ದಿಲ್ಲಿ ಅಧಿಕಾರಿಗಳ ಮೂರ್ಖತನದ ಪರಮಾವಧಿ



ಅಂದು ಬೆಳಗಾವಿ ಮಹಾರಾಷ್ಟ್ರಕ್ಕೆ, ಇಂದು ಮೈಸೂರು ಕೇರಳಕ್ಕೆ
ವಿಕ ಸುದ್ದಿಲೋಕ ಪಿರಿಯಾಪಟ್ಟಣ
‘ಬೆಳಗಾವಿ‘ಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಪ್ರಮಾದವೆಸಗಿದ ಉಪರಾಷ್ಟ್ರಪತಿ ಕಾರ‍್ಯಾಲಯ ಕ್ಷಮೆ ಕೋರಿದ್ದು ಹಳೆಯ ಸಂಗತಿ. ಈಗೇನಿದ್ದರೂ ಸುದ್ದಿ ರಾಷ್ಟ್ರಪತಿ ಕಾರ‍್ಯಾಲಯದ್ದು.
ರಾಷ್ಟ್ರಪತಿ ಕಾರ‍್ಯಾಲಯದ ಅಧಿಕಾರಿಗಳ ಪ್ರಕಾರ ಮೈಸೂರು ಕೇರಳ ರಾಜ್ಯಕ್ಕೆ ಸೇರಿದೆ ! ರಾಷ್ಟ್ರಪತಿ ಭವನದ ಅಧಿಕಾರಿಗಳು ಮೈಸೂರು ಕೇರಳ ದಲ್ಲಿದೆ ಎಂದು ತಿಳಿದು ಕರ್ನಾಟಕ ಮಹಿಳೆ ಯೊಬ್ಬರು ದೂರು ನೀಡಿದ ಪತ್ರವನ್ನು ಕೇರಳದ ಮುಖ್ಯ ಕಾರ‍್ಯದರ್ಶಿಯವರಿಗೆ ರವಾನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಿರುವ ಉಪರಾಷ್ಟ್ರಪತಿ ಕಚೇರಿಯ ಅಧಿಕಾರಿಗಳಿಗೂ ಒಂದು ಹೆಜ್ಜೆ ಮುಂದೆ ಹೋದ ರಾಷ್ಟ್ರಪತಿ ಭವನದ ಅಧಿಕಾರಿಗಳು ಮೈಸೂರು ಜಿಲ್ಲೆಯನ್ನು ಕೇರಳಕ್ಕೆ ಸೇರಿಸಿದ್ದು ಬೆಳಕಿಗೆ ಬಂದಿದ್ದೇ ತಡವಾಗಿ.
ಪಿರಿಯಾಪಟ್ಟಣ ತಾಲೂಕಿನ ಹಳೆಪೇಟೆ ಕಂಠಾಪುರ ನಿವಾಸಿ ಸಹನಾ ಆರ್ಯ ಎಂಬುವವರು ತಾಲೂಕಿನ ಅಕ್ರಮದ ಬಗ್ಗೆ ದೂರು ನೀಡಿ ೨೦೦೮ರ ಮಾ.೧೯ ರಂದು ರಾಷ್ಟ್ರಪತಿಗಳಿಗೆ ಅರ್ಜಿಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಕೇರಳದ ಮುಖ್ಯಕಾರ್ಯ ದರ್ಶಿಯವರಿಗೆ ಕಳುಹಿಸಿರುವುದಾಗಿ ತಿಳಿಸಿ, ವಿಳಾಸದಲ್ಲಿ ‘.....ಮೈಸೂರು, ಕೇರಳ ’ ಎಂದು ನಮೂದಿಸಿ ಹಿಂಬರಹ ಕಳುಹಿಸಿದರು. ಈ ಪತ್ರಕ್ಕೆ ಇಲಾಖೆಯ ಅಧೀನಕಾರ್ಯದರ್ಶಿ ಅಶೀಶ್‌ಕಾಲಿಯಾ ಸಹಿ ಹಾಕಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ