ಸೆರೆ ಸಿಕ್ಕ ಚಿರತೆ ಅರಣ್ಯಕ್ಕೆ

* ವಿಕ ಸುದ್ದಿಲೋಕ ಎಚ್.ಡಿ. ಕೋಟೆ
ಕೊನೆಗೆ ಸೆರೆ ಸಿಕ್ಕಿತು ಬಲವಾದ ಚಿರತೆ.
ಒಂದು ವಾರದಿಂದ ಚಿರತೆ ಸೆರೆ ಹಿಡಿಯಲೆಂದೇ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಅಳವಡಿಸಿ ಕೊಂಡು ಕಾಯುತ್ತಲೇ ಇದ್ದರು. ಚಿರತೆ ಬೋನಿಗೆ ಬೀಳಬಹುದು ಎಂದುಕೊಂಡಿದ್ದ ಇಲಾಖೆಯವರಿಗೆ ಶನಿವಾರ ಮಧ್ಯರಾತ್ರಿ ಕಾರ್‍ಯಾಚರಣೆ ಯಶಸ್ವಿಯಾಗಿದೆ.
ಹಳ್ಳಿಗಳಿಗೆ ನುಗ್ಗಿ ಜಾನುವಾರುಗಳನ್ನು ತಿನ್ನುತ್ತ, ಜನತೆ ಯಲ್ಲಿ ಭೀತಿ ಮೂಡಿಸಿದ್ದ  ಚಿರತೆಯನ್ನು ಸೆರೆ ಹಿಡಿಯ ಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬಹಳ ದಿನಗಳಿಂದಲೇ ಈ ಭಾಗದಲ್ಲಿ ಚಿರತೆ ಕಾಟವಿದೆ ಎನ್ನುವುದು ಗ್ರಾಮಸ್ಥರ ದೂರಾಗಿತ್ತು,
ಹಳ್ಳದ ಮನುಗನಹಳ್ಳಿಯ ಕೃಷ್ಣೇಗೌಡರ ಜಮೀನಿ ನಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ೭ ರಿಂದ ೮ ವರ್ಷದ ಚಿರತೆ ಶನಿವಾರ  ಮಧ್ಯರಾತ್ರಿ ೧೨ ಗಂಟೆ ಸಮಯದಲ್ಲಿ ಬೋನಿಗೆ ಬಿದ್ದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ