ಬಾರದ ೨೭ ಕೋಟಿ ರೂ. ಹಣ, ಕೆ.ಆರ್. ಆಸ್ಪತ್ರೆ ಅಭಿವೃದ್ಧಿಗೆ ಗ್ರಹಣ

ಲೋಕೇಶ್ ನೀರಬಿದಿರೆ
ಕೆ.ಆರ್.ಆಸ್ಪತ್ರೆ ಅಭಿವೃದ್ಧಿಗೆ ಮೇಜರ್ ಸರ್ಜರಿ ಯಾಗೋದು ಯಾವಾಗ?
ದೊಡ್ಡಾಸ್ಪತ್ರೆ ಎಂದೇ ಜನಜನಿತ ಕೆ.ಆರ್. ಆಸ್ಪತ್ರೆ ಅವ್ಯವಸ್ಥೆ ಆಗರ. ೬ ತಿಂಗಳ ಹಿಂದೆ ಆಸ್ಪತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಅಭಿವೃದ್ಧಿಗೆ ಕೋಟಿ, ಕೋಟಿ ರೂ. ಅನುದಾನದ ಭರವಸೆ ನೀಡಿದ್ದರು. ಈಗಲಾದರೂ ಆಸ್ಪತ್ರೆಯಲ್ಲಿ ಸುಧಾರಣೆ ಪರ್ವ ಶುರುವಾಗುತ್ತದೆ ಎಂದು ಜನ ನಂಬಿದ್ದರು. ಆದರೆ ಹಣ ಬಿಡುಗಡೆಯಾಗಲೇ ಇಲ್ಲ. ಆದರೆ ಸಿಎಂ ಭರವಸೆ ನೀಡಿ ವಾರವಲ್ಲ, ಆರು ತಿಂಗಳೇ ಸರಿದು ಹೋಗಿದೆ. ಇನ್ನೂ ಅನುದಾನ ಬಿಡುಗಡೆ ಸದ್ದು ಸುದ್ದಿ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ