ಹಳ್ಳ ಹಿಡಿದ ಉದ್ಯೋಗ ಖಾತ್ರಿ

ಕುಂದೂರು ಉಮೇಶಭಟ್ಟ, ಮೈಸೂರು
ಕಾಂಗ್ರೆಸ್ ಸಂಸದರು, ಶಾಸಕರು ಸೇರಿ ಘಟಾನುಘಟಿ ನಾಯಕರು ಇದ್ದರೂ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ವಿಫಲ !.
೨೦೧೦-೧೧ನೇ ಸಾಲಿನ ಆರ್ಥಿಕ ವರ್ಷ ಮುಗಿಯಲು ಇನ್ನೆರಡು ತಿಂಗಳು ಮಾತ್ರ ಬಾಕಿಯಿದ್ದರೂ ಉದ್ಯೋಗ ಖಾತ್ರಿಯ ಪ್ರಗತಿ ಕೇವಲ ಶೇ.೯.
ಜಿಲ್ಲೆಗೆ ಈ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಿಡುಗಡೆಯಾದ ಮೊತ್ತ ೧೯೦ ಕೋಟಿ ರೂ. ಈವರೆಗೂ ಮಾಡಿರುವ ಖರ್ಚಾದ ಮೊತ್ತ ಬರೀ ೧೭.೬೨ ಕೋಟಿ ರೂ. ಇದರ ಪ್ರಮಾಣ ಬರೀ ಶೇ ೮.೯೯ ಮಾತ್ರ. ಮೂವರು ಶಾಸಕರು, ಒಬ್ಬ ಕ್ಯಾಬಿನೆಟ್ ದರ್ಜೆಯ ಮಂಡಳಿಯ ಅಧ್ಯಕ್ಷರಿದ್ದರೂ ಹುಣಸೂರಿನಲ್ಲಿ ಖರ್ಚು ಮಾಡಿದ ಮೊತ್ತ ಬರೀ ೨೪ ಲಕ್ಷ ರೂ. ಇದು ಲಭ್ಯವಿರುವ ಅನುದಾನದಲ್ಲಿ ಶೇ.೧ಕ್ಕಿಂತ ಕಡಿಮೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ