ಅನ್ನದ ಮೇಲೆ ಹರಿದ ರಕ್ಕಸ ಯಂತ್ರ!

ಜಯನಗರ
ಗುರುವಾರ ಮುಂಜಾನೆ  ಜಯನಗರಕ್ಕೆ ಹೊಂದಿಕೊಂಡ `ಸೊಪ್ಪಿನ ತೋಟ'ದಲ್ಲಿ  ಜೆಸಿಬಿ ಘರ್ಜನೆ.ರಕ್ಕಸಯಂತ್ರ ಹಲವು ಬಡ ಕುಟುಂಬಗಳ `ಅನ್ನದ ತಟ್ಟೆ'ಯನ್ನು ಬರಿದುಗೊಳಿಸಿತು.
ವಿಸ್ತಾರ ಪ್ರದೇಶದಲ್ಲಿ ಅಟ್ಟಹಾಸಗೈದು ಗಿಡ,ಮರಗಳನ್ನು ನೆಲಕ್ಕುರುಳಿಸುವುದರ  ಜತೆಗೆ ಸೊಪ್ಪಿನ ಮಡಿ,ತರಕಾರಿ ಸಸಿಗಳನ್ನು `ನುಂಗಿ' ನೊಣೆಯುತ್ತಿದ್ದರೆ ವೃದ್ಧರು, ಮಹಿಳೆ ಯರು, ಮಕ್ಕಳು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಲೆ,ಯಂತ್ರ ಹರಿಯುವ ಮೊದಲು ಆದಷ್ಟು ಸೊಪ್ಪು,ತರಕಾರಿಯನ್ನು `ರಕ್ಷಿಸಿ'ಕೊಳ್ಳುವ ಧಾವಂತದಲ್ಲಿದ್ದರು.ಸಿಟ್ಟಿತ್ತಾದರೂ,ಯಂತ್ರದ ಎದುರು ನಿಲ್ಲಲು ಭಯ. ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಇಡೀ ಪ್ರದೇಶದಲ್ಲಿ `ಅತಿ ಭಯ' ಸೃಷ್ಟಿಸಿ ದುರ್ಬಲ ಜನರ ಧ್ವನಿಯ ಹುಟ್ಟಡಗಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ