ಸುತ್ತೂರು ಜಾತ್ರೆಯಲ್ಲಿ `ಕೃಷಿ ಮೇಳ' ಆಕರ್ಷಣೆ

 ಜೆ.ಶಿವಣ್ಣ ಮೈಸೂರು
ಗ್ರಾಮೀಣ ಸೊಗಡಿನ ಪ್ರತಿಬಿಂಬವಾದ `ಸುತ್ತೂರು ಜಾತ್ರೆ'ಯ ಪ್ರಮುಖ ಆಕರ್ಷಣೆ ವಸ್ತುಪ್ರದರ್ಶನ.
ಕೃಷಿ, ವೈದ್ಯಕೀಯ, ಆರೋಗ್ಯ, ತಾಂತ್ರಿಕ ವಿಜ್ಞಾನ, ತಂತ್ರಜ್ಞಾನ ಎಲ್ಲ ವನ್ನೂ ಒಳಗೊಂಡು ವಿಶಾಲ ಅಂಗಳ ದಲ್ಲಿ ಜ್ಞಾನದ ಅಕರಗಳನ್ನು ತೆರೆದಿಟ್ಟು ಜಾಗೃತಿ ಮೂಡಿಸಲಾಗಿದೆ. ಜನರು ಸರದಿ ಸಾಲಿನಲ್ಲಿ ನಿಂತು ಎರಡು ರೂ. ಪ್ರವೇಶ ಶುಲ್ಕ ಪಾವತಿಸಿ ವೀಕ್ಷಿಸುತ್ತಿರುವುದು ಪ್ರದರ್ಶನದ ಆಕರ್ಷಣೆಗೆ ಸಾಕ್ಷಿ.
ಅದರಲ್ಲೂ ಕೃಷಿ ಜ್ಞಾನ ಇಂಗಿಸುವ ಕೃಷಿ ಮೇಳ ಪ್ರದರ್ಶನಕ್ಕೆ ಕಳೆ ತಂದಿದೆ. ಒಂದೆಕರೆಯಲ್ಲಿ `ಕೃಷಿ ಬ್ರಹ್ಮಾಂಡ' ಅದರ ಲ್ಲೊಂದು. ಅಷ್ಟು ಮಾತ್ರವಲ್ಲ, ವ್ಯವಸಾಯ ಸರಳಗೊಳಿಸುವ ಹೊಸ ತಂತ್ರಜ್ಞಾನದ ಕೃಷಿ ಯಂತ್ರೋಪಕರಣಗಳು, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಔಷಧಗಳು ಪ್ರದರ್ಶನದಲ್ಲಿದ್ದು, ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ