ವರ್ಣಾವರಣದಲ್ಲಿ ಆಚಾರ್ ವರ್ಣಚಿತ್ರಗಳ ಅನಾವರಣ

ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿ
ಹಿರಿಯ ಕಲಾವಿದ ಎಲ್.ಎಸ್.ಎನ್.ಆಚಾರ್ ಅವರ ಕುಂಚದಲ್ಲಿ ಅರಳಿದ ವರ್ಣ ಕಲಾಕೃತಿಗಳು `ವರ್ಣಾ ವರಣ' ಚಿತ್ರಕಲಾ ಪ್ರದರ್ಶನದಲ್ಲಿ ಅನಾವರಣ ಗೊಂಡಿತ್ತು.
ರೇಖಾಚಿತ್ರಗಳು, ಪೆನ್ಸಿಲ್ ಸ್ಕೆಚ್, ವ್ಯಕ್ತಿಚಿತ್ರಗಳು, ಜಲವರ್ಣಗಳಲ್ಲಿ ಕೋಟೆ- ಕೊತ್ತಲು, ಗುಡಿ- ಗೋಪುರಗಳು, ಕೆರೆ-ಕಟ್ಟೆಗಳು, ಹಳ್ಳಿ, ಪಟ್ಟಣ, ನಗರಗಳ ಚೆಂದದ ಬೀದಿಗಳು, ರಮ್ಯ ನಿಸರ್ಗ ದೃಶ್ಯ ಗಳು, ಗ್ರಾಮೀಣ ಪರಿಸರ, ಪ್ರಾಣಿ, ಪಕ್ಷಿಗಳು ಕ್ಯಾನ್ವಾಸ್ ಮೇಲೆ ಜೀವತಳೆದಿವೆ. ದೇವರು ಚಿತ್ರಪಟಗಳೂ ಇಲ್ಲಿವೆ. ಅಷ್ಟು ಮಾತ್ರವಲ್ಲ, ಆಧುನಿಕ ಶೈಲಿಯ ಅಮೂರ್ತ ಚಿತ್ರಗಳನ್ನೂ ರಚಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ