ಪಂಪ್ಸೆಟ್ ನೀರೇ ಎಲ್ಲಾ
*ಮಾದೇಶ್ ತಿ.ನರಸೀಪುರ
ವಾಟಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟಾಳುಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಪಂಪ್ಸೆಟ್ ನೀರನ್ನೇ ಅವಲಂಬಿಸಬೇಕು.
ಸುಮಾರು ೬೦೦ ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ನೀರಿನ ಮೂಲದಿಂದ ಟ್ಯಾಂಕ್ಗೆ ನೀರು ಸರಬರಾಜು ಮಾಡದ ಕಾರಣ ಗ್ರಾಮದಲ್ಲಿನ ನಲ್ಲಿಗಳಲ್ಲಿ ನೀರು ಹರಿಯುವುದಿಲ್ಲ.
ಟ್ಯಾಂಕ್ ನಿರ್ಮಾಣಗೊಂಡು ಸುಮಾರು ೨ ವರ್ಷ ಕಳೆದರೂ ನಿರ್ವಹಣೆ ಇಲ್ಲದೇ ಇದ್ದೂ ಇಲ್ಲದಂತಾಗಿದೆ. ಈ ಟ್ಯಾಂಕ್ನ ನೀರಿನ ಮೂಲದ ಯಂತ್ರಾಗಾರದ ದುರಸ್ತಿಪಡಿಸದ ಕಾರಣ ಲಕ್ಷಾಂತರ ರೂ. ವ್ಯರ್ಥ, ಜತೆಗೆ ನೀರಿಗೂ ತೊಂದರೆ.
ಬನ್ನೂರಲ್ಲಿ ನೀರಿಲ್ಲ
*ರಮೇಶ್ ಬನ್ನೂರು
೫೦ ಸಾವಿರ ಜನಸಂಖ್ಯೆಯುಳ್ಳ ಬನ್ನೂರು ಪಟ್ಟಣದ ಜನರು ನೀರಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ಬಂದಿದ್ದು, ಕೆರೆ, ಬಾವಿ, ಕೈ ಪಂಪ್ಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಣವಾಗಿದೆ. ಕಾವೇರಿ ನದಿಯಿಂದ ಪಟ್ಟಣದ ವಾಟರ್ ಟ್ಯಾಂಕ್ಗಳಿಗೆ ನೀರನ್ನು ಪಂಪ್ ಮಾಡಿ ಪೂರೈಸಲಾಗುತ್ತಿದೆ. ಪಟ್ಟಣದ ಹೊರವಲಯದಲ್ಲಿರುವ ಆಶ್ರಯ ಬಡಾವಣೆ ಮತ್ತು ಮಾಕನಹಳ್ಳಿ ನಿವಾಸಿಗಳು ನೀರಿಗಾಗಿ ದಿನನಿತ್ಯ ಪರದಾಡಬೇಕಾದ ಸ್ಥಿತಿ ಉಂಟಾಗಿದೆ.
*ಮಾದೇಶ್ ತಿ.ನರಸೀಪುರ
ವಾಟಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟಾಳುಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಪಂಪ್ಸೆಟ್ ನೀರನ್ನೇ ಅವಲಂಬಿಸಬೇಕು.
ಸುಮಾರು ೬೦೦ ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ನೀರಿನ ಮೂಲದಿಂದ ಟ್ಯಾಂಕ್ಗೆ ನೀರು ಸರಬರಾಜು ಮಾಡದ ಕಾರಣ ಗ್ರಾಮದಲ್ಲಿನ ನಲ್ಲಿಗಳಲ್ಲಿ ನೀರು ಹರಿಯುವುದಿಲ್ಲ.
ಟ್ಯಾಂಕ್ ನಿರ್ಮಾಣಗೊಂಡು ಸುಮಾರು ೨ ವರ್ಷ ಕಳೆದರೂ ನಿರ್ವಹಣೆ ಇಲ್ಲದೇ ಇದ್ದೂ ಇಲ್ಲದಂತಾಗಿದೆ. ಈ ಟ್ಯಾಂಕ್ನ ನೀರಿನ ಮೂಲದ ಯಂತ್ರಾಗಾರದ ದುರಸ್ತಿಪಡಿಸದ ಕಾರಣ ಲಕ್ಷಾಂತರ ರೂ. ವ್ಯರ್ಥ, ಜತೆಗೆ ನೀರಿಗೂ ತೊಂದರೆ.
ಬನ್ನೂರಲ್ಲಿ ನೀರಿಲ್ಲ
*ರಮೇಶ್ ಬನ್ನೂರು
೫೦ ಸಾವಿರ ಜನಸಂಖ್ಯೆಯುಳ್ಳ ಬನ್ನೂರು ಪಟ್ಟಣದ ಜನರು ನೀರಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ಬಂದಿದ್ದು, ಕೆರೆ, ಬಾವಿ, ಕೈ ಪಂಪ್ಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಣವಾಗಿದೆ. ಕಾವೇರಿ ನದಿಯಿಂದ ಪಟ್ಟಣದ ವಾಟರ್ ಟ್ಯಾಂಕ್ಗಳಿಗೆ ನೀರನ್ನು ಪಂಪ್ ಮಾಡಿ ಪೂರೈಸಲಾಗುತ್ತಿದೆ. ಪಟ್ಟಣದ ಹೊರವಲಯದಲ್ಲಿರುವ ಆಶ್ರಯ ಬಡಾವಣೆ ಮತ್ತು ಮಾಕನಹಳ್ಳಿ ನಿವಾಸಿಗಳು ನೀರಿಗಾಗಿ ದಿನನಿತ್ಯ ಪರದಾಡಬೇಕಾದ ಸ್ಥಿತಿ ಉಂಟಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ