* ಎಂ.ಎಲ್.ರವಿಕುಮಾರ್ ಎಚ್.ಡಿ. ಕೋಟೆ
ತಾರಕಾ ಜಲಾಶಯದ ಮಧ್ಯೆ ಚೆಂಡು ಎನ್ನುವ ಪ್ರದೇಶದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಗಂಡಾನೆ(೨೨)ಯನ್ನು ಉಳಿಸಲು ಅಧಿಕಾರಿಗಳು ಸತತ ಪ್ರಯತ್ನ ನಡೆಸಿದ್ದಾರೆ.
ಅರಣ್ಯ ಸಂಚಾರಿ ಘಟಕದ ಎಡಿಜಿಪಿ ಕೆ.ಎನ್.ಎಸ್. ಚಿಕ್ಕರೆರೂರ ನೇತೃತ್ವದಲ್ಲಿ ಬೆಂಗಳೂರಿನ ವೆಟರ್ನರಿ ಆಸ್ಪತ್ರೆಯ ಕಾಲೇಜಿನಿಂದ ಬಂದಿರುವ ಪ್ರೊಫೆಸರ್ಗಳು ಮತ್ತು ವೈದ್ಯರ ತಂಡ ಪ್ರಯತ್ನ ನಡೆಸುತ್ತಿದೆ. ಇವರಿಗೆ ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಪೊಲೀಸರು ಮತ್ತು ಮೇಟಿಕುಪ್ಪೆ ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ಸಂತೋಷ್ ನಾಯಕ್ ಮತ್ತು ಸಿಬ್ಬಂದಿ ನೆರವಾಗಿದ್ದಾರೆ.
ಆನೆಯ ಬಲಗಾಲಿನ ಮಂಡಿಯಿಂದ ಸುಮಾರು ೧ ಬಕೆಟ್ಗೂ ಹೆಚ್ಚಿನ ಕೀವನ್ನು ಹೊರತೆಗೆಯಲಾಗಿದೆ. ಕೀವು ತೆಗೆಯಲು ಪ್ರಾರಂಭಿಸಿದಾಗ ಆನೆ ನೋವಿನಿಂದ ನರಳಿ, ಕೆಲಸಕ್ಕೆ ತಡೆಯೊಡ್ಡಿತು. ಆದರೆ ವೈದ್ಯಾಧಿಕಾರಿಗಳ ತಂಡ ಎದೆಗುಂದಲಿಲ್ಲ. ಕೀವು ಹೊರ ತೆಗೆದ ನಂತರ ಆನೆ ಕಾಲುಗಳನ್ನು ಆಡಿಸುತ್ತಿದೆ. ಆನೆಯು ಹಿನ್ನೀರಿನ ದಂಡೆಯಲ್ಲಿದ್ದು ಚಿಕಿತ್ಸೆ ಕೊಡುವಾಗ ಒದ್ದಾಡುವುದರಿಂದ ಸ್ಥಳ ಕೆಸರುಮಯವಾಗಿದೆ. ಹಾಗಾಗಿ ಪಕ್ಕದಲ್ಲಿ ಹಾಕಿರುವ ಹುಲ್ಲಿನ ಮೇಲೆ ಆನೆ ಮಲಗಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಪುನಾ ನಾಡಾನೆಗಳ ಸಹಾಯದಿಂದ ಆನೆಯನ್ನು ಹುಲ್ಲಿನ ಹಾಸಿನ ಮೇಲೆ ಹಾಕಿ ಅದಕ್ಕೆ ನೆರಳು ಕಲ್ಪಿಸಬೇಕೆಂದು ಸಿಸಿಎಫ್ ಅಜಯ್ ಮಿಶ್ರಾ ತಿಳಿಸಿದ್ದಾರೆ.
ತಾರಕಾ ಜಲಾಶಯದ ಮಧ್ಯೆ ಚೆಂಡು ಎನ್ನುವ ಪ್ರದೇಶದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಗಂಡಾನೆ(೨೨)ಯನ್ನು ಉಳಿಸಲು ಅಧಿಕಾರಿಗಳು ಸತತ ಪ್ರಯತ್ನ ನಡೆಸಿದ್ದಾರೆ.
ಅರಣ್ಯ ಸಂಚಾರಿ ಘಟಕದ ಎಡಿಜಿಪಿ ಕೆ.ಎನ್.ಎಸ್. ಚಿಕ್ಕರೆರೂರ ನೇತೃತ್ವದಲ್ಲಿ ಬೆಂಗಳೂರಿನ ವೆಟರ್ನರಿ ಆಸ್ಪತ್ರೆಯ ಕಾಲೇಜಿನಿಂದ ಬಂದಿರುವ ಪ್ರೊಫೆಸರ್ಗಳು ಮತ್ತು ವೈದ್ಯರ ತಂಡ ಪ್ರಯತ್ನ ನಡೆಸುತ್ತಿದೆ. ಇವರಿಗೆ ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಪೊಲೀಸರು ಮತ್ತು ಮೇಟಿಕುಪ್ಪೆ ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ಸಂತೋಷ್ ನಾಯಕ್ ಮತ್ತು ಸಿಬ್ಬಂದಿ ನೆರವಾಗಿದ್ದಾರೆ.
ಆನೆಯ ಬಲಗಾಲಿನ ಮಂಡಿಯಿಂದ ಸುಮಾರು ೧ ಬಕೆಟ್ಗೂ ಹೆಚ್ಚಿನ ಕೀವನ್ನು ಹೊರತೆಗೆಯಲಾಗಿದೆ. ಕೀವು ತೆಗೆಯಲು ಪ್ರಾರಂಭಿಸಿದಾಗ ಆನೆ ನೋವಿನಿಂದ ನರಳಿ, ಕೆಲಸಕ್ಕೆ ತಡೆಯೊಡ್ಡಿತು. ಆದರೆ ವೈದ್ಯಾಧಿಕಾರಿಗಳ ತಂಡ ಎದೆಗುಂದಲಿಲ್ಲ. ಕೀವು ಹೊರ ತೆಗೆದ ನಂತರ ಆನೆ ಕಾಲುಗಳನ್ನು ಆಡಿಸುತ್ತಿದೆ. ಆನೆಯು ಹಿನ್ನೀರಿನ ದಂಡೆಯಲ್ಲಿದ್ದು ಚಿಕಿತ್ಸೆ ಕೊಡುವಾಗ ಒದ್ದಾಡುವುದರಿಂದ ಸ್ಥಳ ಕೆಸರುಮಯವಾಗಿದೆ. ಹಾಗಾಗಿ ಪಕ್ಕದಲ್ಲಿ ಹಾಕಿರುವ ಹುಲ್ಲಿನ ಮೇಲೆ ಆನೆ ಮಲಗಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಪುನಾ ನಾಡಾನೆಗಳ ಸಹಾಯದಿಂದ ಆನೆಯನ್ನು ಹುಲ್ಲಿನ ಹಾಸಿನ ಮೇಲೆ ಹಾಕಿ ಅದಕ್ಕೆ ನೆರಳು ಕಲ್ಪಿಸಬೇಕೆಂದು ಸಿಸಿಎಫ್ ಅಜಯ್ ಮಿಶ್ರಾ ತಿಳಿಸಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ