ಓದಿದ್ದು ಎಂಎಸ್ಸಿ, ಆಗಿದ್ದು "ಮಾಸ್ಟರ್ ಆಫ್ ಕೃಷಿ'

ಚೀ.ಜ. ರಾಜೀವ ಮೈಸೂರು
ಕೃಷಿ ಅಂದ್ರೆ ಏನು ? - ಅದೊಂದು ಅನ್ನ ಸೃಷ್ಟಿಯ ಕಾಯಕ, ರೈತರ ಬದುಕು, ವ್ಯವಹಾರ, ಸಂಸ್ಕೃತಿ, ಜೀವನ ಪದ್ಧತಿ, ದೇಶದ ಬೆನ್ನೆಲುಬು, ಮೇಟಿ ವಿದ್ಯೆ... ಹೀಗೆ  ಸರ್ವಸ್ವವನ್ನು ಕೃಷಿಯೊಂದಿಗೆ ಜೋಡಿಸಿ ವ್ಯಾಖ್ಯಾನಿಸಬಹುದು.
ಆದರೆ  ಇದೇ ಪ್ರಶ್ನೆಯನ್ನು ಜಿ.ಬಿ. ಸರಗೂರಿನ ಕೆ. ವೆಂಕಟೇಶ್ ಎಂಬ ಯುವ ಕೃಷಿಕನ ಮುಂದಿಟ್ಟರೆ,  `ಅದೊಂದು ಖುಷಿ ನೀಡುವ  ಕಲೆ, ಅಷ್ಟು  ಮಾತ್ರವಲ್ಲ. ಪರಿಶ್ರಮದಿಂದ ಮಾಡಿದರೆ, ಲಾಭದಾಯಕ  ವ್ಯವಹಾರ.  ಯಂತ್ರೋಪಕರಣ ಬಳಕೆ,  ಸಾವಯವ ಪದ್ಧತಿ ಹಾಗೂ ಅರಣ್ಯ ಆಧರಿತವಾಗಿ(ಒಂದು  ಪ್ರಯೋಗ) ದುಡಿಸಿಕೊಂಡರೆ, ಅದನ್ನೊಂದು ಲಾಭದಾಯಕ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನೇ ಮಾಡಬಹುದು !' ಎಂದು ಅಚ್ಚರಿ ಮೂಡಿಸುತ್ತಾರೆ !
ಎಚ್. ಡಿ. ಕೋಟೆ ತಾಲೂಕು ಹಳ್ಳದ ಮನುಗನಹಳ್ಳಿ ರಸ್ತೆಯಲ್ಲಿ ಬರುವ ಜಿ. ಬಿ. ಸರಗೂರಿನಲ್ಲಿ ವೆಂಕಟೇಶ್ ಅವರೇ ಅಭಿವೃದ್ಧಿ ಪಡಿಸಿರುವ ೨೫ ಎಕರೆ ವಿಶಾಲ  ತೋಟದಲ್ಲಿ  ನಿಂತು, ಕೃಷಿಯನ್ನು ಕಂಪನಿ ವ್ಯವಹಾರಕ್ಕೆ  ಹೋಲಿಸಿ ಮಾತನಾಡುತ್ತಿದ್ದರೆ, ಅವರ ಮಾತಿನ ಮೇಲೆ ವಿಶ್ವಾಸ ಮೂಡುತ್ತದೆ. ಏಕೆಂದರೆ, ಅವರ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ತೋಟವೇ ಅಲ್ಲಿ ಮೈದಾಳಿ ನಿಂತಿದೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ