ಮೈಸೂರು ಜಿ.ಪಂ.ನಲ್ಲಿ ಖಾಸಗಿ 'ಕಾರು'-ಬಾರು


ಸರಕಾರವೇ ನೀಡಿರುವ ವಾಹನ ಸುಸ್ಥಿತಿಯಲ್ಲಿದ್ದರೂ ಅದನ್ನು ಗೋದಾಮಿಗೆ ತಳ್ಳಿ, ಬಾಡಿಗೆ ಆಧಾರದಲ್ಲಿ ಪ್ರವಾಸ ಆರಂಭಿಸಿದ್ದಾರೆ ಮೈಸೂರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು. ಇದರಿಂದ ಸರಕಾರಿ ಚಾಲಕರಿಗೆ ಕೆಲಸವೂ ಇಲ್ಲ ಜತೆಗೆ ಸರಕಾರಕ್ಕೆ ತಿಂಗಳಿಗೆ ಸಾವಿರಾರು ರೂ. ನಷ್ಟವಾಗುತ್ತಿದೆ.

ಕೊಡಗಿನ ಕೂಗು


ಕೊಡಗು ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ನಡೆದ ಹೋರಾಟದ ಹಾದಿಯ ಮಾಹಿತಿ ಇಲ್ಲಿದೆ.

ಜಲಾಶಯ ಭಣ ಭಣ..


ಚಾಮರಾಜನಗರ ಗಡಿ ಜಿಲ್ಲೆಯ ಜೋಡಿ ಜಲಾಶಯಗಳೆಂದೇ ಕರೆಯಲಾಗುವ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ನೀರಿಲ್ಲದೆ ಭಣಗುಡುತ್ತಿವೆ.

ಗೊಲ್ಲನಬೀಡು ಶಾಲೆಯ ಗೋಳು ಕೇಳೋರಾರಣ್ಣ !


ಹೆಗ್ಗಡದೇವನಕೋಟೆ ಗಡಿ ಭಾಗದಲ್ಲಿರುವ ಗೊಲ್ಲನ ಬೀಡು ಗ್ರಾಮದ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಅವ್ಯವಸ್ಥೆಗಳದ್ದೆ ಆಟ. ಶಾಲಾ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ಕೊಠಡಿಯಲ್ಲಿ ಕಿಟಕಿ, ಬಾಗಿಲು ಬೋರ್ಡ್ ಗಳಿಲ್ಲ. ಶಾಲೆ ಸುತ್ತ ದುರ್ವಾಸನೆಯದ್ದೆ ಕಾರುಬಾರು.

ಪಶ್ಚಿಮಘಟ್ಟ ಸಂರಕ್ಷಣೆಗೆ ವಿಶ್ವ ಪಾರಂಪರಿಕ ತಾಣದ 'ಮಾನ್ಯತೆ'


ಅಮೂಲ್ಯ ಜೀವ ಸಂಕುಲ ಹಾಗೂ ಹೇರಳ ವನ್ಯಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡ ಪಶ್ಚಿಮಘಟ್ಟ ಪ್ರದೇಶಕ್ಕೆ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ನೀಡಲು ಕೇಂದ್ರ ಸರಕಾರ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಿದೆ.

ಮುಂಗಾರು ಬರಲಿಲ್ಲ; ಕಾವೇರಿ ತುಂಬಲಿಲ್ಲ


ಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿ ಮುಂಗಾರು ಮಳೆ ಪ್ರಾರಂಭದಲ್ಲೇ ಕೈಕೊಟ್ಟಿರುವುದರಿಂದ ಮೈದುಂಬಿ ಹರಿಯಬೇಕಾದ ಕಾವೇರಿ ಬಡವಾಗಿದ್ದು, ಮೈಸೂರು ಭಾಗದಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ಮುಂಗಾರು ಬರಲಿಲ್ಲ


ಇದು ಮುಂದುವರಿದ ಭಾಗ.

ನೂತನ ಪೊಲೀಸ್ ಆಯುಕ್ತರ ಮುಂದೆ ಹಲವು ಸವಾಲು


ಬೆಂಗಳೂರಿನ ನಂತರ ಪ್ರಮುಖ ನಗರವಾಗಿ ಬೆಳೆಯುತ್ತಿರುವ ಮೈಸೂರು ಸಮಸ್ಯೆಗಳಲ್ಲೂ ಮುಂದಿದೆ. ನೂತನ ಪೊಲೀಸ್ ಆಯುಕ್ತರಾಗಿ ನಗರಕ್ಕೆ ಪರಿಚತರೇ ಆದ ಸುನೀಲ್ ಅಗರವಾಲ್ ನೇಮಕಗೊಂಡಿದ್ದಾರೆ. ಈಗ ಅವರ ಮುಂದೆ ಹತ್ತು ಹಲವು ಸವಾಲುಗಳಿವೆ.

ಕೆಆರ್ಎಸ್ ಬರಿದು: ರೈತ ಆತಂಕ


ಮುಂಗಾರು ದುರ್ಬಲವಾಗಿರುವ ಜತೆಗೆ ಕೃಷ್ಣರಾಜಸಾಗರ ಜಲಾಶಯ ಬರಿದಾಗಿರುವುದು ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆ ರೈತರಲ್ಲಿ ಆತಂಕ ಮೂಡಿಸಿದೆ.

ಭೋಪಾಲ್ ರಾಷ್ಟ್ರೀಯ ಮ್ಯೂಸಿಯಂನಲ್ಲಿ ದೇವರ ಕಾಡಿಗೆ 'ನೆಲೆ'


ಮಧ್ಯಪ್ರದೇಶದ ಭೋಪಾಲ್ ನ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ (ಮ್ಯೂಸಿಯಂ)ದಲ್ಲಿ ಕೊಡಗಿನ ದೇವರಕಾಡಿಗೆ 'ನೆಲೆ'ಒದಗಿಸುವ ಪ್ರಕ್ರಿಯೆ ನಡೆದಿದೆ.

40ನೇ ವರ್ಷಕ್ಕೆ ಕಾಲಿಟ್ಟ 'ಸುಧರ್ಮಾ'


ಕನ್ನಡ ಪತ್ರಿಕೆಗಳನ್ನು ನಡೆಸುವುದೇ ಕಷ್ಟ. ಅಂಥಹದರಲ್ಲಿ 40 ವರ್ಷದಿಂದ ಸಂಸ್ಕೃತ ಪತ್ರಿಕೆಯನ್ನು ಮೈಸೂರಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. 'ಸುಧರ್ಮಾ' ಹುಟ್ಟಿಗೆ ಮೂಲ ಕಾರಣ ಕೆ.ಎನ್.ವರದರಾಜ ಅಯ್ಯಂಗಾರ್. ಇಂದು ಅವರಿಲ್ಲ. ಅವರ ಪುತ್ರ ಸಂಪತ್ ಕುಮಾರ್ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ರಷ್ಯಾ, ಲಂಡನ್ ಮತ್ತು ಅಮೆರಿಕದಲ್ಲೂ ಪತ್ರಿಕೆಗೆ ಚಂದಾದಾರರಿದ್ದಾರೆ.

ರಾಜ್ಯದಲ್ಲೇ ಮೊದಲ ಚಾಕೋಲೆಟ್ ರೂಂ !


ಸದಾ ವೈವಿಧ್ಯತೆಯನ್ನು ಬಯಸುವ ಮೈಸೂರಿಗರಿಗೆ 'ಚಾಕೋಲೆಟ್ ಸಂಸ್ಕೃತಿ' ಯನ್ನು ಹಂಚಲು 'ಚಾಕೋಲೆಟ್ ರೂಂ'ಸಿದ್ಧವಾಗಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ನಗರದಲ್ಲಿ ಪರಿಚಯಿಸಲಾಗುತ್ತಿದೆ.

ಹೊಸ ರಂಗ ಸಮಾಜದಲ್ಲಿ ೩ ಹಳೆ ಮುಖ


ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರನ್ನು ನೇಮಿಸುವ ಮೂಲಕ ಒಂದೂವರೆ ವರ್ಷದ 'ನಾಟಕ'ಕ್ಕೆ ಸರಕಾರ ತೆರೆ ಎಳೆದ ಸರಕಾರ, ರಂಗ ಸಮಾಜಕ್ಕೆ ಹಳೆ ಸದಸ್ಯರನ್ನೇ ನೇಮಿಸಿ ಹೊಸ ವಿವಾದ ಸೃಷ್ಟಿಸಿದೆ.

ಮೂರು ಹಳೆ ಮುಖ


ರಂಗಾಯಣ ಸುದ್ದಿಯ ಮುಂದುವರಿದ ಭಾಗ.

ಮೈಸೂರಿನ ಪರ್ವತಾರೋಹಿ ಗೋವಿಂದರಾಜು ನಿಧನ


ಪರ್ವತಾರೋಹಿ, ತೇನ್ ಸಿಂಗ್ ರ ಕೊನೆಯ ಶಿಷ್ಯ, ಮುಂಬಯಿ ದಾಳಿಯಲ್ಲಿ ಹತರಾದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ತರಬೇತುದಾರ ಮೈಸೂರಿನ ವಿ.ಗೋವಿಂದರಾಜು ಮಂಗಳವಾರ ನಿಧನರಾದರು.

ಮರ ಕಡಿದರೆ ಮೃಗಾಲಯ, ಕಾರಂಜಿಕೆರೆಗೂ ಆಪತ್ತು


ಮನೆ, ಕಾರು ಇಷ್ಟೇ ಅಭಿವೃದ್ಧಿಯಲ್ಲ. ಲಕ್ಷಾಂತರ ವರ್ಷಗಳಲ್ಲಿ ಸೃಷ್ಟಿಯಾಗುವ ಪ್ರಕೃತಿ ಸಂಪನ್ಮೂಲವನ್ನು ಆದಷ್ಟು ಕಡಿಮೆ ತೆತ್ತು ಭವಿಷ್ಯಕ್ಕೂ ಉಳಿಸಿ ನಾವೂ ಬೆಳೆಯುವುದೇ ಪ್ರಗತಿ.

ಖರ್ದೋಂಗ್ಲ ಮೆಟ್ಟಿ ಬಂದ ಮೈಸೂರಿನ ತರುಣ


ಜಗತ್ತಿನ ಅತ್ಯಂತ ಎತ್ತರದ ಮೋಟಾರು ಪ್ರದೇಶ ಖರ್ದೋಂಗ್ಲ (18,380 ಅಡಿ ಎತ್ತರ) ಅನ್ನು ಮೆಟ್ಟಿ ಬಂದ ಮೈಸೂರಿನ ತರುಣ ಸೂರಜ್ ಆರ್.ಕೃಷ್ಣಂಗೆ ಏನನ್ನೋ ಸಾಧಿಸಿ ಬಂದ ಖುಷಿ.

ಸೈಕಲ್ ಉಚಿತ, ನಿಲುಗಡೆಗೆ ಶುಲ್ಕ


ಸರಕಾರವೇನೋ ವಿದ್ಯಾರ್ಥಿಗಳಿಗೆ ಸೈಕಲ್ ಉಚಿತವಾಗಿ ನೀಡಿದೆ.ಆದರೆ ಇದರ ನಿಲುಗಡೆಗೆ ಕೆಲವು ಶಾಲಾ, ಕಾಲೇಜುಗಳಲ್ಲಿ ಹಣ ವಸೂಲಿ ಮಾಡುವ ದಂಧೆ ಆರಂಭವಾಗಿದೆ.

ಅಗಲಿದ ಗುರುವಿಗೆ ರಾಜೀವ ತಾರಾನಾಥ್ ನುಡಿನಮನ


ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧನರಾದ ತಮ್ಮ ಗುರು , ಜಗದ್ವಿಖ್ಯಾತ ಸರೋದ್ ವಾದಕ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಿಗೆ ಪಂಡಿತ್ ರಾಜೀವ ತಾರಾನಾಥ್ ನುಡಿನಮನ ಸಲ್ಲಿಸಿದ್ದಾರೆ.

ರಂಗಾಯಣಕ್ಕೆ ನೂತನ ನಿರ್ದೇಶಕರು


ಒಂದೂವರೆ ವರ್ಷದಿಂದ ಕಾಲಿ ಇದ್ದ ನಿರ್ದೇಶಕ ಸ್ಥಾನ ಕೊನೆಗೂ ಭರ್ತಿಯಾಗಿದೆ. ರಂಗಾಯಣಕ್ಕೆ ಹೊಸ ನೀರು ಹರಿದು ಹೊಸದಾಗಬೇಕು ಎಂಬ ಮಾತು ಕೇಳಿ ಬರುತ್ತಿರುವಾಗಲೇ ರಂಗಕರ್ಮಿ ಹಾಗೂ ಕಲಾವಿದೆ ಬಿ.ಜಯಶ್ರೀ ನಿರ್ದೇಶಕರಾಗಿ ಬರುತ್ತಿದ್ದಾರೆ.

ಲೋಕಸಭೆ ಕ್ಷೇತ್ರವೊಂದು, ಕಚೇರಿ ಮೂರು


ಮೂವರು ಸಂಸದರಿಗೆ ಪ್ರತ್ಯೇಕ ಕಚೇರಿ, ಸೌಲಭ್ಯ, ಸಿಬ್ಬಂದಿ. -ಇದು ಮೈಸೂರು ಜಿಲ್ಲಾಧಿಕಾರಿಗೆ ಎದುರಾಗಿರುವ ಹೊಸ ತಲೆನೋವು. ಮೈಸೂರು ಜಿಲ್ಲೆಗೆ ಮೂವರು ಸಂಸದರು. ಮತ ನೀಡಿದವರಿಗೆ ಸೌಲಭ್ಯ ಒದಗಿಸಲು ಕಚೇರಿ ಬೇಕು ಎನ್ನುವ ಬೇಡಿಕೆ.

ಮುಕ್ತ ವಿವಿಯ ಅಂಗಳ ಇನ್ನೂ ಹುಲ್ಲುಗಾವಲು


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತನ್ನ ಆಡಳಿತ ಕಚೇರಿಗಾಗಿ ಖರೀದಿಸಿದ್ದ 10 ಎಕರೆ ಭೂಮಿ ಈಗ ಹುಲ್ಲುಗಾವಲು. ಈ ಪ್ರದೇಶಕ್ಕೆ ಹೋಗಲು ಸರಿಯಾದ ರಸ್ತೆಗಳಿಲ್ಲ, ಯದ್ವಾತದ್ವವಿರುವ ಈ ಭೂಮಿಯಲ್ಲಿ ಕಟ್ಟಡ ಕಟ್ಟಲು ಸಾಧ್ಯವಿಲ್ಲ.

ಸಾಲು ಮರಗಳಿಗೆ ಗಲ್ಲು !


ನಗರದಲ್ಲಿ ಎಲ್ಲಿ ನೋಡಿದರೂ ಮನೆ, ನಿವೇಶನ, ವಾಹನಗಳೇ ಕಾಣುತ್ತವೆ. ಕೆಲವು ಬಡಾವಣೆಗಳಲ್ಲಿ ಕಾಣಸಿಗುವ ಅಲ್ಪಸ್ವಲ್ಪ ಮರಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ರಿಯಲ್ ಎಸ್ಟೇಟ್ ದಂಧೆಗಾಗಿ , ಮತ್ತೆ ಕೆಲವರು ರಸ್ತೆ 'ಅಭಿವೃದ್ಧಿ' ಎಂಬ ಕುಂಟು ನೆಪ ಹೇಳಿ ಅದಕ್ಕೂ ಕೊಡಲಿ ಏಟು ಹಾಕಲು ಸಿದ್ಧರಾಗಿದ್ದಾರೆ. ಇದು ಕೆಲವರ ಕಥೆಯಾದರೆ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೃಷ್ಣರಾಜನಗರಕ್ಕೆ 75ರ ಸಂಭ್ರಮ


ಕೆಆರ್ಎಸ್ ನಿರ್ಮಾಣದ ಹಿನ್ನೆಲೆಯಲ್ಲಿ ಎಡತೊರೆಯಿಂದ ಸ್ಥಳಾಂತರಗೊಂಡ ತಾಲೂಕು ಕೇಂದ್ರ ಕೃಷ್ಣರಾಜನಗಕ್ಕೆ ಈಗ 75ರ ಸಂಭ್ರಮ.

ಆಯುಷ್: ಆದೀತೇ ಹೊಸತನಕ್ಕೆ ದಾರಿ


ಭಾರತೀಯ ವೈದ್ಯ ಪದ್ಧತಿಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಐಎಫ್ಎಸ್ ಅಧಿಕಾರಿಯನ್ನು ಆಯುಷ್ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

ನಗುವಿನ ಅನಾವರಣ ಭಿನ್ನ-ವಿಭಿನ್ನ


ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ವೆಲ್ಲಿಂಗಟನ್ ಹೌಸ್ ನಲ್ಲಿ 'ಉಲ್ಲಾಸಿತ ಬುಡಕಟ್ಟು ಜನಾಂಗ'ಕುರಿತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.ಪ್ರತಿ ಛಾಯಾಚಿತ್ರದಲ್ಲೂ ಬುಡಕಟ್ಟು ಜನಾಂಗದ ಸಂತಸ ಹೊನಲಾಗಿ ಹೊಮ್ಮಿದೆ.

ಮೈಷುಗರ್ಸ್ ನೊಂದಿಗೆ ಪಿಎಸ್ಎಸ್ಕೆ ವಿಲೀನಕ್ಕೆ ಸಿದ್ಧತೆ


ದಿವಾಳಿ ಅಂಚಿನಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ ಕೆ) ಅನ್ನು ಆರ್ಥಿಕ ಮುಗ್ಗಟ್ಟಿನಿಂದ ಮುಗ್ಗರಿಸಿರುವ ಸರಕಾರಿ ಸ್ವಾಮ್ಯದ ರೋಗಗ್ರಸ್ತ ಮೈಷುಗರ್ಸ್ ನೊಂದಿಗೆ ವಿಲೀನಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಆದರೆ ಈ ಪ್ರಕ್ರಿಯೆಗೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.

ಇದು ಧೈರ್ಯವಂತರಿಗೆ ಮಾತ್ರ !


ಸಾಮಾನ್ಯವಾಗಿ ಯುವ ಪೀಳಿಗೆಗಳಿಗೆ ಕ್ರೀಡೆ ಎಂದರೆ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಆಟಗಳೇ ಹೆಚ್ಚು ಇಷ್ಟ.ಕೆಲವೊಮ್ಮೆ ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಇದ್ದರೂ ಮನೆಯವರಿಂದ ಅಡ್ಡಿ ಸಹಜ. ರೀವರ್ ಕ್ರಾಸಿಂಗ್, ರಾಕ್ ಕ್ಲೈಂಬಿಂಗ್ ಮತ್ತಿತರ ಸಾಹಸ ಕ್ರೀಡೆಗಳ ತರಬೇತಿಯನ್ನು ನಿರುದ್ಯೋಗಿಗಳಿಗೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಮೈಸೂರು ಅಡ್ವೆಂಚರ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸುತ್ತಿದೆ.

ಅಂಗವಿಕಲ ಪುನರ್ವಸತಿ ಕೇಂದ್ರ ಲೆಕ್ಕಕ್ಕುಂಟು, ಆಟಕ್ಕಿಲ್ಲ !


ನಂಜನಗೂಡು ತಾಲೂಕಿನ ಅಂಗವಿಕಲ ಪುನರ್ವಸತಿ ಕೇಂದ್ರ ಇದ್ದು ಇಲ್ಲದಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿತರಣೆಯಾಗಬೇಕಿದ್ದ ಸವಲತ್ತುಗಳು ಗೋಡೌನ್ ನಲ್ಲೇ ತುಕ್ಕು ಹಿಡಿಯುತ್ತಿವೆ.ಇದರಿಂದ ವಿಕಲಚೇತನರು ತೊಂದರೆಯ ಸುಳಿಯಲ್ಲಿ ಸಿಲುಕಿದ್ದಾರೆ.

ದುಬಾರೆ ಅರಣ್ಯದಲ್ಲಿ ನಿಯಮ ಉಲ್ಲಂಘನೆ !


ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ ರಾಜ್ಯ ಸರಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಸಂಸ್ಥೆಯೇ ಶಾಶ್ವತ ಕಟ್ಟಡ ಕಾಮಗಾರಿಗೆ ಮುಂದಾಗಿರುವುದು ವಿವಾದಕ್ಕೆ ನಾಂದಿ ಹಾಡಿದೆ.

'ನೆನಪಿನ ಮರ'ಕ್ಕೆ ಬೊಗೆಸೆ ನೀರು


ರಂಗಾಯಣ ಕಲಾವಿದೆ ಶಶಿಕಲಾ ರಂಗಕರ್ಮಿಯೂ ಆದ ತನ್ನ ಪತಿ ಬಸವರಾಜ ಕೊಡಗೆ ನೆನಪನ್ನು ಹಸಿರಾಗಿಟ್ಟುಕೊಳ್ಳಲ ಕಳೆದ 7 ವರುಷದಿಂದ ರಂಗ ಚಟುವಟಿಕೆ ನಡೆಸುತ್ತಿದ್ದಾರೆ.

'ಕೌಟಿಲ್ಯ ಅರ್ಥಶಾಸ್ತ್ರ' ಪ್ರಕಾಶನಕ್ಕೆ ನೂರು ವರುಷ


'ಕೌಟಿಲ್ಯ ಅರ್ಥಶಾಸ್ತ್ರ' ಎಂಬ ದೇಶಾಡಳಿತ ಗ್ರಂಥ ಸಂಬಂಧಿ ತಾಳೆಗರಿ ಹಸ್ತಪ್ರತಿ ಸಂಪಾದನೆಗೊಂಡು ಜಗತ್ತಿಗೆ ತಿಳಿದದ್ದು ಇಂದಿಗೆ ನೂರು ವರುಷ ಹಿಂದೆ.

ಮಳವಳ್ಳಿ: ಮರಗಳ ಹನನ ನಿರಂತರ !


ಮಳವಳ್ಳಿ ತಾಲೂಕಿನ ಗಡಿ ಭಾಗದಲ್ಲಿರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ಮರಗಳ ಹನನ ಅವ್ಯಾಹತವಾಗಿ ನಡೆಯುತ್ತಿದೆ.

ಉಸ್ತುವಾರಿ ಹೂವಿನ ಹಾದಿಯಲ್ಲ ?


ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿಗಳಲ್ಲಿ ಮಾಡಿರುವ ಮನವಿಯ ಹಿನ್ನೆಲೆ ಏನು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಬಂಗಲೆ ಪೋಡುವಿನಲ್ಲಿ ಇರುವುದೆಲ್ಲ ಜೋಪಡಿಗಳೇ


ಬಂಗಲೆ ಪೋಡಿನ ನಿವಾಸಿಗಳು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಕಾಡಿನ ನಡುವೆ ಇರುವ ಈ ಪೋಡು ಆಡಳಿತಶಾಯಿಯ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ಗಿರಿಜನರ ಜೀವನ ದುಸ್ತರವಾಗಿದೆ.

ಕಲಾವಿದನ ಕೈಚಳಕ; ಮರದಲ್ಲೂ ಪುಳಕ


ಕಲಾವಿದನಿಗೆ ಯಾವುದೇ ವಸ್ತುವು ನಿರುಪಯುಕ್ತವಲ್ಲ. ಇದಕ್ಕೆ ಉದಾಹರಣೆ ಚೆಂಬೆಳ್ಳೂರಿನ ಸೋಮೆಯಂಡ ಬೋಪಣ್ಣ.

ಪುರಸಭೆ ನಗರಸಭೆಯಾದರೂ ಸೌಲಭ್ಯ ದೂರ !


ಕೊಳ್ಳೇಗಾಲದ ಶಂಕರಪುರ ಬಡಾವಣೆ ನಗರಸಭೆ ವ್ಯಾಪ್ತಿಗೆ ಒಳಪಟ್ಟು ಎರಡು ದಶಕವಾದರೂ ಅಭಿವೃದ್ಧಿ ಮರೀಚಿಕೆಯಾಗಿದ್ದು, ಎಲ್ಲೆಲ್ಲೂ ಅನೈರ್ಮಲ್ಯ ತಾಂಡವವಾಡುತ್ತಿದೆ.

ಪ್ರಾಜೆಕ್ಟ್ ಟೈಗರ್ ಯೋಜನೆ: ೪ ಕುಟುಂಬ ಸ್ಥಳಾಂತರ


ವನ್ಯಜೀವಿ ಹಾಗೂ ಮನುಷ್ಯನ ನಡುವಿನ ಕಾಡಿನೊಳಗಿನ ಸಂಘರ್ಶಕ್ಕೆ ಇತಿಶ್ರೀ ಹಾಡಲು ಕೇಂದ್ರ ಸರಕಾರ ರೂಪಿಸಿರುವ ಪ್ರಾಜೆಕ್ಟ್ ಟೈಗರ್ ಯೋಜನೆಯಡಿ ಪ್ರಥಮವಾಗಿ 4 ಕುಟುಂಬಗಳು ನಾಡಿಗೆ ಸ್ಥಳಾಂತರಗೊಂಡಿದೆ.

ಕಾವೇರಿ, ಕಪಿನಾ ನದಿ ತೀರದಲ್ಲಿ ಈಗ ಹೊಸ ದಂಧೆ !


ಕಾವೇರಿ, ಕಪಿನಾ ನದಿ ತೀರದಲ್ಲಿ ಹೊಸದೊಂದು ಅಕ್ರಮ ಉದ್ಯಮ ಶುರುವಾಗಿದೆ. ಜಾಲರಿಯಲ್ಲಿ ಶುದ್ಧೀಕರಿಸಿದ ಮರಳನ್ನು ಬ್ರಾಂಡ್ ಚೀಲಗಳಲ್ಲಿ ತುಂಬಿ ಹೊರ ರಾಜ್ಯಕ್ಕೆ ಸಾಗಣೆ ಮಾಡಲಾಗುತ್ತಿದೆ.

ಇದು ಯುವಕರೇ ಕಟ್ಟಿದ ಸಿನಿಮಾ !


ಏನಾದರೂ ಮಾಡಬೇಕು ಎಂಬ ಕನಸಿನೊಂದಿಗೆ ಮೈಸೂರಿನ ಕನಸು ಕಣ್ಣುಗಳ ಯುವಕರ ಗುಂಪೊಂದು ಅತ್ಯಂತ ಕಡಿಮೆ ಬಜೆಟ್ (3-4 ಲಕ್ಷ ರೂ.)ನಲ್ಲಿ ರೂಪಿಸಿರುವ ಸಿನಿಮಾದ ಹೆಸರು 'ಜಾಗ ದೊರೆಯುತ್ತದೆ'. ಸಾರ್ವಜನಿಕ ಪ್ರದರ್ಶನ ಜೂ.6 ರಂದು.

'ಚಿಮ್ಮದ' ವೃತ್ತಗಳು


ನರ್ಮ್ ಯೋಜನೆಯಡಿ ಮೈಸೂರು ನಗರಕ್ಕೆ ಕೋಟ್ಯಂತರ ರೂ. ಬರುತ್ತಿದ್ದರೂ ಸೌಂದರ್ಯದ ಭಾಗವಾಗಿರುವ ಕಾರಂಜಿ ವೃತ್ತಗಳು ಅಭಿವೃದ್ಧಿಯಾಗಿಲ್ಲ. ನಗರದಲ್ಲಿ 63 ಪಾರಂಪರಿಕ ಹಿನ್ನೆಲೆಯ ವೃತ್ತಗಳಿದೆ. ಆದರೆ ಅದರ ಸ್ಥಿತಿ ಹೇಳತೀರದು.

ಕೃಷ್ಣರಾಜಸಾಗರ : ತ್ಯಾಜ್ಯಗಳ ಸಾಗರ


ಕೆ. ಆರ್. ಎಸ್ ನ ಸ್ಥಿತಿ ನೋಡಿ. ಆ ಕುರಿತ ಲೇಖನ.

ಚಾಮರಾಜನಗರದ ಗುಂಡ್ಲುಪೇಟೆಯ ಆರೋಗ್ಯದ ಸ್ಥಿತಿಗೆ ಈ ಲೇಖನ ಕನ್ನಡಿ ಹಿಡಿಯುತ್ತದೆ.

ಹುಲ್ಲಹಳ್ಳಿಗೆ ಕೈ ತಪ್ಪಿದ ತಾಲೂಕು ಪಟ್ಟ


ಪ್ರಮುಖ ಹೋಬಳಿ ಕೇಂದ್ರವಾಗಿದ್ದ ಹುಲ್ಲಹಳ್ಳಿ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸುತ್ತಮುತ್ತ 70 ಹಳ್ಳಿಗಳ ವ್ಯಾಪ್ತಿ ಇದೆ. ಜತೆಗೆ ಕಪಿಲಾ ನದಿ, ಸರಕಾರಿ ಪದವಿ ಪೂರ್ವ ಕಾಲೇಜು, 19 ಎಕರೆ ಸರಕಾರಿ ಮತ್ತಿತರ ಸೌಲಭ್ಯಗಳನ್ನು ಹೊಂದಿದ್ದರೂ ತಾಲೂಕು ಪುನಾರಚನೆ ಪಟ್ಟಿಯಿಂದ ಕೈ ಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.