ಪಿ.ಓಂಕಾರ್ ಮೈಸೂರು
ನಾಲ್ಕೈದು ಹೊಸ,ಅನಿರೀಕ್ಷಿತ ರೈಲುಗಳ ಘೋಷಣೆ. ಮೂರು ಮಾರ್ಗಗಳ ಸರ್ವೇ ಪ್ರಸ್ತಾಪ. ಆದರೆ,ಈ ಬಾರಿಯೂ `ಹಳಿ'ಗೆ ಬರದ ಬಹು ನಿರೀಕ್ಷೆಯ ಯೋಜನೆಗಳು. ಭರವಸೆಗಳ ಪಾಡು ಮತ್ತೊಮ್ಮೆ `ಬರೀ ರೈಲು'ಗೆ ಸೀಮಿತ...
ಕೇಂದ್ರ ರೈಲ್ವೇ ಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಆಯವ್ಯಯವನ್ನು ಮೈಸೂರು ಪ್ರಾತ್ಯದ ಜನ ಹೀಗೆ ವಿಮರ್ಶಿಸಬಹುದು. ಬೆಂಗಳೂರು-ಮೈಸೂರು ಮಧ್ಯೆ ಹೊಸ ರೈಲುಗಳ ಪ್ರಕಟಣೆ ಖುಷಿಯ ಸಂಗತಿಯಾದರೂ,`ಕ್ರಾಸಿಂಗ್ ಕಾಟ'ದಿಂದ ಪ್ರಯಾಣ ಅವಧಿ ವಿಳಂಭಿಸುವ ಅಪಾಯ ಅದರ ಬೆನ್ನಿಗಿದೆ ಎನ್ನುವುದು ಗಮನಾರ್ಹ.
ಮಮತಾ ಕೊಟ್ಟದ್ದು: ಕಳೆದ ವರ್ಷದ ಘೋಷಣೆಗಳಾದ ಮೈಸೂರು-ಮಡಿಕೇರಿ- ಮಂಗಳೂರು ಮತ್ತು ಚಾಮರಾಜನಗರ-ಕೃಷ್ಣಗಿರಿ ಮಾರ್ಗಗಳ ಸರ್ವೆಗೇ ಇನ್ನೂ ಚಾಲನೆ ಸಿಕ್ಕಿಲ್ಲ. ಆದರೂ,ಆಗುತ್ತದೆಂದು ನಂಬಬಹುದಾದರೆ ನಂಜನಗೂಡು-ನೀಲಂಬೂರು ರೋಡ್, ಚಾ.ನಗರ- ತುಮಕೂರು, ಮೈಸೂರು- ಗುಂಡ್ಲುಪೇಟೆ- ತಲಚೇರಿ ಹೊಸ ಮಾರ್ಗ ಸಮೀಕ್ಷೆ ಪ್ರಕಟಣೆಗಳು ಈ ಬಾರಿಯ `ಕೊಡುಗೆ 'ಗಳು.
ನಾಲ್ಕೈದು ಹೊಸ,ಅನಿರೀಕ್ಷಿತ ರೈಲುಗಳ ಘೋಷಣೆ. ಮೂರು ಮಾರ್ಗಗಳ ಸರ್ವೇ ಪ್ರಸ್ತಾಪ. ಆದರೆ,ಈ ಬಾರಿಯೂ `ಹಳಿ'ಗೆ ಬರದ ಬಹು ನಿರೀಕ್ಷೆಯ ಯೋಜನೆಗಳು. ಭರವಸೆಗಳ ಪಾಡು ಮತ್ತೊಮ್ಮೆ `ಬರೀ ರೈಲು'ಗೆ ಸೀಮಿತ...
ಕೇಂದ್ರ ರೈಲ್ವೇ ಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಆಯವ್ಯಯವನ್ನು ಮೈಸೂರು ಪ್ರಾತ್ಯದ ಜನ ಹೀಗೆ ವಿಮರ್ಶಿಸಬಹುದು. ಬೆಂಗಳೂರು-ಮೈಸೂರು ಮಧ್ಯೆ ಹೊಸ ರೈಲುಗಳ ಪ್ರಕಟಣೆ ಖುಷಿಯ ಸಂಗತಿಯಾದರೂ,`ಕ್ರಾಸಿಂಗ್ ಕಾಟ'ದಿಂದ ಪ್ರಯಾಣ ಅವಧಿ ವಿಳಂಭಿಸುವ ಅಪಾಯ ಅದರ ಬೆನ್ನಿಗಿದೆ ಎನ್ನುವುದು ಗಮನಾರ್ಹ.
ಮಮತಾ ಕೊಟ್ಟದ್ದು: ಕಳೆದ ವರ್ಷದ ಘೋಷಣೆಗಳಾದ ಮೈಸೂರು-ಮಡಿಕೇರಿ- ಮಂಗಳೂರು ಮತ್ತು ಚಾಮರಾಜನಗರ-ಕೃಷ್ಣಗಿರಿ ಮಾರ್ಗಗಳ ಸರ್ವೆಗೇ ಇನ್ನೂ ಚಾಲನೆ ಸಿಕ್ಕಿಲ್ಲ. ಆದರೂ,ಆಗುತ್ತದೆಂದು ನಂಬಬಹುದಾದರೆ ನಂಜನಗೂಡು-ನೀಲಂಬೂರು ರೋಡ್, ಚಾ.ನಗರ- ತುಮಕೂರು, ಮೈಸೂರು- ಗುಂಡ್ಲುಪೇಟೆ- ತಲಚೇರಿ ಹೊಸ ಮಾರ್ಗ ಸಮೀಕ್ಷೆ ಪ್ರಕಟಣೆಗಳು ಈ ಬಾರಿಯ `ಕೊಡುಗೆ 'ಗಳು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ