ಗಟ್ಟಿ ಕಾಳು ಕೊಟ್ಟವರಿಗೆ ದಕ್ಕಿದ್ದು `ಜೊಳ್ಳು' !

* ಪಿ.ಓಂಕಾರ್ ಮೈಸೂರು
ಈಗ ಎಲ್ಲೆಡೆ ಬಿತ್ತನೆ ಬೀಜದ ಚರ್ಚೆ, ಅದೇ ಸಮಸ್ಯೆ. ಹತ್ತಿ ಬಿತ್ತನೆ ಬೀಜದ ಸಮಸ್ಯೆ ಉಲ್ಬಣಿಸಿದೆ. ಭತ್ತದ ಸಮಸ್ಯೆಯೂ ನಿರೀಕ್ಷಿತ. ಇದು ಬೇಡಿಕೆ-ಕೊರತೆಗೆ ಸಂಬಂಧಿಸಿದ ಸಂಗತಿ. ಕೊರತೆ ನೀಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಭತ್ತ ಬಿತ್ತನೆ ಬೀಜ ಉತ್ಪಾದಕರದ್ದೂ ಅಷ್ಟೆ, ಗಟ್ಟಿ ಕಾಳು ನೀಡಿ `ಜೊಳ್ಳು' ಪಡೆಯುವ ಸ್ಥಿತಿ !
ಎರಡು ವರ್ಷದ ಹಿಂದೆ ಬೀಜೋತ್ಪಾದಕರನ್ನು ದಾವಣ ಗೆರೆಯಲ್ಲಿ ಸೇರಿಸಿ, ಸಮಾವೇಶ ಮಾಡಿ, ಪ್ರೋತ್ಸಾಹ ಧನ ಮತ್ತಿತರ ಭರವಸೆಯ `ಕನಸು ಬಿತ್ತಿ' ಎಲ್ಲರ ತಲೆ ಮೇಲೆ `ಹಸಿರು ಟೋಪಿ' ಇಟ್ಟು ಕಳುಹಿಸಿದ್ದ ರಾಜ್ಯ ಸರಕಾರ, ಕೊಟ್ಟ ಮಾತಿನಂತೆ ನಡೆದುಕೊಂಡದ್ದು ಒಂದು ವರ್ಷ ಮಾತ್ರ.
೨೦೦೮ಕ್ಕೆ ಸಂಬಂಧಿಸಿ ದೊರಕಿದ ಪ್ರೋತ್ಸಾಹ ಧನವನ್ನು ಆನಂತರವೂ ದಕ್ಕಿಸಿಕೊಳ್ಳಲು ಬೀಜೋತ್ಪಾದಕ ರೈತರು ನಿರಂತರ ಅಲೆದು, ಕಚೇರಿ ಮೆಟ್ಟಿಲು ಸವೆಸಿದರೂ ಭರವಸೆ ಈಡೇರಿಲ್ಲ. ಸದ್ಯಕ್ಕೆ ಅವರದ್ದೊಂಥರ `ತಬರ'ನ ಕತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ