ಮೈಸೂರಲ್ಲಿ ಸಚಿವರಿಗೇ ಇಲ್ಲ ಇಟ್ಟಿಗೆ!

* ಕುಂದೂರು ಉಮೇಶಭಟ್ಟ, ಮೈಸೂರು
ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಅವರಿಗೂ ಎದುರಾಗಿದೆ ಇಟ್ಟಿಗೆ ಸಮಸ್ಯೆ !.
ಕರ್ನಾಟಕದ ಇಟ್ಟಿಗೆಗೆ ತಮಿಳುನಾಡಿನಲ್ಲಿ ಭಾರಿ ಬೇಡಿಕೆ. ಆದರೆ ಮೈಸೂರಿನಲ್ಲಿ ಶಾಸಕರ ಒಡೆತನದ ಇಟ್ಟಿಗೆಗೆ ಸಚಿವರಿಂದಲೂ ಬೇಡಿಕೆ !
ಮೈಸೂರಿನಿಂದ ತಮಿಳುನಾಡಿಗೆ ಹೋಗುತ್ತಿರುವುದು ಕಡಿಮೆ. ಆದರೆ ಸ್ಥಳೀಯವಾಗಿಯೇ  ಪೂರೈಸಲು ಆಗದಷ್ಟು ಬೇಡಿಕೆ.
ಮನೆ ಕಟ್ಟಿ ನೋಡು
ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿಯವರಾದರೂ ಎರಡೂವರೆ ದಶಕದ ಹಿಂದೆಯೇ ಹುಣಸೂರಿಗೆ ಬಂದು ಅಕ್ಕನ ಮನೆಯಲ್ಲಿ ಇದ್ದು ಸಿಮೆಂಟ್ ವ್ಯಾಪಾರ ನಡೆಸಿದವರು ವಿಜಯಶಂಕರ್. ಎರಡು ಬಾರಿ ಎಂಪಿ, ಒಮ್ಮೆ ಶಾಸಕ, ಈಗ ವಿಧಾನಪರಿಷತ್ ಸದಸ್ಯತ್ವ ದೊಂದಿಗೆ ಸಚಿವರಾದರು. ಈಗ ಮನೆ ಕಟ್ಟಿ ನೋಡುವ ಸಾಹಸಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಮುಡಾ ಹರಾಜಿನಲ್ಲಿ ವಿಜಯನಗರದಲ್ಲಿ ನಿವೇಶನ ಖರೀದಿಸಿ ಕಾಮಗಾರಿ ಆರಂಭಿಸಿದರು. ತಮ್ಮ ಮನೆಗೆ ಚಾಮುಂಡೇಶ್ವರಿ ಶಾಸಕ ಸತ್ಯನಾರಾಯಣ ಅವರ ಬಟ್ಟಿಯ ಇಟ್ಟಿಗೇಗಳೇ ಬೇಕೆಂದು ಬೇಡಿಕೆ ಇಟ್ಟರು. ಆದರೆ ಸದ್ಯಕ್ಕೆ ಸಿಗದೆಂಬ ಉತ್ತರ ಸಿಕ್ಕಿತು. ಇದರಿಂದ ಮನೆ ಕೆಲಸ ಕೊಂಚ ವಿಳಂಬವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ