ಶಿಕ್ಷಣ ತಜ್ಞ ದಿ.ಶಿವಾನಂದಶರ್ಮರ ಜನ್ಮಶತಮಾನೋತ್ಸವ

 ಮಾದೇಶ್ ತಿ.ನರಸೀಪುರ
ಏಳು ದಶಕದ ಹಿಂದೆಯೇ ಬಿಸಿಯೂಟವನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶುರು ಮಾಡಿದ್ದ ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ವಿದ್ಯಾಲಯ(ಆರ್.ವಿ. ಕಾಲೇಜು) ಹಾಗೂ ತಿ.ನರಸೀಪುರದ ವಿದ್ಯೋದಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ದಿ.ಎಂ.ಸಿ.ಶಿವಾನಂದ ಶರ್ಮ ಅವರದ್ದೀಗ ಜನ್ಮ ಶತಮಾನೋತ್ಸವ.
೫೫ ವರ್ಷದಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ನಿರಂತರ ಅಕ್ಷರ ದೊಂದಿಗೆ ಅನ್ನ ದಾಸೋಹ ನೀಡುವ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ ಹರಿಕಾರ ಶರ್ಮ ಅವರಿಗೆ ಜ.೨೨ ಕ್ಕೆ ನೂರು ವಸಂತಗಳು ಸಂದಲಿದೆ. ಈ ಸಂದರ್ಭದಲ್ಲಿ ಜನ್ಮಶತಮಾನೋತ್ಸವ ಸಮಾರಂಭಕ್ಕೆ ತಿ.ನರಸೀಪುರದ ಗ್ರಾಮ ವಿದ್ಯೋದಯ ಸಂಘ ಸಜ್ಜಾಗಿದೆ.
ಗ್ರಾಮೀಣ ಪ್ರದೇಶದ ಬಡ ರೈತ ಕುಟುಂಬದಲ್ಲಿ ಜನಿಸಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನಿಸ್ವಾರ್ಥ ಸೇವೆ ಮೂಲಕ ತಾಲೂಕು ಕೇಂದ್ರದಲ್ಲಿ ಪ್ರಥಮ ವಾಗಿ ಬೃಹತ್ ಪ್ರಮಾಣದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಕೀರ್ತಿ ಎಂ.ಸಿ. ಶಿವಾನಂದ ಶರ್ಮ ಅವರದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ