ಮದ್ದೂರಿನ ಫುಟ್ ಪಾತ್ ಗಳೆಲ್ಲಾ ಒತ್ತುವರಿ !

* ಶಿವನಂಜಯ್ಯ ಮದ್ದೂರು
ಪಾದಚಾರಿಗಳಿಗೆ ಪ್ರತ್ಯೇಕ ರಸ್ತೆ ಇದ್ದರೂ ಜನ ಅದರಲ್ಲಿ ತಿರುಗಾಡುವಂತಿಲ್ಲ. ಪರಿಣಾಮ ಜನರು ರಸ್ತೆಗಿಳಿಯಲೇಬೇಕು. ಇದಕ್ಕೆ ಕಾರಣ ಫುಟ್‌ಪಾತ್ ಒತ್ತುವರಿ.
ಇದು ಮದ್ದೂರು ಪಟ್ಟಣದ ಬಹುತೇಕ ರಸ್ತೆಗಳ ಸ್ಥಿತಿ. ಪೇಟೆ ಬೀದಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ, ನೂತನ ಕೊಪ್ಪ ರಸ್ತೆ, ಶಿವಪುರದ ಬಸ್ ನಿಲ್ದಾಣ ಸೇರಿದಂತೆ ಹಲವು ರಸ್ತೆಗಳಲ್ಲಿ  ಫುಟ್‌ಪಾತ್ ಅಕ್ಷರಶಃ ಮಾಯವಾಗಿವೆ.
ಬೀದಿಬದಿಯ ಫುಟ್‌ಪಾತ್ ವ್ಯಾಪಾರಿಗಳು, ಎಳನೀರು, ಕಲ್ಲಂಗಡಿ ಹಣ್ಣುಗಳ ಮಾರಾಟಗಾರರು, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗಷ್ಟೇ ಫುಟ್‌ಪಾತ್ ಮೀಸಲಾಗಿದೆ.  ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ