿರುವ ನಟ ರಮೇಶ್ ಆಗಮಿಸುತ್ತಿದ್ದಂತೆಯೇ ಮಕ್ಕಳು ಮುತ್ತಿಕೊಂಡರು. ಸಾವಿರಾರು ಸಂಖ್ಯೆ ಯಲ್ಲಿದ್ದ ಶಾಲಾ ಮಕ್ಕಳು ನಟನ ಹಸ್ತಲಾಘವಕ್ಕೆ ಮುಗಿಬಿದ್ದರು. ಪುಟ್ಟ ಮಕ್ಕಳ ಆಸೆಗೆ ಭಂಗ ತಾರದೆ ಹಸನ್ಮುಖಿಯಾಗಿ ಎಲ್ಲರತ್ತ ಕೈಚಾಚುತ್ತಲೇ ವೇದಿಕೆ ಏರಿದ ರಮೇಶ್ ಕೈಬೀಸಿ ’ಹಾಯ್’ಎಂದರು.
ನಂತರ ಮಾತಿಗಿಳಿದ ಅವರು-ಬರೀ ರಾತ್ರಿ ಮಾತ್ರ ನಕ್ಷತ್ರಗಳನ್ನು ನೋಡಿದ್ದೆ. ಈಗ ಹಗಲಿನಲ್ಲೂ ನಕ್ಷತ್ರಗಳನ್ನು ಕಂಡೆ. ನಕ್ಷತ್ರಗಳು ಭೂಮಿಗೆ ಇಳಿದು ಬಂದಿವೆ. ಅದು ನೀವೇ. ‘ತಾರೇ ಜಮೀನ್ ಪರ್’ ಎಂದರೆ ಇದೆ. ಮೈಸೂರಿನಲ್ಲಿ ಅರಮನೆ ಪ್ರಮುಖ ಆಕರ್ಷಣೆ. ಕೇವಲ ಅರಮನೆ ಅಲ್ಲ, ಇಡೀ ಮೈಸೂರು ನಗರ ಅರಮನೆಯಾಗಬೇಕು. ಅಂಥ ಅದ್ಭುತ ಸಿಟಿ ಮಾಡಲು ಸಿಎಂಸಿಎ ಮಕ್ಕಳಿಂದ, ‘ಮೈಸೂರು ಕಿಡ್ಸ್ ಮಿಲಿಟರಿ’ಯಿಂದ ಮಾತ್ರ ಸಾಧ್ಯ. ನೀರು, ಗಾಳಿ, ಭೂಮಿ ಎಲ್ಲವನ್ನೂ ಶುದ್ಧಗೊಳಿಸಲು ಮುಂದಾಗಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಪುರಸ್ಕಾರಗಳನ್ನು ನೀಡಲಾಯಿತು. ಅತ್ಯುತ್ತಮ ಸಿವಿಕ್ ಅವಾರ್ಡ್ ಸೇಂಟ್ ಮೇರೀಸ್ ಶಾಲೆಯ ಸಿವಿಕ್ ಕ್ಲಬ್ ಪಾಲಾಯಿತು. ವಿಶೇಷ ಪುರಸ್ಕಾರವನ್ನು ಸಿಕೆಸಿ ಶಾಲೆಯ ಸುಮನಾ ತಂಡ ಪಡೆಯಿತು. ಬಾಲಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಮರಿಮಲ್ಲಪ್ಪ ಶಾಲೆಯ ಇಬ್ಬರು ವಿದ್ಯಾರ್ಥಿನಿಯರನ್ನು ಗೌರವಿಸ ಲಾಯಿತು.
ಉತ್ತಮ ಭಿತ್ತಿಚಿತ್ರ ರಚನೆಯಲ್ಲಿ ವಿಜಯವಿಠಲ, ಶ್ರೀಕಂಠೇಶ್ವರ ವಿದ್ಯಾಸಂಸ್ಥೆ, ಸಿಕೆಸಿ, ಸೇಂಟ್ ಥಾಮಸ್ ಶಾಲೆ, ಲಕ್ಷ್ಮೀಪುರಂ ಜೆಎಸ್‌ಎಸ್, ಗಿರಿಯಾಬೋವಿ ಪಾಳ್ಯ ಜೆಎಸ್‌ಎಸ್ ಶಾಲೆ, ಮಾದರಿ ರಚನೆಯಲ್ಲಿ ಜೆಎಸ್‌ಎಸ್ ಪಬ್ಲಿಕ್ ಶಾಲೆ, ಮರಿಮಲ್ಲಪ್ಪ ಶಾಲೆ, ಜೆಎಸ್‌ಎಸ್, ಸೇಂಟ್ ಮೇರೀಸ್, ಸಿದ್ಧಾರ್ಥನಗರ ಜೆಎಸ್‌ಎಸ್ ಶಾಲೆ ಪುರಸ್ಕಾರ ಪಡೆದವು. ಡಿಸಿಪಿ ರಾಜೇಂದ್ರಪ್ರಸಾದ್, ಪ್ರಿಯಾಕೃಷ್ಣಮೂರ್ತಿ, ಸಿಎಂಸಿಎ ಸಮನ್ವಯಾಧಿಕಾರಿ ಪಿ.ವಿ.ರಾಮದಾಸ್ ಹಾಜರಿದ್ದರು.
‘ಮೈಸೂರು ಹಬ್ಬ’ವನ್ನು ಮೇಯರ್ ಪುರುಷೋತ್ತಮ ಉದ್ಘಾಟಿಸಿದರು. ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್, ಪಿ.ವಿ. ರಾಮದಾಸ್, ಭಾರದ್ವಾಜ್ ಹಾಜರಿದ್ದರು. ಸಂಚಾರಿ ಪೊಲೀಸ್ ಇಲಾಖೆ, ಮೈಸೂರು ಗ್ರಾಹಕ ಪರಿಷತ್, ಅಜಯ್ ಸ್ಮಾರಕ ಕುಡಿಯುವ ನೀರಿನ ಫೌಂಡೇಷನ್, ವಿವಿಧ ಶಾಲೆಗಳ ಮಾಹಿತಿ ಕೇಂದ್ರ ತೆರೆಯಲಾಗಿತ್ತು.
ಮಕ್ಕಳ ಕಲರವ
ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಶನಿವಾರ ಶಾಲಾ ಮಕ್ಕಳ ಕಲರವ. ಬಿ.ವಿ. ಕಾರಂತ ರಂಗಮಂಟಪದಲ್ಲಿ ಮಕ್ಕಳಿಂದ ನೃತ್ಯ, ಸಂಗೀತ ಸಂಭ್ರಮದ ಜತೆಗೆ ಗಲಗಲ ಸದ್ದು, ಕೇಕೇ ನಗು. ನಟ ರಮೇಶ್ ಆಗಮಿಸಿದಾಗಲಂತೂ ಮುಗಿಲು ಮುಟ್ಟುವಂತೆ ಹರ್ಷೋ ದ್ಗಾರ ಮಾಡಿದರು. ಎರಡು ಸಾವಿರಕ್ಕೂ ಅಧಿಕ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಹಣ ನುಂಗಿದರೆ ಕ್ರಿಮಿನಲ್ ಕೇಸ್ 'ಖಾತ್ರಿ'



ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಳ್ಳ ಹಿಡಿದಿರುವುದನ್ನು ಅರಿತ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎನ್.ಮಂಜುಳಾ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ. ಇದರ ಪರಿಣಾಮವೇ ಇಬ್ಬರು ಗ್ರಾ.ಪಂ. ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಮೈಸೂರು ವಿವಿಯಲ್ಲಿ ಮತ್ತೆ ದೂರಶಿಕ್ಷಣ

ವಿಕ ಸುದ್ದಿಲೋಕ, ಮೈಸೂರು
ತೆರಪಿನ(ಬಿಡುವು) ವೇಳೆಯಲ್ಲಿ ಮನೆಯಲ್ಲಿಯೇ ಕುಳಿತು ಅಂಚೆ ಮೂಲಕ ಬರುವ ಪಠ್ಯವನ್ನು ಕಲಿತು ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆಯಲು ಬಯಸುವವರಿಗೆ ಇದೊಂದು ಸಿಹಿ ಸಮಾಚಾರ.
ಎಲ್ಲವೂ ‘ಕ್ರಾಫರ್ಡ್ ಭವನ’ ಅಂದುಕೊಂಡಂತೆ ನಡೆದರೆ ೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕೋರ್ಸ್‌ಗಳು ಮೈಸೂರು ವಿವಿಯಲ್ಲಿ ಪುನರಾ ರಂಭವಾಗಲಿವೆ. ಮಾನಸ ಗಂಗೋತ್ರಿಯಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯ (ಕರೆಸ್ಪಾಂಡೆನ್ಸ್ ಕೋರ್ಸ್ ಅಂಡ್ ಕಂಟಿನ್ಯೂಯಿಂಗ್ ಡೈರೆಕ್ಟೋರೇಟ್) ಸ್ಥಾಪಿಸುವ ಸಂಬಂಧ ತಜ್ಞರ ಸಮಿತಿ ರಚಿಸಿರುವ ಕರಡು ನಿಯಮಾವಳಿಗಳಿಗೆ ಮೈಸೂರು ವಿವಿ ಸಿಂಡಿಕೇಟ್ ಸಭೆ ಸಮ್ಮತಿ ಸೂಚಿಸಿದೆ.
ಉನ್ನತ ಶಿಕ್ಷಣವನ್ನು ಮನೆ ಬಾಗಿಲಿಗೆ ತಲುಪಿಸುವ ಹಾಗೂ ಅದನ್ನು ಹೆಚ್ಚು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅಂಚೆ-ತೆರಪಿನ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದ ದೇಶದ ಮೊತ್ತ ಮೊದಲ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯದ್ದು. ದೇ. ಜವರೇಗೌಡರ ವಿಶೇಷ ಆಸಕ್ತಿಯ ಪರಿಣಾಮ ೧೯೬೯ರಲ್ಲಿ ಈ ಶಿಕ್ಷಣ ಪದ್ಧತಿ ಆರಂಭವಾಯಿತು. ಬಳಿಕ ದೇಶದ ಇತರೆ ಎಲ್ಲ ವಿವಿಗಳು ಕೂಡ ಈ ಪದ್ಧತಿಯನ್ನು ಆರಂಭಿಸಿದವು.
ದೂರ ಶಿಕ್ಷಣದ ಮೂಲಕ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಸುತ್ತಿರುವ ಹೊಸದಿಲ್ಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯಕ್ಕೂ (ಇಗ್ನೋ) ಮೈಸೂರು ವಿವಿಯ ಅಂಚೆ-ತೆರಪಿನ ಶಿಕ್ಷಣ ಕ್ರಮವೇ ಸ್ಫೂರ್ತಿ.
ಸುಮಾರು ೨೮ ವರ್ಷಗಳ ಕಾಲ ಈ ಶಿಕ್ಷಣ ಪದ್ಧತಿಯಡಿ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ನೀಡಿದ ಮೈಸೂರು ವಿವಿ, ೧೯೯೮ರಲ್ಲಿ ತಾತ್ಕಾಲಿಕವಾಗಿ ಈ ಪದ್ಧತಿಗೆ ವಿರಾಮ ನೀಡಿತು. ಏಕೆಂದರೆ- ವರ್ಷದಿಂದ ವರ್ಷಕ್ಕೆ ಈ ಪದ್ಧತಿ ಜನಪ್ರಿಯವಾಗಲಾರಂಭಿಸಿದ್ದನ್ನು ಗಮನಿಸಿದ ಕರ್ನಾಟಕ ಸರಕಾರ, ಮೈಸೂರು ವಿವಿಯ ನೆರಳಿನಲ್ಲಿಯೇ ಅಂಚೆ- ತೆರಪಿನ ಶಿಕ್ಷಣ ನೀಡಲು ಪ್ರತ್ಯೇಕ ವಿವಿಯೊಂದನ್ನು ಸ್ಥಾಪಿಸಿತು. ಹಾಗೆ ಆರಂಭವಾದ ವಿವಿಯೇ ಗಂಗೋತ್ರಿಯ ಅಂಗಳದಲ್ಲಿ ಸ್ವಾತಂತ್ರ್ಯವಾಗಿ ಬೆಳೆದು ನಿಂತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ !
೨೦೦೫ರಲ್ಲಿ ಮರು ಪ್ರಯತ್ನ : ಮುಕ್ತ ವಿವಿ ಸ್ಥಾಪನೆ ಬಳಿಕ ನಿಲ್ಲಿಸಿದ ಅಂಚೆ-ತರೆಪಿನ ಶಿಕ್ಷಣ ಕ್ರಮವನ್ನು ೨೦೦೫ರಲ್ಲಿ ಪುನರಾರಂಭಿಸಲು ಮೈಸೂರು ವಿವಿ ಪ್ರಯತ್ನ ನಡೆಸಿತು. ಆ ವೇಳೆಗೆ ಕರ್ನಾಟಕ ರಾಜ್ಯ ವಿವಿಗಳ ಕಾಯ್ದೆ -೨೦೦೨ ಜಾರಿಗೆ ಬಂದಿದ್ದು; ದೂರ ಶಿಕ್ಷಣ ಪದ್ಧತಿಯಡಿ ಪದವಿ ಬಯಸುವವರು ಬೇಡಿಕೆ ಹೆಚ್ಚಿದ್ದು ಹಾಗೂ ಸಂಪನ್ಮೂಲ ಕ್ರೋಢಿಕರಣ ಸಾಧ್ಯ ಎಂಬುದನ್ನು ಕೆಲವು ವಿವಿಗಳು ಮಾಡಿ ತೋರಿಸಿದ್ದು- ಸೇರಿದಂತೆ ನಾನಾ ಕಾರಣಗಳನ್ನು ಗಮನಿಸಿಯೇ ಮೈಸೂರು ವಿವಿ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿತು. ಕುವೆಂಪು ವಿವಿ, ಕರ್ನಾಟಕ ವಿವಿ, ಬೆಂಗಳೂರು ವಿವಿ ಸೇರಿದಂತೆ ಇತರೆ ಸಾಂಪ್ರದಾಯಿಕ ವಿವಿಗಳು ವಿವಿಯ ಹೊಸ ಕಾಯ್ದೆಯ ಪ್ರಯೋಜನ ಪಡೆದು, ದೂರ ಶಿಕ್ಷಣವನ್ನು ಆರಂಭಿಸಿದ್ದವು. ಈ ಧೈರ್ಯದ ಮೇಲೆ ಮೈಸೂರು ವಿವಿ ನಡೆಸಿದ ಪ್ರಯತ್ನಕ್ಕೆ ಅಂದಿನ ಕುಲಾಧಿಪತಿ ಟಿ. ಎನ್. ಚತುರ್ವೇದಿ ಮಾನ್ಯ ಮಾಡಲಿಲ್ಲ. ಮೈಸೂರು ವಿವಿ ಅಂಗಳದ ಪಕ್ಕದಲ್ಲಿಯೇ, ದೂರ ಶಿಕ್ಷಣ ನೀಡುವುದಕ್ಕಾಗಿಯೇ ಇರುವ ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿದೆ. ನೆರೆ-ಹೊರೆಯ ಎರಡು ವಿವಿಗಳು ಒಂದೇ ರೀತಿಯ ಶಿಕ್ಷಣ ಪದ್ಧತಿ ಅನುಸರಿಸುವುದು ಸಲ್ಲದು ಎಂದು ರಾಜ್ಯಪಾಲರು ಬುದ್ಧಿಮಾತು ಹೇಳಿದ್ದರು.
ವಸ್ತ್ರ ಸಂಹಿತೆ ಬದಲು: ಘಟಿಕೋತ್ಸವದ ವಸ್ತ್ರ ಸಂಹಿತೆ ಬದಲಿಸಬೇಕೆಂಬ ವಿವಿಯ ಅಪೇಕ್ಷೆ ವರ್ಷದ ಮಟ್ಟಿಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಿರುವ ಪದ್ಧತಿಯನ್ನು ಕೈ ಬಿಟ್ಟು, ಮೈಸೂರು ಪೇಟ ಮತ್ತು ಭಾರತೀಯ ಸರಳು ಉಡುಪನ್ನೇ ಘಟಿಕೋತ್ಸವದ ‘ವೇಷ-ಭೂಷಣ’ವಾಗಿ ಬಿಂಬಿಸಬೇಕು ಎಂದು ವಿವಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಕುಲಪತಿ ಪ್ರೊ. ತಳವಾರ್ ವಿಶೇಷ ಆಸಕ್ತಿ ವಹಿಸಿ ಉಪ ಸಮಿತಿಯನ್ನು ರಚಿಸಿದ್ದರು. ಸಮಿತಿ ಹಲವು ಸಭೆಗಳನ್ನೂ ನಡೆಸಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಮಿತಿಯಲ್ಲಿರುವ ಪರೀಕ್ಷಾಂಗ ಕುಲಸಚಿವ ಬಿ. ರಾಮು ಅವರು ವಸ್ತ್ರ ಸಂಹಿತೆ ಬದಲಿಸಲು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ.
ಮತ್ತೆ ಚಿಗುರಿದ ಕನಸು
ಈಗ ಉನ್ನತ ಶಿಕ್ಷಣದ ಆಸೆ-ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಿವೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಬರುತ್ತಿರುವವರ ಸಂಖ್ಯೆ ಕೇವಲ ಶೇ. ೧೩.೭ರಷ್ಟಿದೆ. ಈ ಪ್ರಮಾಣವನ್ನು ೨೦೨೦ರ ವೇಳೆಗೆ ಶೇ. ೨೫ರಷ್ಟು ಮುಟ್ಟಿಸಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಯಕೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾಂಪ್ರದಾಯಿಕ ವಿವಿಗಳು ದೂರ ಶಿಕ್ಷಣ ಆರಂಭಿಸಲು ಯುಜಿಸಿ ಮತ್ತು ದೂರ ಶಿಕ್ಷಣ ಮಂಡಳಿಗಳೇ ಪ್ರೋತ್ಸಾಹ ನೀಡುತ್ತಿವೆ. ಇದನ್ನು ಗ್ರಹಿಸಿರುವ ಮೈಸೂರು ವಿವಿ ಈಗ ಅಂಚೆ-ತೆರಪಿನ ಶಿಕ್ಷಣ ನೀಡಲು ಪ್ರಯತ್ನ ಆರಂಭಿಸಿದೆ. ಬದಲಾದ ಸನ್ನಿವೇಶದಲ್ಲಿ ಈಗಿನ ಕುಲಾಧಿಪತಿ ಹನ್ಸ್‌ರಾಜ್ ಭಾರದ್ವಾಜ್ ವಿವಿಯ ಪ್ರಯತ್ನಕ್ಕೆ ಬೆಂಬಲ ನೀಡುವ ಸಾಧ್ಯತೆಯೇ ಹೆಚ್ಚಿದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ೨೦೦೦ರ ಕಾಯ್ದೆ ಎಲ್ಲೂ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದೆ. ಕಾಯ್ದೆಯ ಪ್ರಕಾರ ಸಾಂಪ್ರದಾಯಿಕ ವಿವಿಗಳು ‘ದೂರ ಶಿಕ್ಷಣ’ ಪದ್ಧತಿ ಆರಂಭಿಸುವಂತಿಲ್ಲ. ಆದರೆ, ಕರೆಸ್ಪಾಂಡೆನ್ಸ್ (ಅಂಚೆ)ಕೋರ್ಸ್ ನಡೆಸಲು ಯಾವುದೇ ಅಡ್ಡಿ ಇಲ್ಲ. ಈ ನಿಯಮವನ್ನೇ ಮೈಸೂರು ವಿವಿ ಗಟ್ಟಿಯಾಗಿ ಹಿಡಿದುಕೊಂಡಿದೆ. ಹಾಗಾಗಿಯೇ ವಿವಿ ಕೋರ್ಸ್‌ಗೆ ಹೆಸರಿಡುವ ಯತ್ನದಲ್ಲಿಯೇ ಬುದ್ಧಿವಂತಿಕೆ ಪ್ರದರ್ಶಿಸಿದೆ. ನೆನಪಿರಲಿ- ವಿವಿ ಆರಂಭಿಸುತ್ತಿರುವುದು ದೂರ ಶಿಕ್ಷಣವಲ್ಲ. ಅಂಚೆ ಮತ್ತು ತೆರಪಿನ ಶಿಕ್ಷಣ !

ಮೈಸೂರು ವಿವಿಯಲ್ಲಿ ಮತ್ತೆ ದೂರಶಿಕ್ಷಣ

ವಿಕ ಸುದ್ದಿಲೋಕ, ಮೈಸೂರು
ತೆರಪಿನ(ಬಿಡುವು) ವೇಳೆಯಲ್ಲಿ ಮನೆಯಲ್ಲಿಯೇ ಕುಳಿತು ಅಂಚೆ ಮೂಲಕ ಬರುವ ಪಠ್ಯವನ್ನು ಕಲಿತು ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆಯಲು ಬಯಸುವವರಿಗೆ ಇದೊಂದು ಸಿಹಿ ಸಮಾಚಾರ.
ಎಲ್ಲವೂ ‘ಕ್ರಾಫರ್ಡ್ ಭವನ’ ಅಂದುಕೊಂಡಂತೆ ನಡೆದರೆ ೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕೋರ್ಸ್‌ಗಳು ಮೈಸೂರು ವಿವಿಯಲ್ಲಿ ಪುನರಾ ರಂಭವಾಗಲಿವೆ. ಮಾನಸ ಗಂಗೋತ್ರಿಯಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯ (ಕರೆಸ್ಪಾಂಡೆನ್ಸ್ ಕೋರ್ಸ್ ಅಂಡ್ ಕಂಟಿನ್ಯೂಯಿಂಗ್ ಡೈರೆಕ್ಟೋರೇಟ್) ಸ್ಥಾಪಿಸುವ ಸಂಬಂಧ ತಜ್ಞರ ಸಮಿತಿ ರಚಿಸಿರುವ ಕರಡು ನಿಯಮಾವಳಿಗಳಿಗೆ ಮೈಸೂರು ವಿವಿ ಸಿಂಡಿಕೇಟ್ ಸಭೆ ಸಮ್ಮತಿ ಸೂಚಿಸಿದೆ.
ಉನ್ನತ ಶಿಕ್ಷಣವನ್ನು ಮನೆ ಬಾಗಿಲಿಗೆ ತಲುಪಿಸುವ ಹಾಗೂ ಅದನ್ನು ಹೆಚ್ಚು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅಂಚೆ-ತೆರಪಿನ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದ ದೇಶದ ಮೊತ್ತ ಮೊದಲ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯದ್ದು. ದೇ. ಜವರೇಗೌಡರ ವಿಶೇಷ ಆಸಕ್ತಿಯ ಪರಿಣಾಮ ೧೯೬೯ರಲ್ಲಿ ಈ ಶಿಕ್ಷಣ ಪದ್ಧತಿ ಆರಂಭವಾಯಿತು. ಬಳಿಕ ದೇಶದ ಇತರೆ ಎಲ್ಲ ವಿವಿಗಳು ಕೂಡ ಈ ಪದ್ಧತಿಯನ್ನು ಆರಂಭಿಸಿದವು.
ದೂರ ಶಿಕ್ಷಣದ ಮೂಲಕ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಸುತ್ತಿರುವ ಹೊಸದಿಲ್ಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯಕ್ಕೂ (ಇಗ್ನೋ) ಮೈಸೂರು ವಿವಿಯ ಅಂಚೆ-ತೆರಪಿನ ಶಿಕ್ಷಣ ಕ್ರಮವೇ ಸ್ಫೂರ್ತಿ.
ಸುಮಾರು ೨೮ ವರ್ಷಗಳ ಕಾಲ ಈ ಶಿಕ್ಷಣ ಪದ್ಧತಿಯಡಿ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ನೀಡಿದ ಮೈಸೂರು ವಿವಿ, ೧೯೯೮ರಲ್ಲಿ ತಾತ್ಕಾಲಿಕವಾಗಿ ಈ ಪದ್ಧತಿಗೆ ವಿರಾಮ ನೀಡಿತು. ಏಕೆಂದರೆ- ವರ್ಷದಿಂದ ವರ್ಷಕ್ಕೆ ಈ ಪದ್ಧತಿ ಜನಪ್ರಿಯವಾಗಲಾರಂಭಿಸಿದ್ದನ್ನು ಗಮನಿಸಿದ ಕರ್ನಾಟಕ ಸರಕಾರ, ಮೈಸೂರು ವಿವಿಯ ನೆರಳಿನಲ್ಲಿಯೇ ಅಂಚೆ- ತೆರಪಿನ ಶಿಕ್ಷಣ ನೀಡಲು ಪ್ರತ್ಯೇಕ ವಿವಿಯೊಂದನ್ನು ಸ್ಥಾಪಿಸಿತು. ಹಾಗೆ ಆರಂಭವಾದ ವಿವಿಯೇ ಗಂಗೋತ್ರಿಯ ಅಂಗಳದಲ್ಲಿ ಸ್ವಾತಂತ್ರ್ಯವಾಗಿ ಬೆಳೆದು ನಿಂತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ !
೨೦೦೫ರಲ್ಲಿ ಮರು ಪ್ರಯತ್ನ : ಮುಕ್ತ ವಿವಿ ಸ್ಥಾಪನೆ ಬಳಿಕ ನಿಲ್ಲಿಸಿದ ಅಂಚೆ-ತರೆಪಿನ ಶಿಕ್ಷಣ ಕ್ರಮವನ್ನು ೨೦೦೫ರಲ್ಲಿ ಪುನರಾರಂಭಿಸಲು ಮೈಸೂರು ವಿವಿ ಪ್ರಯತ್ನ ನಡೆಸಿತು. ಆ ವೇಳೆಗೆ ಕರ್ನಾಟಕ ರಾಜ್ಯ ವಿವಿಗಳ ಕಾಯ್ದೆ -೨೦೦೨ ಜಾರಿಗೆ ಬಂದಿದ್ದು; ದೂರ ಶಿಕ್ಷಣ ಪದ್ಧತಿಯಡಿ ಪದವಿ ಬಯಸುವವರು ಬೇಡಿಕೆ ಹೆಚ್ಚಿದ್ದು ಹಾಗೂ ಸಂಪನ್ಮೂಲ ಕ್ರೋಢಿಕರಣ ಸಾಧ್ಯ ಎಂಬುದನ್ನು ಕೆಲವು ವಿವಿಗಳು ಮಾಡಿ ತೋರಿಸಿದ್ದು- ಸೇರಿದಂತೆ ನಾನಾ ಕಾರಣಗಳನ್ನು ಗಮನಿಸಿಯೇ ಮೈಸೂರು ವಿವಿ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿತು. ಕುವೆಂಪು ವಿವಿ, ಕರ್ನಾಟಕ ವಿವಿ, ಬೆಂಗಳೂರು ವಿವಿ ಸೇರಿದಂತೆ ಇತರೆ ಸಾಂಪ್ರದಾಯಿಕ ವಿವಿಗಳು ವಿವಿಯ ಹೊಸ ಕಾಯ್ದೆಯ ಪ್ರಯೋಜನ ಪಡೆದು, ದೂರ ಶಿಕ್ಷಣವನ್ನು ಆರಂಭಿಸಿದ್ದವು. ಈ ಧೈರ್ಯದ ಮೇಲೆ ಮೈಸೂರು ವಿವಿ ನಡೆಸಿದ ಪ್ರಯತ್ನಕ್ಕೆ ಅಂದಿನ ಕುಲಾಧಿಪತಿ ಟಿ. ಎನ್. ಚತುರ್ವೇದಿ ಮಾನ್ಯ ಮಾಡಲಿಲ್ಲ. ಮೈಸೂರು ವಿವಿ ಅಂಗಳದ ಪಕ್ಕದಲ್ಲಿಯೇ, ದೂರ ಶಿಕ್ಷಣ ನೀಡುವುದಕ್ಕಾಗಿಯೇ ಇರುವ ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿದೆ. ನೆರೆ-ಹೊರೆಯ ಎರಡು ವಿವಿಗಳು ಒಂದೇ ರೀತಿಯ ಶಿಕ್ಷಣ ಪದ್ಧತಿ ಅನುಸರಿಸುವುದು ಸಲ್ಲದು ಎಂದು ರಾಜ್ಯಪಾಲರು ಬುದ್ಧಿಮಾತು ಹೇಳಿದ್ದರು.
ವಸ್ತ್ರ ಸಂಹಿತೆ ಬದಲು: ಘಟಿಕೋತ್ಸವದ ವಸ್ತ್ರ ಸಂಹಿತೆ ಬದಲಿಸಬೇಕೆಂಬ ವಿವಿಯ ಅಪೇಕ್ಷೆ ವರ್ಷದ ಮಟ್ಟಿಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಿರುವ ಪದ್ಧತಿಯನ್ನು ಕೈ ಬಿಟ್ಟು, ಮೈಸೂರು ಪೇಟ ಮತ್ತು ಭಾರತೀಯ ಸರಳು ಉಡುಪನ್ನೇ ಘಟಿಕೋತ್ಸವದ ‘ವೇಷ-ಭೂಷಣ’ವಾಗಿ ಬಿಂಬಿಸಬೇಕು ಎಂದು ವಿವಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಕುಲಪತಿ ಪ್ರೊ. ತಳವಾರ್ ವಿಶೇಷ ಆಸಕ್ತಿ ವಹಿಸಿ ಉಪ ಸಮಿತಿಯನ್ನು ರಚಿಸಿದ್ದರು. ಸಮಿತಿ ಹಲವು ಸಭೆಗಳನ್ನೂ ನಡೆಸಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಮಿತಿಯಲ್ಲಿರುವ ಪರೀಕ್ಷಾಂಗ ಕುಲಸಚಿವ ಬಿ. ರಾಮು ಅವರು ವಸ್ತ್ರ ಸಂಹಿತೆ ಬದಲಿಸಲು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ.
ಮತ್ತೆ ಚಿಗುರಿದ ಕನಸು
ಈಗ ಉನ್ನತ ಶಿಕ್ಷಣದ ಆಸೆ-ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಿವೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಬರುತ್ತಿರುವವರ ಸಂಖ್ಯೆ ಕೇವಲ ಶೇ. ೧೩.೭ರಷ್ಟಿದೆ. ಈ ಪ್ರಮಾಣವನ್ನು ೨೦೨೦ರ ವೇಳೆಗೆ ಶೇ. ೨೫ರಷ್ಟು ಮುಟ್ಟಿಸಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಯಕೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾಂಪ್ರದಾಯಿಕ ವಿವಿಗಳು ದೂರ ಶಿಕ್ಷಣ ಆರಂಭಿಸಲು ಯುಜಿಸಿ ಮತ್ತು ದೂರ ಶಿಕ್ಷಣ ಮಂಡಳಿಗಳೇ ಪ್ರೋತ್ಸಾಹ ನೀಡುತ್ತಿವೆ. ಇದನ್ನು ಗ್ರಹಿಸಿರುವ ಮೈಸೂರು ವಿವಿ ಈಗ ಅಂಚೆ-ತೆರಪಿನ ಶಿಕ್ಷಣ ನೀಡಲು ಪ್ರಯತ್ನ ಆರಂಭಿಸಿದೆ. ಬದಲಾದ ಸನ್ನಿವೇಶದಲ್ಲಿ ಈಗಿನ ಕುಲಾಧಿಪತಿ ಹನ್ಸ್‌ರಾಜ್ ಭಾರದ್ವಾಜ್ ವಿವಿಯ ಪ್ರಯತ್ನಕ್ಕೆ ಬೆಂಬಲ ನೀಡುವ ಸಾಧ್ಯತೆಯೇ ಹೆಚ್ಚಿದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ೨೦೦೦ರ ಕಾಯ್ದೆ ಎಲ್ಲೂ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದೆ. ಕಾಯ್ದೆಯ ಪ್ರಕಾರ ಸಾಂಪ್ರದಾಯಿಕ ವಿವಿಗಳು ‘ದೂರ ಶಿಕ್ಷಣ’ ಪದ್ಧತಿ ಆರಂಭಿಸುವಂತಿಲ್ಲ. ಆದರೆ, ಕರೆಸ್ಪಾಂಡೆನ್ಸ್ (ಅಂಚೆ)ಕೋರ್ಸ್ ನಡೆಸಲು ಯಾವುದೇ ಅಡ್ಡಿ ಇಲ್ಲ. ಈ ನಿಯಮವನ್ನೇ ಮೈಸೂರು ವಿವಿ ಗಟ್ಟಿಯಾಗಿ ಹಿಡಿದುಕೊಂಡಿದೆ. ಹಾಗಾಗಿಯೇ ವಿವಿ ಕೋರ್ಸ್‌ಗೆ ಹೆಸರಿಡುವ ಯತ್ನದಲ್ಲಿಯೇ ಬುದ್ಧಿವಂತಿಕೆ ಪ್ರದರ್ಶಿಸಿದೆ. ನೆನಪಿರಲಿ- ವಿವಿ ಆರಂಭಿಸುತ್ತಿರುವುದು ದೂರ ಶಿಕ್ಷಣವಲ್ಲ. ಅಂಚೆ ಮತ್ತು ತೆರಪಿನ ಶಿಕ್ಷಣ !

ದಿಲ್ಲಿ ಅಧಿಕಾರಿಗಳ ಮೂರ್ಖತನದ ಪರಮಾವಧಿ



ಅಂದು ಬೆಳಗಾವಿ ಮಹಾರಾಷ್ಟ್ರಕ್ಕೆ, ಇಂದು ಮೈಸೂರು ಕೇರಳಕ್ಕೆ
ವಿಕ ಸುದ್ದಿಲೋಕ ಪಿರಿಯಾಪಟ್ಟಣ
‘ಬೆಳಗಾವಿ‘ಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಪ್ರಮಾದವೆಸಗಿದ ಉಪರಾಷ್ಟ್ರಪತಿ ಕಾರ‍್ಯಾಲಯ ಕ್ಷಮೆ ಕೋರಿದ್ದು ಹಳೆಯ ಸಂಗತಿ. ಈಗೇನಿದ್ದರೂ ಸುದ್ದಿ ರಾಷ್ಟ್ರಪತಿ ಕಾರ‍್ಯಾಲಯದ್ದು.
ರಾಷ್ಟ್ರಪತಿ ಕಾರ‍್ಯಾಲಯದ ಅಧಿಕಾರಿಗಳ ಪ್ರಕಾರ ಮೈಸೂರು ಕೇರಳ ರಾಜ್ಯಕ್ಕೆ ಸೇರಿದೆ ! ರಾಷ್ಟ್ರಪತಿ ಭವನದ ಅಧಿಕಾರಿಗಳು ಮೈಸೂರು ಕೇರಳ ದಲ್ಲಿದೆ ಎಂದು ತಿಳಿದು ಕರ್ನಾಟಕ ಮಹಿಳೆ ಯೊಬ್ಬರು ದೂರು ನೀಡಿದ ಪತ್ರವನ್ನು ಕೇರಳದ ಮುಖ್ಯ ಕಾರ‍್ಯದರ್ಶಿಯವರಿಗೆ ರವಾನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಿರುವ ಉಪರಾಷ್ಟ್ರಪತಿ ಕಚೇರಿಯ ಅಧಿಕಾರಿಗಳಿಗೂ ಒಂದು ಹೆಜ್ಜೆ ಮುಂದೆ ಹೋದ ರಾಷ್ಟ್ರಪತಿ ಭವನದ ಅಧಿಕಾರಿಗಳು ಮೈಸೂರು ಜಿಲ್ಲೆಯನ್ನು ಕೇರಳಕ್ಕೆ ಸೇರಿಸಿದ್ದು ಬೆಳಕಿಗೆ ಬಂದಿದ್ದೇ ತಡವಾಗಿ.
ಪಿರಿಯಾಪಟ್ಟಣ ತಾಲೂಕಿನ ಹಳೆಪೇಟೆ ಕಂಠಾಪುರ ನಿವಾಸಿ ಸಹನಾ ಆರ್ಯ ಎಂಬುವವರು ತಾಲೂಕಿನ ಅಕ್ರಮದ ಬಗ್ಗೆ ದೂರು ನೀಡಿ ೨೦೦೮ರ ಮಾ.೧೯ ರಂದು ರಾಷ್ಟ್ರಪತಿಗಳಿಗೆ ಅರ್ಜಿಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಕೇರಳದ ಮುಖ್ಯಕಾರ್ಯ ದರ್ಶಿಯವರಿಗೆ ಕಳುಹಿಸಿರುವುದಾಗಿ ತಿಳಿಸಿ, ವಿಳಾಸದಲ್ಲಿ ‘.....ಮೈಸೂರು, ಕೇರಳ ’ ಎಂದು ನಮೂದಿಸಿ ಹಿಂಬರಹ ಕಳುಹಿಸಿದರು. ಈ ಪತ್ರಕ್ಕೆ ಇಲಾಖೆಯ ಅಧೀನಕಾರ್ಯದರ್ಶಿ ಅಶೀಶ್‌ಕಾಲಿಯಾ ಸಹಿ ಹಾಕಿದ್ದಾರೆ.

ಕೊಟ್ಟವನು ‘ಪಟ್ಟ’ಭದ್ರ; ಬಾಚ್ಕೊಂಡವ ಈರಭದ್ರ !


ಪಿ.ಓಂಕಾರ್ ಮೈಸೂರು
ಮೈಸೂರು ಮಹಾನಗರ ಪಾಲಿಕೆಯಲ್ಲಿ ಸದಸ್ಯರ ‘ಖರೀದಿ ಹಂಗಾಮ’ಕ್ಕೆ ತಾತ್ಕಾಲಿಕ ತೆರೆಬಿದ್ದಿದ್ದು,‘ಮರುಖರೀದಿ’ವ್ಯವಹಾರ ಬಿರುಸಾಗಿದೆ !
ಒಂದೂವರೆ ವರ್ಷದಿಂದ ನಡೆಯುತ್ತಿರುವ ‘ಆಪರೇಷನ್ ಕಮಲ’, ‘ಆಪರೇಷನ್ ಸೈಡ್ ಎಫೆಕ್ಟ್’ ವಿದ್ಯಮಾನಗಳು ‘ಕೊಟ್ಟವನು ಕೋಡಂಗಿ,ಈಸ್ಕೊಂಡವನು ಈರಭದ್ರ...’ ಗಾದೆ ಮಾತಿಗೆ ಅನ್ವರ್ಥ.
ಸದಸ್ಯರ ಖರೀದಿ ಮೂಲಕ ಮಹಾ ನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದ ಬಿಜೆಪಿ ನಾಯಕರದ್ದು ಕೋಡಂಗಿಯ ಸ್ಥಿತಿ. ‘ಅಭಿವೃದ್ಧಿ’ಯ ಮಂತ್ರ ಹೇಳುತ್ತಲೇ ಹಣ ಮೋಹದ ಮಂತ್ರದಂಡಕ್ಕೆ ಬಲಿಯಾಗಿ ‘ಮಾರಿಕೊಂಡ ’ಸದಸ್ಯರದ್ದು ‘ಈರಭದ್ರ’ನ ಅಪರಾವತಾರ.
ಮೋಹ ಜಾಲ: ಪಾಲಿಕೆಯಲ್ಲಿ ಮೊದಲ ‘ಆಪರೇಷನ್ ಕಮಲ’ನಡೆದದ್ದು ೨೦೦೮ರ ಜುಲೈನಲ್ಲಿ. ೧೮ ಸ್ಥಾನ ಹೊಂದಿದ್ದ ಬಿಜೆಪಿ ೬೫ ಸದಸ್ಯ ಬಲದ ಪಾಲಿಕೆ ಚುಕ್ಕಾಣಿ ಹಿಡಿದೇ ತೀರುವ ಪ್ರಯತ್ನದ ಫಲ ಅದು. ಆಗ, ರಾಜ್ಯದೆಲ್ಲೆಡೆ ‘ಅಪರೇಷನ್ ಕಮಲ’ದ್ದೇ ಸದ್ದು. ಅದೇ ‘ಮೋಹ ಜಾಲ’ವನ್ನು ಇಲ್ಲಿಯೂ ಬೀಸಲಾಗಿತ್ತು. ಖರೀದಿ ವ್ಯವಹಾರದ ‘ಸುಪಾರಿ’ ಪಡೆದಿದ್ದ ಶಾಸಕರಾದ ಎಸ್.ಎ.ರಾಮದಾಸ್, ಸಿದ್ದರಾಜು ಮತ್ತಿತರ ಮುಖಂಡರು ೮ ಜಾ.ದಳ ಸದಸ್ಯರು,ಇಬ್ಬರು ಪಕ್ಷೇತರರನ್ನು ‘ಬಲೆ ’ಗೆ ಕೆಡವಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ‘ಆತ್ಮೀಯವಾಗಿ’ ಎಲ್ಲರನ್ನೂ ಬರಮಾಡಿಕೊಂಡಿದ್ದರು.
ಶಾಂತಂ ಪಾಪಂ: ಅತ್ಯಂತ ಖಚಿತ ಮೂಲಗಳ ಪ್ರಕಾರ ಪ್ರತಿ ಸದಸ್ಯರ ‘ಖರೀದಿ’ಗೆ ಬಿಜೆಪಿ ತೊಡಗಿಸಿದ್ದು ಬರೋಬ್ಬರಿ ೨೦ ಲಕ್ಷ ರೂ. ‘ಮಧ್ಯವರ್ತಿ’ಗಳು ಕೈಚಳಕ ಪ್ರದರ್ಶಿಸಿದ್ದರಿಂದ ಕೆಲವರಿಗೆ ೧ ರಿಂದ ೨ ಲಕ್ಷ ‘ಕಡಿತ’ವಾಯಿತಾದರೂ ದೊಡ್ಡ ಮೊತ್ತಕ್ಕೆ ಮೋಸವಾಗಲಿಲ್ಲ.
ಆದರೆ, ಮಾರಾಟ ಮಾಡಿಕೊಂಡ ಸದಸ್ಯರು ಅದನ್ನೆಲ್ಲ ಒಪ್ಪಲು ತಯಾರಿರಲಿಲ್ಲ. ‘ಅಯ್ಯಯ್ಯೋ, ಎಲ್ಲಾದರೂ ಹಣ ಪಡೆಯು ವುದುಂಟೆ. ಶಾಂತಂ-ಪಾಪಂ, ನಮ್ಮದೇನಿದ್ದರೂ ಅಭಿವೃದ್ಧಿ ಕನಸು. ವಾರ್ಡ್ ಅಭಿವೃದ್ಧಿಗೆ ಹೆಚ್ಚು ಹಣ ಹರಿದು ಬರುತ್ತದೆ ಎಂಬ ನಿರೀಕ್ಷೆ ಯೊಂದಿಗೆ ಆಡಳಿತ ಪಕ್ಷಕ್ಕೆ ಸೇರುತ್ತಿದ್ದೇವೆ...’ ಎಂದು ಹತ್ತೂ ಜನ ಗಲ್ಲ ತಟ್ಟಿಕೊಂಡಿದ್ದರು.
ಈಗ ಉಲ್ಟಾ ಕತೆ: ಈ ಪೈಕಿ,ಜಾ.ದಳಕ್ಕೆ ಕೈಕೊಟ್ಟು ೨೦೦೮ ಜುಲೈ ೨೮ ರಂದು ಬಿಜೆಪಿ ಸೇರಿದ ಎಂಟು ಮಂದಿ ತಮ್ಮ ವಾರ್ಡನ್ನು ಅದೇನು ಅಭಿವೃದ್ಧಿ ಮಾಡಿದರೋ, ಸರಕಾರ ಅದೆಷ್ಟು ನೆರವಾಯಿತೋ ಆ ‘ಮತದಾರರ ಪ್ರಭು’ವೇ ಬಲ್ಲ.ಆದರೆ,ಈಗ ಇದ್ದಕ್ಕಿದ್ದಂತೆ ‘ಉಲ್ಟಾ ’ ಹೊಡೆದಿದ್ದಾರೆ. ಪಕ್ಷ ತ್ಯಜಿಸುವಾಗಿ ‘ಎಚ್.ಡಿ. ದೇವೇಗೌಡರ ಕುಟುಂಬ ರಾಜಕೀಯ ಅಸಹನೀಯ’ ಎಂದು ಕೊಂಕು ನುಡಿದಿದ್ದವರು ‘ಹಳೆ ಗಂಡನ ಪಾದ’ಕ್ಕೆ ಶರಣೆಂದಿದ್ದಾರೆ.
ರಕ್ಷಣಾತ್ಮಕ ಆಟ: ಅಷ್ಟಕ್ಕೂ ಆಗಿದ್ದೇನು? ಕಳೆದ ಫೆಬ್ರವರಿಯಲ್ಲಿ ನಡೆದ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಇವರೇನಾದರೂ ಮತ ಹಾಕಿದ್ದರೆ ಈ ಹೊತ್ತಿಗಾಗಲೇ ಸದಸ್ಯತ್ವಕ್ಕೆ ‘ಎಳ್ಳು ನೀರು’ ಬಿಟ್ಟಿರಬೇಕಿತ್ತು. ಆದರೆ, ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್-ಜಾ.ದಳ ಪ್ರತಿತಂತ್ರ ಹೆಣೆದದ್ದು,ಜಾ.ದಳ ವಿಪ್ ನೀಡುವ ಗೋಜಿಗೆ ಹೋಗದಿದ್ದದ್ದು, ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವ ಸ್ಥಿತಿ ಬಾರದೆ ಹೋಗಿದ್ದರಿಂದ ಬಚಾವಾಗಿದ್ದರು. ಮಾತ್ರವಲ್ಲ, ಬಿಜೆಪಿ ಜತೆ ‘ನೇರ ’ಗುರುತಿಸಿಕೊಳ್ಳದೆ ಪ್ರತ್ಯೇಕ ಗುಂಪಾಗಿ ಪಾಲಿಕೆಯಲ್ಲಿ ಕುಳಿತುಕೊಳ್ಳುವ ಮೂಲಕ ಕಾನೂನು ಅಡಕತ್ತರಿಯಿಂದ ಪಾರಾಗಿದ್ದರು.ಆದರೆ,ಮತ್ತೆ ಈ ತಿಂಗಳು ನಡೆಯುವ ಮೇಯರ್-ಉಪಮೇಯರ್ ಚುನಾವಣೆ ಯಲ್ಲಿಯೂ ಅದೇ ರೀತಿ ‘ರಕ್ಷಣಾತ್ಮಕ ಆಟ’ಸಾಧ್ಯವಿರಲಿಲ್ಲ. ಏನೇ ಆದರೂ ಈ ಬಾರಿ ‘ವಿಪ್’ ಜಾರಿ ಮಾಡುವ ಮೂಲಕ ‘ಪಕ್ಷದ್ರೋಹಿ’ಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಜಾ.ದಳ ಮುಖಂಡರು ನಿರ್ಧರಿಸಿದ್ದರು.
ಆತಂಕದ ಗಂಟು: ಈ ಮಧ್ಯೆ,ಮಂಡ್ಯ, ಕೊಳ್ಳೇಗಾಲ ನಗರಸಭೆಯ ತಲಾ ಹತ್ತು ಮಂದಿ ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿಯಾಯಿತು. ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಈ ಎಲ್ಲರ ಸದಸ್ಯತ್ವವನ್ನು ಹೈಕೋರ್ಟ್ ಅನರ್ಹಗೊಳಿಸಿದ ನಂತರ ಎಂಟು ಮಂದಿ ತಲೆ, ಮುಖದ ಮೇಲೆ ಆತಂಕದ ‘ಗಂಟು’ ಹೊತ್ತುಕೊಂಡೇ ಓಡಾಡುತ್ತಿದ್ದರು.
ಮರುಖರೀದಿ ಶಂಕೆ: ಸದ್ಯ,ಜಾ.ದಳ ಮುಖಂಡರು ಕರೆದದ್ದೇ ಸಾಕೆಂಬಂತೆ ೭ ಮಂದಿ ಬಿಜೆಪಿ ಸಾಹವಾಸಕ್ಕೆ ಗುಡ್‌ಬೈ ಹೇಳಿ, ಗೂಡಿಗೆ ಮರಳಿದ್ದಾರೆ. ‘ನಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ಮಾತಿನಂತೆ ನಡೆದುಕೊಳ್ಳಲಿಲ್ಲ. ಅಂತಿಮವಾಗಿ ಸದಸ್ಯತ್ವ ಉಳಿಯಬೇಕಾಗಿದ್ದರಿಂದ ಗೂಡಿಗೆ ಮರಳುತ್ತಿದ್ದೇವೆ...’ಎಂದು ಹೊಸ ‘ಪ್ಲೇಟ್ ’ಹಾಕುತ್ತಿದ್ದಾರೆ. ಆದರೆ, ‘ನಿಜ ಸಂಗತಿ ಇಷ್ಟೇ ಅಲ್ಲ,ಪಕ್ಷಕ್ಕೆ ಮರಳಲಿಕ್ಕೂ ದೊಡ್ಡ ಮೊತ್ತದ ಗಂಟು ಪಡೆದಿದ್ದಾರೆ. ಜಾ.ದಳ ವರಿಷ್ಠರು ಪಕ್ಷ ಮರು ಸಂಘಟನೆ ಹಿನ್ನೆಲೆಯಲ್ಲಿ ೮ ಮಂದಿಯನ್ನು ಮರು ಖರೀದಿ ಮಾಡಿದ್ದಾರೆ’ ಎಂಬ ಶಂಕೆಗಳಿವೆ.
‘ಖರೀದಿ ಸರಕಿನಿಂತಾಗಿರುವ’ ಸದಸ್ಯರು ಸಹಜವಾಗಿಯೇ ಇದನ್ನೆಲ್ಲ ನಿರಾಕರಿಸುತ್ತಾರಾದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.ರಾಜಕೀಯ ನೈತಿಕತೆ, ಪಕ್ಷ ನಿಷ್ಠೆ, ಪ್ರಾಮಾಣಿಕತೆ ಅದೆಲ್ಲ ಒತ್ತಟ್ಟಿಗಿರಲಿ, ‘ಹುಡಿ ಹಾರಿಸಲು’ ಒಂದಷ್ಟು ಲಕ್ಷ ಕಿಸೆ ಸೇರಿತಲ್ಲ ಎಂಬುದಷ್ಟೇ ಅವರ ಪಾಲಿನ ಸಮಾಧಾನ. ಅದೇ, ಮತದಾರರ ಪಾಲಿನ ದುರದೃಷ್ಟ ! ಒಟ್ಟಿನಲ್ಲಿ ಯಾರ‍್ದೋ ದುಡ್ಡು, ಎಲ್ಲಮ್ಮನ ಜಾತ್ರೆ,ಕೊಟ್ಟವ ಕೋಡಂಗಿ, ಈಸ್ಕೊಂಡವ ಈರಭದ್ರ !!
ತಂತ್ರ ವಿಫಲ ಹೇಗೆ?
ಕಾಂಗ್ರ್ರೆಸ್ ವಶದಲ್ಲಿರುವ ನಗರಪಾಲಿಕೆ ಆಡಳಿತವನ್ನು ತೆಕ್ಕೆಗೆ ಸೆಳೆದುಕೊಳ್ಳುವುದೇ ಬಿಜೆಪಿ ‘ಆಪರೇಷನ್’ನ ಮಹದೋದ್ದೇಶ. ಮೊದಲ ಕಾರ‍್ಯಾಚರಣೆಯಲ್ಲಿ ‘ಬೆಲೆ’ಗೆ ಬಿದ್ದ ೮ ಜಾ.ದಳ,ಇಬ್ಬರು ಪಕ್ಷೇತರರು ಸೇರಿ ಬಿಜೆಪಿ ಬಲ ೨೬. ಆದರೆ,ಕಳೆದ ಫೆಬ್ರವರಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಗೆಲುವಿನ ಸಂಖ್ಯೆ ‘೩೩’ನ್ನು ತಲುಪಲು ಏಳು ಸದಸ್ಯರ ಕೊರತೆ.
ಇನ್ನೂ ಕೆಲವು ಜಾ.ದಳ ಸದಸ್ಯರ ‘ಖರೀದಿ’ಪ್ರಯತ್ನ ಫಲಿಸಲಿಲ್ಲ. ಮಾರಿಕೊಂಡವರು ಈಗ ವಾಪಸಾಗಲೂ ಇದು ಮತ್ತೊಂದು ಕಾರಣ.ಕಾರ‍್ಯತಂತ್ರದಂತೆ ಜಾ.ದಳದ ೧೨ ಸದಸ್ಯರನ್ನು (ಮೂರನೇ ಎರಡರಷ್ಟು) ಸೆಳೆಯ ಬೇಕಿತ್ತು.ಹಾಗಾದರೆ ಮಾತ್ರ ಪಕ್ಷಾಂತರ ನಿಷೇಧ ಕಾಯಿದೆಯಿಂದ ಬಚಾವಾಗಿ ಎಲ್ಲರೂ ಬಿಜೆಪಿ ಸೇರಬಹುದಿತ್ತು. ಆದರೆ, ಅಷ್ಟರಲ್ಲೇ ಎಚ್ಚೆತ್ತ ‘ದಳಪತಿ’ಗಳು ಉಳಿದ ‘ವಿಕೆಟ್’ ಗಳು ಉದುರದಂತೆ ಬಂದೋಬಸ್ತ್ ಮಾಡಿದ್ದರು.
ಪಟ್ಟು ಬಿಡದ ಬಿಜೆಪಿ ಮುಖಂಡರು ಕಾಂಗ್ರೆಸ್ ಬುಟ್ಟಿಗೆ ಕೈಹಾಕಿದರು. ಆರು ಸದಸ್ಯರ ಜತೆ ವ್ಯವಹಾರ ಖುದುರಿತು. ಆದರೆ, ಪಕ್ಷಾಂತರ ನಿಷೇಧ ಕಾಯಿದೆ ಭಯ. ಆರು ಮಂದಿ (ನಂದಕುಮಾರ್, ಸೋಮಶೇಖರ್, ವನಿತಾ, ಮಹದೇವಮ್ಮ, ನಿಗಾರ ಸುಲ್ತಾನ್, ಫರಿದಾಬೇಗಂ) ಚುನಾವಣಾ ಸಭೆಗೆ ಗೈರು ಹಾಜರಾಗುವ ಮೂಲಕ ರಕ್ಷಣಾತ್ಮಕ ವರಸೆ ಪ್ರದರ್ಶಿಸಿದರು.
ಆದರೆ, ಪ್ರತಿ ತಂತ್ರ ಹೊಸೆದ ಕಾಂಗ್ರೆಸ್-ಜಾ.ದಳ ಮುಖಂಡರು ಬಿಜೆಪಿ ಪಾಳಯದಲ್ಲಿದ್ದ ಪಕ್ಷೇತರ ಸದಸ್ಯ ‘ಪಂಡು’ ವನ್ನು ಸೆಳೆದುಕೊಂಡು ಮೇಯರ್ ಗಾದಿ ಉಳಿಸಿಕೊಂಡರು. ನಂತರ, ಸ್ಥಳೀಯ ಮತ್ತು ರಾಜ್ಯ ಬಿಜೆಪಿಯಲ್ಲಿ ನಡೆದ ವಿದ್ಯಮಾನಗಳಿಂದ ‘ಆಪರೇಷನ್ ಸಂಸ್ಕೃತಿ’ಗೆ ಅಂಕುಶ ಬಿದ್ದಿತು. ಅಧಿಕಾರ ‘ಮೇಲಾಟ’ದಿಂದ ಉತ್ಸಾಹ ಕಳೆದುಕೊಂಡ ಮುಖಂಡರು ಮತ್ತೆ ಕಾರ‍್ಯಾಚರಣೆಗೆ ಮುಂದಾಗಲಿಲ್ಲ. ಇದೇ ನೆಪವಾಗಿ, ೭ ಮಂದಿ ‘ಸುರಕ್ಷಿತ ತಾಣ’ಕ್ಕೆ ಮರಳಿದ್ದಾರೆ.
ಭರಿಸಲಾಗದ ‘ನಷ್ಟ’
ಮಾರಿಕೊಂಡವರ ಕತೆ ಏನೇ ಇರಲಿ, ಖರೀದಿದಾರರ ಸ್ಥಿತಿ ಅಯ್ಯೋ ಪಾಪ. ಅಧಿಕಾರವೂ ಬರಲಿಲ್ಲ; ಕೊಂಡ ‘ಕುದುರೆ’ ಗಳೂ ಉಳಿಯಲಿಲ್ಲ. ಇವರ ಮೇಲೆ ಭರವಸೆ ಇಟ್ಟು ಹೂಡಿದ ಅನಾಮತ್ತು ಒಂದೂವರೆ ಕೋಟಿ ರೂಪಾಯಿ ಹೊಳೆ ಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಅದೇನು ಅವರು ದುಡಿದದ್ದಲ್ಲ, ಸ್ವಂತ ಗಳಿಕೆಯೂ ಅಲ್ಲ,‘ಆಪರೇಷನ್ ನಿರತ’ ರಾಜಕಾರಣಿಗಳಿಗೆ ಅದು ಹೇಳಿಕೊಳ್ಳು ವಂತ ದೊಡ್ಡ ಮೊತ್ತವೂಅಲ್ಲ,ಎಲ್ಲೋ ಹೊಡೆದದ್ದನ್ನು ಇಲ್ಲಿ ಹೂಡಿದ್ದರು ಎನ್ನುವುದು ಬೇರೆ ಮಾತು.ಆದರೆ,ಅಧಿಕಾರ ಹಿಡಿಯುವ ಕನಸು ಕೈಕೊಟ್ಟಿದ್ದು ‘ಸದ್ಯಕ್ಕೆ’ ಭರಿಸಲಾಗದ ನಷ್ಟ. ಕಳೆದು ಕೊಂಡ, ಕೈಸುಟ್ಟುಕೊಂಡ ಬಗ್ಗೆ ‘ಉಗುಳಲೂ’ ಆಗದ, ನುಂಗಲೂ ಆಗದ ಸ್ಥಿತಿ.
ಇವರು ಈರಭದ್ರರು...
ಪಿ.ಪ್ರಭುಮೂರ್ತಿ (ವಾರ್ಡ್ ನಂ.೯),ಕೆಂಪಣ್ಣ (೧೩), ಕೆ.ವಿ. ಮಲ್ಲೇಶ್(೧೮),ಆರ್.ಲಿಂಗಪ್ಪ (೨೦),ಟಿ.ದೇವರಾಜು (೩೪), ಎಂ.ಲಕ್ಷ್ಮಮ್ಮ (೪೮), ಖಮ್ರುದ್ದೀನ್ (೫೫).
ಗೈರು ತಂತ್ರ: ಎಚ್.ಎನ್. ಶ್ರೀಕಂಠಯ್ಯ(೬೦)ಇನ್ನೂ ಮರಳಿಲ್ಲವಾದರೂ ಅವರಿಗೆ ಉಳಿದಿರುವುದು ಅದೊಂದೇ ಮಾರ್ಗ. ಹಾಗೆ ಮಾಡದೆ,ಚುನಾವಣೆ ವೇಳೆ ಗೈರು ಹಾಜರಾಗಿ ಸದಸ್ಯತ್ವ ಉಳಿಸಿಕೊಳ್ಳುವ ‘ಯೋಚನೆ’ ನಡೆಸಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಪ್ರತಿಕ್ರಿಯೆಗೆ ಅವರು ಲಭಿಸಲಿಲ್ಲ.
ಕೈಕೊಟ್ಟವರ ಕತೆ: ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಜತೆ ಗುರುತಿಸಿಕೊಂಡಿ ರುವ ಆರು ಮಂದಿಯ ನಡೆ ಇನ್ನೂ ನಿಗೂಢ. ಕಾಂಗ್ರೆಸ್-ಜಾ.ದಳ ಹೊಂದಾಣಿಕೆ ಮೂಲಕ ಅಧಿಕಾರ ಹಿಡಿಯಬಹುದಾದ್ದರಿಂದ ವರಿಷ್ಠರು ಅವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.ಆದರೆ, ಕಾಯಿದೆ ತೂಗು ಕತ್ತಿಯಿಂದ ತಮ್ಮ ‘ತಲೆ’ ಕಾಯ್ದುಕೊಳ್ಳುವುದು ಈ ೬ಮಂದಿಗೆ ಅನಿವಾರ್ಯ.
ಚಿಂತಾಜನಕ ಸ್ಥಿತಿ
ಭಾರೀ ಮೊತ್ತದ ಆಸೆಗೆ ಬಿದ್ದು ‘ಮಾರಿಕೊಂಡ ’ಕೊಳ್ಳೆಗಾಲ ಮತ್ತು ಮಂಡ್ಯ ನಗರಸಭೆಗಳ ತಲಾ ೧೦ಮಂದಿ ‘ಸದಸ್ಯತ್ವ ವಂಚಿತ’ರ ಕತೆ ತದ್ವಿರುದ್ದ.ಪಕ್ಷಾಂತರ ಹಾಗೂ ವ್ಹಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಕೊಳ್ಳೇಗಾಲ ನಗರಸಭೆಯ ೧೦ ಮಂದಿ ಸದಸ್ಯರ ಸದಸ್ಯತ್ವ ಅನರ್ಹಗೊಂಡಿದ್ದು,ತಡೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ. ಜಾ.ದಳದಿಂದ ಆಯ್ಕೆಯಾಗಿದ್ದ ಸೆಲ್ವರಾಜ್,ಜಿ.ಎಂ. ಸುರೇಶ್ ಸೇರಿ ೧೦ ಮಂದಿ ನಂತರದಲ್ಲಿ ‘ಆಪರೇಷನ್ ಕಾಂಗ್ರೆಸ್’ಗೆ ಶರಣಾಗಿ, ಅಧ್ಯಕ್ಷರಾಗಿದ್ದ ಪರಮೇಶ್ವರಯ್ಯ ಅವರನ್ನು ಕೆಳಗಿಳಿಸಿದ್ದರು.ಸೆಲ್ವರಾಜ್,ಸುರೇಶ್ ಅವರೇ ಅಧ್ಯಕ್ಷ,ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
ಮಂಡ್ಯದಲ್ಲಿ,‘ಆಪರೇಷನ್ ಕಮಲ’ದ ಪಾಲಾಗಿ ಸದಸ್ಯತ್ವ ವಂಚಿತರಾಗಿರುವ ೧೩ಮಂದಿಯ ಕತೆ ಇದಕ್ಕಿಂತ ಚಿಂತಾಜನಕ. ಮೇಲ್ಮನವಿ ಸಲ್ಲಿಸಿರುವ ಎಲ್ಲರೂ,
ಜಾ.ದಳ ವರಿಷ್ಠರ ಜತೆ ಸಂಧಾನ ಪ್ರಯತ್ನ ನಡೆಸು ತ್ತಿದ್ದಾರೆ.‘ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಿ’ ಎಂದು ಎಚ್.ಡಿ. ಕುಮಾರಸ್ವಾಮಿ ಅವರ ಕಾಲು ಹಿಡಿದು ಅಂಗಲಾಚಿ ಕೊಂಡದ್ದೂ ನಡೆದಿದೆ.ಹಣದ ಮೋಹಕ್ಕೆ ಬಿದ್ದು ಪಕ್ಷ ನಿಷ್ಠೆ ಮರೆತರೆ ಏನೆಲ್ಲಾ ಅನುಭವಿಸ ಬೇಕಾಗುತ್ತದೆ ಎಂಬುದಕ್ಕೆ ಇವರು ಉದಾಹರಣೆ.