ಹೆಬ್ಬಾಳಿನಲ್ಲಿ ಹೊಸ ಅಗ್ನಿಶಾಮಕ ಠಾಣೆ

ವಿಕ ವಿಶೇಷ
ಸಂಭವನೀಯ ಆಗ್ನಿದುರಂತ ಶಮನಕ್ಕೆ ನಗರದಲ್ಲಿ ಮತ್ತೊಂದು ಆಗ್ನಿಶಾಮಕ ಠಾಣೆ ಕಾರ್‍ಯಾರಂಭ ಗೊಳ್ಳಲಿದೆ.
ಜಿಲ್ಲೆಯಲ್ಲಿ ಇದು ಎಂಟನೇ ಅಗ್ನಿಶಾಮಕ ಠಾಣೆ. ನಗರಕ್ಕೆ ಮೂರನೆಯದು. ಇದರಿಂದ ನೂರಾರು ಕೈಗಾರಿಕೆಗಳಿರುವ ಹೆಬ್ಬಾಳು ಕೈಗಾರಿಕಾ ಪ್ರದೇಶಕ್ಕೆ ಮುಂಜಾಗ್ರತಾ ಕ್ರಮವಾಗಿ ಆಗ್ನಿಶಾಮಕ ಠಾಣೆ ಬೇಕೆಂಬ ಉದ್ದಿಮೆಗಳ ಬೇಡಿಕೆ ಈಡೇರಿದೆ.
ಸರಸ್ವತಿಪುರಂ, ಬನ್ನಿಮಂಟಪ ಪೂರ್ಣ ಪ್ರಮಾಣದ ಠಾಣೆ ಇದ್ದರೆ, ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಭಾರತೀಯ ನೋಟು ಮುದ್ರಣ ಘಟಕ (ಆರ್‌ಬಿಐ)ಬಳಿ ಉಪಠಾಣೆ ಕಾರ್‍ಯ ನಿರ್ವಹಿಸುತ್ತಿದೆ. ಒಂದೊಮ್ಮೆ ಕೈಗಾರಿಕೆಗಳಲ್ಲಿ ಆಗ್ನಿ ದುರಂತ ಸಂಭವಿಸಿ ದರೆ ಹಾಲಿ ಸರಸ್ವತಿಪುರಂ, ಬನ್ನಿಮಂಪಟದಲ್ಲಿನ ವಾಹನಗಳು ಕೈಗಾರಿಕಾ ಪ್ರದೇಶಕ್ಕೆ ಬರಲು ಬಹು ಸಮಯ ಹಿಡಿಯುವುದು ಸಾಮಾನ್ಯ. ಹಾಗಾಗಿ ಅಲ್ಲಿಗೆ ಪ್ರತ್ಯೇಕ ಠಾಣೆ ಅಗತ್ಯವಿದೆ ಎಂಬ ಬೇಡಿಕೆ ಇತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ