ನಿಟ್ಟುಸಿರು...

ಮೈಸೂರು ನಗರ
ಗುತ್ತಿಗೆ ಪೌರಕಾರ್ಮಿಕರು ೩ ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಸೋಮವಾರ ಹಿಂತೆಗೆದುಕೊಂಡಿದ್ದು, `ಕಸಮಯ' ಸ್ಥಿತಿಗೆ ತಾತ್ಕಾಲಿಕ ತೆರೆ ಬಿದ್ದಿದೆ.
ಎಲ್ಲಾ ಪೌರಕಾರ್ಮಿಕರ ಪಿಎಫ್, ಇಎಸ್‌ಐ ಮಾಹಿತಿಯನ್ನು ಫೆ.೨೮ ರೊಳಗೆ  ಒದಗಿಸುವುದಾಗಿ ಗುತ್ತಿಗೆದಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳುವ  ನಿರ್ಧಾರವನ್ನು ಮಧ್ಯಾಹ್ನ ಗುತ್ತಿಗೆ ಪೌರ ಕಾರ್ಮಿಕರು ಕೈಗೊಂಡರು.
ಭರವಸೆಯಂತೆ  ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ಮತ್ತೆ ಧರಣಿ ನಡೆಸುವ  ಎಚ್ಚರಿಕೆಯನ್ನೂ ನೀಡಿದರು. ಆದರೂ, ಸಮಸ್ಯೆ ಇತ್ಯರ್ಥವಾಗುವವರೆಗೆ `ಕಪ್ಪು ಪಟ್ಟಿ 'ಧರಿಸಿ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ