ಮಂಜಿನನಗರಿ ಮಡಿಕೇರಿಗೆ ಕ್ಷಣಿಕ ಭೂಕಂಪನ ಅನುಭವ

*ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಂಜಿನನಗರಿ ಮಡಿಕೇರಿಯಲ್ಲಿ ಬುಧವಾರ ಬೆಳಗ್ಗೆ ೧೦.೫೮ ರ ಅವಧಿಯಲ್ಲಿ ಭಾರಿ ಶಬ್ದದೊಂದಿಗೆ ಕ್ಷಣ ವೊಂದರಲ್ಲಿ ಕಂಪನದ ಅನುಭವ ನೀಡಿದ ಜನ ಬೆಚ್ಚಿಬೀಳುವಂತೆ ಮಾಡಿತ್ತು. ಮರುಕ್ಷಣದಲ್ಲಿಯೇ `ಮಡಿಕೇರಿಯಲ್ಲಿ ಭೂಕಂಪನ...' ಎಂಬ ಸಂದೇಶ ಮಿಂಚಿನ ರೀತಿಯಲ್ಲಿ ಸುಳಿದಾಡಿತು. `ಗೊತ್ತಾಯಿತಾ... ಮಡಿಕೇರಿಯಲ್ಲಿ ಭೂಕಂಪನ... ಏನಾಯಿತು ... ?' ಎಂಬ ಪ್ರಶ್ನೆಗಳ ಸುರಿಮಳೆ ವಿನಿಮಯ ವಾಯಿತು.
ಜಿಲ್ಲೆ ಹಾಗೂ ಹೊರ ಪ್ರದೇಶ ದಲ್ಲಿರುವ ಜನತೆ ಮಡಿಕೇರಿಯಲ್ಲಿರುವ ಸ್ನೇಹಿತರು, ಬಂದು- ಬಳಗ ದವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ. ಕೆಲವರು ಆತಂಕ ಭರಿತರಾಗಿ, ಮತ್ತೆ ಕೆಲವರು ಕುತೂಹಲಕಾರಿಯಾಗಿ ಭೂಕಂಪನ ಅನುಭವಿಗಳನ್ನು ಕೇಳಿ ತಿಳಿದುಕೊಳ್ಳಲು ಹಾತೊರೆದರು. `ಏನೇ ಇರ್‍ಲಿ. ಸ್ವಲ್ಪ ಎಚ್ಚರದಲ್ಲಿ ಇರಿಯಪ್ಪ...' ಎಂಬ ಕಿವಿಮಾತುಗಳು ಆಪ್ತರಿಂದ ಆಪ್ತರಿಗೆ ರವಾನೆಯಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ