ದಟ್ಟಗಳ್ಳಿಯಲ್ಲಿ ಒಂಟಿ ಮನೆ ದರೋಡೆ


ಪ್ರತ್ಯೇಕ ಪ್ರಕರಣ: ಎರಡು ಮನೆ ಕಳವು
ವಿಕ ಸುದ್ದಿಲೋಕ ಮೈಸೂರು ನಗರದ ಹೊರವಲಯದಲ್ಲಿರುವ ಬಡಾವಣೆಯ ಒಂಟಿ ಮನೆಯೊಂದಕ್ಕೆ ನುಗ್ಗಿರುವ ಮೂವರು ದರೋಡೆಕೋರರು, ಮನೆಯವರಿಗೆ ಮಾರಕಾಸ್ತ್ರ ಗಳನ್ನು ತೋರಿಸಿ ೩ ಲಕ್ಷ ರೂ. ಮೌಲ್ಯದ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಿವೇಕಾನಂದ ನಗರಕ್ಕೆ ಸನಿಹದಲ್ಲಿರುವ ದಟ್ಟಗಳ್ಳಿ ಬಡಾವಣೆಯಲ್ಲಿರುವ ಹಿರಿಯ ಭೂ ವಿಜ್ಞಾನಿಯ ಮನೆಯಲ್ಲಿ ದರೋಡೆ ಮಾಡಲು ದುಷ್ಕರ್ಮಿಗಳು ಆಯ್ದುಕೊಂಡಿರುವ ಸಮಯ ಬೆಳಗ್ಗೆ ೭. ಬಡಾ ವಣೆಯ ಸ್ಥಳೀಯರು ಬೆಳಗಿನ ವಿಹಾರ ಮುಗಿಸಿ ಕೊಂಡು ಮನೆ ಸೇರುವ ಹೊತ್ತಿನಲ್ಲಿ ಈ ಕೃತ್ಯ ನಡೆ ದಿರುವುದು ಸ್ಥಳೀಯರಲ್ಲಿ ಆತಂಕದ ಜತೆಗೆ ಎಚ್ಚ ರಿಕೆಯ ಗಂಟೆಯನ್ನೂ ಬಾರಿಸಿದೆ. ಹಾಸನದಲ್ಲಿ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ತಮ್ಮೇಗೌಡ ಎಂಬುವವರ ಮನೆಗೆ ದರೋಡೆಕೋರರು ಪರಿಚಯದವ ರಂತೆ ನುಗ್ಗಿ, ಈ ಕೃತ್ಯ ಎಸಗಿದ್ದಾರೆ.
ತಮ್ಮೇಗೌಡರ ಪತ್ನಿ ಶಶಿಕಲಾ, ತಾಯಿ ಜಯಮ್ಮ, ಮೊಮ್ಮಗಳು ಒಂದೂವರೆ ವರ್ಷದ ಶಾನ್ ಹಾಗೂ ತಮ್ಮೇಗೌಡರ ಅಣ್ಣನ ಮಗಳು ದೀಪಿಕಾ ಅವರು ಮನೆಯಲ್ಲಿ ವಾಸವಿದ್ದು, ಭೂ ವಿಜ್ಞಾನಿ ವಾರಕ್ಕೊಮ್ಮೆ ಹಾಸನದಿಂದ ಬಂದು ಹೋಗುತ್ತಿದ್ದರು.
ಮಂಗಳವಾರ ಮುಂಜಾನೆ ದೀಪಿಕಾ ಹಾಲು ತೆಗೆದುಕೊಂಡು ಮನೆಗೆ ವಾಪಸ್ ಮರಳಿದಾಗ, ದರೋಡೆಕೋರರು ಆಕೆಯನ್ನು ಹಿಂಬಾಲಿಸಿ ‘ತಮ್ಮೇಗೌಡರು ಇದ್ದಾರೆಯೇ...’ ಎಂದು ಪರಿಚಯ ದವಂತೆ ಕೇಳುತ್ತಾ ಒಳನುಗ್ಗಿರುವ ದುಷ್ಕರ್ಮಿಗಳು, ಮನೆಯೊಡತಿ ಶಶಿಕಲಾ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಶಶಿಕಲಾಗೆ ಮಾರಕಾಸ್ತ್ರ ತೋರಿಸಿ, ಮನೆಯಲ್ಲಿದ್ದ ೨೫೦ ಗ್ರಾಂ ಚಿನ್ನಾಭರಣ, ೨೦ ಸಾವಿರ ರೂ. ನಗದು, ಎರಡು ಮೊಬೈಲ್ ಹ್ಯಾಂಡ್ ಸೆಟ್, ಡಿಜಿಟಲ್ ಕ್ಯಾಮೆರಾವನ್ನು ದೋಚಿದ್ದಾರೆ. ಮನೆಯೊಳ ಗಿದ್ದ ದೇಸಿ ನಾಯಿ ಬೊಗಳದೇ ಮೌನವಹಿಸಿದೆ.
ದುಷ್ಕರ್ಮಿಗಳು ಮಂಕಿ ಕ್ಯಾಪ್ ಧರಿಸಿದ್ದರಿಂದ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಎಲ್ಲರೂ ಕನ್ನಡ ಮಾತನಾಡುತ್ತಿದ್ದರಿಂದ, ಈ ಪ್ರದೇಶದ ಜನರ ಚಲನ-ವಲನವನ್ನು ಅಧ್ಯಯನ ಮಾಡಿದವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್. ವಿಷ್ಣುವರ್ಧನ್, ಕುವೆಂಪುನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಜನರಿಗೆ ಎಚ್ಚರಿಕೆಯ ಗಂಟೆ
ಈಗಷ್ಟೇ ಅಲ್ಲೊಂದು -ಇಲ್ಲೊಂದು ಮನೆಗಳು ಏಳುತ್ತಿರುವ ದಟ್ಟಗಳ್ಳಿಯಂಥ ಬಡಾವಣೆಯ ಮನೆ ಗಳಿಗೆ ಇದು ಎಚ್ಚರಿಕೆಯ ಗಂಟೆ. ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ನಿರಂತರ ಸಂಪರ್ಕ ಹೊಂದುವುದು; ಪೊಲೀಸರು ಜಾರಿಗೆ ತಂದಿರುವ ಸಮುದಾಯ ಪೊಲೀಸ್ ಪದ್ಧತಿಯೊಂದಿಗೆ ಕೈ ಜೋಡಿಸುವುದು; ನೆರೆ- ಹೊರೆಯ ಮನೆ ಗಳೊಂದಿಗೆ ಸೌಹಾರ್ದಯುತ ಸಂಪರ್ಕ, ಸಂಬಂಧವನ್ನು ಇಟ್ಟುಕೊಳ್ಳುವುದು; ಯುವಕರ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವಂಥ ಕೆಲಸವನ್ನು ಮಾಡಬೇಕಿದೆ ಎನ್ನುವುದು ಸಮಾಜ ಶಾಸ್ತ್ರಜ್ಞರ ಸಲಹೆ. ಪೊಲೀಸರು ಕೂಡ ನಗರದ ಹೊರವಲಯಗಳ ಕುರಿತು ಹೆಚ್ಚು ಗಮನ ಹರಿಸುವ ಅಗತ್ಯ ಇದೆ ಎಂಬುದು ಸ್ಥಳೀಯರ ಆಗ್ರಹಕ್ಕೆ ಸ್ಪಂದಿಸಬೇಕಿದೆ.
ಮಂಡಿ ಠಾಣೆ ವ್ಯಾಪ್ತಿಯಲ್ಲೂ
ಮಂಡಿ ಠಾಣೆ ವ್ಯಾಪ್ತಿಯ ಎರಡು ಪ್ರತ್ಯೇಕ ಬಡಾ ವಣೆಗಳಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದೆ.
ತಿಲಕ್‌ನಗರದ ೧೮ನೇ ಕ್ರಾಸ್‌ನಲ್ಲಿ ರುವ ಮಹಾ ದೇವಪ್ಪ ಎಂಬುವವರ ಮನೆಯ ಮುಂಬಾಗಿಲು ಮುರಿದು, ಒಳ ನುಗ್ಗಿರುವ ಕಳ್ಳರು ೪೫ ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಹೊತ್ತೊಯ್ದಿದ್ದಾರೆ. ಮನೆಯವರು ಬೆಂಗಳೂರಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಮಂಡಿ ಠಾಣೆ ವ್ಯಾಪ್ತಿಯ ಸುನ್ನಿ ಚೌಕದ ಸಮೀಪ ಇರುವ ಮೂರು ಮಹಡಿ ಮನೆಯಲ್ಲೂ ರಾತ್ರಿ ಕಳ್ಳತನ ನಡೆದಿದೆ. ಮನೆ ಮಾಲೀಕ ಫಯಾಜ್ ಖಾನ್, ಕೆಳಗಡೆ ಮನೆಯಲ್ಲಿ ಮಲಗಿದ್ದಾನೆ. ರಾತ್ರಿ ೧೧.೩೦ರ ಸುಮಾರಿಗೆ ಮೇಲಿನ ಮನೆಯ ಬಾಗಿಲು ಮುರಿದು ಒಳ್ಳನುಗ್ಗಿರುವ ಕಳ್ಳರು, ೧೫ ಸಾವಿರ ರೂ. ನಗದು ಸೇರಿದಂತೆ ೮೫ ಸಾವಿರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿಕೊಂಡು ಹೋಗಿದ್ದಾರೆ.
ಫಯಾಜ್‌ಖಾನ್ ಚಿಕನ್ ಸೆಂಟರ್ ಮಾಲೀಕ ನಾಗಿದ್ದು, ಕಳ್ಳತನ ನಡೆದಿರುವ ವಸ್ತುವಿನ ಮೌಲ್ಯದ ಬಗ್ಗೆ ಹಾಗೂ ಕಾರ್ಯವಿಧಾನದ ಬಗ್ಗೆ ನೀಡಿರುವ ಹೇಳಿಕೆ ತುಸು ಗೊಂದಲದಿಂದ ಕೂಡಿವೆ ಎಂದು ಪೊಲೀಸರು ಸಂಶಯಿಸಿದ್ದಾರೆ. ಮಂಡಿ ಠಾಣೆ ಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಆತ್ಮಹತ್ಯೆಗೆ ಯತ್ನ: ನಲ್ಲಪಟ್ಟಣಂ ಠಾಣೆ ಸಮೀಪ ವೇ ಇರುವ ಹೋಟೆಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು, ಕೆಲಸ ಮಾಡುವ ಸ್ಥಳದಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಮೂಲತಃ ಕೆಆರ್‌ಎಸ್ ನವ ರಾದ ಹೇಮಾ(೩೦) ಈ ಕೃತ್ಯಕ್ಕೆ ಕೈಹಾಕಿದವರು. ಹೋಟೆಲ್ ಮಾಲೀಕರು ತನ್ನನ್ನು ಕೆಲಸದಿಂದ ತೆಗೆದು ಹಾಕಿದರು ಎಂಬ ಕಾರಣಕ್ಕಾಗಿ, ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಸೀಮೆ ಎಣ್ಣೆ ಸುರಿದು ಕೊಂಡಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ