'ರಾಯರಥ' ಸಂಚಾರಿ ಧ್ವನಿ-ಬೆಳಕು ಕಾರ್ಯಕ್ರಮ

 ನವೀನ್ ಮಂಡ್ಯ
ಶ್ರೀ ಕೃಷ್ಣದೇವರಾಯರ ೫೦೦ನೇ ವರ್ಷದ ಪೀಠಾರೋಹಣ ಸಮಾರಂಭ ಆಚರಣೆ ಸ್ಮರಣಾರ್ಥ `ರಾಯರಥ' ಶೀರ್ಷಿಕೆಯಡಿ ತಾತ್ಕಾಲಿಕ ಸಂಚಾರಿ ಧ್ವನಿ ಮತ್ತು ಬೆಳಕು ಕಾರ್‍ಯಕ್ರಮಕ್ಕೆ ನಗರದ ಸರ್ ಎಂವಿ ಕ್ರೀಡಾಂಗಣ ಸಜ್ಜುಗೊಂಡಿದೆ.
ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀ ಕೃಷ್ಣದೇವ ರಾಯರ ಆಳ್ವಿಕೆಯ ಗತ ವೈಭವವನ್ನು ಪುನರ್ ನೆನಪಿಸುವ ಮತ್ತು ಪ್ರೇರಣೆ ನೀಡುವ ನಿಟ್ಟಿನಲ್ಲಿ ಆಯೋಜಿಸಿರುವ `ಧ್ವನಿ-ಬೆಳಕು ಕಾರ್‍ಯಕ್ರಮ' ಫೆ.೧೨ರಿಂದ ಎರಡು ದಿನಗಳ ಕಾಲ  ರಾತ್ರಿ ವೇಳೆ ೧ಗಂಟೆ ೧೦ ನಿಮಿಷ  ಪ್ರದರ್ಶನಗೊಳ್ಳಲಿದೆ.
ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕ ಆದಿಯಾಗಿ ಸಾಮ್ರಾಜ್ಯದ ಅವನತಿಯ ದೃಶ್ಯಗಳ ಸೆಟ್ ಗಳನ್ನು ಹಾಕಲಾಗಿದೆ. ಎರಡೂ ದಿನಗಳು ರಾತ್ರಿ ವಿಜಯ ನಗರ ಸಾಮ್ರಾಜ್ಯದ ವೈಭವ ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ಅನಾವರಣಗೊಳ್ಳಲಿದೆ.
`ಸನ್ ಎಟ್ ಲೂಮಿನೇರ್' ಎಂದು ಕರೆಯುವ ಈ ಕಾರ್‍ಯಕ್ರಮ ಪ್ರವಾಸೋದ್ಯಮ ಇಲಾಖೆಯ ಪರಿಕಲ್ಪನೆ ಹೊಂದಿದೆ. ವಿಜಯನಗರ ಸಾಮ್ರಾಜ್ಯದ ಗತ ವೈಭವ, ಆಗಿನ ಪರಂಪರೆ ಮತ್ತು ಇತಿಹಾಸವನ್ನು ದೃಶ್ಯಗಳ ರೂಪದಲ್ಲಿ ಜನರ ಕಣ್ಣಿಗೆ ಕಟ್ಟಿಕೊಡುವ ಉದ್ದೇಶವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ