ಇದು ರಾಜಪಥ, ಜಂಬೂ ಸವಾರಿಗೆ ಅಪಥ್ಯ

ಎಸ್.ಕೆ.ಚಂದ್ರಶೇಖರ್ ಮೈಸೂರು
ಮುಖ್ಯಮಂತ್ರಿ ವಿಶೇಷ ಅನುದಾನ ಹೇರಳವಿದ್ದರೂ `ರಾಜಪಥ' ಪೂರ್ಣ ಗೊಳಿಸಲು ಇವರಿಗೇನಾಗಿದೆ?

ಮೈಸೂರು ದಸರಾ ಎಲ್ಲೆಲ್ಲೂ ಶೃಂಗಾರ

ವಿಕ ಸುದ್ದಿಲೋಕ ಮೈಸೂರು
ನಾಡ ಹಬ್ಬ ದಸರಾ ಹತ್ತಿರವಾಗುತ್ತಿರುವಂತೆಯೇ ಮೈಸೂರು ಶೃಂಗಾರಗೊಳ್ಳುತ್ತಿದೆ.
ಭಿತ್ತಿಪತ್ರ, ಪೋಸ್ಟರ್, ನಾನಾ ಬರಹಗಳಿಂದ ತುಂಬಿರುತ್ತಿದ್ದ ಕಟ್ಟಡಗಳ ಗೋಡೆ ರಂಗು ಪಡೆದುಕೊಳ್ಳಲಾರಂಭಿಸಿವೆ.
ದಸರಾ ಹಾಗೂ ಮೈಸೂರಿನ ಪರಂಪರೆಯನ್ನು ಬಿಂಬಿಸುವ ಚಿತ್ರಕಲೆ ಸರಕಾರದ  ಕಟ್ಟಡಗಳಲ್ಲಿ  ಮೂಡಲಿದ್ದು, ನೋಡುಗ ರಿಗೆ ಮುದ ನೀಡಲು ಸಿದ್ಧವಾಗುತ್ತಿವೆ. ಇದಕ್ಕಾಗಿ ೩೦ ಮಂದಿ ಕಲಾವಿದರ ತಂಡ ಕಲ್ಪನೆಗೆ ಮೂರ್ತ ರೂಪ ನೀಡಲಾರಂಭಿಸಿ ದ್ದಾರೆ. ನಗರಪಾಲಿಕೆಯಿಂದ ಕೈಗೊಂಡಿರುವ ಈ ವರ್ಣಾ ಲಂಕಾರದ ಹೊಣೆಹೊತ್ತಿರುವ ಪಾಪು ಆರ್ಟ್ಸ್‌ನ ಲೋಕೇಶ್ ನೇತೃತ್ವದಲ್ಲಿ ಕಲಾವಿದರು  ಚಿತ್ರ ಬಿಡಿಸುತ್ತಿದ್ದಾರೆ.

ಚಾಮರಾಜೇಶ್ವರ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ

*ಫಾಲಲೋಚನ ಆರಾಧ್ಯ ಚಾಮರಾಜನಗರ
ಗಡಿ ಜಿಲ್ಲೆ ಚಾಮರಾಜನಗರದ ಶಾಪ ವಿಮೋಚನೆಗಾಗಿ(?) ಮಹಾ ಹೋಮ ಹಾಗೂ ಅಷ್ಟ ಮಂಗಲ ಪ್ರಶ್ನೆ ನಡೆಸಲು ನಗರದಲ್ಲಿ ಭರದ ಸಿದ್ಧತೆಗಳು ನಡೆದಿವೆ !
ಆದರೆ,ಈ ಕಾರ್ಯ ನಡೆಯುತ್ತಿರುವುದು ಮುಜರಾಯಿ ಇಲಾಖೆ ಅಥವಾ ಜಿಲ್ಲಾಡಳಿತದ ವತಿಯಿಂದಲ್ಲ. ಸರಕಾರದ `ಪವರ್' ಫುಲ್ ಸಚಿವರೊಬ್ಬರಿಂದ.
ಹೌದು, ಇಲ್ಲಿನ ಚಾಮರಾಜೇಶ್ವರ ದೇವಾಲಯದಲ್ಲಿ ಸೆ. ೪ ರಿಂದ ೭ರವರೆಗೆ ಕೇರಳದ ೩೫ ಮಂದಿ ಜ್ಯೋತಿಷಿಗಳು ಹಾಗೂ ಅರ್ಚಕರ ತಂಡದಿಂದ ಮಹಾ ಹೋಮ,ಅಷ್ಟ ಮಂಗಲವನ್ನು ನಡೆಸಲು ಸಿದ್ಧತೆ ಕೈಗೊಳ್ಳಲಾ-ಗಿದೆ. ಈ ಕಾರ್ಯಕ್ಕೆ ೧೫ ರಿಂದ ೨೦ ಲಕ್ಷ ರೂ. ವೆಚ್ಚವಾಗ ತಗುಲಬಹುದಾಗಿದ್ದು, ಇದನ್ನು ಭರಿಸಲು ಆ ಸಚಿವರು ಸಿದ್ಧರಿದ್ದಾರೆ. ಏಕೆಂದರೆ  ಈ ಕಾರ್ಯ ನಡೆಯುತ್ತಿರುವುದು ಅವರ ನಿರ್ದೇಶನದ ಮೇರೆಗೆ ಎನ್ನಲಾಗುತ್ತಿದೆ.
ದೇವಾಲಯಗಳಲ್ಲಿ ಇಂಥ ಹೋಮ,ಅಷ್ಟ ಮಂಗಲ ನಡೆಯುವುದು ಹೊಸದಲ್ಲ.-ಆದರದು ಮುಜರಾಯಿ ಇಲಾಖೆ ಅಥವಾ ಅಲ್ಲಿನ ಆಡಳಿತ ಮಂಡಳಿಯಿಂದಲೇ ವತಿ-ಯಿಂದಲೇ ನಡೆಯುತ್ತದೆ.ಆದರೆ, ಚಾಮ-ರಾಜೇಶ್ವರ ದೇವಾಲಯದಲ್ಲಿ ನಡೆಸಲು ಉದ್ದೇಶಿಸಿರುವ ಕಾರ್ಯ ಮುಜರಾಯಿ ಇಲಾಖೆ ಅಥವಾ ಜಿಲ್ಲಾಡಳಿತದ್ದಲ್ಲ. ಈ ಕಾರ್ಯಕ್ಕೆ ಇನ್ನು ಅನುಮತಿಯನ್ನೂ ಪಡೆದಿಲ್ಲ. ಬದಲಿಗೆ ಜಿಲ್ಲಾಡಳಿತಕ್ಕೆ ಒಂದು ಮನವಿ ಪತ್ರ ಸಲ್ಲಿಸಲಾಗಿದೆಯಷ್ಟೆ.