ಕುಂದೂರು ಉಮೇಶಭಟ್ಟ ಮೈಸೂರು
ದೇಶದಲ್ಲೇ ೨ನೇ ಸ್ವಚ್ಛ ನಗರಿ ಎಂಬ ಅಭಿದಾನಕ್ಕೆ ಪಾತ್ರವಾದ(? !) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಿಮಗೆ ಸಿಗೋದು ಪ್ಲಾಸ್ಟಿಕ್ ಸ್ವಾಗತ...!
ಚಾಮುಂಡಿತಾಯಿ ದರ್ಶನಕ್ಕೆಂದು ನೀವೇನಾದರೂ ಬೆಟ್ಟಕ್ಕೆ ಹೊರಟರೆ ಬೆಟ್ಟದ ಏಳು ಕಿ.ಮೀ. ಉದ್ದಕ್ಕೂ ನಿಮಗೆ ಕಾಣುವುದು ಬರೀ ಪ್ಲಾಸ್ಟಿಕ್. ಅಷ್ಟರ ಮಟ್ಟಿಗೆ ಚಾಮುಂಡಿಬೆಟ್ಟವೀಗ ಪ್ಲಾಸ್ಟಿಕ್ ತೊಟ್ಟಿಯಾಗಿ ಮಾರ್ಪಟ್ಟಿದೆ.
ಬರೀ ಆದಾಯದ ಮೇಲೆ ಕಣ್ಣಿಟ್ಟಿರುವ ಸ್ಥಳೀಯ ಗ್ರಾಮಪಂಚಾಯಿತಿ, ಮುಜರಾಯಿ ಇಲಾಖೆಗಳಿಗೆ ದುಡ್ಡಿನ ಮುಂದೆ ಪ್ಲಾಸ್ಟಿಕ್ ಕಾಣುತ್ತಲೇ ಇಲ್ಲ. ಪರಿಸರ ಇಲಾಖೆ ಮಾತ್ರ, ಬೆಟ್ಟ ಎಷ್ಟೇ ಮಲಿನವಾದರೂ ಇದು ನಮಗೆ ಬರುವುದಿಲ್ಲ ಎಂದು ಮೌನ ವಹಿಸಿದೆ. ಅವ್ಯವಸ್ಥೆ, ಇಲಾಖೆಗಳ ನಿಷ್ಕ್ರಿಯತೆ ನಡುವೆ ಚಾಮುಂಡಿ ಬೆಟ್ಟ ಕ್ಕೆ ಬರುವ ಭಕ್ತರು ಮಾತ್ರ ಪ್ಲಾಸ್ಟಿಕ್ ಮಧ್ಯೆಯೇ ಬಂದು ಹೋಗುತ್ತಿದ್ದಾರೆ.ಪ್ರವಾಸಿ ನಗರದ ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಅಲ್ಲಿನ ಸ್ಥಿತಿ.
ದೇಶದಲ್ಲೇ ೨ನೇ ಸ್ವಚ್ಛ ನಗರಿ ಎಂಬ ಅಭಿದಾನಕ್ಕೆ ಪಾತ್ರವಾದ(? !) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಿಮಗೆ ಸಿಗೋದು ಪ್ಲಾಸ್ಟಿಕ್ ಸ್ವಾಗತ...!
ಚಾಮುಂಡಿತಾಯಿ ದರ್ಶನಕ್ಕೆಂದು ನೀವೇನಾದರೂ ಬೆಟ್ಟಕ್ಕೆ ಹೊರಟರೆ ಬೆಟ್ಟದ ಏಳು ಕಿ.ಮೀ. ಉದ್ದಕ್ಕೂ ನಿಮಗೆ ಕಾಣುವುದು ಬರೀ ಪ್ಲಾಸ್ಟಿಕ್. ಅಷ್ಟರ ಮಟ್ಟಿಗೆ ಚಾಮುಂಡಿಬೆಟ್ಟವೀಗ ಪ್ಲಾಸ್ಟಿಕ್ ತೊಟ್ಟಿಯಾಗಿ ಮಾರ್ಪಟ್ಟಿದೆ.
ಬರೀ ಆದಾಯದ ಮೇಲೆ ಕಣ್ಣಿಟ್ಟಿರುವ ಸ್ಥಳೀಯ ಗ್ರಾಮಪಂಚಾಯಿತಿ, ಮುಜರಾಯಿ ಇಲಾಖೆಗಳಿಗೆ ದುಡ್ಡಿನ ಮುಂದೆ ಪ್ಲಾಸ್ಟಿಕ್ ಕಾಣುತ್ತಲೇ ಇಲ್ಲ. ಪರಿಸರ ಇಲಾಖೆ ಮಾತ್ರ, ಬೆಟ್ಟ ಎಷ್ಟೇ ಮಲಿನವಾದರೂ ಇದು ನಮಗೆ ಬರುವುದಿಲ್ಲ ಎಂದು ಮೌನ ವಹಿಸಿದೆ. ಅವ್ಯವಸ್ಥೆ, ಇಲಾಖೆಗಳ ನಿಷ್ಕ್ರಿಯತೆ ನಡುವೆ ಚಾಮುಂಡಿ ಬೆಟ್ಟ ಕ್ಕೆ ಬರುವ ಭಕ್ತರು ಮಾತ್ರ ಪ್ಲಾಸ್ಟಿಕ್ ಮಧ್ಯೆಯೇ ಬಂದು ಹೋಗುತ್ತಿದ್ದಾರೆ.ಪ್ರವಾಸಿ ನಗರದ ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಅಲ್ಲಿನ ಸ್ಥಿತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ