ಸತತ ೬ನೇ ಬಜೆಟ್ ಮಂಡನೆಗೆ ಬಿ.ಎಸ್.ಯಡಿಯೂರಪ್ಪ ಸಜ್ಜಾ ಗಿದ್ದಾರೆ. ಉಪಮುಖ್ಯಮಂತ್ರಿ - ಹಣಕಾಸು ಸಚಿವರಾಗಿ ಎರಡು ಬಾರಿ, ಮುಖ್ಯಮಂತ್ರಿಯಾಗಿ ೩ ಬಾರಿ ಮಂಡಿಸಿದ ಬಜೆಟ್ನಲ್ಲಿ ಅವರು ಮೈಸೂರು ಭಾಗಕ್ಕೆ ಮೋಸವನ್ನೇನು ಮಾಡಿರಲಿಲ್ಲ. ಬೇಡಿಕೆಗೆ ಸ್ಪಂದಿಸಿದ್ದರು, ಕೆಲವು ಅಚ್ಚರಿಯ ಕೊಡುಗೆಗಳನ್ನೂ ನೀಡಿದ್ದರು.`ಬೇರೆ ಬೇರೆ' ಕಾರಣಕ್ಕೆ ನಿರೀಕ್ಷೆ ಗಳನ್ನು ಹುಸಿಯಾಗಿಸಿದ್ದೂ ಇದೆ.
ಘೋಷಣೆಗಳ ವಿಷಯದಲ್ಲೂ ಅಷ್ಟೆ. ಕೆಲವಷ್ಟೆ ಕೈಗೂಡಿವೆ. ಕೆಲವು ಜಾರಿ ಹಂತದಲ್ಲಿವೆ.`ಬಾಕಿ' ಸಂಖ್ಯೆಯೇ ಹೆಚ್ಚಿದೆ. ಈಗ,ಇನ್ನೊಂದು `ಬಜೆಟ್ ಬುಟ್ಟಿ' ಹಿಡಿದು ನಿಂತಿದ್ದಾರೆ.`ಕೃಷಿಕರಿಗೆ ಪ್ರತ್ಯೇಕ ' ಎಂಬ ಮಾಯಾ ಅಸ್ತ್ರ ಬತ್ತಳಿಕೆಯಲ್ಲಿದೆ. `ಇದು ಚುನಾವಣಾ ಬಜೆಟ್' ಎಂದೂ ವಿಶ್ಲೇಷಿಸಲಾಗುತ್ತದೆ. ಈ ಕಾರಣಕ್ಕೆ, ಮೈಸೂರು ಜಿಲ್ಲೆ ದೊಡ್ಡ ನಿರೀಕ್ಷೆಗಳನ್ನು ಹೊಂದಿದೆ.ಹಿಂದಿನ ವರ್ಷಗಳ ಕತೆ ಏನೇ ಇರಲಿ, ರಾಜಕೀಯ ಕಾರಣಕ್ಕಾಗಿಯಾದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತವರಿನ ಒಟ್ಟು ಅಭಿವೃದ್ಧಿ ದೃಷ್ಟಿಯಿಂದ ಒಂದಷ್ಟು `ಬಂಪರ್' ಕೊಡಗೆಗಳನ್ನು ನೀಡಿಯಾರು ಎಂಬುದು ನಿರೀಕ್ಷೆಗಳ ಮೂಟೆಯನ್ನು ಉಬ್ಬಿಸಿದೆ.
ಘೋಷಣೆಗಳ ವಿಷಯದಲ್ಲೂ ಅಷ್ಟೆ. ಕೆಲವಷ್ಟೆ ಕೈಗೂಡಿವೆ. ಕೆಲವು ಜಾರಿ ಹಂತದಲ್ಲಿವೆ.`ಬಾಕಿ' ಸಂಖ್ಯೆಯೇ ಹೆಚ್ಚಿದೆ. ಈಗ,ಇನ್ನೊಂದು `ಬಜೆಟ್ ಬುಟ್ಟಿ' ಹಿಡಿದು ನಿಂತಿದ್ದಾರೆ.`ಕೃಷಿಕರಿಗೆ ಪ್ರತ್ಯೇಕ ' ಎಂಬ ಮಾಯಾ ಅಸ್ತ್ರ ಬತ್ತಳಿಕೆಯಲ್ಲಿದೆ. `ಇದು ಚುನಾವಣಾ ಬಜೆಟ್' ಎಂದೂ ವಿಶ್ಲೇಷಿಸಲಾಗುತ್ತದೆ. ಈ ಕಾರಣಕ್ಕೆ, ಮೈಸೂರು ಜಿಲ್ಲೆ ದೊಡ್ಡ ನಿರೀಕ್ಷೆಗಳನ್ನು ಹೊಂದಿದೆ.ಹಿಂದಿನ ವರ್ಷಗಳ ಕತೆ ಏನೇ ಇರಲಿ, ರಾಜಕೀಯ ಕಾರಣಕ್ಕಾಗಿಯಾದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತವರಿನ ಒಟ್ಟು ಅಭಿವೃದ್ಧಿ ದೃಷ್ಟಿಯಿಂದ ಒಂದಷ್ಟು `ಬಂಪರ್' ಕೊಡಗೆಗಳನ್ನು ನೀಡಿಯಾರು ಎಂಬುದು ನಿರೀಕ್ಷೆಗಳ ಮೂಟೆಯನ್ನು ಉಬ್ಬಿಸಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ