ಚಾಮರಾಜೇಶ್ವರ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ

*ಫಾಲಲೋಚನ ಆರಾಧ್ಯ ಚಾಮರಾಜನಗರ
ಗಡಿ ಜಿಲ್ಲೆ ಚಾಮರಾಜನಗರದ ಶಾಪ ವಿಮೋಚನೆಗಾಗಿ(?) ಮಹಾ ಹೋಮ ಹಾಗೂ ಅಷ್ಟ ಮಂಗಲ ಪ್ರಶ್ನೆ ನಡೆಸಲು ನಗರದಲ್ಲಿ ಭರದ ಸಿದ್ಧತೆಗಳು ನಡೆದಿವೆ !
ಆದರೆ,ಈ ಕಾರ್ಯ ನಡೆಯುತ್ತಿರುವುದು ಮುಜರಾಯಿ ಇಲಾಖೆ ಅಥವಾ ಜಿಲ್ಲಾಡಳಿತದ ವತಿಯಿಂದಲ್ಲ. ಸರಕಾರದ `ಪವರ್' ಫುಲ್ ಸಚಿವರೊಬ್ಬರಿಂದ.
ಹೌದು, ಇಲ್ಲಿನ ಚಾಮರಾಜೇಶ್ವರ ದೇವಾಲಯದಲ್ಲಿ ಸೆ. ೪ ರಿಂದ ೭ರವರೆಗೆ ಕೇರಳದ ೩೫ ಮಂದಿ ಜ್ಯೋತಿಷಿಗಳು ಹಾಗೂ ಅರ್ಚಕರ ತಂಡದಿಂದ ಮಹಾ ಹೋಮ,ಅಷ್ಟ ಮಂಗಲವನ್ನು ನಡೆಸಲು ಸಿದ್ಧತೆ ಕೈಗೊಳ್ಳಲಾ-ಗಿದೆ. ಈ ಕಾರ್ಯಕ್ಕೆ ೧೫ ರಿಂದ ೨೦ ಲಕ್ಷ ರೂ. ವೆಚ್ಚವಾಗ ತಗುಲಬಹುದಾಗಿದ್ದು, ಇದನ್ನು ಭರಿಸಲು ಆ ಸಚಿವರು ಸಿದ್ಧರಿದ್ದಾರೆ. ಏಕೆಂದರೆ  ಈ ಕಾರ್ಯ ನಡೆಯುತ್ತಿರುವುದು ಅವರ ನಿರ್ದೇಶನದ ಮೇರೆಗೆ ಎನ್ನಲಾಗುತ್ತಿದೆ.
ದೇವಾಲಯಗಳಲ್ಲಿ ಇಂಥ ಹೋಮ,ಅಷ್ಟ ಮಂಗಲ ನಡೆಯುವುದು ಹೊಸದಲ್ಲ.-ಆದರದು ಮುಜರಾಯಿ ಇಲಾಖೆ ಅಥವಾ ಅಲ್ಲಿನ ಆಡಳಿತ ಮಂಡಳಿಯಿಂದಲೇ ವತಿ-ಯಿಂದಲೇ ನಡೆಯುತ್ತದೆ.ಆದರೆ, ಚಾಮ-ರಾಜೇಶ್ವರ ದೇವಾಲಯದಲ್ಲಿ ನಡೆಸಲು ಉದ್ದೇಶಿಸಿರುವ ಕಾರ್ಯ ಮುಜರಾಯಿ ಇಲಾಖೆ ಅಥವಾ ಜಿಲ್ಲಾಡಳಿತದ್ದಲ್ಲ. ಈ ಕಾರ್ಯಕ್ಕೆ ಇನ್ನು ಅನುಮತಿಯನ್ನೂ ಪಡೆದಿಲ್ಲ. ಬದಲಿಗೆ ಜಿಲ್ಲಾಡಳಿತಕ್ಕೆ ಒಂದು ಮನವಿ ಪತ್ರ ಸಲ್ಲಿಸಲಾಗಿದೆಯಷ್ಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ