ಕನಸಿಗೆ ಬಣ್ಣ ತುಂಬಲು ಅವಳೇ ಇರಲಿಲ್ಲ!

ಆರ್. ಕೃಷ್ಣ, ಮೈಸೂರು
ಕಲಿಯಬೇಕು, ಕಲಿಸಬೇಕೆನ್ನುವ ಹಂಬಲ ಅಗಾಧವಾಗಿತ್ತು. ಆದರೆ...?
ತಾವು ಕಲಿತಿದ್ದನ್ನೆಲ್ಲಾ ಧಾರೆ ಎರೆಯುವ ಉತ್ಸಾಹದಲ್ಲಿದ್ದ ಪ್ರಾಧ್ಯಾಪಕಿ ನೀಲಮ್ಮ, ವಿದ್ಯಾರ್ಥಿಗಳಿಗೆ ಕಲಿಸುತ್ತಿರುವಾಗಲೇ ಪ್ರಯೋಗಾಲಯದಲ್ಲಿ ಸಂಭವಿಸಿದ ಅವಘಡದಿಂದ ದುರಂತ ಅಂತ್ಯ ಕಂಡರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಬಯೋಟೆಕ್ನಾಲಜಿ ಪ್ರಾಧ್ಯಾಪಕಿ ನೀಲಮ್ಮ (೩೮)  ಅವರಿಗೆ ಕಲಿಯುವ-ಕಲಿಸುವ ದಾಹ. ಇದಕ್ಕಾಗಿ ಪ್ರಯೋಗಾಲಯದಲ್ಲಿ ತಾವೇ ಮುಂದೆ ನಿಂತು ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದರು.
ಡಿ.೨೨ ರಂದು ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮುಗಿಸಿ ಹೆಕ್ಸೆನ್ ಸಾಲ್ವೆಂಟ್ ದ್ರಾವಣ ಇದ್ದ ಗಾಜಿನ ಕಂಟೈನರ್ ಅನ್ನು ಕಬೋರ್ಡ್‌ಗೆ ಎತ್ತಿಡುತ್ತಿದ್ದಾಗ ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿ ತಗುಲಿ ಕೈ ಸುಟ್ಟು ಹೋಯಿತು. ಗಾಬರಿಗೊಂಡ ನೀಲಮ್ಮ, ಬಾಟಲಿಯನ್ನು ಕೆಳಗಿಡುವಾಗ ಜಾರಿ ನೆಲಕ್ಕೆ ಬಿದ್ದಿದ್ದೇ ಬೆಂಕಿ ಏಕಾಏಕಿ ವ್ಯಾಪಿಸಿತು. ಜ್ವಾಲೆಯಿಂದ ಕೈ, ಕಾಲು, ಎದೆ, ಹೊಟ್ಟೆ, ಬೆನ್ನೆಲ್ಲಾ ಸುಟ್ಟಿತು. ಅವರನ್ನು ಉಳಿಸಿಕೊಳ್ಳುವ ಹೋರಾಟ ಕೈಗೂಡಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ