ಕಣಿವೆಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ

ಕುಂದೂರು ಉಮೇಶಭಟ್ಟ ಮೈಸೂರು
ವಿಶ್ವಕಪ್ ವೀಕ್ಷಣಾ ಉತ್ಸಾಹಕ್ಕೆ ವಿದ್ಯುತ್ ಕಡಿತದ ಭಂಗ, ಪರೀಕ್ಷೆಯ `ಜ್ವರ'ಕ್ಕೆ ಕರೆಂಟ್ ಶಾಕ್ !
ಬೇಸಿಗೆ ಆರಂಭವಾಗಿರುವ ಸೂಚನೆಯಾಗಿ ಮೈಸೂರಿನಲ್ಲಿ ವಾರದಿಂದಲೇ ವಿದ್ಯುತ್ ಕಡಿತ ಶುರುವಾಗಿದೆ. ನಗರ ಮತ್ತು ಈ ಭಾಗದ ಪ್ರಮುಖ ಪಟ್ಟಣಗಳಲ್ಲಿ ನಿತ್ಯ ಮೂರು ತಾಸು,ಗ್ರಾಮಾಂತರ ಪ್ರದೇಶದಲ್ಲಿ ಆರು ತಾಸಿನ ವಿದ್ಯುತ್ ಕಡಿತ `ಜಾರಿ'ಯಲ್ಲಿದೆ.
ಬೇಡಿಕೆ, ಕೊರತೆ: ವಿಶ್ವಕಪ್ ಸಮಯ ಬಹುತೇಕ ಮಂದಿ ಟಿವಿ ಮುಂದೆ ಹೆಚ್ಚು ಹೊತ್ತು ಕಳೆಯುತ್ತಾರೆ. ಜತೆಗೆ ಪರೀಕ್ಷಾ ಸಮಯ.ಮಕ್ಕಳ  ಓದಿಗೆ ವಿದ್ಯುತ್ ಬೇಕೇ ಬೇಕು.ಬೇಸಿಗೆ ದಿನದಲ್ಲಿ ವಿದ್ಯುತ್ ಅವಲಂಬನೆಯೂ ಹೆಚ್ಚು.ಆದರೆ,ನಿತ್ಯ ಮೈಸೂರು ಭಾಗದ ಬೇಡಿಕೆಯ ಪ್ರಮಾಣದಲ್ಲಿ ೧೦೦ ಮೆಗಾ ವ್ಯಾಟ್ ಕೊರತೆ ಇದೆ.ಪರಿಣಾಮ `ಕಡಿತ ಅನಿವಾರ್‍ಯ' ಎಂಬ ಎಂದಿನ ಮಂತ್ರಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಮೊರೆ ಹೋಗಿದೆ.
ಉತ್ಪಾದನೆ ಇಲ್ಲವೇ ಖರೀದಿ ರೂಪದಲ್ಲಿ ನಿರೀಕ್ಷಿತ ವಿದ್ಯುತ್ ಲಭಿಸಿದರೆ ಕಡಿತ ಕಡಿಮೆಯಾಗ ಬಹುದು. ಇಲ್ಲವೇ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಕಡಿತದ ಸೂಚನೆಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ