ಮೂವರೂ ಅಂಧರು, ಕೈ ಹಿಡಿದು ನಡೆಸುವರಾರು

ನವೀನ್‌ಕುಮಾರ್  ಪಿರಿಯಾಪಟ್ಟಣ
ಮೊದಲೇ ಕಿತ್ತು ತಿನ್ನೋ ಬಡತನ. ಜತೆಗೆ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮೂವರೂ ಮಕ್ಕಳು ಅಂಧರು. ಇನ್ನು ತಂದೆಗೆ ವೃದ್ಧಾಪ್ಯ.
ತಾಲೂಕಿನ ಗಡಿ ಗ್ರಾಮ ಕಿತ್ತೂರು ಗುರುವಯ್ಯನಕೊಪ್ಪಲು ತಮ್ಮಯ್ಯಶೆಟ್ಟಿ ಕುಟುಂಬದ ಸ್ಥಿತಿಯಿದು. ತಮ್ಮಯ್ಯಶೆಟ್ಟಿಗೆ ಒಬ್ಬ ಮಗಳು, ಇಬ್ಬರು ಪುತ್ರರು. ದುರದೃಷ್ಟವಶಾತ್ ಇವರೆಲ್ಲರೂ ದೃಷ್ಟಿಹೀನರು. ತಮಗಾರಾದರೂ ಬೆಳಕು ನೀಡಬಹುದೇ ಎಂಬ ಕನಸು ಹೊತ್ತು ಕುಳಿತವರು.
ಸುಧಾಮಣಿ (೩೦), ರವಿರಾಜ (೨೮) ಭಾಸ್ಕರ (೨೬)ರಿಗೆ  ತಂದೆ ತಮ್ಮಯ್ಯಶೆಟ್ಟಿ ಮತ್ತು ತಾಯಿ ಜಯಮ್ಮ ತಂದ ಕೂಲಿ ಹಣವೇ ಆಧಾರ. ಹೇಗೋ ಜೀವನ ನಡೆಸುತ್ತಿದ್ದಾಗ ಜಯಮ್ಮ ವರ್ಷದ ಹಿಂದೆ ಹೃದಯ ತೊಂದರೆ ಮತ್ತು ಅಸ್ತಮಾದಿಂದ ಕೊನೆಯುಸಿರೆಳೆದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ