ಮೈಸೂರು ಜಿಪಂ: ಆದಾಯ ಪ್ರಮಾಣ ಪತ್ರ ರದ್ದು ರಾಜಕೀಯ

ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರು ಜಿಲ್ಲಾಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಇನ್ನು ನಾಲ್ಕು ದಿನ ಉಳಿದಿರುವಾಗ ಆದಾಯ ಪ್ರಮಾಣ ಪತ್ರ ರಾಜಕೀಯ ಶುರುವಾಗಿದೆ.
ಇಲವಾಲ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜಾ.ದಳ ಸದಸ್ಯೆ ಭಾಗ್ಯ ಶಿವಮೂರ್ತಿ ಅವರ ಆದಾಯ ಪ್ರಮಾಣ ಪತ್ರವನ್ನು ಮೈಸೂರು ತಹಸೀಲ್ದಾರ್ ರದ್ದುಪಡಿಸಿದ್ದು ಇಂಥದೊಂದು ರಾಜಕೀಯಕ್ಕೆ ಅವಕಾಶ ಮಾಡಿಕೊಟ್ಟಿದೆ.
ಜಿಲ್ಲಾ ಪಂಚಾಯಿತಿ ಮೊದಲ ೨೦ ತಿಂಗಳ ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿದ್ದು ಫೆ.೧೧ರಂದು ಚುನಾವಣೆ ನಡೆಯಲಿದೆ. ಈ ಮೀಸಲಿನಡಿ ಗೆದ್ದವರು ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ ಮಾತ್ರ. ಆದರೆ ಆದಾಯದ ಲೆಕ್ಕಾಚಾರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್‌ನ ಇಬ್ಬರು ಹಾಗೂ ಜಾ.ದಳದ ನಾಲ್ವರಿಗೆ ಅವಕಾಶವಿದೆ. ಈ ನಡುವೆ ಜಾ.ದಳ ಸದಸ್ಯರೊಬ್ಬರ ಆದಾಯ ಪ್ರಮಾಣ ಪತ್ರ ರದ್ದಾಗಿರು ವುದು ಕುತೂಹಲಕ್ಕೆ ಎಡೆ ಮಾಡಿದೆ. ಇದರ ಹಿಂದೆ ಬಿಜೆಪಿ ಕೈವಾಡ ಇರ ಬಹುದೇ ಎನ್ನುವ ಗುಮಾನಿ ಜಾ.ದಳ-ಕಾಂಗ್ರೆಸ್‌ನಲ್ಲಿ ವ್ಯಕ್ತವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ