ಆಶಾದಾಯಕ ಬಜೆಟ್ ನಿರೀಕ್ಷೆಯಲ್ಲಿ ಕೈಗಾರಿಕೆಗಳು

ವಿಕ ವಿಶೇಷ ಮೈಸೂರು
ಮೈಸೂರಿನ ಕೈಗಾರಿಕೆಗಳು ಈ ಬಾರಿ ಆಶಾದಾಯಕ ಬಜೆಟ್ ನಿರೀಕ್ಷೆಯಲ್ಲಿವೆ.
ಬೆಂಗಳೂರಿನ ಬಳಿಕ ಕೈಗಾರಿಕೆಗಳ ಬೆಳವಣಿಗೆಗೆ ವಿಪುಲ ಅವಕಾಶ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಏಳ್ಗೆ ಕಾಣುತ್ತಿಲ್ಲ ಎನ್ನುವುದು ಉದ್ಯಮಿಗಳ ಆತಂಕ. ದೇಶ ಅಲ್ಲದೇ ವಿದೇಶದಲ್ಲಿಯೂ ಹೆಸರು ಮಾಡಿದ ಕೈಗಾರಿಕೆಗಳು ಬಂದ್ ಅದ ಬಳಿಕ ಬೃಹತ್ ಕೈಗಾರಿಕೆಗಳು ಮೈಸೂರಿಗೆ ಬರಲು ಹಿಂಜರಿಯುತ್ತಿದ್ದು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಜೀವಾಳವಾಗಿವೆ. ಇಂಥವುಗಳು ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಬಾರಿ ರಾಜ್ಯ ಸರಕಾರ ಅವಧಿಗೂ ಮುನ್ನವೇ ಮಂಡಿಸಲಿರುವ ಬಜೆಟ್‌ನಲ್ಲಿ `ದೊರೆ ಕೃಪೆ' ದೊರೆಯಲಿದೆಯೇ ಎನ್ನುವ ಕಾತರ ಉದ್ಯಮಿಗಳದ್ದು.
ಉದ್ಯಮಿಗಳ ಅನುಕೂಲಕ್ಕೆ ತಕ್ಕಂತೆ ಈಗ ಮೈಸೂರಿನಲ್ಲಿಯೂ ವಿಮಾನ ಸಂಚಾರ ಆರಂಭಗೊಂಡಿರುವುದಲ್ಲದೇ, ಬೆಂಗಳೂರು- ಮೈಸೂರು ನಡುವಿನ ರೈಲು ಮಾರ್ಗ ಜೋಡಿ ಹಳಿ ನಿರ್ಮಾಣ ಕಾರ್‍ಯ ನಡೆದಿದೆ. ಇದರಿಂದ ಸುಲಭ ಸಾಗಣೆ ವ್ಯವಸ್ಥೆಗೆ ಮೈಸೂರು ಪ್ರಶಸ್ತವಾಗಿದ್ದು, ಸರಕಾರ ನೂತನ ಬಂಡವಾಳಗಾರರನ್ನು ಆಕರ್ಷಿಸುವ ಜತೆಗೆ ಇಲ್ಲಿನ ಉದ್ಯಮಿಗಳಿಗೂ ಉತ್ತೇಜನ ನೀಡುವ ಅಗತ್ಯವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ