* ಆರ್. ಕೃಷ್ಣ ಮೈಸೂರು
ಬೀಜ ಉತ್ಪಾದಕ ಕಂಪನಿ ಹಾಗೂ ಸರಕಾರದ ನಡುವಿನ ದರ ಸಮರ ಹತ್ತಿ ಬೆಳೆಗಾರರನ್ನು ಮೆತ್ತಗಾಗಿಸಿದೆ.
ಉತ್ಪಾದನೆ ವೆಚ್ಚ ಹೆಚ್ಚಾಗಿರುವುದರಿಂದ ಸರಕಾರ ನಿಗದಿ ಪಡಿಸಿದ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಅಸಾಧ್ಯ ಎಂದು ಕಂಪನಿಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ, ಬಿತ್ತನೆ ಬೀಜ ಸರಬರಾಜಿನಲ್ಲಿ ಬಹಳ ವ್ಯತ್ಯಯವಾಗಿದೆ.
ಮುಂಗಾರು ಆರಂಭದಲ್ಲೇ ಹತ್ತಿ ಬಿತ್ತುವ ಕನಸು ಕಂಡಿದ್ದ ರೈತರು, ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಇಡೀ ರಾಜ್ಯ ದಲ್ಲಿಯೇ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆ ಆರಂಭಗೊಳ್ಳಲಿದ್ದು, ಬಿತ್ತನೆ ಬೀಜಕ್ಕೆ ರೈತರು ಪರದಾಡುತ್ತಿದ್ದಾರೆ.
ಪರಿಸ್ಥಿತಿಯ ದುರ್ಲಾಭ ಪಡೆಯಲು ಮುಂದಾದ ಮಾರಾಟಗಾರರು ಅತೀ ಬೇಡಿಕೆ ಇರುವ ಬಿತ್ತನೆ ತಳಿಗಳನ್ನು ದುಪ್ಪಟ್ಟು ಹಣಕ್ಕೆ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಹಿಂದಿನ ವರ್ಷ ತಮ್ಮ ಊರುಗಳಲ್ಲೇ ಸಿಗುತ್ತಿದ್ದ್ದ ಬಿತ್ತನೆ ಬೀಜಗಳು `ನೋಸ್ಟಾಕ್' ಬೋರ್ಡ್ನಿಂದಾಗಿ ಮೈಸೂರಿಗೆ ಅಲೆದಾಡ ಬೇಕಾದ ಪರಿಸ್ಥಿತಿ ರೈತರದು. ಬೇಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ನೀಡುತ್ತಿರುವುದು ರೈತರನ್ನು ಪ್ರತಿಭಟನೆ ಹಾದಿ ತುಳಿಯುವಂತೆ ಮಾಡಿದೆ.
ಬೀಜ ಉತ್ಪಾದಕ ಕಂಪನಿ ಹಾಗೂ ಸರಕಾರದ ನಡುವಿನ ದರ ಸಮರ ಹತ್ತಿ ಬೆಳೆಗಾರರನ್ನು ಮೆತ್ತಗಾಗಿಸಿದೆ.
ಉತ್ಪಾದನೆ ವೆಚ್ಚ ಹೆಚ್ಚಾಗಿರುವುದರಿಂದ ಸರಕಾರ ನಿಗದಿ ಪಡಿಸಿದ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಅಸಾಧ್ಯ ಎಂದು ಕಂಪನಿಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ, ಬಿತ್ತನೆ ಬೀಜ ಸರಬರಾಜಿನಲ್ಲಿ ಬಹಳ ವ್ಯತ್ಯಯವಾಗಿದೆ.
ಮುಂಗಾರು ಆರಂಭದಲ್ಲೇ ಹತ್ತಿ ಬಿತ್ತುವ ಕನಸು ಕಂಡಿದ್ದ ರೈತರು, ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಇಡೀ ರಾಜ್ಯ ದಲ್ಲಿಯೇ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆ ಆರಂಭಗೊಳ್ಳಲಿದ್ದು, ಬಿತ್ತನೆ ಬೀಜಕ್ಕೆ ರೈತರು ಪರದಾಡುತ್ತಿದ್ದಾರೆ.
ಪರಿಸ್ಥಿತಿಯ ದುರ್ಲಾಭ ಪಡೆಯಲು ಮುಂದಾದ ಮಾರಾಟಗಾರರು ಅತೀ ಬೇಡಿಕೆ ಇರುವ ಬಿತ್ತನೆ ತಳಿಗಳನ್ನು ದುಪ್ಪಟ್ಟು ಹಣಕ್ಕೆ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಹಿಂದಿನ ವರ್ಷ ತಮ್ಮ ಊರುಗಳಲ್ಲೇ ಸಿಗುತ್ತಿದ್ದ್ದ ಬಿತ್ತನೆ ಬೀಜಗಳು `ನೋಸ್ಟಾಕ್' ಬೋರ್ಡ್ನಿಂದಾಗಿ ಮೈಸೂರಿಗೆ ಅಲೆದಾಡ ಬೇಕಾದ ಪರಿಸ್ಥಿತಿ ರೈತರದು. ಬೇಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ನೀಡುತ್ತಿರುವುದು ರೈತರನ್ನು ಪ್ರತಿಭಟನೆ ಹಾದಿ ತುಳಿಯುವಂತೆ ಮಾಡಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ