ರಂಗನತಿಟ್ಟಲ್ಲಿ ಶುರುವಾಯ್ತು ಹಕ್ಕಿಗಳ ಸಂತಾನಸುಖ

ಹನಿಮೂನ್ ಮುಗಿಸಿ ಸಂತಾನಾಭಿವೃದ್ಧಿ ಮೂಡ್‌ನಲ್ಲಿರುವ ಪಕ್ಷಿ ಸಂಕುಲಕ್ಕೆ ರಂಗನತಿಟ್ಟೇ ತವರು ಮನೆ. ವರ್ಷಗಳಿಂದ ರಂಗನತಿಟ್ಟಿಗೆ ಆಗಮಿಸಿ ಇಲ್ಲಿ ೮ ತಿಂಗಳು ಕಾಲ ಇದ್ದು ಹೋಗುತ್ತವೆ. ೨೫ಕ್ಕೂ ವಿವಿಧ ಜಾತಿಯ ೨೫ ಸಾವಿರಕ್ಕೂ ಹೆಚ್ಚು  ಹಕ್ಕಿಗಳಿಗೆ ಈ ವರ್ಷದ ಸಂತಾನಾಭಿವೃದ್ಧಿ ದಿನಗಳು ಶುರುವಾಗಿವೆ.
ಕುಂದೂರು ಉಮೇಶಭಟ್ಟ ಮೈಸೂರು
ರಂಗನತಿಟ್ಟಿಗೆ ಲಗ್ಗೆ ಇಟ್ಟಿವೆ ಹಕ್ಕಿಗಳು. ಸತತ ಪ್ರವಾಹದಿಂದ ಆತಂಕಕ್ಕೀಡಾದರೂ ವರ್ಷದ ಸಂತಾನ ಸಂಭ್ರಮಕ್ಕೆ ಹಕ್ಕಿಗಳು ಹಿಂಡುಗಟ್ಟಲೇ ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿ ಬೀಡುಬಿಟ್ಟಿವೆ.
ವರ್ಷದಿಂದ ವರ್ಷಕ್ಕೆ ರಂಗನತಿಟ್ಟಿನ ತೀರ ವನ್ನು ಹುಡುಕಿ ಬರುವ ಹಕ್ಕಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ೨೦ ಸಾವಿರ ದಾಟಬಹುದು. ಕುಟುಂಬ ವಿಸ್ತರಣೆಗೆಂದೇ ಬಂದವರು ಗಳ ಸಂಖ್ಯೆ ೧೫ ಸಾವಿರ ದಾಟಿದೆ. ಇದರಿಂದ ಮುಂದಿನ ಆರು ತಿಂಗಳ ಕಾಲ ಇಲ್ಲಿ ಹಕ್ಕಿಳಗದ್ದೇ ಲೋಕ.
ಹನಿಮೂನ್ ನಂತರ...: ಇದು ಹಕ್ಕಿಗಳ ಹನಿಮೂನ್ ಮುಗಿದ ಸಮಯ. ತಮ್ಮ ಮೂಲ ನೆಲೆಗಳಿಗೆ ಹಿಂದಿರುಗಿ ನಾಲ್ಕೈದು ತಿಂಗಳು ಕಳೆದು ಮತ್ತೆ ಸಂತಾನಾಭಿವೃದ್ಧಿಗೆ ಬರುವ ಸಂತಸದ ಕಾಲಘಟ್ಟ. ಡಿಸೆಂಬರ್ ಮುಗಿಯುತ್ತಿರುವಾಗಲೇ ಇತ್ತ ಹಕ್ಕಿಗಳ ಹಿಂಡು ಬರಲಾರಂಭಿಸು ತ್ತವೆ. ಅದು ದೇಶದ ವಿವಿಧ ಭಾಗಗಳಿರಬಹುದು. ಹೊರದೇಶದಿಂದಲೂ ಬರಬಹುದು.
ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಒಂದೆರಡು ತಿಂಗಳೊಳಗೆ ಸಂತಾನಾಭಿವೃದ್ಧಿ ಚಟುವಟಿಕೆ ಶುರು. ಅದಕ್ಕಾಗಿ ಗೂಡು ನೇಯುವ, ಆಹಾರ ಅರಸಿ ಹಗಲಿನಲ್ಲಿ ಸುತ್ತುವ ಕಾಯಕ. ಮಾರ್ಚ್ ನಂತರ ಹೊಸ ಜೀವ ಸೃಷ್ಟಿಯ ಸಮಯ. ನಂತರ ನಾಲ್ಕು ತಿಂಗಳು ಮರಿಯ ಪಾಲನೆ ಪೋಷಣೆ. ಜೂನ್-ಜುಲೈನಲ್ಲಿ ಯಥಾ ರೀತಿ ವಾಪಸು. ಇದು ರಂಗನತಿಟ್ಟಿಗೆ ಬರುವ ಹಕ್ಕಿಗಳ ಜೀವನ ಚಕ್ರ. ಈಗ ಸಂತಾನಾಭಿವೃದ್ಧಿ ಮೊದಲ ಹಂತ. ಹಕ್ಕಿ ಗಳಿಗೆ ಗೂಡು ನೇಯೋದೇ ಕಾಯಕ.
ಹೊಸ ದ್ವೀಪ ನಿರ್ಮಾಣ: ಸತತ ಮೂರು ವರ್ಷ ಪ್ರವಾಹದ ಪರಿಣಾಮವಾಗಿ ರಂಗನ ತಿಟ್ಟು  ಮುಳುಗಡೆ ಭೀತಿ ಎದುರಿಸುತ್ತಿತ್ತು. ಹಕ್ಕಿಗಳು ಪ್ರತಿ ವರ್ಷ ಸಂಕಷ್ಟಕ್ಕೆ ಒಳಗಾದರೆ ಪ್ರವಾಸಿಗ ರಿಗೂ ತೊಂದರೆ. ಹಾಗಾಗಿ ೫ಕ್ಕೂ ಹೆಚ್ಚು ದ್ವೀಪಗಳ ಅಭಿವೃದ್ಧಿ ನಡೆದಿದೆ. ಎಲ್ಲಾ ದ್ವೀಪದ ಮೂಲವನ್ನು ಬಲಪಡಿಸಲಾಗಿದೆ. ಒಂದೆರಡು ವರ್ಷದಲ್ಲಿ ಇನ್ನಷ್ಟು ಗಟ್ಟಿಗೊಳ್ಳು ವುದಲ್ಲದೇ ಮುಂದಿನ ಒಂದೆರಡು ದಶಕಕ್ಕೆ ಯಾವುದೇ ಆತಂಕ ಇರದು.
ಈಗಿರುವ ದ್ವೀಪಗಳ ಜತೆ ಇನ್ನೊಂದು ದ್ವೀಪವನ್ನು ಸೃಷ್ಟಿಸಲಾಗುತ್ತಿದೆ. ನೀರು ಮೇಲೆ ಬರುವುದನ್ನು ತಪ್ಪಿಸಲು ಪರೀಕ್ಷಾರ್ಥ ಪ್ರಯೋಗ ನಡೆದಿದೆ. ಕೆಲವೇ ದಿನಗಳಲ್ಲಿ ಈ ಕೆಲಸ ಪೂರ್ಣ.
ಹೆಚ್ಚಿದ ಆದಾಯ: ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗು ತ್ತಿದ್ದು, ಆದಾಯ ಪ್ರಮಾಣದಲ್ಲೂ ಹೆಚ್ಚಳ ವಾಗಿದೆ. ಒಂದೇ ವರ್ಷ ದಲ್ಲಿ ಏರಿಕೆ ಯಾದ ಆದಾಯ ಶೇ.೪೦ರಷ್ಟು.
೨೦೦೯ರ ಏಪ್ರಿಲ್ ನಿಂದ ೨೦೧೦ರ ಜನವರಿವರೆಗೆ ೧೦ ತಿಂಗಳ ಅವಧಿಯಲ್ಲೇ ರಂಗನತಿಟ್ಟಿಗೆ ಬಂದ ಆದಾಯ ೯೯.೮೦ ಲಕ್ಷ ರೂ. ಪ್ರವಾಸಿಗರ ಸಂಖ್ಯೆ ೨,೧೩,೩೬೪. ಇದರಲ್ಲಿ ವಿದೇಶಿಗರ ಸಂಖ್ಯೆ ೪೪೭೩. ಇದೇ ರೀತಿ ೨೦೦೮-೦೯ರಲ್ಲಿ  ಸಂಗ್ರಹವಾಗಿದ್ದ ಆದಾಯ ಪ್ರಮಾಣ ೮೬.೬೯ ಲಕ್ಷ ರೂ. ೧.೮೨, ೩೬೭ ಪ್ರವಾಸಿಗರು ರಂಗನತಿಟ್ಟಿಗೆ ಬಂದು ಹೋಗಿದ್ದಾರೆ. ವಿದೇಶಿಗರು ೫೦೧೪.
ಪಕ್ಷಿಧಾಮ ವಿಸ್ತರಣೆ: ಕಾವೇರಿ ನದಿ ಹಾಗೂ ನದಿ ಪಾತ್ರ ಸೇರಿದಂತೆ ಸುಮಾರು ೨೦೦ ಎಕರೆ ಪ್ರದೇಶದಲ್ಲಿ(೦.೬೭ ಚದರ ಕಿ. ಮಿ) ಹರಡಿ ಕೊಂಡ ರಂಗನತಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಪ್ರವಾಸಿ ಗರ ಸಂಖ್ಯೆಯನ್ನು ಆಧರಿಸಿ ವಿಸ್ತರಿಸಲಾಗುತ್ತಿದೆ. ಈಗಾಗಲೇ ೭ ಎಕರೆ ಜಮೀನನ್ನು ಪಕ್ಷಿಧಾಮ ವ್ಯಾಪ್ತಿಗೆ ಸೇರಿಸಿ ಪಾರ್ಕಿಂಗ್ ಸೇರಿದಂತೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸ ಲಾಗಿದೆ. ಜಮೀನು ಸ್ವಾಧೀನಕ್ಕೆ ೮೫ ಲಕ್ಷ ರೂ.ಗಳನ್ನು ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಲಾಗಿದೆ. ಕಡೆಯ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ಬೇಗನೇ ಪಕ್ಷಿಧಾಮದ ವಿಸ್ತರಣೆಯೂ ಆರಂಭವಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ