ಮುಡಾಗೆ ನಾಗೇಂದ್ರ ಓಕೆ: ನೆರೆಯವರ ಹಸ್ತಕ್ಷೇಪ ಯಾಕೆ?

ಚೀ. ಜ. ರಾಜೀವ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಾಲಿಕೆ ಸದಸ್ಯ, ಬಿಜೆಪಿ ಮುಖಂಡ ಎಲ್.ನಾಗೇಂದ್ರರ ನೇಮಕ ಜಿಲ್ಲೆಯ ಬಿಜೆಪಿ ವಲಯದಲ್ಲಿ  ಹೊಸ ರಾಜಕೀಯ ಲೆಕ್ಕಾಚಾರ, ತಳಮಳ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ಅಸಮಾಧಾನವಾಗಿದ್ದರೆ, ಜಿಲ್ಲೆಯ ಆಗು-ಹೋಗುಗಳಲ್ಲಿ ನೆರೆ ಜಿಲ್ಲೆಯ ಸಚಿವರು-ಸಂಸದರು ಕೈಯಾಡಿಸಿದ್ದಾರೆ ಎಂಬ ತಳಮಳ ಜಿಲ್ಲೆಯ ಇಬ್ಬರು ಸಚಿವರಲ್ಲಿ. ಇದರ ಮಧ್ಯೆ ಚಾಮರಾಜ ಕ್ಷೇತ್ರದ ಸಂಭವನೀಯ ಮರು ಚುನಾವಣೆಯ ಟಿಕೆಟ್ ಯಾರಿಗೆಂಬ ಚರ್ಚೆ ಶುರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ