ಅಕ್ಕಿ ಬೇಳೆ ಇಲ್ಲ, ಕಾಫಿ ಇದೆ !

* ವಿಕ ವಿಶೇಷ
ಕೊಡಗಿನಲ್ಲಿ ಭತ್ತದ ಗದ್ದೆಗಳೇ ಬತ್ತುತ್ತಿವೆ. ಅಕ್ಕಿ ಬೆಳೆಯುತ್ತಿದ್ದ ಫಲವತ್ತಾದ ಜಮೀನು ಈಗ ಅನ್ಯ ಕಾರ್‍ಯಕ್ಕೆ ಬಳಸಲ್ಪಡುತ್ತಿವೆ. ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಅಂತರ್ಜಲ ವೃದ್ಧಿಯ ಜೀವಸೆಲೆಯಾಗಿದ್ದ ಗದ್ದೆಗಳು ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿವೆ.
ಜೇಬು ತುಂಬಿಸುವ ವಾಣಿಜ್ಯ ಬೆಳೆಗಳು ಅಷ್ಟಾಗಿ ಗೊತ್ತಿರದ ಕಾಲಘಟ್ಟದಲ್ಲಿ ಭತ್ತ ಬೆಳೆಯುವುದೇ ಹೆಮ್ಮೆಯಾಗಿತ್ತು. ತನ್ನ ಜೀವನದ ಬಹುಪಾಲು ಕೃಷಿಯಲ್ಲೇ ಕಳೆಯುತ್ತಿದ್ದ ರೈತ, ಈಗ ಸಂಪೂರ್ಣ ಬದಲಾಗಿದ್ದಾನೆ.
ಸ್ವತಃ ಭೂ ಹಿಡುವಳಿದಾರರೇ ಜಾನುವಾರುಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾಗ ಲಾಭವಿತ್ತು. ಯಂತ್ರೋಪಕರಣ- ರಸಗೊಬ್ಬರ ಬಳಕೆ, ಕಾರ್ಮಿಕರ ಅವಲಂಬನೆ ಹೆಚ್ಚಾಗುತ್ತಿದ್ದಂತೆ ಭತ್ತ ಹೊರೆಯಾಯಿತು. ಭತ್ತ ಬೆಳೆಯುವುದು ಶ್ರಮದಾಯಕ, ಲಾಭ ಕಡಿಮೆ ಎಂದೆಲ್ಲಾ ಅನಿಸತೊಡಗಿತು. ನಂತರ ಬಹುತೇಕ ಮಂದಿ ಜಮೀನುಗಳನ್ನು ಅನ್ಯ ಕಾರ್ಯಕ್ಕೆ ಬಳಸತೊಡಗಿದರು. ಹಲವರು ಗದ್ದೆ ಗದ್ದಲ ಬೇಡ ಎಂದು ಪಾಳುಬಿಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ