ಒಣ ಮೇವು ಬಿಲ್ಲೆ ಘಟಕ: `ಹಸಿರು' ತುಂಬುವ ನಿರೀಕ್ಷೆ

ಫಾಲಲೋಚನ ಆರಾಧ್ಯ, ಚಾಮರಾಜನಗರ
ರಾಸುಗಳಿಗೆ ಮೇವಿನ ಅಭಾವ ತಪ್ಪಿಸುವುದರೊಂದಿಗೆ ಒಣ ಮೇವು ಪೋಲು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ `ಒಣ ಮೇವು ಬಿಲ್ಲೆ ಘಟಕ' ಸ್ಥಾಪನೆಗೆ ಭರದ ಸಿದ್ಧತೆ ನಡೆದಿದೆ.
ಉತ್ತರ ಭಾರತದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ರಾಜ್ಯಗಳಿಗೆ ಸೀಮಿತವಾಗಿದ್ದ ಇಂಥ ಘಟಕ ಸದ್ಯದಲ್ಲೇ ಗಡಿ ಜಿಲ್ಲೆಯಲ್ಲೂ ತಲೆ ಎತ್ತಲಿದೆ. ಪೋಲಾಗುತ್ತಿರುವ ಒಣ ಮೇವಿನ ಸದ್ಬಳಕೆಯ ಮಹತ್ವದ ಕಾರ್‍ಯಕ್ಕೆ ಕೇಂದ್ರ ಸರಕಾರದ ಧನ ಸಹಾಯದಡಿ ಮೈಮುಲ್ ಮುಂದಾಗಿದೆ. ಎಲ್ಲವೂ ಯೋಜನಾ ಬದ್ಧವಾಗಿ ನಡೆದರೆ ಕೆಲವೇ ತಿಂಗಳಲ್ಲಿ ಘಟಕ ಸ್ಥಾಪನೆ ಆಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ