ಜೆ.ಶಿವಣ್ಣ ಮೈಸೂರು
ಎಚ್ಐವಿಯೊಂದಿಗೆ ಜೀವಿಸುವವರಿಗೆ ಸಾಂತ್ವನ ಹೇಳಿ ಚಿಕಿತ್ಸೆ ನೀಡಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಕೆ.ಆರ್.ಆಸ್ಪತ್ರೆಯ ಎಆರ್ಟಿ ಕೇಂದ್ರ (ಆಂಟಿ ರಿಟ್ರೋವೈರಲ್ ಟ್ರೀಟ್ಮೆಂಟ್ ಸೆಂಟರ್). ಇಲ್ಲೀಗ ಅಪೌಷ್ಟಿಕತೆ ಎದುರಿಸುತ್ತಿರುವ ಎಚ್ಐವಿ ಬಾಧಿತರಿಗೆ ಪೌಷ್ಟಿಕ ಆಹಾರ ಒದಗಿಸಲು ಚಿಂತನೆ ನಡೆದಿದೆ. ಅಷ್ಟು ಮಾತ್ರವಲ್ಲ, ರೋಗಿಗಳಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ತುಂಬುವ ಪ್ರಯತ್ನಕ್ಕೂ ಮುಂದಾಗಿದೆ.
ಸಿಎಫ್ಟಿಆರ್ಐ ರೂಪಿಸಿರುವ ಫಾರ್ಮುಲಾದ ಪೌಷ್ಟಿಕ ಆಹಾರವನ್ನು ಎಚ್ಐವಿ ಪೀಡಿತರಿಗೆ ಒದಗಿಸುವ ಸಂಕಲ್ಪದೊಂದಿಗೆ ಹೆಜ್ಜೆ ಇರಿಸಲಾಗಿದೆ. ಈ ಕುರಿತಂತೆ ನಗರದ ಹಲವು ಸೇವಾ ಸಂಸ್ಥೆಗಳು, ದಾನಿಗಳು, ಜನಪ್ರತಿನಿಧಿಗಳ ಜತೆ ಮಾತುಕತೆಗೆ ಚಿಂತನೆ ನಡೆಸಲಾಗಿದ್ದು, ಕೊಡುಗೈ ದಾನಿಗಳು, ನೆರವು ನೀಡುವ ಸಹೃದಯ ಮನಸ್ಸುಗಳು ಈ ಕನಸಿನ ಯೋಜನೆಗೆ ಕೈಜೋಡಿಸಬೇಕಿದೆ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ