ರಸ್ತೆಯಲ್ಲೇ ಒಕ್ಕಣೆ, ಸಂಚಾರಿಗಳಿಗೆ ಬವಣೆ

ವಿಕ ವಿಶೇಷ ಮೈಸೂರು
ವಾಹನಗಳ ಮುಖಾಮುಖಿ ಡಿಕ್ಕಿಯಿಂದ  ಹತ್ತು ಸಾವು ; ಹಳ್ಳ-ಕೊಳ್ಳಗಳ ರಸ್ತೆಯಲ್ಲಿ  ಸ್ಕಿಡ್ ಆಗಿ, ವಾಹನ ಉರುಳಿ ೨ ಸಾವು ; ರಸ್ತೆಯಲ್ಲಿ ನಿಯಂತ್ರಣ ತಪ್ಪಿ- ಮೂವರಿಗೆ ಗಾಯ ; ನಿಂತ ವಾಹನಕ್ಕೆ ಡಿಕ್ಕಿ- ಬೈಕ್ ಸವಾರ ನಿಧನ; ಬ್ರೇಕ್ ಫೇಲ್‌ನಿಂದ ರಸ್ತೆಯಿಂದ ಹಳ್ಳಕ್ಕೆ ಉರುಳಿದ ಬಸ್-ಎಲ್ಲರೂ ಪಾರು...!
ಈ ಎಲ್ಲವೂ ರಸ್ತೆ ಅಪಘಾತದ ಸಾಮಾನ್ಯ ಮಾದರಿಗಳು. ಇವುಗಳನ್ನು ಮೀರಿ, ಬೇರೆ  ಸ್ವರೂಪದಲ್ಲಿ ಅಪಘಾತ ನಡೆಯುವುದು ಕಡಿಮೆ. ನಡೆದರೂ ಅದು ವಿರಳಾತಿ ವಿರಳ ಎನ್ನಬಹುದು. ಆದರೆ, ಮೈಸೂರು ಸೇರಿದಂತೆ ಹಲವೆಡೆ ಹೊಸ ಮಾದರಿ ಅಪಘಾತ ಘಟಿಸತೊಡಗಿದೆ. ಅದು-‘ಒಕ್ಕಣಿಕೆ’ ಅಪಘಾತಗಳು. ನಟ್ಟನಡು ರಸ್ತೆಯಲ್ಲೇ ರೈತರು ಒಕ್ಕಣಿಕೆ ಮಾಡಲು ಬೆಳೆಯನ್ನು ತಂದು ಸುರಿಯುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ದುಬಾರಿಯಾಗಲಾರಂಭಿಸಿದೆ.
ಉದಾಹರಣೆಗೆ ಮೈಸೂರಿನ ಹೊರವಲಯದ ಕೇರ್ಗಳ್ಳಿ, ಬೋಗಾದಿ, ಉದ್ಬೂರು, ದೂರ, ಬೀರಿಹುಂಡಿ, ಟಿ. ಕಾಟ್ನೂರು ಸೇರಿದಂತೆ ಬಹುತೇಕ ಒಳ ರಸ್ತೆಗಳಲ್ಲಿ ಇಂಥ ಅಪಘಾತಗಳು ಹೆಚ್ಚುತ್ತಿವೆ. ಪ್ರಾಣಾಪಾಯದ ಮಟ್ಟಿಗೆ ಬೆಳೆದು ನಿಂತಿಲ್ಲ ಎನ್ನುವುದೇ ಸದ್ಯದ ಸಮಾಧಾನ. ಹಾಗಾಗಿ ಪೊಲೀಸರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ, ವಾಹನ ಸವಾರರಿಗೆ ಆಗುತ್ತಿರುವ ತೊಂದರೆ, ಕಿರಿಕಿರಿ ಹೇಳುವಂತಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ