ಹೆದ್ದಾರಿ ಬಿಟ್ಟರೆ ಉಳಿದಿದ್ದೆಲ್ಲಾ ಕಿರಿಕಿರಿ...

ಶಿವನಂಜಯ್ಯ  ಮದ್ದೂರು
ಮದ್ದೂರಿನ ಮುದ್ದಾದ ರಸ್ತೆಗಳು ಕಳಪೆ ಕಾಮಗಾರಿಯಿಂದ ಮುಕ್ಕಾಗಿವೆ. ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ನೆಪದಲ್ಲಿ ರಸ್ತೆಗಳನ್ನು ಅಗೆದು ಅಂದಗೆಡಿಸಲಾಗಿದೆ.
ಪಟ್ಟಣದಲ್ಲಿ ಅರ್ಧದಷ್ಟು ರಸ್ತೆಗಳು ಇನ್ನೂ ಮಣ್ಣಿನ ರಸ್ತೆಗಳೇ. ಅರೆಬರೆ ಕಾಮಗಾರಿ ನಡೆದಿರುವ ರಸ್ತೆಗಳೇ ಹೆಚ್ಚು. ಬಹುತೇಕ ಕಡೆಗಳಲ್ಲಿ ಮೆಟ್ಲಿಂಗ್ ಹಂತದಲ್ಲೇ ಕಾಮಗಾರಿ ನಿಂತಿದೆ. `ಕಲ್ಪನೆ'ಗೂ ನಿಲುಕದಂತಿರುವ ಇಲ್ಲಿನ ರಸ್ತೆಗಳ ಸ್ಥಿತಿ ಆ `ಮದ್ದೂರಮ್ಮ'ನಿಗೆ ಪ್ರೀತಿಯಾಗಬೇಕು.
ರಸ್ತೆಗಳ ನಡುವೆಯೂ ಮ್ಯಾನ್ ಹೋಲ್‌ಗಳು ಬಾಯ್ತೆರೆದು ನಿಂತಿದೆ. ಕೆಲವೆಡೆ ಕಿರಿದಾದ ರಸ್ತೆಗಳಲ್ಲಿ ಸಂಚಾರ ದುಸ್ತರ. ಕಟ್ಟಡಗಳ ತ್ಯಾಜ್ಯ ಹಾಗೂ ಕಸವನ್ನು ರಸ್ತೆ ಬದಿಯಲ್ಲೇ ಸುರಿದಿರುವುದು ಕಿರಿಕಿರಿ ಉಂಟು ಮಾಡುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ