ವರ್ಷದಲ್ಲೇ ಮರೆತು ಹೋದರೆ ಧೀಮಂತ ನಟ ?...

ಪಿ.ಓಂಕಾರ್ ಮೈಸೂರು
ಕನ್ನಡ ಚಿತ್ರರಂಗವನ್ನು ದೀರ್ಘ ಕಾಲ ಬೆಳಗಿದ ಕೆ.ಎಸ್.ಅಶ್ವತ್ಥ್  ಬದುಕಿನ `ತೆರೆ ಮರೆ'ಗೆ ಸರಿದು  ಜ.೧೮ಕ್ಕೆ  ಒಂದು ವರ್ಷ.
ಶಿಸ್ತು,ಸಮಯಪ್ರಜ್ಞೆ, ಸರಳತೆ,ಬದ್ಧತೆ, ಸ್ವಾಭಿಮಾನದ ಕಾರಣಕ್ಕೆ ಉದ್ಯಮದಲ್ಲಿ ತಮ್ಮದೇ ಧೀಮಂತಿಕೆಯನ್ನು ಉಳಿಸಿ ಕೊಂಡಿದ್ದ ಹಿರಿಯ ನಟನ ನೆನಪನ್ನು ಚಿರಸ್ಥಾಯಿಗೊಳಿಸುವ ಪ್ರಯತ್ನಕ್ಕೆ ಸರಕಾರ ವಾಗಲಿ, ಚಿತ್ರೋದ್ಯಮವಾಗಲಿ ಚಾಲನೆ ನೀಡಿಲ್ಲ. ಸ್ಮರಣೆಯ ಒಂದು ಕಾರ್‍ಯಕ್ರಮವೂ ಆಯೋಜನೆಯಾಗಿಲ್ಲ.
ಅಂತಿಮ ಪಯಣದ ದಿನ  ವ್ಯಕ್ತ ಅಭಿಪ್ರಾಯ, ಭರವಸೆಗಳೆಲ್ಲ ಅಷ್ಟಕ್ಕೇ ಸೀಮಿತ. ಚಿತ್ರರಂಗದ `ಮರ್ಯಾದಾಪುರುಷ'ನ ನೆನಪು ವರ್ಷದಲ್ಲೇ `ತೆರೆ'ಮರೆಗೆ ಸರಿಯಿತಾ ಎನ್ನುವುದು ಕಾಡುವ ಸಂಗತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ