ಗೌಡ್ರೆ. ರಸ್ತೆಯೆಲ್ಲಾ `ಜಲ್ಲಿ' ಹೋಗೋದು ಎಲ್ಲಿ?

 ಸಿ.ಎನ್.ಮಂಜುನಾಥ್ ನಾಗಮಂಗಲ
ಸ್ವಾತಂತ್ರ್ಯ ದೊರೆತು ೬೪ ವರ್ಷಗಳಾದರೂ ನಾಗಮಂಗಲ ಪಟ್ಟಣದ ಶೇ.೮೦ರಷ್ಟು ರಸ್ತೆಗಳು ಇನ್ನೂ ಮಣ್ಣಿನ ರಸ್ತೆಗಳೇ ಆಗಿವೆ.
ಡಾಂಬರು ಕಾಣದ ರಸ್ತೆಗಳು. ಅವುಗಳಲ್ಲಿ ಬರೀ ಗುಂಡಿಗಳು ಮತ್ತು ಧೂಳು. ಪರಿಣಾಮ ಇಲ್ಲಿನ ಜನರದು ನಿತ್ಯ ಗೋಳು. ಹೀಗಾಗಿ ಪಟ್ಟಣದ ರಸ್ತೆಗಳು ಹಾಗೂ ಜನರ ಸಂಕಷ್ಟಮಯ ಬದುಕು ಆ ಸೌಮ್ಯಕೇಶವಸ್ವಾಮಿಗೆ ಪ್ರೀತಿಯಾಗಬೇಕು.
ಹದಗೆಟ್ಟ ರಸ್ತೆಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯನ್ನು ಸಹಿಸಿ ಕೊಂಡು ಪಟ್ಟಣದ ಜನರು ಸೌಮ್ಯವಾಗಿರುವುದು ನಿಜಕ್ಕೂ ಆಶ್ಚರ್ಯ. ಶಾಸಕ ಸುರೇಶ್‌ಗೌಡರ ಕ್ಷೇತ್ರದಲ್ಲಿ ಯಾವೊಂದು ರಸ್ತೆಗಳು ಪ್ರಕಾಶಿಸುತ್ತಿಲ್ಲ.
ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ರಸ್ತೆಗಳು ಅಧ್ವಾನಗೊಂಡಿವೆ. ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳೇ ಕಳಪೆ ಕಾಮಗಾರಿಯಿಂದ ಗುಂಡಿ ಬಿದ್ದಿವೆ.
ಒಳಚರಂಡಿ, ಚರಂಡಿ ನಿರ್ಮಾಣ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಕೆಲವು ರಸ್ತೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಟಿ.ಬಿ. ಬಡಾವಣೆಯ ೨ನೇ ಹಂತದ ಚರಂಡಿಗೆ ಹಾಕಿದ ಕಲ್ಲು ಚಪ್ಪಡಿಗಳು ಮುರಿದು ರಸ್ತೆಯಲ್ಲಿ ಬಿದ್ದಿವೆ. ಮುಸ್ಲಿಂ ಕಾಲೋನಿ, ದಲಿತರ ಕಾಲೋನಿ, ಕುಂಬಾರ ಬೀದಿ, ಬ್ರಾಹ್ಮಣರ ಬೀದಿಗಳಂತೂ ಧೂಳು ಮಗ ಧೂಳ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ