ನಲ್ಲಿಗಳಲ್ಲಿ ಕಾವೇರಿ ಧುಮ್ಮಿಕ್ಕಲಿಲ್ಲ, ಬವಣೆ ಕೇಳೋರಿಲ್ಲ

 ವಿಕ ಸುದ್ದಿಲೋಕ ಚಾಮರಾಜನಗರ
ತಿ. ನರಸೀಪುರದಿಂದ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಪೈಪ್‌ಲೈನ್  ಅಲ್ಲಲ್ಲಿ  ಹಲವು ಬಾರಿ ಒಡೆಯುತ್ತಲೇ ಇದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಕಾರಣ ನಗರದ ಜನತೆ ಪರದಾಡುವಂತಾಗಿದೆ.
ಮಾರ್ಗ ಮಧ್ಯದಲ್ಲೇ ಪೈಪ್ ಒಡೆಯುವ ಕಾರಣ, ಅದರ ದುರಸ್ತಿಗೆ ನಗರಸಭೆ ಮುಂದಾದಾಗಲೆಲ್ಲಾ ೨ ದಿನಗಳ ಕಾಲ ನಗರಕ್ಕೆ ನೀರು ಪೂರೈಕೆ ಸ್ಥಗಿತ. ಪರಿಣಾಮ ನಗರದ ೩೧ ವಾರ್ಡ್‌ಗಳಲ್ಲೂ  ಕುಡಿಯುವ ನೀರಿಗೆ ಪರದಾಟ. ವಾರದ ಹಿಂದಷ್ಟೆ  ೧ ದಿನ ಇದೇ ಕಾರಣಕ್ಕೆ ನೀರು ಪೂರೈಕೆ ಆಗಿರಲಿಲ್ಲ. ಇದೀಗ ಮತ್ತೆ ಬುಧವಾರ ಮತ್ತು ಗುರುವಾರ ನೀರು ಪೂರೈಕೆ ಇರುವುದಿಲ್ಲ ಎಂದು ನಗರಸಭೆ ತಿಳಿಸಿದೆ.
ಅದರಂತೆ ಬುಧವಾರ ನಗರದ ನಲ್ಲಿಗಳಲ್ಲಿ ಕಾವೇರಿ ಧುಮಕಲಿಲ್ಲ. ಹೀಗಾಗಿ ಯಾವ ಬಡಾವಣೆಗೆ ಕಾಲಿಟ್ಟರೂ ನೀರು ಹೊರುವ ದೃಶ್ಯ ಸಾಮಾನ್ಯವಾಗಿತ್ತು. ಹೇಳಿ ಕೇಳಿ ನಗರದಲ್ಲಿ ಭೂಮಿ ಮಟ್ಟಕ್ಕೆ ನಲ್ಲಿ ನೀರು ಏರುವುದಿಲ್ಲ.  ಆಳವಾದ ಗುಂಡಿಗಳಲ್ಲಿ ನಲ್ಲಿ ಗಳನ್ನು ಅಳವಡಿಸಿ ನೀರು ಹಿಡಿದುಕೊಳ್ಳಬೇಕಾದ ಸ್ಥಿತಿ ಜಿಲ್ಲಾ ಕೇಂದ್ರದ ಜನತೆಯದ್ದು. ಈ  ಅವ್ಯವಸ್ಥೆ ದಶಕಗಳಿಂದಲೂ ಮುಂದುವರಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ