ರೈತರಿಗೆ ‘ಜೀವ’ ನೀಡಿದ ಕಾವೇರಿ

ಮತ್ತೀಕೆರೆ ಜಯರಾಮ್ ಮಂಡ್ಯ
ಮೈಸೂರು ಭಾಗದ ‘ಜೀವನಾಡಿ’ ಕೆಆರ್‌ಎಸ್‌ನಲ್ಲಿ ಬೇಸಿಗೆ ಬೆಳೆಗೆ ಸಮರ್ಪಕ ನೀರು ಲಭ್ಯವಿದೆ. ಸಂಕ್ರಾಂತಿ ಹಬ್ಬಕ್ಕೆ ಮುನ್ನ ನಾಲೆಗಳಿಗೆ ನೀರು ಬಿಡುಗಡೆಯಾಗಲಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಆತಂಕದಿಂದ ದೂರ ವಾಗಿದ್ದಾರೆ.
ಗರಿಷ್ಠ ೧೨೪.೮೦ ಅಡಿ ನೀರು ಶೇಖರಣಾ ಸಾಮರ್ಥ್ಯದ  ಇದೆ. ಮೇ ಅಂತ್ಯದವರೆಗೆ ಹಾಲಿ ಇರುವ ಬೆಳೆ ಮತ್ತು ಆಶ್ರಿತ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜಿಗೆ ಚಿಂತೆಯಿಲ್ಲ. ಕಳೆದ ವರ್ಷ ಈ ವೇಳೆಗೆ ೧೨೩.೧೫ ಅಡಿ ನೀರಿತ್ತು.
ಕಾವೇರಿ ಕೊಳ್ಳದಲ್ಲಿ ಕಳೆದ ಮುಂಗಾರು ದುರ್ಬಲ ಗೊಂಡಿತ್ತು. ಜಲಾಶಯವು ಪ್ರತಿ ವರ್ಷ ಆಗಸ್ಟ್ ಅಂತ್ಯದೊಳಗೆ ಭರ್ತಿಗೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಭರ್ತಿ ಅನುಮಾನವಾಗಿತ್ತು. ಹಾಗೂ ಹೀಗೂ ಆಯುಧಪೂಜೆ ಹಬ್ಬದ ವೇಳೆಗೆ ತುಂಬಿ ತುಳುಕಿತು.
ಭರ್ತಿಗೊಳ್ಳುವ ಮುನ್ನವೇ ಕೆಆರ್‌ಎಸ್‌ನಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಯಿಂದ ಒಳ ಹರಿವು ಹೆಚ್ಚಿದಾಗ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಯಿತು. ಇಷ್ಟಾಗಿಯೂ ಅಧಿಕಾರಿಗಳು ಗರಿಷ್ಠ ಮಟ್ಟ ಕಾಯ್ದುಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ