ಎದ್ದೇಳು ರಂಗನಾಥ ಎದ್ದೇಳು, ರಸ್ತೆ ಅವ್ಯವಸ್ಥೆಯ ನೋಡೇಳು

 ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಕೋಟೆ ಕೊತ್ತಲ ನಾಡು ಶ್ರೀರಂಗಪಟ್ಟಣದಲ್ಲಿ ಸ್ಮಾರಕಗಳಂತೆಯೇ ರಸ್ತೆಗಳು ನಿರ್ಲಕ್ಷ್ಯಕ್ಕೊಳಗಾಗಿ ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿವೆ.
ಡಾಂಬರು ಕಾಣದ ಹಾಗೂ ಗುಂಡಿ ಬಿದ್ದ ರಸ್ತೆಗಳಿಂದಾಗಿ ಇಡೀ ಪಟ್ಟಣವೇ ಧೂಳುಮಯ. ಅಭಿವೃದ್ಧಿಯ `ಬಂಡಿ'ಯೇ `ಸಿದ್ಧ'ವಾಗದ ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿ ಆ ಶ್ರೀರಂಗನಾಥಸ್ವಾಮಿಗೇಪ್ರೀತಿ.
ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಶ್ರೀರಂಗಪಟ್ಟಣದಲ್ಲಿ ಸಮಸ್ಯೆಗಳ ಪೊಟ್ಟಣವೇ ಇದೆ. ಶ್ರೀರಂಗನಾಥಸ್ವಾಮಿಗೆ ದೇವಾಲಯಕ್ಕೆ ತೆರಳುವ ರಾಂಪಾಲ್ ರಸ್ತೆಯು ಪಟ್ಟಣದ ಇತಿಹಾಸ ಹೇಳುವಷ್ಟು ದುಸ್ಥಿತಿಯಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ