ಕಣ್ಣು-ಕಿವಿ ಇಲ್ಲದ ಕಲಾಮಂದಿರ ಕಂಡಿರಾ...

ಕುಂದೂರು ಉಮೇಶಭಟ್ಟ ಮೈಸೂರು
ಕಲಾಮಂದಿರ ಬಳಕೆಗೆ ಲಭ್ಯವಿದೆ. ಆದರೆ ಕಣ್ಣು-ಕಿವಿ ಇಲ್ಲದೇ....
ಇದೇನು ಹೀಗೆ ಎಂದು ಹುಬ್ಬೇರಿಸಬೇಡಿ. ಕಲಾಮಂದಿರದಲ್ಲಿ ಕಾರ್‍ಯಕ್ರಮ ನಡೆಸಲು ಅವಕಾಶವಿದೆ. ಆದರೆ ಬೆಳಕು ಹಾಗೂ ಧ್ವನಿಯ ವ್ಯವಸ್ಥೆ ಇಲ್ಲ. ಇದನ್ನೆಲ್ಲಾ ಹೊರಗಡೆಯಿಂದಲೇ ತರಬೇಕು..
ಸದ್ಯದ ಪರಿಸ್ಥಿತಿ ನೋಡಿದರೆ ದಸರೆವರೆಗೂ ಕಲಾಮಂದಿರ ಸುಸ್ಥಿತಿಗೆ ಬರುವ ಸಾಧ್ಯತೆ ಕಡಿಮೆ. ರಿಪೇರಿ ನೆಪದಲ್ಲಿ ವರ್ಷದ ಹಿಂದೆಯೇ ಕಲಾಮಂದಿರದಲ್ಲಿ ಕಾರ್‍ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಆದರೆ ಕಟ್ಟಡದ ನವೀಕರಣಕ್ಕೆ ಸರಕಾರದ ಅನುಮತಿ ಸಿಕ್ಕಿದ್ದು ಕಳೆದ ವಾರ !.
ಸುಮಾರು ೧.೪೮ ಕೋಟಿ ರೂ. ವೆಚ್ಚದಲ್ಲಿ ಕಲಾಮಂದಿರದ ಧ್ವನಿ ಹಾಗೂ ಬೆಳಕಿನ ಸುಧಾರಣೆ ಸೇರಿದಂತೆ ನವೀಕರಣಕ್ಕೆ ಅನುಮತಿ ದೊರೆತಿರುವುದು ಖಚಿತವಾಗಿದೆ. ವರ್ಷದ ಹಿಂದೆಯೇ ನವೀಕರಣದ ಮಾತನಾಡುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜನರಿಗೆ ಮಂಕುಬೂದಿ ಎರಚಿರುವುದು ಬಹಿರಂಗವಾಗಿದೆ.
ಧ್ವನಿ-ಬೆಳಕಿನ ಕೊರತೆ: ಕಡಿಮೆ ಖರ್ಚಿನಲ್ಲಿ ಕಾರ್‍ಯಕ್ರಮ ನಡೆಸಲಿ ಎಂಬ ವಿಶಾಲ ಮನೋಭಾವದಿಂದ ಸರಕಾರ ನಿರ್ಮಿಸಿದ ಕಲಾಮಂದಿರವಿದು. ಮೈಸೂರಿನಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆದ ಸವಿನೆನಪಿಗೆ ೪ ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಟ್ಟಡ ತಲೆ ಎತ್ತಿದೆ. ಪ್ರತಿ ವರ್ಷದ ಸಣ್ಣಪುಟ್ಟ ನಿರ್ವಹಣೆಯೊಂದಿಗೆ ಕಲಾಮಂದಿರ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಲೇ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ